ಕೆಸುವು ಅಂದ್ರೆ ಹಸಿವು!


Team Udayavani, Aug 16, 2017, 2:35 PM IST

16-AVALU-5.jpg

ಮಳೆಗಾಲ ಬಂತೆಂದರೆ ಸಾಕು, ಎಲ್ಲಿ ನೀರು ಅಧಿಕವಾಗಿರುತ್ತದೋ ಅಲ್ಲೆಲ್ಲಾ ಕೆಸುವಿನ ಗಿಡಗಳು ಅಣಬೆಯಂತೆ ತಲೆಯೆತ್ತಿ ನಿಲ್ಲುತ್ತವೆ. ಇವುಗಳಿಂದ ಕೆಲವು ಅಪರೂಪದ ಅಡುಗೆಗಳನ್ನು ತಯಾರಿಸಬಹುದು. ಎಲೆಗಳಿಂದಷ್ಟೇ ಅಲ್ಲದೇ, ಅದರ ದಂಟುಗಳೂ ಉಪಯೋಗಕ್ಕೆ ಬರುತ್ತವೆ…

ಕೆಸುವಿನ ಕಾಲಿನ ಬೋಳುಹುಳಿ
ಬೇಕಾಗುವ ಸಾಮಗ್ರಿ: 20ರಿಂದ 25 ಕೆಸುವಿನ ದಂಟು, ಹುಣಸೆಹಣ್ಣು – 2 ಲಿಂಬೆಗಾತ್ರ, ಬೆಲ್ಲ- ಸ್ವಲ್ಪ, ಉಪ್ಪು – ರುಚಿಗೆ, ಇಂಗು- ಸಣ್ಣ ಉಂಡೆ, ತೊಗರಿಬೇಳೆ- 1 ಹಿಡಿ, ಹಸಿಮೆಣಸಿನಕಾಯಿ -5, ಎಣ್ಣೆ- ಒಗ್ಗರಣೆಗೆ, ಕೆಂಪು ಮೆಣಸಿನಕಾಯಿ – 1, ಸಾಸಿವೆ – 1 ಚಮಚ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸ್ವಲ್ಪ, ಅರಿಶಿನ – 1 ಚಿಟಿಕೆ.

ಮಾಡುವ ವಿಧಾನ : ಕೆಸುವಿನ ದಂಟಿನ ಮೇಲಿನ ಸಿಪ್ಪೆ ತೆಗೆದು, ತೊಳೆದು, ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ತೊಗರಿಬೇಳೆಯನ್ನೂ ಚೆನ್ನಾಗಿ ಬೇಯಿಸಿಡಿ. ಕೆಸುವಿನ ದಂಟನ್ನು ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿ. ಅದಕ್ಕೆ ಚಿಟಿಕೆ ಅರಿಶಿನ ಪುಡಿ, ಹುಣಸೆರಸ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಬೇಯುವಾಗಲೇ ಹಸಿರು ಮೆಣಸಿನಕಾಯಿಯನ್ನು ಉದ್ದಕ್ಕೆ ಕತ್ತರಿಸಿ ಅದಕ್ಕೆ ಹಾಕಿ. ಈಗ ಬೆಂದ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪು, ಇಂಗನ್ನು ನೆನೆಸಿದ ನೀರನ್ನು ಸೇರಿಸಿ. ಎಣ್ಣೆ, ಮೆಣಸಿನ ಕಾಯಿ, ಸಾಸಿವೆ, ಕರಿಬೇವಿನ ಒಗ್ಗರಣೆಯೊಂದಿಗೆ ಹುಳಿಯನ್ನು ಕೆಳಗಿಳಿಸಿ. ಈ ಹುಳಿಯು ತುಂಬಾ ನೀರಾಗಿರದೆ ಗಟ್ಟಿಯಾಗಿ ಗೊಜ್ಜಿನ ರೀತಿ ಇದ್ದರೆ ರುಚಿಯಾಗಿರುತ್ತದೆ.    

ಕೆಸುವಿನ ದಂಟಿನ ರಾಯತ
ಬೇಕಾಗುವ ಸಾಮಗ್ರಿ: ಕೆಸುವಿನ ದಂಟು -10ರಿಂದ 15, ತೆಂಗಿನ ತುರಿ – ಒಂದು ಬಟ್ಟಲು, ಕೆಂಪು ಮೆಣಸಿನಕಾಯಿ – 3, ಸಾಸಿವೆ-2 ಚಮಚ, ಉಪ್ಪು – ರುಚಿಗೆ, ಮೊಸರು – 1 ಬಟ್ಟಲು, ಹುಣಸೆಹಣ್ಣು – ಸಣ್ಣ ಲಿಂಬೆಗಾತ್ರ, ಒಗ್ಗರಣೆಗೆ – ಸಾಸಿವೆ, ಮೆಣಸಿನಕಾಯಿ, ತುಪ್ಪ, ಕರಿಬೇವು.

