ಬಿದಿರು ಕೊಳಲಾದದ್ದು !


Team Udayavani, Sep 2, 2018, 6:00 AM IST

9.jpg

ನಾನು ಒಂದು ಬಿದಿರಿನ ಗಿಡ
ಹುಲ್ಲು ಅಥವಾ ದೊಡ್ಡ ಹುಲ್ಲು ಎಂದರೂ ಸರಿಯೆ
ನನಗೆ ಟೊಂಗೆ ರೆಂಬೆಗಳಿಲ್ಲ.
ಹಾಗಾಗಿ ನಾನು ಉದ್ದನೆಯ ಒಂದು ಕೋಲು
ಮೈತುಂಬ ಇರುವ ಅವಕಾಶದಲ್ಲೂ ಚುಚ್ಚುವ ಮುಳ್ಳು.
ಹೀಗಾಗಿ ನಾನು ಯಾರಿಗೂ ಒಂದು ನೆರಳಾಗಲಿಲ್ಲ
ಹಣ್ಣು ಕೊಡುವ ಮರವಾಗಲಿಲ್ಲ
ಅಥವಾ ಕಡಿದುರುಳಿದ ಬಳಿಕ ಆಸನ ಉಪಕರಣ ಆಗಲಿಲ್ಲ
ನಾನು ಬದುಕಿರುವಾಗ ಏನೂ ಆಗಲಿಲ್ಲ
ಕನಿಷ್ಠ ಸತ್ತ ಬಳಿಕದ ಉರುವಲೂ ಆಗಲಿಲ್ಲ
ಅಪಶಕುನದ ಭಯಕ್ಕೆ ನನ್ನನ್ನು ಸುಡುವವರೂ ಇಲ್ಲ
ಅಲ್ಲೊಮ್ಮೆ ಇಲ್ಲೊಮ್ಮೆ ಏಣಿಯಾಗಿದ್ದೇನೆ
ಏರಿದವರು ಮರೆತುಬಿಟ್ಟಿದ್ದಾರೆ ಏರಿದಾಕ್ಷಣ.
ಬಹಳಷ್ಟು ಜನ ನನ್ನ ನೆನೆಯುವುದು ಸತ್ತಾಗ
ಸತ್ತ ಹೆಣ ಹೊರುವ ಚಟ್ಟಕ್ಕೆ
ಚಟ್ಟಕ್ಕಾದರೂ ಎಷ್ಟು ಆಯುಸ್ಸು? ಹೆಣದ ಜತೆಗೆ ಅದೂ ಬೂದಿ
ನನಗೆ ನಾನು ಏನೂ ಆಗಲಿಲ್ಲ ಎಂಬ ಕೊರಗು ಉಳಿಯಿತು.
ನಾನು ಒಳಗೇ ನರಳಿದೆ, ಕೊರಗಿದೆ
ನನ್ನ ಉಸಿರಿಗೆಲ್ಲ ಒಂದೇ ಹಸಿವು
ನಾನು ಸತ್ತ ಬಳಿಕವೂ ಉಳಿಯಬೇಕು
ಸಾಯದಂತೆ ಉಳಿಯಬೇಕು
ನನ್ನ ಒಳಗೆ ಏನೂ ಆಗದ ಒಂದು  ಪೊಳ್ಳುತನ
ಹಾಗಾಗಿ ಕಾಂಡದ ಒಳಗೆ ಒಂದು ಖಾಲಿ ಅವಕಾಶ
ನಾನು ಒಳಗೆ ಖಾಲಿ, ಹೊರಗೆ ಬರಿಯ ಸಿಪ್ಪೆ
ಅದರೊಳಗೆಲ್ಲ ಬದುಕಲೇ ಬೇಕು ಎಂಬ ಹಸಿವಿನ ಉಸಿರು
ಅದೊಂದನ್ನೇ ನಿತ್ಯ ಮಂತ್ರಿಸುತ್ತಿದ್ದೆ
ಉಸಿರೆಲ್ಲ ಸತ್ತ ಬಳಿಕವೂ ಬದುಕುವ ಪ್ರಾಣಾಯಾಮ
ಒಳಗೆಲ್ಲ ಓಡಾಡುತ್ತಿತ್ತು
.
.
ದುಂಬಿ ಮೈತುಂಬ ರಂಧ್ರ ಕೊರೆಯಿತು.
ನಾನು ಅದರ ಒತ್ತಡಕ್ಕೆ ಮುರಿದು ನೆಲಕ್ಕೆ ಬಿದ್ದೆ
ಒಳಗೆ ಹರಿಯುವ ಉಸಿರಿಗೆ ಜೀವವಿತ್ತು
ಅದು ಒಂದೇ ಸಮನೆ ಬದುಕುವ ಮಾತು ಹೇಳುತ್ತಿತ್ತು
