ಮಾನ್ಸೂನ್‌ ಮಿಂಚು: ಮಳೆಗಾಲದ ಟ್ರೆಂಡೀ ಫ್ಯಾಶನ್‌ ಲುಕ್‌


Team Udayavani, Aug 2, 2017, 10:11 AM IST

02-VALU-5.jpg

ಮಳೆಗಾಲದಲ್ಲಿ ನಿಸರ್ಗ ಸಂಪೂರ್ಣವಾಗಿ ಹೊಸ ಮೇಕಪ್‌ ಮಾಡಿಕೊಳ್ಳುತ್ತದೆ. ತಾಜಾ ಸೌಂದರ್ಯದ ಬಟ್ಟೆ ತೊಡುತ್ತದೆ. ಹೆಣ್ಣು ಕೂಡ ಈ ಋತುಮಾನದಲ್ಲಿ ಹಸಿರಿಗೆ ಸನಿಹವಾಗುತ್ತಾಳೆ. ಮಳೆಗಾಲಕ್ಕೆ ತಕ್ಕಂತೆ ಮೇಕಪ್‌ ಮಾಡಿಕೊಂಡು, ಮಿರಮಿರನೆ ಮಿಂಚುತ್ತಾಳೆ. ಅಷ್ಟಕ್ಕೂ ಅವಳ “ಮಾನ್ಸೂನ್‌ ಫ್ಯಾಶನ್‌’ ಹೇಗಿರಬೇಕು?

ಅಕ್ವಾ ಬ್ಲ್ಯೂ ಮೇಕಪ್‌
ನೀಲಿ ಬಣ್ಣದ ಲಿಪ್‌ಸ್ಟಿಕ್‌ ಆರ್ಟ್‌ ಮತ್ತು ಐ ಷಾಡೋ ಇದರ ಗುಟ್ಟು. ಮಳೆಗಾಲದ ಬಣ್ಣ ನೀಲಿ ಎನ್ನುತ್ತಾರೆ ಬ್ಯೂಟಿಷಿಯನ್‌ಗಳು. ಆ ನೀಲಿ ಬಣ್ಣವನ್ನು ಮೇಕಪ್‌ ಮೂಲಕ ತುಟಿ ಹಾಗೂ ಕಣ್ರೆಪ್ಪೆಯ ಮೇಲೆ ಆಕರ್ಷಕವಾಗಿ ಮೂಡಿಸಲಾಗುತ್ತದೆ. ಸಮುದ್ರದ ನೀಲಿ ಸುಂದರಿಯ ಕಣ್ಣುಗಳ ಮೇಲೆ ಲೇಪನಗೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ನೀಲಿ ಲಿಪ್‌ಸ್ಟಿಕ್‌, ಬ್ಲ್ಯೂ ಐ ಷಾಡೋಗಳನ್ನು ಬಳಸಿ ಇದನ್ನು ಮಾಡಲಾಗುತ್ತದೆ. 

ಮಾನ್ಸೂನ್‌ ನೈಲ್‌ ಆರ್ಟ್‌
ಮಳೆಗಾಲದ ಸೌಂದರ್ಯವನ್ನು ಉಗುರುಗಳ ಮೇಲೆ ಅತ್ಯಾಕರ್ಷಕವಾಗಿ ಅಚ್ಚು ಮಾಡಬಹುದು. ವರ್ಷ ಋತುವನ್ನು ಸಂಕೇತಿಸುವ ಛತ್ರಿ, ಮೋಡ, ಮಳೆಹನಿ, ಕಪ್ಪೆಗಳನ್ನು ಕೈ ಉಗುರುಗಳ ಮೇಲೆ ಚಿತ್ರಿಸಿಕೊಳ್ಳಬಹುದು. ನೈಲ್‌ ಪಾಲಿಷ್‌ ಬಳಸಿಯೇ ಈ ಸೌಂದರ್ಯವನ್ನು ರೂಪಿಸಿಕೊಳ್ಳಬಹುದು. ಅಂದದ ಮುಖಕ್ಕೆ ಬೆರಳುಗಳನ್ನು ಅಡ್ಡಹಿಡಿದಾಗ, ಉಗುರುಗಳ ಸೌಂದರ್ಯ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತದೆ.

ಮಾನ್ಸೂನ್‌ ಫ‌ುಟ್‌ವೇರ್‌
ಹೈ ಹೀಲ್ಡ್‌ ಪ್ರಿಯರು ಮಳೆಗಾಲದಲ್ಲಿ ಅದರ ಮೋಹ ಬಿಡುವುದೇ ಉತ್ತಮ. ಉದ್ದನೆಯ ಬೂಟ್‌ ಬಳಸಿದರೆ, ಅದು ಟ್ರೆಂಡಿಯಾಗಿಯೂ ಇರುತ್ತದೆ, ಕೆಸರಿನಂಥ ಪ್ರದೇಶಗಳಲ್ಲಿ ಪಾದಗಳ ಅಂದವನ್ನೂ ಅದು ಕಾಪಾಡುತ್ತದೆ. ಇಲ್ಲದಿದ್ದರೆ, ಫ್ಲಿಪ್‌- ಫ್ಲಾಪ್‌, ಬ್ಯಾಲರಿನಾ ಫ‌ುಟ್‌ವೇರ್‌ಗಳ ಮೊರೆ ಹೋದರೆ, ಅದು ಕೂಡ ಫ್ಯಾಶನೇಬಲ್‌.

