ಅಡುಗೆಗೆ ಬೇಕು, “ದೊಣ್ಣೆ ಮೆಣಸಿನ’ಅಪ್ಪಣೆ!


Team Udayavani, Sep 6, 2017, 11:05 AM IST

06-AVALU-5.jpg

ಎಲ್ಲ ಕಾಲಗಳಲ್ಲೂ ಲಭ್ಯವಿರುವ, ಎಲ್ಲ ತರಕಾರಿಗಳೊಡನೆ ಹೊಂದಿಕೊಳ್ಳುವ ತರಕಾರಿಯಿದು. ರುಚಿಯಾದ ದೊಣ್ಣೆಮೆಣಸಿನಕಾಯಿಯಿಂದ ಸುಲಭವಾಗಿ ತಯಾರಿಸಬಹುದಾದ ಕೆಲವೊಂದು ಪಾಕ ವಿಧಾನಗಳು ಇಲ್ಲಿವೆ…

ದೊಣ್ಣೆಮೆಣಸಿನಕಾಯಿ ಮಸಾಲೆ
ಬೇಕಾದ ಸಾಮಗ್ರಿ : ಕತ್ತರಿಸಿದ ದೊಣ್ಣೆಮೆಣಸಿನಕಾಯಿ-3 ಕಪ್‌, ಕತ್ತರಿಸಿದ ಈರುಳ್ಳಿ- 1/2 ಕಪ್‌, ಕತ್ತರಿಸಿದ ಟೊಮೇಟೊ- 1/4 ಕಪ್‌, ಹಸಿಮೆಣಸಿನಕಾಯಿ- 4, ತೆಂಗಿನಕಾಯಿ ತುರಿ- 1/2 ಕಪ್‌, ಗರಂ ಮಸಾಲೆ- 3 ಚಮಚ, ದಾಲಿcನ್ನಿ (ಚೆಕ್ಕೆ)- 3-4, ಜೀರಿಗೆ- 2 ಚಮಚ, ಹುರಿಗಡಲೆ- 4 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು- 1/4 ಕಪ್‌, ಎಣ್ಣೆ- 1/4 ಕಪ್‌, ಸಾಸಿವೆ- 1 ಚಮಚ, ತುಪ್ಪ- 3 ಚಮಚ, ಉಪ್ಪು- ರುಚಿಗೆ ತಕ್ಕಷು

ತಯಾರಿಸುವ ವಿಧಾನ: ತೆಂಗಿನಕಾಯಿ ತುರಿ, ಗರಂ ಮಸಾಲೆ, ಚಕ್ಕೆ, ಜೀರಿಗೆ, ಹುರಿಗಡಲೆಗಳನ್ನು ಸೇರಿಸಿ ತರಿತರಿಯಾಗಿ ಅರೆದು, ಮಸಾಲೆ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ನಂತರ ದೊಣ್ಣೆಮೆಣಸಿನಕಾಯಿ ಹೋಳುಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಬೇಯಿಸಿ. ಈ ಮಿಶ್ರಣಕ್ಕೆ, ತಯಾರಿಸಿಟ್ಟುಕೊಂಡ ಮಸಾಲೆ, ತುಪ್ಪ, ಉಪ್ಪು ಸೇರಿಸಿ ಕುದಿಸಿ. ಒಲೆಯಿಂದ ಕೆಳಗಿರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ದೊಣ್ಣೆಮೆಣಸಿನಕಾಯಿ ಮಸಾಲೆ ರೆಡಿ. ಚಪಾತಿಯೊಂದಿಗೆ ಸವಿಯಲು ಇದು ಸೂಪರ್‌ ಕಾಂಬಿನೇಶನ್‌

ತುಂಬುಗಾಯಿ
ಬೇಕಾದ ಸಾಮಗ್ರಿ: ದೊಣ್ಣೆಮೆಣಸಿನಕಾಯಿ- 5-6, ಆಲೂಗಡ್ಡೆ-2, ತೊಗರಿಬೇಳೆ-1/2 ಕಪ್‌, ಹಸಿಮೆಣಸಿನಕಾಯಿ- 3-4, ತೆಂಗಿನಕಾಯಿ ತುರಿ- 1 ಕಪ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪು- 1/4 ಕಪ್‌, ಅರಿಶಿನ- ಚಿಟಿಕೆ, ಇಂಗು-1/4 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 1/2 ಕಪ್‌, ಸಾಸಿವೆ- 1 ಚಮಚ