ಅಷ್ಟರಲ್ಲಿ ಯಾರೋ ಒಬ್ಬ ದನಕಾಯುವವ
ಆ ದಾರಿಯಲ್ಲಿ ಸಾಗಿದ, ನನಗೆ ಅವನ ಕಾಲು ತಾಗಿತು
ಅವನು ಥಟ್ಟಂತ ಕಾಲು ಹಿಂದಕ್ಕೆಳೆದ.
ಅವನು ಸಾಮಾನ್ಯ ದನ ಕಾಯುವವನಲ್ಲ , ಶ್ರೀಕೃಷ್ಣ.
ಅವನಿಗೆ ನನ್ನ ಒಳಗಿನ ಉಸಿರು ತಾಕಿರಬೇಕು
ಅದಕ್ಕೆ ಕಾಲಿನಿಂದ ಒದೆದು ಹೋಗಲಿಲ್ಲ
ಮೆತ್ತಗೆ ನನ್ನ ಕಡೆಗೆ ಬಾಗಿದ
ತನ್ನ ಕೈಯಿಂದ ನನ್ನನ್ನು ಎತ್ತಿಕೊಂಡ
ತನ್ನ ಕೈಯಳತೆ ನನ್ನನ್ನು ಮುರಿದ
ಅದೊಂದು ಸುಂದರ ವೇದನೆ, ಅಪೇಕ್ಷಿತ ನೋವಿನ ಹಾಗೆ
ಅಷ್ಟಕ್ಕೆ ನಿಲ್ಲಲಿಲ್ಲ ಅವನು
ಇರುವ ಐದಾರು ರಂಧ್ರಗಳಲ್ಲಿ ಒಂದಕ್ಕೆ ತನ್ನ ತುಟಿ ಹಚ್ಚಿದ
ಅಬ್ಟಾ ! ಅದೆಂಥ ಕೃಪೆ ! ಅದು ಮುತ್ತಲ್ಲ
ಪಂಚಪ್ರಾಣವನ್ನು ನನ್ನೊಳಗೆ ನೂಕಿಬಿಟ್ಟ
ಓಹ್‌! ನನ್ನೊಳಗೆ ಕೋಲಾಹಲ
ಒಳಗೆ ಬದುಕಬೇಕು ಎಂದು ಹಸಿದ ಉಸಿರಿಗೆ ಅವನ ಉಸಿರು ಕೂಡಿತು
ಎರಡರೊಳಗೆ ಒಂದು ಸಮಪಾಕದ ಹಸಿಬಿಸಿ ಬೆಸೆತ
ನಾನು ರುಮುರುಮು ಒಳಗೆ ಬೀಸಿ ಹೊರಗೆ ನೂಕುವಂತಾದೆ
ಇನ್ನೇನು ಜೀವದ ಆರ್ಭಟ ಗಾಳಿಯಾಗಿ ರಭಸ ಪಡೆದಿತ್ತು
ಅದು ಹಾಗೆ ಭರ್ರಂತ ಉಳಿದ ರಂಧ್ರಗಳಲ್ಲಿ ಬಿರುಗಾಳಿಯಾಗಿ ಆರ್ಭಟಿಸಲಿಕ್ಕಿತ್ತು
ಅಷ್ಟರಲ್ಲಿ ಕೃಷ್ಣ…
ತನ್ನ ಎರಡು ಬೆರಳುಗಳಿಂದ ಎರಡು ರಂಧ್ರಗಳನ್ನು ಮುಚ್ಚಿದ
ಹೊರಗೆ ಹೊರಟ ಜೀವದ ನೂಕಿಗೆ ಪಾಕಮಾಡಿ ಹೊಸ ಮಾರ್ಗ ತೋರು
ನಿಧಾನಕ್ಕೆ ಎರಡು ರಂಧ್ರಗಳಲ್ಲಿ ಸಾಂದ್ರವಾಗಿ ಹರಿಯಬಿಟ್ಟ
ಅದು ಹರಿಬಿಟ್ಟ ನಾದವಾಯಿತು
ನಾನು ಆರ್ಭಟವಾಗಬೇಕಾದವನು ಸುಂದರ ನಿನಾದವಾದೆ.
ದನಿಯ ನೂಕಿಗೆ ಸ್ವರ ಕೊಟ್ಟ ಕೊಳಲಾದೆ
ಬರಿಯ ಕೊಳಲಾಗಲಿಲ್ಲ ಕೃಷ್ಣನ ಕೈಯ ಕೊಳಲಾದೆ
ಅವನ ತುಟಿಯ ಸ್ಪರ್ಶಕೆ ಮರುಜೀವ ಪಡೆದೆ
ಎಂದೂ ಸಾಯದಂತೆ ಉಳಿದೆ, ಬದುಕಿದೆ.

ವೀಣಾ ಬನ್ನಂಜೆ

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.