 ಮಾಡುವ ವಿಧಾನ : ನಾರು ತೆಗೆದ ಕೆಸುವಿನ ದಂಟನ್ನು ಸಣ್ಣಗೆ ಕತ್ತರಿಸಿ ಚೆನ್ನಾಗಿ ಬೇಯಿಸಿ. ಒಂದು ಮಿಕ್ಸಿ ಜಾರ್‌ಗೆ ತೆಂಗಿನ ತುರಿ, ಮೆಣಸಿನಕಾಯಿ, ಸಾಸಿವೆ 1 ಚಮಚ, ಉಪ್ಪು, ಹುಣಸೆಹಣ್ಣು ಹಾಕಿ ಮೊಸರಿನೊಂದಿಗೆ ರುಬ್ಬಿಕೊಳ್ಳಿ. ಬೆಂದ ಮಿಶ್ರಣಕ್ಕೆ ರುಬ್ಬಿದ್ದ ಮಿಶ್ರಣ ಸೇರಿಸಿ ಒಂದು ಕುದಿ ಬರಿಸಿ ಕೆಳಗಿಡಿ. ಒಂದು ಚಮಚ ತುಪ್ಪಕ್ಕೆ ಸಾಸಿವೆ, ಕರಿಬೇವಿನೊಂದಿಗೆ ಒಗ್ಗರಣೆ ಕೊಡಿ.

ಕೆಸುವಿನ ಎಲೆಯ ಚಟ್ನಿ
ಬೇಕಾಗುವ ಸಾಮಗ್ರಿ: ಕೆಸುವಿನ ಎಲೆ (ದೊಡ್ಡದಾಗಿದ್ದರೆ 2 ಎಲೆ), ತೆಂಗಿನತುರಿ – 1 ಬಟ್ಟಲು, ಹುಣಸೆಹಣ್ಣು – ಸಣ್ಣ ಲಿಂಬೆ ಗಾತ್ರ, ಇಂಗು- ಸ್ವಲ್ಪ, ಕೆಂಪು ಮೆಣಸಿನಕಾಯಿ -3, ಬೆಳ್ಳುಳ್ಳಿ- 5 ಎಸಳು, ಉದ್ದಿನಬೇಳೆ- 2 ಟೀ ಚಮಚ, ಧನಿಯ – 1/2 ಚಮಚ, ಕರಿಬೇವು, ಸ್ವಲ್ಪ ಎಣ್ಣೆ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಹುಳುಕಿರದ ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ಕತ್ತರಿಸಿ ಒಂದು ಬಾಣಲೆಗೆ ಹಾಕಿ. ಅದಕ್ಕೆ ಸ್ವಲ್ಪ ನೀರು ಹಾಕಿ ಅರಿಶಿನ ಪುಡಿ, ಹುಣಸೆಹಣ್ಣು, ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ. ಬೇರೊಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಕೆಂಪು ಮೆಣಸಿನಕಾಯಿ, ಧನಿಯಾ, ಉದ್ದಿನಬೇಳೆ, ಬೆಳ್ಳುಳ್ಳಿ, ಕರಿಬೇವನ್ನು ಹಾಕಿ ಕೆಂಪಗೆ ಹುರಿಯಿರಿ. ಈಗ ಬೇಯಿಸಿದ ಕೆಸುವಿನ ಎಲೆಯ ಮಿಶ್ರಣವನ್ನು ತೆಂಗಿನತುರಿಯೊಂದಿಗೆ ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಹುರಿದ ಮಿಶ್ರಣ, ಇಂಗು ಹಾಕಿ ರುಬ್ಬಿ ತೆಗೆದಿಡಿ. ಈ ಚಟ್ನಿಯು ಬಿಸಿಬಿಸಿ ಅನ್ನದೊಂದಿಗೆ ತಿನ್ನಲು ಭಾರಿ ರುಚಿಕರವಾಗಿರುತ್ತದೆ. 

ಪುಷ್ಪಾ ಎನ್‌. ಕೆ. ರಾವ್‌

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.