ಹಸಿವು ಬಡತನ ಮತ್ತು ಹೂ ಮಾರುವ ಹುಡುಗಿ


Team Udayavani, Apr 26, 2017, 3:50 AM IST

25-AVALU-1.jpg

ಒಂದು ದಿನ ನಾನು ತುಮಕೂರಿನಿಂದ ನಮ್ಮ ಹಳ್ಳಿಗೆ ಹೊರಡುವಾಗ, ಗೌರಿಬಿದನೂರಿನ ಒಂದು ಸರ್ಕಲ್ಲಿನಲ್ಲಿ ನನ್ನ ಕಣ್ಣಿಗೆ ಬಿದ್ದಂಥ ದೃಶ್ಯವಿದು. ಅವಳ ಹೆಸರು ತಿಳಿಯದು, ನೋಡಲು ಬೆಳ್ಳಗೆ ಉದ್ದನೆ ಕೂದಲು, ತೆಳ್ಳನೆಯ ಮೈಕಟ್ಟು ಹೊಂದಿದ್ದಳು. ಕೈಯಲ್ಲಿ ಹೂ ಬುಟ್ಟಿ. ನಾನು ಹೇಳುತ್ತಿರುವುದು 2ನೇ ತರಗತಿ ಓದುತ್ತಿರುವ ಒಂದು ಹುಡುಗಿಯ ವಿಚಾರ. ಅವಳು ಪ್ರತಿದಿನ ರಾತ್ರಿ ಸರಿಸುಮಾರು 9.30ರ ತನಕ, ಅಂದರೆ ಅವಳ ಬುಟ್ಟಿಯಲ್ಲಿನ ಹೂವು ಖಾಲಿಯವವರೆಗೆ ಮನೆಗೆ ಹೋಗುವುದಿಲ್ಲವಂತೆ. 

ಆ ದಿನ ರಾತ್ರಿ ಸುಮಾರು 8.50ರ ಸಮಯ. ಯಾವುದೇ ಬಸ್ಸುಗಳಿರಲಿಲ್ಲ. ದಾರಿಯ ತುಂಬಾ ಬರೀ ಗಂಡಸರು, ಕುಡಿದವರು ಗಲಾಟೆ ಮಾಡುತ್ತಿದ್ದರು. ಎಲ್ಲರ ಮಧ್ಯದಲ್ಲಿ ಈ ಹುಡುಗಿ ಒಬ್ಬಳೇ ಇದ್ದಳು. ಅವಳನ್ನು ನೋಡಿ ನನಗೆ ಪಿಚ್ಚೆನಿಸಿತು. ಎಲ್ಲರ ಬಳಿ ಹೋಗಿ “ಅಂಕಲ್‌, ಹೂ ತಗೊಳ್ಳಿ’ ಎಂದು ಅಂಗಲಾಚುತ್ತಿದ್ದಳು. ಅಲ್ಲೊಬ್ಬ ವ್ಯಕ್ತಿ- “ದಿನಾ ನಿಂದು ಇದೇ ಗೋಳು. ಮಾಡೋಕೆ ಏನೂ ಕೆಲ್ಸಾ ಇಲ್ವಾ?’ ಎಂದು ಬೈದು ಕಳಿಸಿದನು. ನಂತರ ನನ್ನ ಬಳಿ ಒಂದು, “ಅಕ್ಕಾ, ಪ್ಲೀಸ್‌ ಹೂ ತಗೊಳ್ಳಿ’, ಎಂದಾಗ ಅವಳ ಕಣ್ಣಲ್ಲಿ ನೀರಿತ್ತು. ನಾನು ಏನೂ ಮಾತನಾಡದೆ 10 ರೂಪಾಯಿಗೆ ಹೂ ತಗೊಂಡೆ. ಆದರೆ ಅವಳು “ಅಕ್ಕ, ಎಲ್ಲವನ್ನೂ ತೆಗೆದುಕೊಳ್ಳಿ. ನಾನು ಬೇಗ ಮನೆಗೆ ಹೋಗ್ಬೇಕು’ ಅಂದಳು. ನಾನು ಇಷ್ಟು ಹೂನ ಅವಶ್ಯಕತೆ ನನಗಿಲ್ಲಮ್ಮ ಅಂದ ಕೂಡಲೇ ಮತ್ತೂಬ್ಬ ವ್ಯಕ್ತಿ ಬಂದು 100 ರೂಪಾಯಿ ಕೊಟ್ಟು ಬುಟ್ಟಿ¿åಲ್ಲಿದ್ದ ಅಷ್ಟೂ ಹೂವನ್ನು ತೆಗೆದುಕೊಂಡು ಹೇಳಿದರು- “ಈಗ ಹೋಗು ಮನೆಗೆ’. 

ನಾನು ಅವಳನ್ನು ತಡೆದು, “ಯಾಕೆ ಇಷ್ಟು ತಡರಾತ್ರಿಯಾದರೂ ಹೂ ಮಾರುತ್ತಿದ್ದೀಯಾ?’ ಎಂದು ಕೇಳಿದಾಗ “ಅಮ್ಮ ಕೊಟ್ಟ ಹೂವನ್ನು ಪೂರ್ತಿಯಾಗಿ ಮಾರಿಕೊಂಡು ಹೋಗದಿದ್ದರೆ ಮನೆಗೆ ಸೇರಿಸುವುದಿಲ್ಲ. ಇದರಿಂದ ಬಂದ ದುಡ್ಡಿನಿಂದಲೇ ನಾವು ಜೀವನ ನಡೆಸಬೇಕು. ನನ್ನ ವಿದ್ಯಾಭ್ಯಾಸವೂ ಹೂ ಮಾರಿದ ಹಣದಿಂದಲೇ ನಡೆಯಬೇಕು’ ಎಂದ ಹುಡುಗಿ ಹೂ ಖಾಲಿಯಾದ ಸಂತಸದಿಂದ ಮನೆಯ ಕಡೆಗೆ ಓಡುವವಳಂತೆ ನಡೆದುಹೋದಳುಗೋಡಿದಳು.

ಒಂದು ಕ್ಷಣಕ್ಕೆ ಮನಸ್ಸಿನಲ್ಲಿ ಒಂಥರಾ ನೋವು. ಅಷ್ಟು ಚಿಕ್ಕವಳು, ರಾತ್ರಿ ಒಂಭತ್ತೂವರೆಯವರೆಗೆ ಬಸ್‌ ನಿಲ್ದಾಣದಲ್ಲಿ ಹೂ ಮಾರುವುದು, ಅದೂ ಅಲ್ಲಿ ಹೆಚ್ಚಾಗಿ ಕುಡುಕರು, ಪುಂಡರು ಇರುವ ಸ್ಥಳ. ಇದೆಲ್ಲ ಗೊತ್ತಿದ್ದರೂ ಆಕೆ ನಿರ್ಲಿಪ್ತಳಂತೆ ಹೂ ಮಾರುತ್ತಿದ್ದುದನ್ನು ಕಂಡಾಗ, ಯಾರಿಂದ ಬೇಕಾದರೂ, ಯಾವ ಹೊತ್ತಿನಲ್ಲಿ ಬೇಕಾದರೂ, ಎಂಥ ಕೆಲಸವನ್ನಾದರೂ ಮಾಡಿಸುವ ಶಕ್ತಿ ಹಸಿವು ಮತ್ತು ಬಡತನಕ್ಕಿದೆ ಎಂದುಕೊಂಡೆ.

ತ್ರಿವೇಣಿ ಎಚ್‌. ಜಿ., ಗೌರಿಬಿದನೂರು

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.