ಪಥ್ಯಕ್ಕೊಂದು ಪಥ, ಫಿಟ್‌ ಅಂತ ಹೇಳಿ ಥಟ್ಟಂತ ತಿಳೀರಿ


Team Udayavani, Jan 11, 2017, 3:45 AM IST

fitt.jpg

ಆರೋಗ್ಯವಂತರಾಗಿರಬೇಕು, ಉತ್ತಮವಾದ ಅಂಗಸೌಷ್ಟವ ಹೊಂದಿರಬೇಕು ಎಂಬುದು ಎಲ್ಲರ ಬಯಕೆ. ಅದಕ್ಕಾಗಿಯೇ
ಕೆಲವರು ಮಾಡಬಾರದ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇರುತ್ತಾರೆ. ಆದರೆ ಕ್ರಮ ಬದ್ಧವಾದ ಡಯಟ್‌ ಮಾಡದೆ ಕೆಲವರು ತಪ್ಪು ಮಾಡುವುದು ಇದೆ. ಅಂಥ ಕೆಲವು ತಪ್ಪುಗಳಾವುವು ಎಂಬುದನ್ನು ತಿಳಿದುಕೊಂಡು ತಿರುಗಿ ಆ ತಪ್ಪುಗಳನ್ನು ಮಾಡದೆ ಹೊದರೆ, ನೀವು ನಿಶ್ಚಿಂತೆಯಿಂದ ನಿಮ್ಮ ಫಿಟ್‌ನೆಸ್‌ ಕಾಯಕವನ್ನು ಮುಂದುವರೆಸಬಹುದು.

ಪೋಷಕಾಂಶಗಳ ಬಗ್ಗೆ ಗಮನ ಕೊಡದಿರುವುದು

ತೂಕ ಕಡಿಮೆಯಾಗಬೇಕು, ಆದರೆ ಫಿಟ್‌ನೆಸ್‌ ಬೇಕು ಎಂದು ಬಯಸುವುದಾದರೆ ಪೋಷಕಾಂಶಗಳತ್ತ ಗಮನ ಕೊಡಿ. ವ್ಯಾಯಾಮ ಮಾಡಿ, ಅಧಿಕ ಕ್ಯಾಲೋರಿ ಇರುವ ಆಹಾರಗಳನ್ನು ತಿಂದರೆ ದೇಹದ ತೂಕ ಕಮ್ಮಿ ಮಾಡಲು ಸಾಧ್ಯವಿಲ್ಲ. ವ್ಯಾಯಾಮ ಮಾಡಿ, ಸ್ವಲ್ಪವೂ ಕ್ಯಾಲೋರಿ ತೆಗೆದುಕೊಳ್ಳದಿದ್ದರೆ ದೇಹ ಸೊರಗುವುದು. ಅಲ್ಲದೆ, ಕ್ಯಾಲೋರಿ ಇರುವ ಆಹಾರಗಳನ್ನು ಯಾವ ಹೊತ್ತಿನಲ್ಲಿ ತೆಗೆದುಕೊಳ್ಳಬೇಕು ಅನ್ನುವುದನ್ನು ಕೂಡ ತಿಳಿದುಕೊಳ್ಳುವುದು ಒಳ್ಳೆಯದು.

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ಬೇಗನೆ ದೇಹದಲ್ಲಿರುವ ಕ್ಯಾಲೋರಿ ಕರಗುತ್ತದೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ತುಂಬಾ ಹೊತ್ತು ವ್ಯಾಯಾಮ ಮಾಡಲು ಶಕ್ತಿ ಇರುವುದಿಲ್ಲ, ಆದ್ದರಿಂದ ವ್ಯಾಯಾಮಕ್ಕೆ ಮೊದಲು ಒಂದು ಗ್ಲಾಸ್‌ ನೀರು ಅಥವಾ ಜ್ಯೂಸ್‌ ಕುಡಿದು ಬಳಿಕ ವ್ಯಾಯಾಮ
ಮಾಡುವುದು ಒಳ್ಳೆಯದು.

