ಅವಳು ಮತ್ತು ಶ್ರಾವಣ: ಹೆಣ್ಣಿಗೇಕೆ ಶ್ರಾವಣ ಶ್ರೇಷ್ಠ?


Team Udayavani, Aug 9, 2017, 1:20 PM IST

09-AVALU-2.jpg

ಶ್ರಾವಣ ಮಾಸಕ್ಕೂ ಹೆಣ್ಮಕ್ಕಳಿಗೂ ಅವಿನಾಭಾವ ಸಂಬಂಧ. ಎಲ್ಲರ ಮನೆಯಲ್ಲೂ ಸುಂದರವಾದ ಗೌರಿ ಮೂರ್ತಿಗಳು ಹೊಸ ವಸ್ತ್ರ, ಒಡವೆ, ವಿದ್ಯುದ್ದೀಪಗಳ ಅಲಂಕಾರ. ಈ ಸಮಯದಲ್ಲಿ ಮುತ್ತೆ„ದೆಯರು ಅವರಿವರ ಮನೆಯ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ತಮ್ಮ ಬಾಂಧವ್ಯವನ್ನು, ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ…

– ಶ್ರಾವಣ ಮಾಸ ಆರಂಭವಾದ ಎರಡನೇ ಶುಕ್ರವಾರದಿಂದ ಸ್ತ್ರೀಯರು ಶುಕ್ರಗೌರಿ ವ್ರತ ಹಿಡಿಯುತ್ತಾರೆ. ಅದೇ ರೀತಿ ಮಂಗಳವಾರದಿಂದ ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ಒಮ್ಮೆ ಪೂಜೆಯನ್ನು ಆರಂಭಿಸಿದರೆ ಅದನ್ನು 5 ವರ್ಷ ಆಚರಿಸುತ್ತಲೇ ಇರಬೇಕು. ಈ ಪೂಜೆಯನ್ನು ಕನ್ಯೆಯರು, ಹೊಸದಾಗಿ ಮದುವೆಯಾದವರು, ಮಕ್ಕಳಾಗದೇ ಇರುವರು ಮತ್ತು ಮನೆಯ ಪರಿಸ್ಥಿತಿ ಸರಿಯಿಲ್ಲದವರು ಆಚರಿಸುತ್ತಾರೆ.

– ಮೊದಲನೇ ಬಾರಿಗೆ ಪೂಜೆ ಮಾಡುವರು ತುಂಬಿದ ಬಿಂದಿಗೆ ಮೇಲೆ ತೆಂಗಿನಕಾಯಿ ಇಟ್ಟು ಅದನ್ನು ಶುಚಿಗೊಳಿಸಿ, ಅದಕ್ಕೆ ಹಾಲು, ತುಪ್ಪ, ಬೆಣ್ಣೆ ಮತ್ತು ಜೇನು ತುಪ್ಪದಿಂದ ಆ ತೆಂಗಿನಕಾಯಿ ಮೇಲೆ ಅಭಿಷೇಕ ಮಾಡಬೇಕು. ಇದೇ ರೀತಿ ಐದು ಬಾರಿ ಮಾಡಿ, ಮತ್ತೆ ಪವಿತ್ರ ಜಲದಿಂದ ಅದನ್ನು ತೊಳೆಯಬೇಕು. ನಂತರ ಹೊಸ ಸೀರೆ ಅಥವಾ ಹೊಸ ವಸ್ತ್ರವನ್ನು ಆ ತೆಂಗಿನಕಾಯಿಗೆ ಉಡಿಸಬೇಕು. ಇಲ್ಲಿ ತೆಂಗಿನಕಾಯಿ ಲಕ್ಷ್ಮೀಯ ರೂಪವಾಗಿರುತ್ತೆ. ಹಾಗಾಗಿ ಅದಕ್ಕೆ ಹೊಸ ಒಡವೆ, ಹೂವು, ಬಿಲ್ವಪತ್ರೆ ಮುಂತಾದ ವಿಶೇಷ ಹೂವುಗಳಿಂದ ಶೃಂಗರಿಸಿ, ಬಾಳೆಹಣ್ಣು, ಸೇಬು, ಪೇರಳೆ, ದಾಳಿಂಬೆ ಮತ್ತು ಚಿಕ್ಕು ಮುಂತಾದ ಹಣ್ಣುಗಳನ್ನು ಮತ್ತು ಗೋಡಂಬಿ- ದ್ರಾಕ್ಷಿ, ಉತ್ತತ್ತಿ, ಸಕ್ಕರೆ- ಪುಟಾಣಿ, ಉಡಿ ತುಂಬುವ ಸಾಮಗ್ರಿ ಅಂದರೆ ಅರಿಶಿನ- ಕುಂಕುಮ, ಹಸಿರು ಗಾಜಿನ ಬಳೆಗಳು, ಅರಿಶಿನದ ಕೊಂಬು, ಕಾಲುಂಗುರ ಮತ್ತು ಮಲ್ಲಿಗೆ ಹೂವು- ಇವುಗಳನ್ನು ಒಂದೊಂದು ಬಟ್ಟಲುಗಳಲ್ಲಿ ಇಟ್ಟು ಪೂಜೆಯನ್ನು ಆರಂಭಿಸುತ್ತಾರೆ. ಅನುಕೂಲಸ್ಥರು ಈ ರೀತಿ ಮನೆಯಲ್ಲಿ ಮಾಡಬಹುದು. ಅದು ಸಾಧ್ಯವಾಗದೇ ಇದ್ದವರು, ದೇಗುಲಗಳಿಗೆ ಹೋಗಿ ಉಡಿ ತುಂಬುವ ಸಾಮಗ್ರಿಗಳನ್ನು ಕೊಟ್ಟು ದೇವಿಗೆ ಪೂಜೆ ಮಾಡಿಸಿ ನಂತರ ಅದೇ ಸಾಮಗ್ರಿಯನ್ನು ಮನೆಯಲ್ಲಿಟ್ಟು ಪೂಜಿಸಬಹುದು.

