ಸ್ವಚ್ಛ ಜಪಾನ್‌


Team Udayavani, Sep 9, 2018, 6:00 AM IST

x-2.jpg

ಸ್ವಚ್ಛತೆ ಎನ್ನುವುದು ವೈಯುಕ್ತಿಕವಾಗಿ ಮೂಡುವಂತಹ ಒಂದು ಗುಣ. ಇದನ್ನು ಹುಟ್ಟಿನಿಂದಲೇ ಜಪಾನೀಯರು ರೂಢಿಸಿಕೊಂಡು ಬಿಟ್ಟಿದ್ದಾರೆ. ಅಲ್ಲಿ ಇವರಿಗೆ ಯಾವ ಸರಕಾರವಾಗಲಿ, ಸಂಘಸಂಸ್ಥೆಗಳಾಗಲಿ ಹೇಳಿಕೊಡುವ ಆವಶ್ಯಕತೆ ಇಲ್ಲ. ಎಳವೆಯಲ್ಲೇ ಪ್ರಾಥಮಿಕ ಶಾಲೆಯಲ್ಲೇ ಮಕ್ಕಳಿಗೆ ಅವರ ಕೊಠಡಿಗಳನ್ನು ಸ್ವತ್ಛವಾಗಿಟ್ಟುಕೊಳ್ಳುವುದು, ಮಧ್ಯಾಹ್ನದ ಊಟವನ್ನು ಹಂಚುವುದು, ಊಟದ ನಂತರ ಪಾತ್ರೆಗಳನ್ನು ಸ್ವತ್ಛಗೊಳಿಸುವುದು, ತರಗತಿಯ ನೆಲವನ್ನು ಒರೆಸುವುದು ಇತ್ಯಾದಿಗಳನ್ನು ಹೇಳಿಕೊಡುವುದರಿಂದ ಅವರಿಗೆ ಸ್ವಚ್ಛತೆ ರಕ್ತದಲ್ಲೇ ಮೈಗೂಡಿರುತ್ತದೆ. ಈ ಕೆಲಸವನ್ನು ಮಕ್ಕಳಾಗಲಿ, ಪೋಷಕರಾಗಲಿ, ಶಾಲೆಯ ಶಿಕ್ಷಕರಾಗಲಿ ಕೀಳರಿಮೆಯೆಂದು ಭಾವಿಸುವುದಿಲ್ಲ. ಹಾಗಾಗಿ, ಈ ಮಕ್ಕಳು ಬೆಳೆದು ದೇಶದ ನಾಗರಿಕರಾದಾಗ, ಇವರ ನಡವಳಿಕೆಗಳು ಸಮಾಜಮುಖೀಯಾಗಿರುತ್ತದೆ. ಜಪಾನಿನ ಯಾವುದೇ ರಸ್ತೆಗಳಾಗಲಿ, ಜನನಿಬಿಡ ಸ್ಥಳಗಳಾದ ಮೆಟ್ರೋ ನಿಲ್ದಾಣವಾಗಲಿ, ಬಸ್‌ ನಿಲ್ದಾಣವಾಗಲಿ, ಮಾಲ್‌ಗ‌ಳಾಗಲಿ, ಪಾರ್ಕ್‌ಗಳಾಗಲಿ, ಆಫೀಸಿನಲ್ಲಾಗಲಿ ನೀವು ಹುಡುಕಿದರೂ ಕಸ ಸಿಗುವುದಿಲ್ಲ. ಇಲ್ಲಿ ಸಿಗರೇಟು ಸೇದುವವರು ಸಹ ಸಿಗರೇಟಿನ ಬೂದಿ ನೆಲದ ಮೇಲೆ ಬೀಳದಂತೆ ಆ ಬೂದಿಯನ್ನು ಇನ್ನೊಂದು ಪೊಟ್ಟಣದಲ್ಲಿ ಚಿಮುಕಿಸಿಕೊಳ್ಳುತ್ತಾರೆ. 

ಎಲ್ಲ ಕನ್‌ವೀನಿಯನ್ಸ್‌ ಸ್ಟೋರ್‌ಗಳಲ್ಲಿ ತರಕಾರಿಗಳನ್ನು ಪ್ಲಾಸ್ಟಿಕ್‌ ತೆಳುಹಾಳೆಗಳಲ್ಲಿ ಸುತ್ತಿಟ್ಟಿರುತ್ತಾರೆ. ವ್ಯಾಪಾರ ಮುಗಿಸಿ ಹೊರಬರುವಾಗಲು ಪ್ಲಾಸ್ಟಿಕ್‌ ಕೈಚೀಲವನ್ನೇ ಕೊಡುತ್ತಾರೆ. ಆದರೂ ಜಪಾನೀಯರು ವ್ಯವಸ್ಥಿತವಾಗಿ ಮರುಬಳಕೆ ಮಾಡುವುದರಿಂದ ಇವರಿಗೆ ಪ್ಲಾಸ್ಟಿಕ್‌ ತಲೆನೋವಾಗಿರುವ ವಸ್ತುವಾಗಿ ಪರಿಗಣಿತವಾಗುವುದಿಲ್ಲ. 

ನಾವು ತಿಳಿದುಕೊಳ್ಳಬೇಕಾದ ಅಂಶವೆಂದರೆ ಸ್ವಚ್ಛತೆ ಎಂಬುದು ಕೇವಲ ಘೋಷಣೆಗಳಿಂದಾಗಲಿ, ವಾಟ್ಸಾಪ್‌ ಸಂದೇಶದಿಂದಾಗಲಿ, ಶಾರ್ಟ್‌ ಫಿಲ್ಮ್ನಿಂದಾಗಲಿ, ಸಂಘಸಂಸ್ಥೆಗಳ ಒಂದು ದಿನದ ಕಾರ್ಯಕ್ರಮದಿಂದಾಗಲಿ ಮೂಡುವ ಭಾವನೆಯಲ್ಲ. ಅದು ತನ್ನೊಳಗೆಯೇ ಮೂಡುವ ಒಂದು ಎಚ್ಚರ. 

ಸಿ. ಎಸ್‌. ಶ್ರೀನಾಥ್‌

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.