ಲೆವನ್‌ವರ್ತ್‌ ಎಂಬ ಜಾನಪದ ಜಹಜು!


Team Udayavani, Sep 2, 2018, 6:00 AM IST

3.jpg

ಸಿಯಾಟಲ್‌ ಅಮೆರಿಕದ ವಾಯುವ್ಯ ಭಾಗದಲ್ಲಿರುವ ವಾಷಿಂಗ್ಟನ್‌ ಪ್ರಾಂತ್ಯದ ಅತಿ ದೊಡ್ಡ ನಗರ. ಜಗತ್ತನ್ನೇ ಗಣಕಯಂತ್ರವಾಗಿಸಿರುವ ವಿಶ್ವಖ್ಯಾತಿಯ ಮೈಕ್ರೋಸಾಫ್ಟ್ನ ತವರು. ಕಣ್ಣು ಹಾಯಿಸಿದೆಡೆ ಎಲ್ಲೆಲ್ಲೂ ಹಸಿರ ಕೋಟೆ. ಝರಿ, ಜಲಪಾತಗಳದ್ದೇ ಕಾರುಬಾರು. ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ, ಕನ್ನಡ, ಕನ್ನಡತನವಿದೆ. ನಾವು ಹೋದ ಸಂದರ್ಭ ಅದೇನೋ ವಿಪರೀತ ಬಿಸಿಲು. ಆಗಸ್ಟ್‌ನಲ್ಲಿ 33 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು ನಾವು ನೋಡಿದ್ದಿಲ್ಲ ಎಂದಳು ಮಗಳು ದಿವ್ಯಾ.  ಒಂದು ಭಾನುವಾರ, “”ಅಂಕಲ್‌, ಆಂಟಿ ಇಲ್ಲೇ ನಿಮಗೆ ಇಷ್ಟವಾಗುವ ಹಳೇ ಊರಿದೆ. ಎಲ್ರು ಹೋಗಿ ಬರೋಣ” ಎಂದ ಅಳಿಯ ರಂಜನ್‌. “”ಅಲ್ಲಪ್ಪ ದೊಡೂರಿಗೆ ಬಂದ್ರೆ ಸಣ್ಣೂರಿಗಾ?” ಅಂತ ನನ್ನಾಕೆ ಪ್ರಶ್ನಿಸಿದಾಗ ಮಗಳು, “”ಅಮ್ಮ, ಅಲ್ಲಿಗೋದ್ಮೇಲೆ ಹೇಳು ಹೇಗಿದೆ ಎಂದು” ಎಂದು ಸರಸರನೆ ಹೊರಡಿಸಿದಳು. 

ಚಿತ್ರಾನ್ನ, ಮೊಸರು ಬಜ್ಜಿ, ದೋನಟ್‌, ಕುರುಕು ತಿನಿಸು ಕಾರಿನ ಡಿಕ್ಕಿ ಸೇರಿದ್ದವು. ಮೊಮ್ಮಗಳು ಅಹನಾಗೆ ವಿಶೇಷ ಬುತ್ತಿ. ರಸ್ತೆಯ ಇಬ್ಬದಿಗಳಲ್ಲೂ ಕೋಟೆ ಕಟ್ಟಿಕೊಂಡ ಗಿಡ ಮರಗಳು. ಬೆದರಿ ಪರಾರಿಯಾಗುವ ಜಿಂಕೆ, ಮೊಲಗಳು. ಬೆಳಗ್ಗೆ ಎಂಟು ಗಂಟೆಗೆ ರೆಡ್‌ಮಂಡ್‌ನ‌ಲ್ಲಿರುವ ಮನೆಯಿಂದ ಹೊರಟವರು ಎರಡೂವರೆ ತಾಸು ಪ್ರಯಾಣಿಸಿ 135 ಕಿ. ಮೀ. ಕ್ರಮಿಸಿದೆವು. “”ಅಗೋ ಅದೇ ಲೆವನ್‌ವರ್ತ್‌” ಎಂದ ಕಾರು ಚಲಾಯಿಸುತ್ತಿದ್ದ ಅಳಿಯ. ಪಾರ್ಕಿಂಗಿಗೆ ಹುಡುಕಾಡುವುದೇ ಸವಾಲಾಯಿತು. ಕೊನೆಗೆ ಒಂದೆಡೆ ಹೊರಟಿದ್ದ ಕಾರೊಂದನ್ನು ಗಮನಿಸಿ ಪರಿಹಾರ ದೊರಕಿತು. ಹಿರಿಯರು ತಮ್ಮ ಕಾಲದ ಹಿರಿಮೆ-ಗರಿಮೆಗಳನ್ನು ಬಣ್ಣಿಸುವುದನ್ನು ಕೇಳಿದರೆ ಈಗಲೇ ನಾವು ಆ ಕಾಲಕ್ಕೆ ಸರಿಯುವಂತಿದ್ದರೆ ಎನ್ನಿಸುತ್ತದೆ. ಲೆವನ್‌ವರ್ತ್‌ ಅಂತಹ ಅನುಭವ ಕಟ್ಟಿಕೊಡುತ್ತದೆ! 

