ಸೆಲ್ಫಿಯೆಂಬ ಮಾಯಾಕನ್ನಡಿ: ಪುಟ್ಟ ಕನ್ನಡಿ ಕಣ್ಮರೆಯಾದ ಕತೆ


Team Udayavani, Aug 30, 2017, 12:01 PM IST

30-AVALU-1.jpg

ಇಂದು ಸ್ಮಾರ್ಟ್‌ಫೋನ್‌, ಹುಡುಗಿಯರ ಮೇಕಪ್‌ ಕಿಟ್‌ನಲ್ಲಿ ಕನ್ನಡಿಯೇ ಆಗಿಬಿಟ್ಟಿದೆ. ಬ್ಯಾಗ್‌ನಲ್ಲಿದ್ದ ಕನ್ನಡಿಗಳನ್ನು ಆಚೆ ಕಳುಹಿಸಿ, ಹುಡುಗಿ ಈ ಸ್ಮೈಲ್‌ ಕೊಡುತ್ತಿದ್ದಾಳೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕಾಗಿಯೇ ಅವಳು ಮೊದಲಿಗಿಂತ ಸುಂದರಿಯಾಗಿ ತಯಾರುಗೊಳ್ಳುತ್ತಿದ್ದಾಳೆ…

ಮೊನ್ನೆ ಮೊನ್ನೆ ತನಕವೂ ಹುಡುಗಿಯರ ಬ್ಯಾಗಿನಲ್ಲಿ ಕಾಯಂ ಸ್ಥಾನ ಪಡೆದುಕೊಂಡಿದ್ದ ಚಿಕ್ಕ ಕನ್ನಡಿ ಮಾಯಾವಾಗಿದೆ! ಪರ್ಸ್‌ಗಳಲ್ಲಿ ಎಂಟಾಣೆ ಗಾತ್ರದಲ್ಲಿ ತೂರಿಸಿದ್ದ ಕನ್ನಡಿಯೂ ಇಲ್ಲವಾಗಿದೆ. ಹಾಗಂತ ಅವರ ಅಲಂಕಾರಪ್ರಿಯತೆ ಕಡಿಮೆಯಾಯಿತು ಅಂತ ಭಾವಿಸಿಕೊಂಡಿರೇನು? ಹಾಗೇನೂ ಇಲ್ಲ. ಬದಲಾಗಿ, ಇನ್ನೂ ಹೆಚ್ಚಾಗಿದೆ. ಮೊದಲಿಗಿಂತಲೂ ಇಂದು ಇನ್ನೂ ಹೆಚ್ಚು ಅಲಂಕಾರದಿಂದಿರುತ್ತಾರೆ. ಸಂಜೆಯವರೆಗೂ ಮುಖದಲ್ಲಿ ಅದೇ ಗೆಲುವು! ಅದೇ ಕಳೆ! ಅದೇ ಒಪ್ಪವಾದ ಉಡುಗೆ- ತೊಡುಗೆ. ಕಾರಣವಿಷ್ಟೇ… ಈಗ ಸೆಲ್ಫಿ ಬಂದಿದೆ! ಇವೆಲ್ಲವನ್ನು ಬದಲಾಯಿಸಿದ್ದು ಕೇವಲ ಒಂದು ಸ್ಮಾರ್ಟ್‌ಫೋನ್‌ ಮತ್ತು ಅದರೊಳಗಿದ್ದ ಒಂದು ಚಿಕ್ಕ ಕ್ಯಾಮೆರಾ. ಇಂದು ಹುಡುಗಿಯರ ಮೇಕಪ್‌ ಕಿಟ್‌ನಲ್ಲಿ ಸ್ಮಾರ್ಟ್‌ಫೋನ್‌, ಕನ್ನಡಿಯೇ ಆಗಿಬಿಟ್ಟಿದೆ. ಬ್ಯಾಗ್‌ನಲ್ಲಿದ್ದ ಕನ್ನಡಿಗಳನ್ನು ಆಚೆ ಕಳುಹಿಸಿ, ಹುಡುಗಿ ಈ ಸ್ಮೈಲ್‌ ಕೊಡುತ್ತಿದ್ದಾಳೆ.

