ನಾ ಮಾಡಿದ ಮೊದಲ ಸಬ್ಜಿ! ಬಾಂಬ್‌ನಿಂದ ಕೈ ಕಳೆದುಕೊಂಡಾಕೆಯ ಜೀವನಪ್ರೀತಿ


Team Udayavani, Aug 16, 2017, 12:40 PM IST

16-AVALU-2.jpg

ಬಾಂಬ್‌ ಸ್ಫೋಟದ ನಂತರ ಮಾಳವಿಕಾ 18 ತಿಂಗಳು ಆಸ್ಪತ್ರೆಯಲ್ಲಿದ್ದಳು. ಕಾಲಿನ ಬಹುತೇಕ ಮೂಳೆಗಳು ಮುರಿದಿದ್ದವು. ಕಾಲಿನಲ್ಲಿನ ನರಗಳು ಶೇ.70- 80ರಷ್ಟು ಚೈತನ್ಯಹೀನವಾಗಿದ್ದವು. ಅವುಗಳ ಚೇತರಿಕೆಗೆ ಲೆಕ್ಕವಿಲ್ಲದಷ್ಟು ಸರ್ಜರಿಗಳಾದವು…

“ಅಡುಗೆ ಬರುತ್ತಾ?’- ಮದ್ವೆ ವಯಸ್ಸಿಗೆ ಬಂದ ಹೆಣ್ಣಿಗೆ ಈ ಪ್ರಶ್ನೆ ತಪ್ಪಿದ್ದಲ್ಲ. ಕೆಲವರಿಗೆ ಅಡುಗೆ ಒಂದು ಪ್ರೀತಿಯ ಕಲೆಯಾಗಿ, ಕೆಲವರಿಗೆ ಅದೇ ದಿನಚರಿಯಾಗಿ, ಇನ್ನೂ ಕೆಲವರಿಗೆ ಒತ್ತಾಯದ ಕಲಿಕೆಯಾಗಿ ಇದು ಬದುಕಿನೊಳಗೆ ಸೇರಿಕೊಳ್ಳುತ್ತದೆ. “ಅಡುಗೆ ಗೊತ್ತೇ ಇಲ್ಲ’ ಎಂದು ಹೇಳುವ ಯುವತಿಯರು ಇಂದು ಅಪರೂಪ. ಆದರೆ, ಇಲ್ಲೊಬ್ಬಳಿದ್ದಾಳೆ… 28 ವರುಷದ ಯುವತಿ…. ಆಕೆ ಮೊದಲ ಬಾರಿಗೆ ಸೌಟು ಹಿಡಿದಾಗ, ಜಗತ್ತು ಒಮ್ಮೆ ಮೂಗಿನ ಮೇಲೆ ಬೆರಳಿಟ್ಟಿತ್ತು!

ಅವಳು ಮಾಳವಿಕಾ ಅಯ್ಯರ್‌. “ನಾನಿವತ್ತು ಮೊದಲ ಬಾರಿಗೆ ರುಚಿಕಟ್ಟಾದ ಸಬ್ಜಿ ಮಾಡಿದ್ದೇನೆ’ ಎಂದು ಟ್ವೀಟಿಸಿದ್ದು, ಸಿಕ್ಕಾಪಟ್ಟೆ ವೈರಲ್‌ ಆಯಿತು. ಆ ಟ್ವೀಟಿಗೆ ಎಷ್ಟು ಮಹತ್ವ ಸಿಕ್ಕಿತೆಂದರೆ, ಜನಪ್ರಿಯ ಶೆಫ್ ವಿಕಾಸ್‌ ಖನ್ನಾ, “ನಿಮ್ಮೊಂದಿಗೆ ನಾನು ಅಡುಗೆ ಮಾಡುತ್ತೇನೆ. ಅದು ನನ್ನ ಕನಸು ಕೂಡ’ ಎಂದು ಪ್ರತಿಯಾಗಿ ಟ್ವೀಟಿಸಿ, ಅವಳನ್ನು ಶ್ಲಾಘಿ ಸಿದರು. “ಅಯ್ಯೋ, ಒಬ್ಬಳು ಹುಡುಗಿ, ಅದರಲ್ಲೂ 28 ವರ್ಷದವಳು ಅಡುಗೆ ಮಾಡುವುದರಲ್ಲಿ ಏನು ವಿಶೇಷ?’ ಅಂತ ನಿಮ್ಮೊಳಗೆ ಪ್ರಶ್ನೆ ಹುಟ್ಟಬಹುದು. ಖಂಡಿತಾ ವಿಶೇಷವಿದೆ; ಮಾಳವಿಕಾಗೆ ಎರಡೂ ಕೈಗಳಿಲ್ಲ! 

