ಕುಕಿಂಗ್‌ point:  ಚೌತಿಗೆ ಸ್ಪೆಷಲ್‌ ಉಂಡೆಗಳು


Team Udayavani, Aug 9, 2017, 2:10 PM IST

09-AVALU-6.jpg

ತಂಬಿಟ್ಟಿನ ಉಂಡೆ

ಬೇಕಾಗುವ ಸಾಮಗ್ರಿ: ಹುರಿಗಡಲೆ ಹಿಟ್ಟು-3 ಕಪ್‌, ಒಣಕೊಬ್ಬರಿ ತುರಿ-1 ಕಪ್‌, ತುರಿದ ಬೆಲ್ಲ-2 ಕಪ್‌, ಎಳ್ಳು ಪುಡಿ-6 ಚಮಚ, ಗಸಗಸೆ ಪುಡಿ-4 ಚಮಚ, ಏಲಕ್ಕಿ ಪುಡಿ-1 ಚಮಚ ತುಪ್ಪ-1 ಕಪ್‌

ಮಾಡುವ ವಿಧಾನ:
ಹುರಿಗಡಲೆ ಪುಡಿ, ಒಣಕೊಬ್ಬರಿ ತುರಿಗಳನ್ನು ಸ್ವಲ್ಪ ಬಿಸಿ ಮಾಡಿರಿಸಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಬೆಲ್ಲ ಸೇರಿಸಿ ಕಲಕುತ್ತಾ ಕರಗಿಸಿ. ಬೆಲ್ಲ ಕರಗಿದ ನಂತರ, ಹುರಿಗಡಲೆ ಹಿಟ್ಟು, ಒಣಕೊಬ್ಬರಿ ತುರಿ, ಎಳ್ಳು ಪುಡಿ, ಗಸಗಸೆ ಪುಡಿ ಹಾಗೂ ಏಲಕ್ಕಿ ಪುಡಿಗಳನ್ನು ಸೇರಿಸಿ ಕಲಕಿ ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ, ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ. ಪಂಚಮಿಯ ನ್ಯೆವೇದ್ಯಕ್ಕೆ ತಂಬಿಟ್ಟಿನ ಉಂಡೆ ರೆಡಿ. ಅಗತ್ಯವೆೆನಿಸಿದರೆ ಇನ್ನೂ ಸ್ವಲ್ಪ ತುಪ್ಪ ಸೇರಿಸಬಹುದು. 

ಗೋಡಂಬಿ-ಒಣ ಕೊಬ್ಬರಿ ಉಂಡೆ 

ಬೇಕಾಗುವ ಸಾಮಗ್ರಿ:  ಗೋಡಂಬಿ ತುಂಡುಗಳು-3 ಕಪ್‌, ಒಣಕೊಬ್ಬರಿ ತುರಿ-2 ಕಪ್‌, ಹುರಿಗಡಲೆ ಪುಡಿ-1 ಕಪ್‌, ಏಲಕ್ಕಿ ಪುಡಿ-1 ಚಮಚ, ಬಿಳಿ ಎಳ್ಳಿನ ಪುಡಿ-3 ಚಮಚ ತುಪ್ಪ-1 ಕಪ್‌, ಬೆಲ್ಲ-2 ಕಪ್‌, ಜಾಕಾಯಿ ಪುಡಿ-1/2 ಚಮಚ

ಮಾಡುವ ವಿಧಾನ:
ಗೋಡಂಬಿ ತುಂಡುಗಳನ್ನು ತರಿತರಿಯಾಗಿ ಪುಡಿ ವಡಿ, ಸ್ವಲ್ಪ ತುಪ್ಪ ಹಾಕಿ ಹುರಿದಿರಿಸಿ. ಬಾಣಲೆ ಕಾಯಲಿರಿಸಿ, ಬೆಲ್ಲ ಹಾಕಿ, ಕಾಲು ಕಪ್‌ ನೀರು ಸೇರಿಸಿ ಎಳೆ ಪಾಕ ತಯಾರಿಸಿ. (ಒಂದು ಹನಿ ಪಾಕವನ್ನು ನೀರಿನ ಪಾತ್ರೆಗೆ ಹಾಕಿದರೆ ಅದು ಕರಗದೆ, ಗಟ್ಟಿಯಾಗಿ ಮಣಿಯಂತಿರಬೇಕು) ಬೆಲ್ಲದ ಪಾಕಕ್ಕೆ, ಮಿಕ್ಕೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಚನ್ನಾಗಿ ಕೈಯಾಡಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ, ಬೇಕಾದ ಗಾತ್ರದಲ್ಲಿ ಕಟ್ಟಿದರೆ, ಗೋಡಂಬಿ-ಒಣಕೊಬ್ಬರಿ ಉಂಡೆ ತಯಾರು. 