ರಂಗುರಂಗಿನ ರೈನ್‌ಕೋಟ್‌
ಜೋರು ಮಳೆಯಲ್ಲಿ ರೈನ್‌ ಕೋಟ್‌ ಧರಿಸಿ ನಡೆಯುವ ಮಜಾವೇ ಬೇರೆ. ಗಾಢ ಪಿಂಕ್‌, ಹಳದಿ, ಮ್ಯಾಂಗೋ, ಅಕ್ವಾ ಬ್ಲ್ಯೂ, ಸೀ ಗ್ರೀನ್‌, ಎನಿಮಲ್‌ ಇನ್‌ಸೈಡರ್‌ ಪ್ರಿಂಟ್ಸ್‌, ಮಿಲಿಟರಿ ಪ್ರಿಂಟ್‌, ಫ್ಲೋರಲ್‌ ಪ್ರಿಂಟ್‌, ಹೂಡೆಡ್‌ ಲಾಂಗ್‌ ರೈನ್‌ಕೋಟ್‌ಗಳನ್ನು ಧರಿಸಿದರೆ, ಅದರ ಲುಕ್‌ ಬಣ್ಣಿಸಲಸದಳ. 

ಟ್ರೆಂಡೀ ಅಂಬ್ರೆಲಾ
ಮಳೆಗಾಲ ಅಂದಮೇಲೆ ಛತ್ರಿಯದ್ದೇ ಅಧಿಪತ್ಯ. ಹಳೇ ಕಾಲದ ಕಪ್ಪು ಛತ್ರಿಯನ್ನು ಹಿಮ್ಮೆಟ್ಟಿಸಿ ನೂತನ ಫ್ಯಾನ್ಸಿ ರೇಂಬೋ ಕೊಡೆಗಳು ಎಲ್ಲೆಲ್ಲೂ ಕಾಣಿಸುತ್ತಿವೆ. ಪೋಲ್ಕಾ ಡಾಟ್ಸ್‌ ಛತ್ರಿ, ಫ್ರಿಲ್‌ ಟ್ರೆಂಡ್‌ ಛತ್ರಿ, ಲೇಸ್‌ ಟ್ರೆಂಡ್‌, ಟೈಪೋಗ್ರಫಿ, ಕಾರ್ಟೂನ್‌ ಪ್ರಿಂಟ್ಸ್‌ ಛತ್ರಿ… ಹೀಗೆ ಕೇವಲ ರೌಂಡ್‌ ಶೇಪ್‌ನಲ್ಲಷ್ಟೇ ಅಲ್ಲದೆ, ಹೃದಯ ಆಕಾರ ಮತ್ತು ಫ‌ಂಕಿ ಪ್ರಿಂಟ್ಸ್‌ನ ಛತ್ರಿಗಳೂ ಈ ಸೀಸನ್‌ನಲ್ಲಿ ಹೆಚ್ಚು ಮಿಂಚುತ್ತಿವೆ.

ಮಾನ್ಸೂನ್‌ ಹೇರ್‌ಸ್ಟೈಲ್‌
ಈ ವೇಳೆ ಲೂಸ್‌ ಹೇರ್‌ಸ್ಟೈಲ್‌ಗಿಂತಲೂ, ಶಾರ್ಟ್‌ ಬ್ಲಿಂಡ್‌ ಕಟ್‌, ಸ್ನೇಕ್‌ ಟೈಲ್‌, ಬ್ರೈಡಡ್‌ ಜಡೆ (ಸಾವಿರ ಕಾಲಿನ ಜಡೆ) ಬ್ರೈಡಡ್‌ ಬನ್ಸ್‌, ಮೆಸ್ಡ್- ಅಪ್‌ ಬನ್‌ ಹೇರ್‌ಸ್ಟೈಲ್‌ಗ‌ಳನ್ನು ಅನುಸರಿಸಿ. ಆದಷ್ಟು ಕೂದಲಿನಲ್ಲಿ ಡ್ಯಾಂಡ್ರಫ್ ನಿಲ್ಲದಂತೆ ನೋಡಿಕೊಂಡರೆ, ನೀವು ಮಾಡುವ ಎಲ್ಲ ಹೇರ್‌ಸ್ಟೈಲ್‌ಗ‌ಳೂ ಸಖತ್ತಾಗಿಯೇ ಕ್ಲಿಕ್‌ ಆಗುತ್ತವೆ.

ಚಿತ್ರಶ್ರೀ ಹರ್ಷ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.