ಕನ್ನಡಿಗಿಂತ ಹತ್ತುಪಟ್ಟು ಮುದ್ದುಮುದ್ದಾಗಿ, ಸ್ಮಾರ್ಟ್‌ಫೋನ್‌, ಹುಡುಗಿಯ ಮೋರೆಯನ್ನು ತೋರಿಸುತ್ತಿದೆ. ಬೆಳಗ್ಗೆ ಒಮ್ಮೆ ನಿಲುವುಗನ್ನಡಿಯ ಮುಂದೆ ಒಂದೆರಡು ಗಂಟೆ ಕಳೆದು ಬಂದರೆ, ಸಂಜೆಯವರೆಗೂ ಆಕೆ ರೂಪಸಿರಿಯನ್ನು ಮ್ಯಾನೇಜ್‌ ಮಾಡುವುದು ಸ್ಮಾರ್ಟ್‌ಫೋನ್‌ ಮೂಲಕವೇ. ಸೆಲ್ಫಿ ಬಂದಾಗಿನಿಂದ ಹುಡುಗಿಯರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾಗಿದೆ. ಏಕೆಂದರೆ, ಯಾವ ಸಮಯದಲ್ಲಿ, ಯಾವ ಜಾಗದಲ್ಲಿ, ಸೆಲ್ಫಿ ತೆಗೆದುಕೊಳ್ಳುವ ಸಂದರ್ಭ ಬರುತ್ತೋ ಯಾರಿಗೆ ಗೊತ್ತು? ಅದಕ್ಕೆಂದೇ ಹುಡುಗಿಯರು ಮತ್ತು ಮಹಿಳೆಯರು ಈ ನಡುವೆ ಸದಾ ಲಕ್ಷಣವಾಗಿ ಕಾಣಿಸುತ್ತಾರೆ. ಥ್ಯಾಂಕ್ಸ್‌ ಟು ಸೆಲ್ಫಿ!

ನಿಜಕ್ಕೂ ತಿಳಿಯಲೇಬೇಕಾದ ಅಂಶವೆಂದರೆ, ಸೆಲ್ಫಿಯಿಂದ ಅತ್ಯುತ್ತಮವಾದ ಕೆಲಸವೊಂದಾಗುತ್ತದೆ. ನೆನಪುಗಳನ್ನು ಈ ಮೊದಲು ಮೆದುಳಿನ ಮೂಲೆಯಲ್ಲಿ ಕೂರಿಸಿಕೊಂಡು ಬಂದು ಕೆಲವು ಕಾಲದ ನಂತರ ಮರೆತುಬಿಡುತ್ತಿದ್ದೆವು. ಆದರೆ, ಇಂದು ಕ್ಷಣಮಾತ್ರದಲ್ಲಿ ಬೇರೆಯವರ ಸಹಾಯವಿಲ್ಲದೇ, “ಪ್ಲೀಸ್‌… ನಮೊªಂದು ಫೋಟೋ ತೆಗೆಯಿರಿ’ ಅಂತ ಕೇಳುವ ಮುಜುಗರವಿಲ್ಲದೇ ತನ್ನಷ್ಟಕ್ಕೆ ತಾನೇ ಆ ಸಂದರ್ಭ, ಆ ಸಮಯದ ಭಾವಗಳನ್ನು ನವಿರಾಗಿ ಸೆಲ್ಫಿಯೊಳಗೆ ಕೂರಿಸಿಕೊಂಡು ಬಿಡಬಹುದು. ಅದಕ್ಕೆ ಲಿಮಿಟ್‌ ಇಲ್ಲದೆ ಸಂಗ್ರಹಿಸಿಟ್ಟುಕೊಳ್ಳಬಹುದು! 