– ಹೆಸರುಬೇಳೆ ಪಾಯಸ ಈ ವ್ರತಕ್ಕೆ ಬೇಕಾದ ಮತ್ತು ಇರಲೇಬೇಕಾದ ಶ್ರೇಷ್ಠವಾದ ನೈವೇದ್ಯ. ಪೂಜೆ ಮಾಡುವರು ವ್ರತ ಮುಗಿಯುವವರೆಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ದೀಪ ಹಚ್ಚಿ ದೇವಿಯ ಸ್ತೋತ್ರವನ್ನು ಬೆಳಗ್ಗೆ ಮತ್ತು ಸಾಯಂಕಾಲ ಶುದ್ಧ ಮನಸ್ಸಿನಿಂದ ಪಠಿಸಬೇಕು. ಈ ರೀತಿ ಮಾಡುವುದರಿಂದ ಅಂದುಕೊಂಡದ್ದೆಲ್ಲಾ ನೆರವೇರುತ್ತದೆ ಎಂಬ ನಂಬಿಕೆಯಿದೆ.

– ಮುಖ್ಯವಾಗಿ ಈ ವ್ರತ ಮಾಡುವಾಗ ಮಗಳೊಟ್ಟಿಗೆ ತಾಯಿ ಇರಲೇಬೇಕು. ಮಗಳು ಪೂಜಾ ತಯಾರಿಗೆ ತಾಯಿಯನ್ನು ಹೊರತುಪಡಿಸಿ ಬೇರೆಯವರ ಸಹಾಯ ಪಡೆಯುವಂತಿಲ್ಲ ಮತ್ತು ಈ ವ್ರತ ಮುಗಿಯುವವರೆಗೂ ತಾಯಿ ಇರಲೇಬೇಕು ಅಂದರೆ ತಾಯಿಯ ಉಪಸ್ಥಿತಿಯಲ್ಲಿಯೇ ನಡೆಯಬೇಕು. ಮಗಳು ದೇವಿಯ ಸ್ತೋತ್ರಗಳನ್ನು ಓದುತ್ತಿರುವಾಗ ತಾಯಿಯಾದವಳು ಅವಳ ಜಡೆಯನ್ನು ಹೆಣೆಯತ್ತಿರಬೇಕಂತೆ. ಇದರಿಂದ ಮಗಳ ಬೇಡಿಕೆಗಳು ಆದಷ್ಟು ಬೇಗ ಈಡೇರುತ್ತವೆ ಎಂಬ ನಂಬಿಕೆಯಿದೆ.

– ವ್ರತದ ಕೊನೆಗೆ ಪೂಜೆ ಮಾಡಿದವರು ಕನಿಷ್ಠವೆಂದರೆ, ಐದು ಮುತ್ತೆ„ದೆಯರನ್ನಾದರೂ ಆಹ್ವಾನಿಸಿ ಅವರಿಗೆ ಮುತ್ತೈದೆ ಸಂಕೇತಗಳಾದ ಹೂವು, ಅರಿಶಿನ- ಕುಂಕುಮ, ಬಳೆ, ಉಡಿ ತುಂಬುವ ಸಾಮಗ್ರಿಗಳನ್ನು ಮರದಲ್ಲಿಟ್ಟು ಬಾಗೀನ ಕೊಡುತ್ತಾರೆ. ಇನ್ನೊಂದು ವಿಶೇಷವೆಂದರೆ, ಈ ಪೂಜೆ ವೇಳೆ ಹೆಣ್ಣುಮಕ್ಕಳು ಹೊಸ ಸೀರೆಗಳನ್ನುಟ್ಟು ಸಾಕ್ಷಾತ್‌ ಲಕ್ಷ್ಮೀಯಂತೆ, ಸಾಕಷ್ಟು ಒಡವೆಗಳನ್ನು ಧರಿಸುತ್ತಾರೆ. 

– ಅಣ್ಣ- ತಂಗಿಯರ ಬೆಸೆಯುವ ರಕ್ಷಾಬಂಧನದಲ್ಲೂ ಸ್ತ್ರೀಗೆ ಒಂದು ಭದ್ರತಾ ಭಾವ ದಕ್ಕುತ್ತದೆ. ಆಕೆಯ ಭಾವಬಂಧಗಳು ಗಟ್ಟಿಯಾಗುತ್ತವೆ.

ಗೌರಿ ಭೀ. ಕಟ್ಟಿಮನಿ
 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.