ಮಾಳವಿಕಾ ಅಯ್ಯರ್‌, ರಾಜಸ್ಥಾನದ ಬಿಕಾನೇರ್‌ನ ಬಾಂಬ್‌ ಸ್ಫೋಟದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡವಳು. ಆಗ ಆಕೆಗಿನ್ನೂ 13 ವರುಷ. ಆಡಿ ನಲಿಯುವ ವಯಸ್ಸಿನಲ್ಲಿ ಅವಳ ಜತೆಗೆ ವಿಧಿ ಕ್ರೂರವಾಗಿ ಆಟವಾಡಿತ್ತು. ಆದರೂ ಮಾಳವಿಕಾ ಧೈರ್ಯಗೆಡಲಿಲ್ಲ. ಅಯ್ಯೋ ಹೀಗಾಯಿತಲ್ಲ ಎಂದು ಕೊರಗುತ್ತಾ ಮೂಲೆ ಸೇರಲಿಲ್ಲ. ತಾಯಿಯ ಸಹಾಯದಿಂದ ಆಕೆ ಎಲ್ಲ ಕೆಲಸಗಳನ್ನೂ ಕಲಿತಳು. ಯಾರ ಸಹಾಯವೂ ಇಲ್ಲದೆ ಬದುಕು ನಡೆಸುವ ಛಾತಿ ಮೂಡಿಸಿಕೊಂಡಳು. ಆದರೂ ಒಂದು ಕೆಲಸ ಮಾಡುವುದು ಬಾಕಿ ಇತ್ತು. ಹಾnಂ, ಅದೇ ಅಡುಗೆ ಮಾಡುವುದು! ಕೊನೆಗೂ ಒಂದು ದಿನ ಮಾಳವಿಕಾ ಸೌಟು ಕೈಗೆತ್ತಿಕೊಂಡು, ಒಗ್ಗರಣೆ ಹಾಕಿಯೇಬಿಟ್ಟಳು!

ಆ ಕುರಿತು ಆಕೆ ಹೀಗೆನ್ನುತ್ತಾಳೆ- “ಬಾಂಬ್‌ ಸ್ಫೋಟದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಾಗ ಈ ಜನ್ಮದಲ್ಲಿ ನನಗೆ ಅಡುಗೆ ಮಾಡಲಾಗದು ಎಂದು ಭಾವಿಸಿದ್ದೆ. ಇವತ್ಯಾಕೋ ಬಹಳ ಬೇಸರವಾಗುತ್ತಿತ್ತು. ಅಮ್ಮನಿಗೆ ಕಾಲ್‌ ಮಾಡಿ, ತರಕಾರಿ ಸಬ್ಜಿಯ ರೆಸಿಪಿ ಕಲಿತುಕೊಂಡೆ. ಕ್ಲೀನ್‌ ಮಾಡುವುದರಿಂದ ಹಿಡಿದು ಎಲ್ಲ ಕೆಲಸವನ್ನೂ ನಾನೊಬ್ಬಳೇ ಮಾಡಿದೆ. 25 ನಿಮಿಷದಲ್ಲಿ ರುಚಿಯಾದ ಸಬ್ಜಿ ಮಾಡಿದ್ದೆ. ಓಹ್‌, ನೀವು ನಂಬುತ್ತೀರಾ? ಕೈಗಳೇ ಇಲ್ಲದ ನಾನು ಅಡುಗೆ ಮಾಡಿದ್ದೇನೆ. ನನಗೇ ಇದನ್ನು ನಂಬಲಾಗುತ್ತಿಲ್ಲ’.

ಬಾಂಬ್‌ ಸ್ಫೋಟದ ನಂತರ ಆಕೆ 18 ತಿಂಗಳು ಆಸ್ಪತ್ರೆಯಲ್ಲಿದ್ದಳು. ಕಾಲಿನ ಬಹುತೇಕ ಮೂಳೆಗಳು ಮುರಿದಿದ್ದವು. ಕಾಲಿನಲ್ಲಿನ ನರಗಳು ಶೇ.70- 80ರಷ್ಟು ಚೈತನ್ಯಹೀನವಾಗಿದ್ದವು. ಅವುಗಳ ಚೇತರಿಕೆಗೆ ಲೆಕ್ಕವಿಲ್ಲದಷ್ಟು ಸರ್ಜರಿಗಳಾದವು. ನಂತರವಷ್ಟೇ ಆಕೆ ಊರುಗೋಲಿನ ಸಹಾಯದಿಂದ ನಡೆಯುವಂತಾಗಿದ್ದು. ಕೃತಕ ಕೈಗಳನ್ನು ಜೋಡಿಸಲಾಯ್ತು. ಎಲ್ಲ ಕಷ್ಟಗಳೂ ಆಕೆಯ ಮೇಲೆ ಒಮ್ಮೆಲೆ ಮುಗಿಬಿದ್ದರೂ ಆಕೆಯ ಆತ್ಮವಿಶ್ವಾಸ ಮಾತ್ರ ಸಾಸಿವೆಯಷ್ಟೂ ಕುಗ್ಗಲಿಲ್ಲ.

ಇಷ್ಟೆಲ್ಲಾ “ಇಲ್ಲ’ಗಳ ನಡುವೆಯೂ ಆಕೆ ಈಗ ಸೋಷಿಯಲ್‌ ವರ್ಕ್‌ನಲ್ಲಿ ಪಿ.ಎಚ್‌ಡಿ ಓದುವುದರ ಜತೆಗೆ ದಿವ್ಯಾಂಗರ ಹಕ್ಕುಗಳ ಕಾರ್ಯಕರ್ತೆ ಆಗಿದ್ದಾಳೆ. “ಟೆಡ್‌’ನಲ್ಲಿ ಒಮ್ಮೆ ಆಕೆ ಸ್ಫೂರ್ತಿದಾಯಕ ತನ್ನ ಜೀವನ ಕತೆಯನ್ನೂ ಹಂಚಿಕೊಂಡಿದ್ದಾಳೆ. ಎಲ್ಲಾ ಇದ್ದರೂ ಸದಾ ಕೊರಗುವ ನಮ್ಮಂಥ ಹಲವರಿಗೆ ಈಕೆ ಮಾದರಿಯಲ್ಲವೇ?

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.