ವ್ಯಾಯಾಮದ ಬಳಿಕ ದೇಹದಲ್ಲಿ ಶಕ್ತಿ
ಇರುವಂತೆ ನೋಡಿಕೊಳ್ಳಬೇಕು ವ್ಯಾಯಾಮ ಮಾಡಿದ ಬಳಿಕ ದೇಹಕ್ಕೆ ಶಕ್ತಿ ತುಂಬುವ ಆಹಾರಗಳನ್ನು ತಿನ್ನಿ. ಇಲ್ಲಿ ಹೇಳಿರುವುದು ಶಕ್ತಿ ತುಂಬುವ ಆಹಾರಗಳನ್ನು ತಿನ್ನಿ.

ಒಂದು ಅಥವಾ ಎರಡು ಹೊತ್ತು
ಆಹಾರ ತಿನ್ನದಿರುವುದು ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೆ ದೇಹದ ಆರೋಗ್ಯ ಹಾಳಾಗುವುದು, ಆದ್ದರಿಂದ
ಆಹಾರ ತಿನ್ನದೆ ಸಣ್ಣಗಾಗುವ ಸಾಹಸಕ್ಕೆ ಕೈ ಹಾಕಬೇಡಿ. ದಿನದಲ್ಲಿ 4-5 ಬಾರಿ ತಿನ್ನಿ, ಆದರೆ ಸ್ವಲ್ಪ-ಸ್ವಲ್ಪ ತಿನ್ನಿ.

ಭಾರ ಎತ್ತುವಾಗ ಎಚ್ಚರ
ಫಿಟ್‌ನೆಸ್‌ಗಾಗಿ ಭಾರ ಎತ್ತುವ ವ್ಯಾಯಾಮ ಮಾಡುವಾಗ ಮೂಳೆಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಭಾರ ಎತ್ತುವ ವ್ಯಾಯಾಮವನ್ನು ತರಬೇತುದಾರರ ಮಾರ್ಗದರ್ಶನದಲ್ಲಿ ಮಾಡಿ.

ಅತಿ ಕಡಿಮೆ ಭಾರ ಎತ್ತುವುದು
ಹೆಚ್ಚು ಭಾರ ಎತ್ತಿದರೆ ಮೂಳೆ ಮುರಿಯಬಹುದೆಂದು ಕೆಲವರು ಅತಿ ಕಡಿಮೆ ಭಾರವಿರುವ ಸಾಧನಗಳಿಂದ ವ್ಯಾಯಾಮ ಮಾಡುವುದರಿಂದ ಏನೂ ಪ್ರಯೋಜವಿಲ್ಲ ಅನ್ನುವುದು ನೆನಪಿರಲಿ.

ನಿಮ್ಮ ವ್ಯಾಯಾಮವನ್ನು ಯಾವ ಅಂಶವೂ ಹಾಳು ಮಾಡದಿರಲಿ

ವ್ಯಾಯಾಮ ಮೈ ತೂಕವನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಆರೋಗ್ಯವನ್ನು ವೃದ್ಧಿಸುತ್ತದೆ. ಆದ್ದರಿಂದ ನಿಮ್ಮ ವ್ಯಾಯಾಮ ಮಾಡುವುದನ್ನು ಒಂದು ಕಷ್ಟದ ಕೆಲಸವೆಂದು ಭಾವಿಸದೆ ಅದು ನಿಮ್ಮ ಆಸಕ್ತಿಯ ವಿಷಯನ್ನಾಗಿ ತೆಗೆದುಕೊಂಡರೆ ವ್ಯಾಯಾಮವನ್ನು ತಪ್ಪಿಸದೇ ನಿಯಮಿತವಾಗಿ ಮಾಡುವಿರಿ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.