ಮರದ ಬಹು ಉಪ್ಪರಿಗೆ ಕಟ್ಟಡಗಳು, ಮರದ್ದೇ ಗಣ್ಯರ ಬೃಹತ್‌ ಪುತ್ಥಳಿಗಳು, ಮುಂಗಟ್ಟುಗಳು, ಮಳಿಗೆಗಳು, ಪ್ರದರ್ಶನ- ಮಾರಾಟಕ್ಕಿಟ್ಟಿರುವ ವಸ್ತು ವೈವಿಧ್ಯಗಳು. ಶತಪಥ ಸಾಗುವ ಕುದುರೆ ಸಾರೋಟುಗಳು- ಎಲ್ಲವೂ ನಮ್ಮನ್ನು 150-250 ವರ್ಷಗಳ ಹಿಂದಕ್ಕೆ ಒಯ್ದಿರುತ್ತವೆ. 1.25 ಚದರ ಕಿ.ಮೀ. ವಿಸ್ತಾರದ ಈ ಪುಟ್ಟ ನಗರಿಯ ಜನಸಂಖ್ಯೆ ಕೇವಲ 2000. ಕಾಫಿ, ಚಹಾ, ಐಸ್‌ಕ್ರೀಮ್‌, ಜ್ಯೂಸ್‌ ಪಾರ್ಲರುಗಳಿಗೆ, ಬೇಕರಿಗಳಿಗೆ ಬರವಿಲ್ಲ. 

