ರಜೆ ಇದ್ದರೇ ಒಳ್ಳೆಯದು


Team Udayavani, Sep 13, 2017, 8:00 AM IST

raje.jpg

ರಜೆ ಇಲ್ಲದೆಯೂ ಆಕೆ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬಲ್ಲಳಾದರೂ ಇಲ್ಲಿ ಎಲ್ಲರ ಆತಂಕವೂ ಒಂದೇ ಸಮನಾಗಿರುವುದಿಲ್ಲ. ಒಬ್ಬೊಬ್ಬರದೂ ಬೇರೆ ಬೇರೆ ರೀತಿಯದ್ದೇ ಆಗಿರುತ್ತದೆ. 

ಹೆಂಗಸರಿಗೆ ಋತುಸ್ರಾವದ ಆ ದಿನಗಳಲ್ಲಿ, ಅದೂ ಉದ್ಯೋಗದಲ್ಲಿರುವವರಿಗೆ ಕೊಂಚ ವಿಶ್ರಾಂತಿ ಬೇಕೇ ಬೇಕು. ಇತ್ತೀಚಿನ ದಿನಗಳಲ್ಲಿ ಈ ನಿಯಮವೇನೂ ಜಾರಿಗೆ ಬರದೆ ಆ ನೋವಿನ ದಿನಗಳಲ್ಲೂ ಸಹ್ಯವೋ, ಅಸಹ್ಯವೋ, ಮನೆಯ ಒಳ ಹೊರಗೆ ದುಡಿಯುತ್ತಲೇ ಬಂದಿದ್ದಾಳಾದರೂ ಇತ್ತೀಚಿನ ದಿನಗಳಲ್ಲಿ ಇದಕ್ಕಾಗಿ ರಜೆ ಇದ್ದರೆ ಒಳ್ಳೆಯದೆಂಬುದು ನನ್ನ ಅಭಿಪ್ರಾಯ. ಒಂದು ರೀತಿ ಇದರಿಂದ ಅವರ ಆ ದಿನಗಳು ಜಗಜಾjಹೀರಾಗುವುದು ದಿಟವಾದರೂ ಈ ವಿಷಯದಲ್ಲಿ ಮಕ್ಕಳ ಕುತೂಹಲವನ್ನೂ ಹೆಚ್ಚಿಸಬಹುದಾದರೂ ಅಂದಿನ ಆ ದಿನದಲ್ಲಿ ದಣಿದ ಮನಕ್ಕೆ ವಿಶ್ರಾಂತಿ ಅವಶ್ಯಕ ಎನಿಸುತ್ತೆ.

ರಜೆ ಇಲ್ಲದೆಯೂ ಆಕೆ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬಲ್ಲಳಾದರೂ ಇಲ್ಲಿ ಎಲ್ಲರ ಆತಂಕವೂ ಒಂದೇ ಸಮನಾಗಿರುವುದಿಲ್ಲ. ಒಬ್ಬೊಬ್ಬರದೂ ಬೇರೆ ಬೇರೆ ರೀತಿಯದ್ದೇ ಆಗಿರುತ್ತದೆ. ಕೆಲವರಿಗೆ ವಿಪರೀತ ಸ್ರಾವವಾಗಿ ಕಷ್ಟವಾದರೆ, ಇನ್ನು ಕೆಲವರು ಆ ದಿನಗಳನ್ನು ಆರಾಮದಿಂದಲೇ ಕಳೆಯುತ್ತಾರೆ. ಕೆಲವರಿಗೆ ಈ ಮೊದಲನೆಯ ದಿನವೆಂಬುದು ಯಮಯಾತನೆಯ ಪರಿಸ್ಥಿತಿ. ಯಾರಲ್ಲೂ ಹೇಳಿಕೊಳ್ಳಲಾಗದಂಥದ್ದು. 