ತಯಾರಿಸುವ ವಿಧಾನ: ಆಲೂಗಡ್ಡೆಗಳನ್ನು ಬೇಯಿಸಿ ಮಸೆದಿಡಿ. ತೊಗರಿಬೇಳೆಯನ್ನು ಬೇಯಿಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ- ಇಂಗು- ಅರಿಶಿನ ಸೇರಿಸಿ ಒಗ್ಗರಣೆ ಮಾಡಿ, ಒಗ್ಗರಣೆಗೆ ಹಸಿಮೆಣಸಿನಕಾಯಿ, ಬೇಯಿಸಿದ ತೊಗರಿಬೇಳೆ, ಮಸೆದ ಆಲೂಗಡ್ಡೆ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಕಲಕಿ, ಮಸಾಲೆ ತಯಾರಿಸಿ, ಒಲೆಯಿಂದ ಕೆಳಗಿರಿಸಿ. ದೊಣ್ಣಮೆಣಸಿನಕಾಯಿಗಳ ತೊಟ್ಟು ತೆಗೆದು, ಒಳಗಡೆ ಇರುವ ಬೀಜಗಳನ್ನು ತೆಗೆದಿರಿಸಿ. ನಂತರ ತಯರಿಸಿದ ಮಸಾಲೆ ತುಂಬಿ, ಇಡ್ಲಿ ಸ್ಟ್ಯಾಂಡ್‌ನ‌ಲ್ಲಿರಿಸಿ, ಹತ್ತು ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ, ರುಚಿಯಾದ ದೊಣ್ಣೆಮೆಣಸಿನಕಾಯಿ ತುಂಬುಗಾಯಿ ರೆಡಿ. 

“ದೊಣ್ಣೆ’ ಕಟ್ಲೆಟ್‌
ಬೇಕಾದ ಸಾಮಗ್ರಿ: ದೊಣ್ಣೆಮೆಣಸಿನಕಾಯಿ ಹೋಳುಗಳು-2 ಕಪ್‌, ಆಲೂಗಡ್ಡೆ-2, ಕತ್ತರಿಸಿದ ಈರುಳ್ಳಿ-1/2 ಕಪ್‌, ಅಚ್ಚ ಖಾರದ ಪುಡಿ-2
ಚಮಚ, ಅಕ್ಕಿ ಹಿಟ್ಟು-1 ಕಪ್‌, ಗರಂ ಮಸಾಲೆ-3 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು-1/4, ಕತ್ತರಿಸಿದ ಪುದಿನಾ ಸೊಪ್ಪು-1/4 ಕಪ್‌, ಎಣ್ಣೆ-1/2 ಕಪ್‌, ರಸ್ಕ್ ಪುಡಿ-1/2 ಕಪ್‌, ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಮಸೆದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಈರುಳ್ಳಿ ಹಾಗೂ ದೊಣ್ಣೆ ಮೆಣಸಿನಕಾಯಿಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ, ಗರಂ ಮಸಾಲೆ, ಮಸೆದ ಆಲೂ, ಖಾರದ ಪುಡಿ, ಉಪ್ಪು, ಅಕ್ಕಿ ಹಿಟ್ಟು, ಕೊತ್ತಂಬರಿ, ಪುದಿನಾ, ರಸ್ಕ್ ಪುಡಿಗಳನ್ನು ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು ತೆಗೆದು, ವಡೆಯ ಆಕಾರದಲ್ಲಿ
ತಟ್ಟಿ. ಎಣ್ಣೆ ಸವರಿದ ತವಾದ ಮೇಲೆ, ಎರಡೂ ಬದಿಗಳನ್ನು ಹೊಂಬಣ್ಣ ಬರುವವರೆಗೆ ಬೇಯಿಸಿ, ಇಲ್ಲವೇ ಕರಿಯಿರಿ. ಈಗ ಗರಿಗರಿಯಾದ ದೊಣ್ಣೆ      ಮೆಣಸಿನಕಾಯಿ ಕಟ್ಲೆಟ್‌ ತಯಾರು. 

ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಟಾಪ್ ನ್ಯೂಸ್

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.