ವಾಸ್ತವವಾಗಿ ಲೆವನ್‌ವರ್ತ್‌ ಅಮೆರಿಕದ ಮೂಲ ನಿವಾಸಿಗಳ ಊರು. ಅದು ಆಗ್ನೇಯ ಜರ್ಮನಿಯ ದೊಡ್ಡ ಪ್ರಾಂತ್ಯವಾದ ಬವೇರಿಯಾವನ್ನೇ ಹೋಲುತ್ತದೆ. ಸುಮಾರು ಒಂದೂವರೆ ಕೋಟಿಯಷ್ಟು ಜನ ಸಂಖ್ಯೆಯುಳ್ಳ ಬವೇರಿಯಾ ನಾನಾ ದಾಖಲೆಗಳಿಗೆ ಪ್ರಖ್ಯಾತಿ. ಔದ್ಯೋಗಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಯಶಸ್ಸು ಸಾಧಿಸಿದೆ. ಅತಿ ದೊಡ್ಡ ತಂತ್ರಜ್ಞಾನ ವಸ್ತು ಪ್ರದರ್ಶನಾಲಯ, “ಫ‌ುಸ್ಸೆನ್‌’ ಎಂಬ ಬೃಹತ್‌ ಪಿಟೀಲು ಉತ್ಪಾದನಾ ಉದ್ಯಮ, ಬೃಹತ್‌ ಸೌರಶಕ್ತಿ ಸ್ಥಾವರವನ್ನು ಈ ಪ್ರಾಂತ್ಯ ಹೊಂದಿದೆ. ಅದರ ರಾಜಧಾನಿ ಮ್ಯೂನಿಚ್‌ ವೈವಿಧ್ಯಮಯ ವಸ್ತು ಪ್ರದರ್ಶನಾಲಯಗಳ ಬೀಡು. ಗಮನ ಸೂರೆಗೊಳ್ಳುವ ಅಲಂಕಾರ ಭೂಯಿಷ್ಟ ನಿಂಫೆನ್‌ಬರ್ಗ್‌ ಅರಮನೆ. ಪ್ರತೀವರ್ಷ ಇಲ್ಲಿ ನೆರವೇರುವ “ಬಿಯರ್‌ ಜಾತ್ರೆ’ ಜಗತøಸಿದ್ಧ. ಕುಗ್ರಾಮಗಳು, ಜೊತೆಗೇ ಮಧ್ಯಯುಗದ ಪಟ್ಟಣಗಳು. ಹಿಂಬದಿಗೆ ಮನಮೋಹಕ ಯೂರೋಪಿನಾದ್ಯಂತ (1200 ಕಿ.ಮೀ.) ಪಸರಿಸಿರುವ ಅತಿ ಎತ್ತರದ (ಗರಿಷ್ಠ 4808 ಮೀ.) ಆಲ್ಪಸ್‌ ಪರ್ವತಶೇಣಿ. ಲೆವನ್‌ವರ್ತ್‌ ಸ್ವರೂಪವನ್ನೂ ಬವೇರಿಯಾದಂತೆ ಏಕೆ ಮಾರ್ಪಡಿಸಿ ಸುಂದರವಾಗಿಸಬಾರದೆನ್ನಿಸಿತು ಮುಂದಾಳುಗಳಿಗೆ, ಯೋಜಕರಿಗೆ. ಹೇಗೂ ಹಿನ್ನೆಲೆಯಲ್ಲಿ ಕ್ಯಾಸ್ಕೇಡ್‌ ಪರ್ವತ ಶ್ರೇಣಿ ಉಂಟಲ್ಲ ಎನ್ನುವುದಕ್ಕಿಂತ ಪ್ರೇರಣೆ ಬೇಕೆ? 1906 ರಲ್ಲಿ ನಕ್ಷೆ ಕಾರ್ಯರೂಪ ತಳೆಯಿತು. ಇದರ ಫ‌ಲವೇ, “ಬವೇರಿಯನ್‌ ವಿಲೇಜ್‌’ ಲೆವನ್‌ವರ್ತ್‌. ಒಂದೊಂದು ಅಂಗಡಿ, ಮುಂಗಟ್ಟಿನಲ್ಲೂ ಶತಮಾನಕ್ಕೂ ಕಡಿಮೆ ಹಿಂದಿನ ಸರಕುಗಳು, ಗಡಿಯಾರಗಳು, ಲೋಹದ ಸಂದೂಕಗಳು,  ಬೊಂಬೆಗಳು, ಸೌಟುಗಳು, ಕಸೂತಿಗಳು, ಮುಖವಾಡಗಳು, ಪಾತ್ರೆ-ಪಡಗಗಳು, ಅಲಂಕರಣ ವಸ್ತುಗಳು, ಮಕ್ಕಳ ಆಟಿಕೆಗಳು, ದೀಪದ ಕಂಬಗಳು. ಹಾಗಾಗಿ, ಆ ಒಂದೊಂದು ಮಳಿಗೆಯೂ ಕಿರಾಣಿ ಜಾನಪದ ಲೋಕವೇ. ಹೊಟೇಲುಗಳಲ್ಲಿ ತಿನಿಸು, ಪೇಯ ದುಬಾರಿಯೆನ್ನಿಸಿದರೂ ಅಪ್ಪಟ ಗ್ರಾಮೀಣ ಪರಿಸರ ಅದನ್ನು ಗೌಣವಾಗಿಸುವುದು. ಉಳಿದುಕೊಳ್ಳಲು ಹೊಟೇಲುಗಳಿವೆ. ಧಗೆ ಏರಿದಾಗ ತಂಪೆರೆಯುವ ಸಲುವಾಗಿ ಅವುಗಳ ಕಿಟಕಿಗಳ ಮೂಲಕ ತಣ್ಣೀರಿನ‌ ಸಿಂಚನ ಹೊರಬಂದಿರುತ್ತದೆ. ಪರ್ವತಶ್ರೇಣಿ ಸಿಂಚನ ಸೃಷ್ಟಿಸುವ ಹಬೆಗೆ ವಿಶಿಷ್ಟ ಸಾಥ್‌ ನೀಡಿರುತ್ತದೆ. ದೂರದಲ್ಲಿ ನಿಂತು ಲೆವನ್‌ವರ್ತ್‌ ಶಹರನ್ನು ವೀಕ್ಷಿಸಿದರೆ ಜಹಜೊಂದು ತೇಲುತ್ತಿದೆಯೋ ಎಂದು ಭಾಸವಾಗುತ್ತದೆ. ಇವಳು ಮೊಮ್ಮಗಳಿಗೆ ಚೆನ್ನಮಣೆ ಕೊಡಿಸಿದಳು. 