ಮೊದಲು ನಮ್ಮ ಕಾಲದಲ್ಲಿ ಆ ದಿನಗಳಲ್ಲಿ ನಾವು ಬಹಿಷ್ಠೆಯರಾಗಿದ್ದು ಹಿರಿಕಿರಿಯರೆಲ್ಲರಿಗೂ ತಿಳಿದಿರುತ್ತಿತ್ತು. ಎಲ್ಲರ ಮುಂದೆ ಚಾಪೆ ಚೊಂಬಿನ ಜೊತೆ ಮೂಲೆ ಹಿಡಿದು ಕುಳಿತರೂ ಏನೂ ಅನಿಸುತ್ತಿರಲಿಲ್ಲ. ನಂತರದ ದಿನಗಳಲ್ಲಿ ಅದು ಗುಟ್ಟಾಗಿ ಹೋಯಿತು. ಹೊರಗೆ ಕೂಡದೆ, ಒಳಗಡೆ ಇದ್ದು ಹಿರಿಯರ ದೃಷ್ಟಿಯಲ್ಲಿ ಅಪರಾಧಿಯಾದರೂ ನಾಚಿಕೆಯಿಂದ ಸುಮ್ಮನೆ ಒಳಗಿದ್ದು ಬಿಡುತ್ತಿದ್ದರು. ಆದರೀಗ ಈ ದಿನಗಳಲ್ಲಿ ಮಾನಸಿಕ ಒತ್ತಡ ಹೆಚ್ಚು. ಅದರೊಡನೆ ಕೆಲಸದ ಒತ್ತಡವೂ ಸೇರಿ ಮಾನಸಿಕವಾಗಿ ದೈಹಿಕವಾಗಿ ಅವರಿಗೆ ಮತ್ತಷ್ಟು ಇರಿಸುಮುರಿಸು ಉಂಟು ಮಾಡುತ್ತೆ. ಅಂಥದ್ದರಲ್ಲಿ ಮುಟ್ಟಿನ ದಿನ ನೋವೂ ಜೊತೆಯಾದರೆ ಅವರು ಸಿಡಿಮಿಡಿಗೊಳ್ಳುವುದು ಸಹಜ.

ಮೊದಲಿನವರು ಮಾಡಿದ್ದ ಎಲ್ಲಾ ನಿರ್ಧಾರಗಳೂ ವೈಜಾnನಿಕ ದೃಷ್ಟಿಯಿಂದ ಸರಿಯಾಗಿತ್ತು. ಆ ದಿನಗಳಲ್ಲಿ ಅವರು ಸುಮ್ಮನೆ ಕುಳಿತೋ, ಅಥವ ಮಲಗಿಯೋ ಆ ಮೂರು ದಿನಗಳನ್ನು ಕಳೆಯಬಹುದಿತ್ತು. ಆದರೀಗ ಹಾಗಾಗುವುದಿಲ್ಲ. ಮೊದಲಿನಂತೆ ಈಗ ಅವಿಭಕ್ತ ಕುಟುಂಬಗಳೂ ಇಲ್ಲ. ಇಲ್ಲಿ ಎಲ್ಲವನ್ನೂ ಮನೆಯೊಡತಿಯೇ ನಿಭಾಯಿಸಬೇಕಾಗುತ್ತದೆ. ಬೇರೆ ದೇಶಗಳ ಹೆಂಗಸರ ಬಗೆಗಿನ ಈ ರೀತಿಯ ಔದಾರ್ಯ ಸರಿಯಾಗಿದೆ. ನಮ್ಮ ದೇಶದಲ್ಲೂ ಇದೇ ನೀತಿಯನ್ನು ಜಾರಿಗೆ ತಂದರೆ ಒಳ್ಳೆಯದು. ಆ ದಿನಗಳಲ್ಲಿ ಅವರಿಗೆ ಕಡೆಯ ಪಕ್ಷ ಒಂದು ದಿನದ ಮಟ್ಟಿಗಾದರೂ ರಜೆ ದೊರೆತರೆ ಒಳ್ಳೆಯದೆಂದು ನನ್ನ ಅಭಿಪ್ರಾಯ.

– ಸುಜಲಾ ಘೋರ್ಪಡೆ, ನ್ಯಾನಪ್ಪನಹಳ್ಳಿ, ಬೆಂಗಳೂರು

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.