ಕಡಲೇಬೇಳೆ ಉಂಡೆ

ಬೇಕಾಗುವ ಸಾಮಗ್ರಿ: ಕಡಲೇಬೇಳೆ-2 ಕಪ್‌, ಒಣಕೊಬ್ಬರಿ-1 ಕಪ್‌, ಗೋದಿ ಹಿಟ್ಟು-1 ಕಪ್‌, ಸಕ್ಕರೆ-1 ಕಪ್‌, ಕೇಸರಿ ಬಣ್ಣ-1/4 ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ-8-10, ತುಪ್ಪದಲ್ಲಿ ಹುರಿದ ಗೋಡಂಬಿ-8-10, ಏÇಕ್ಕಿ ಪುಡಿ-1/2 ಚಮಚ, ಜೇನುತುಪ್ಪ-3 ಚಮಚ, ತುಪ್ಪ-1 ಕಪ್‌

ಮಾಡುವ ವಿಧಾನ:
ಗೋದಿ ಹಿಟ್ಟು ಹಾಗೂ ಕಡಲೇಬೇಳೆಗಳನ್ನು ಸ್ವಲ್ಪ ತುಪ್ಪ ಸೇರಿಸಿ, ಬೇರೆಬೇರೆಯಾಗಿ ಪರಿಮಳ ಬರುವವರೆಗೆ ಹುರಿದಿರಿಸಿ. ಹುರಿದಿರಿಸಿದ ಕಡಲೇಬೇಳೆಯನ್ನು ತರಿತರಿಯಾಗಿ ಪುಡಿ ಮಾಡಿಡಿ. ಕೇಸರಿ ಬಣ್ಣವನ್ನು ಕಾಲು ಕಪ್‌ ಹಾಲಿನಲ್ಲಿ ಕರಗಿಸಿಡಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಸಕ್ಕರೆ ಕರಗಿಸಿ. ಸಕ್ಕರೆ ಪಾಕಕ್ಕೆ, ಮಿಕ್ಕೆಲ್ಲಾ ಸಾಮಾನುಗಳನ್ನು ಹಾಕಿ, ಚೆನ್ನಾಗಿ ಕೈಯಾಡಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ, ಬೇಕಾದ ಗಾತ್ರದಲ್ಲಿ ಕಟ್ಟಿದರೆ, ಸ್ವಾದಿಷ್ಟವಾದ ಕಡಲೇಬೇಳೆ ಉಂಡೆ ರೆಡಿ. 

ಅವಲಕ್ಕಿ ಉಂಡೆ

ಬೇಕಾಗುವ ಸಾಮಗ್ರಿ:
ದಪ್ಪ ಅವಲಕ್ಕಿ -2 ಕಪ್‌, ತುರಿದ ಬೆಲ್ಲ -3/4 ಕಪ್‌, ಹುರಿದ ಗೋದಿ ಹಿಟ್ಟು-1/2 ಕಪ್‌, ತೆಂಗಿನಕಾಯಿ ತುರಿ-1/2 ಕಪ್‌, ಹುರಿದ ಎಳ್ಳಿನ ಪುಡಿ-2 ಚಮಚ, ಹುರಿದ ಗಸಗಸೆ ಪುಡಿ-2 ಚಮಚ, ಹುರಿಗಡಲೆ ಪುಡಿ-3 ಚಮಚ, ಏಲಕ್ಕಿ ಪುಡಿ-1/2 ಚಮಚ, ಲವಂಗದ ಪುಡಿ-1/2 ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ-8-10, ಗೋಡಂಬಿ-8-10, ಕತ್ತರಿಸಿದ ಖರ್ಜೂರ-3 ಚಮಚ, ತುಪ್ಪ-3 ಚಮಚ, ಹಾಲು-1/2 ಕಪ್‌

ಮಾಡುವ ವಿಧಾನ:
ಅವಲಕ್ಕಿಯನ್ನು ಹುರಿದು ತಣಿಸಿ, ತರಿತರಿಯಾಗಿ ಪುಡಿ ಮಾಡಿರಿಸಿ. ಗೋದಿ ಹಿಟ್ಟು, ಗೋಡಂಬಿ, ದ್ರಾಕ್ಷಿ, ಖರ್ಜೂರಗಳನ್ನು ತುಪ್ಪದಲ್ಲಿ ಹುರಿದಿರಿಸಿ. ತುಪ್ಪ ಕಾಯಲಿರಿಸಿ, ಬೆಲ್ಲ ಸೇರಿಸಿ, ಕರಗಿಸಿ. ಬೆಲ್ಲ ಕರಗಿದ ನಂತರ, ಮಿಕ್ಕೆಲ್ಲಾ ಸಾಮಾನುಗಳನ್ನು ಹಾಕಿ ಚನ್ನಾಗಿ ಕಲಕಿ, ಒಲೆಯಿಂದ ಕೆಳಗಿರಿಸಿ. ಬಿಸಿ ಇರುವಾಗಲೇ, ಕ್ಯೆಗೆ ತುಪ್ಪ ಸವರಿಕೊಂಡು, ಇಲ್ಲವೇ ಸ್ವಲ್ಪ ಹಾಲು ಬೆರೆಸಿ,  
ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿದರೆ, ಅವಲಕ್ಕಿ ಉಂಡೆ ನೈವೇದ್ಯಕ್ಕೆ ರೆಡಿ.  

ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.