“ಹಳೆ ಬೇರು, ಹೊಸ ಚಿಗುರು’ ನುಡಿಯನ್ನು ಲೆವನ್‌ವರ್ತ್‌  ಸಾಕಾರಗೊಳಿಸಿದೆ. ಯಾವುದೇ ಪರಿಕರವನ್ನು “ಇನ್ನಾಯಿತು ಇದರ ಕಥೆ’ ಎಂಬ ಅಂಬೋಣ ತಳೆಯುವ ಮುನ್ನ ಮತ್ತೆ ಮತ್ತೆ ಪರಿಶೀಲಿಸಬೇಕು. ಮತ್ತಷ್ಟು ದಿನಗಳವರೆಗೆ ಬಳಸಲಾದೀತೆ ಪ್ರಶ್ನಿಸಿಕೊಳ್ಳಬೇಕು. ಅದರ ಉತ್ಪಾದನೆಗೆ ಸಂದ ಪರಿಶ್ರಮ, ವೆಚ್ಚವಾದ ಸಂಪನ್ಮೂಲ, ಸಾಗಾಣಿಕೆ ಖರ್ಚು ಎಲ್ಲವನ್ನೂ ಆಲೋಚಿಸಬೇಕು. ಸಾರಾಂಶವಿಷ್ಟೆ , ಪುನರ್‌ಬಳಕೆ ಮನುಷ್ಯನ ಬದುಕಿನ ಶೈಲಿಯ ಒಂದು ಭಾಗವಾಗಬೇಕು. ಇರುವುದೊಂದೇ ಪರಿಸರ. ಪ್ರಕೃತಿಯನ್ನು ವೃಥಾ ಸೊರಗಿಸಬಾರದು. ಬವೇರಿಯ ಪ್ರಾಂತ್ಯ, ಅದರ ತದ್ರೂಪವೆನ್ನಬಹುದಾದ ಲೆವನ್‌ವರ್ತ್‌ ಜಗತ್ತಿಗೇ ಕೊಡುವ ಸಂದೇಶ ಅದೇ ತಾನೇ? ಇಂಧನ ತೈಲ ಹಿತಮಿತವಾಗಿ ಉಪಯೋಗಿಸಿ ಎನ್ನುವುದನ್ನು ಪ್ರಚುರಪಡಿಸಲು ಈ ಜಾಹೀರಾತು ಉಕ್ತಿ ಅದೆಷ್ಟು ಮೊನಚು ನೋಡಿ; “ತೈಲವನ್ನು ಸೊರಗಿಸಿ, ಯಂತ್ರವನ್ನಲ್ಲ!’. ಅಂದ ಹಾಗೆ ಲೆವನ್‌ವರ್ತ್‌ಗೆ ಹೋಗುವ ಹಾದಿಯಲ್ಲಿ ಅಂದರೆ  50 ಮೈಲಿಗಳು ಪಯಣಿಸಿದಾಗ ಮನಮೋಹಕ ಡಿಸೆಪ್ಷ‌ನ್‌ ಜಲಪಾತ ಸಿಗುತ್ತದೆ. ಕಲ್ಲು ಬಂಡೆಗಳನ್ನು ಅತ್ಯವಸರದಿಂದ ದಾಟುತ್ತ ನೀರು ನಮ್ಮ ಮೇಲೆರಗುವಂತೆ ತೋರುವುದು. ಸಂಜೆ ಐದೂವರೆಗೆ ನಮ್ಮ ಕಾರು ರೆಡ್ಮಂಡ್‌ನ‌ತ್ತ ಮುಖ ಮಾಡಿತು. ಮೌನ ಆವರಿಸಿತ್ತು. ಅದು ಅಗಲಿಕೆಯ ವೇದನೆಯ ಜೊತೆಗೆ  ಇನ್ನು ಮುಂದೆ ನಮ್ಮ ನಿಘಂಟಿನಲ್ಲಿ ಪ್ರಾಚೀನಾವಶೇಷ ಎಂಬ ಶಬ್ದವೇ ಇರದು ಎಂಬ ಸಂಕಲ್ಪವನ್ನೂ ಸೂಚಿಸಿತ್ತು. 

ಹೋಗುವುದು ಹೇಗೆ: ಅಮೆರಿಕ ಪ್ರವಾಸ ಕೈಗೊಂಡಾಗ ವೀಕ್ಷಿಸಬೇಕಾದ‌ ಸ್ಥಳಗಳ ಪಟ್ಟಿಯಲ್ಲಿ ಸಿಯಾಟಲ್‌ ನಗರ ಮರೆಯಬಾರದು. ಏಕೆಂದರೆ, ಅಲ್ಲೇ ಸ್ಪೇಸ್‌ ನೀಡಲ್‌, ಗಾಜಿನ ಮ್ಯೂಸಿಯಂ, ವಿಮಾನ ಕಾರ್ಖಾನೆಯಂತಹ ಮುಖ್ಯ ತಾಣಗಳಿವೆ.  ಬೆಂಗಳೂರಿನಿಂದ ಲಂಡನ್‌, ಚಿಕಾಗೋಗಿಂತ  ದುಬೈ ಮಾರ್ಗವಾಗಿ ಸಿಯಾಟಲ್‌ ತಲುಪುವುದು ಸರಾಗ. ಈ ಹತ್ತಿರದ ವಾಯುಮಾರ್ಗ ಕ್ರಮಿಸಲು ಒಟ್ಟು ಹದಿನೆಂಟು ತಾಸುಗಳು ಸಾಕು. 
                                       
 ಬಿಂಡಿಗನವಿಲೆ ಭಗವಾನ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.