ಇತ್ತೀಚೆಗೆ ಅಚಾನಕ್ಕಾಗಿ ನನ್ನ ಗೆಳತಿಯೊಬ್ಬಳ ಸೆಲ್‌ ನೋಡುವಾಗ‌ ಗ್ಯಾಲರಿಯನ್ನು ನೋಡಿ ಶಾಕ್‌ ಆಗಿದ್ದೆ! ಅಲ್ಲಿ ಸಾವಿರಾರು ಸಂಖ್ಯೆಯ ಸೆಲ್ಫಿಗಳಿದ್ದವು. “ಅಷ್ಟೊಂದು ಸೆಲ್ಫಿ ತಗೊಳ್ಳೋಕೆ ಏಕೆ ಸಮಯ ಹಾಳು ಮಾಡಿಕೊಂಡೆ?’ ಅಂತ ಕೇಳಲಿಲ್ಲ. “ಬದುಕಿನ ಕ್ಷಣಗಳನ್ನು ಅಷ್ಟೊಂದು ಖುಷಿಯಿಂದ ಕಳೆದಿರುವೆಯಲ್ಲಾ?’ ಅಂತ ಹೇಳಿ ಆನಂದ ಪಟ್ಟೆ! ಸಾಮಾನ್ಯವಾಗಿ ಖುಷಿಯಾದಾಗ ಮಾತ್ರ ನಾವು ಅ ತರಹದೊಂದು ಸೆಲ್ಫಿ ಪ್ರಯತ್ನಕ್ಕೆ ಕೈ ಹಾಕುತ್ತೇವೆ ಅಲ್ಲವೇ?

ಸೆಲ್ಫಿ ತಗೆದುಕೊಳ್ಳಿ, ಸಂಗ್ರಹಿಸಿಟ್ಟುಕೊಳ್ಳಿ. ಖುಷಿಯ ಒಂದು ಕ್ಷಣವೂ ಮಿಸ್‌ ಆಗದಂತೆ ಬಾಚಿಕೊಳ್ಳಿ. ಅದರಿಂದ ಕಳಕೊಳ್ಳುವುದು ಏನೂ ಇಲ್ಲ. ಹೆಚ್ಚೆಂದರೆ, ಅದೊಂದು ಗೀಳಾಗಿ ಕಾಡೀತಷ್ಟೇ. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ. ಹೆಚ್ಚಾದರೆ ಎಲ್ಲವೂ ಕೂಡ ಗೀಳೇ ಅಲ್ಲವೇ? 

ಆದರೆ, ಹುಷಾರು…
ಹಾಗೆ ಸೆಲ್ಫಿ ತೆಗೆದುಕೊಳ್ಳುವಾಗ ಆಗುವ ಅವಘಡಗಳ ಬಗ್ಗೆಯೂ ಗಮನವಿರಲಿ. ಏಕೆಂದರೆ, ನಮ್ಮನ್ನು ನಾವು ಮರೆತು ನಮ್ಮ ಗಮನ ಸೆಲ್ಫಿ ಕೇಂದ್ರೀಕರಿಸುವ ಮೊಬೈಲ್‌ ಕಡೆ ನೆಟ್ಟಿರುತ್ತದೆ. ನಾವು ಎಲ್ಲಿ ನಿಂತಿದ್ದೇವೆ? ಯಾವ ಕಡೆ ಹೆಜ್ಜೆಯಿಡುತ್ತಿದ್ದೇವೆ? ಎಂಬುದನ್ನು ಮರೆತು ಪ್ರಾಣ ಹಾನಿಯಾದಂಥ ಘಟನೆಗಳೂ ನಡೆದುಹೋಗಿವೆ. ಅದು ಅಜಾಗರೂಕತೆಯ ಫ‌ಲ. ಯಾವುದೇ ಕೆಲಸವಾದರೂ ಅಲ್ಲೊಂದು ಜಾಗರೂಕತೆ ಇರಲೇಬೇಕಲ್ಲವೇ? ಒಂಚೂರು ಕಾಳಜಿಯಿಂದ ನಡೆದುಕೊಳ್ಳಿ. ಸೆಲ್ಫಿಗೆ ನೀಡುವ ಮಂದಹಾಸದಂತೆ ಅದರೊಂದಿಗೆ ಬರುವ ನೆನಪುಗಳೂ ನಿಮ್ಮ ಬದುಕನ್ನು ಮಧುರವಾಗಿಟ್ಟಿರಲಿ.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.