ಬಾಳೆ ವೈವಿಧ್ಯ
Team Udayavani, Oct 25, 2017, 12:00 PM IST
ಹಸಿವು ನೀಗಬೇಕಾದರೆ, ಜೀರ್ಣಕ್ರಿಯೆ ಸುಲಲಿತ ಆಗಬೇಕಾದರೆ ದಿನವೂ ಒಂದೆರಡು ಬಾಳೆಹಣ್ಣು ತಿನ್ನಬೇಕು. ಬೆಳಗ್ಗಿನ ವೇಳೆ ಚಳಿ ಇರುತ್ತೆ. ಆಗ ಬಾಳೆಹಣ್ಣು ತಿನ್ನಲು ಬೋರ್ ಅನ್ನುವವರು ಶಿರಾ ಮಾಡಿಕೊಂಡು, ಬನಾನಾ ಪೂರಿ ಮಾಡಿಕೊಂಡು “ಬಾಳೆಯೊಂದಿಗೆ ಬಾಳ್ವೆ’ ನಡೆಸಬಹುದು. ಬಿಸಿಲಿನ ಸಂದರ್ಭದಲ್ಲಾದರೆ ಬಾಳೆಹಣ್ಣಿನ ರಸಾಯನ ಅಥವಾ ಬಾಳೆಹಣ್ಣಿನ ಮಿಲ್ಕ್ಶೇಕ್ ಮಾಡಿಕೊಂಡು ಸಂಭ್ರಮಿಸಬಹುದು.
1. ಬಾಳೆಹಣ್ಣಿನ ಮಿಲ್ಕ್ಶೇಕ್
ಬೇಕಾಗುವ ಸಾಮಗ್ರಿ: ಬಾಳೆಹಣ್ಣು – 2, ಸಕ್ಕರೆ- ಅರ್ಧ ಕಪ್, ಏಲಕ್ಕಿ ಪುಡಿ ಅರ್ಧ ಚಮಚ, ಹಾಲು- 3 ಕಪ್
ಮಾಡುವ ವಿಧಾನ: ಬಾಳೆಹಣ್ಣನ್ನು ತುಂಡುಗಳನ್ನಾಗಿ ಮಾಡಿ ಹಾಲು, ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ಗ್ರೈಂಡ್ ಮಾಡಿ. ಐಸ್ಕ್ಯೂಬ್ ಹಾಕಿ ಕುಡಿಯಿರಿ.
2. ಬಾಳೆಹಣ್ಣಿನ ಶಿರಾ
ಬೇಕಾಗುವ ಸಾಮಗ್ರಿ: ರವೆ- 1 ಕಪ್, ಬಾಳೆಹಣ್ಣು- 2, ಸಕ್ಕರೆ- 1 ಕಪ್, ದ್ರಾಕ್ಷಿ, ಗೋಡಂಬಿ-2 ಚಮಚ, ಬಾದಾಮಿ- 10, ಕೇಸರಿ ಬಣ್ಣ- 2 ಚಿಟಿಕೆ, ತುಪ್ಪ- 2 ಕಪ್, ಏಲಕ್ಕಿಪುಡಿ- ಅರ್ಧ ಚಮಚ.
ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಹಾಕಿ ರವೆಯನ್ನು ಘಮ್ ಎನ್ನುವವರೆಗೆ ಹುರಿದುಕೊಳ್ಳಿ. ಅದಕ್ಕೆ, ಹೆಚ್ಚಿದ ಬಾಳೆಹಣ್ಣಿನ ತುಂಡುಗಳನ್ನು ಹಾಕಿ, ಅದಕ್ಕೆ ಬಿಸಿನೀರು, ದ್ರಾಕ್ಷಿ-ಗೋಡಂಬಿ- ಬಾದಾಮಿ ಹಾಕಿ ಚೆನ್ನಾಗಿ ಕುದಿಸಿ. ಮಿಶ್ರಣಕ್ಕೆ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ 2 ನಿಮಿಷ ಕುದಿಸಿ. ಈ ಮಿಶ್ರಣಕ್ಕೆ ಕೇಸರಿಯನ್ನು ಸೇರಿಸಿ. ಕಡಿಮೆ ಉರಿಯಲ್ಲಿ ಐದು ನಿಮಿಷ ಬೇಯಿಸಿದರೆ ಶಿರಾ ರೆಡಿ.
3. ಬಾಳೆಹಣ್ಣಿನ ರಸಾಯನ
ಬೇಕಾಗುವ ಸಾಮಗ್ರಿ: ಬಾಳೆಹಣ್ಣು -2, ಬೆಲ್ಲ-1 ಕಪ್, ಏಲಕ್ಕಿಪುಡಿ- ಅರ್ಧ ಚಮಚ, ಕಾಯಿತುರಿ- 1 ಕಪ್.
ಮಾಡುವ ವಿಧಾನ: ಬಾಳೆಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದಕ್ಕೆ ಬೆಲ್ಲದ ಪುಡಿ, ಏಲಕ್ಕಿಪುಡಿ ಸೇರಿಸಿ ಕೂಡಿಸಿ. ನಂತರ ಅದಕ್ಕೆ ಕಾಯಿತುರಿಯನ್ನು ಸೇರಿಸಿ ಸವಿಯಿರಿ. ಬೇಕಿದ್ದರೆ ಇದಕ್ಕೆ ಗೋಡಂಬಿ, ಬಾದಾಮಿಯನ್ನು ಹಾಕಬಹುದು.
4. ಬನಾನಾ ಪೂರಿ
ಬೇಕಾಗುವ ಸಾಮಗ್ರಿ: ಬಾಳೆಹಣ್ಣು – 2, ಸಕ್ಕರೆ- ಅರ್ಧ ಕಪ್, ಗೋಧಿ ಹಿಟ್ಟು- 1 ಕಪ್, ಮೈದಾಹಿಟ್ಟು- 1 ಕಪ್, ತುಪ್ಪ- 2 ಚಮಚ, ಗಟ್ಟಿ ಮೊಸರು- ಅರ್ಧ ಕಪ್, ಉಪ್ಪು ಚಿಟಿಕೆ, ಕರಿಯಲು ಎಣ್ಣೆ
ಮಾಡುವ ವಿಧಾನ: ಮೊದಲು ಬಾಳೆಹಣ್ಣಿನ ತುಂಡುಗಳನ್ನು ಸಕ್ಕರೆಯೊಂದಿಗೆ ಚೆನ್ನಾಗಿ ಬೆರೆಸಿ. ಇದಕ್ಕೆ ಮೈದಾ- ಗೋಧಿಹಿಟ್ಟು, ಮೊಸರು, ತುಪ್ಪ, ಉಪ್ಪು ಹಾಕಿ ಚೆನ್ನಾಗಿ ಕಲಸಿ ನಾದಿಕೊಳ್ಳಿ. ಈ ಹಿಟ್ಟನ್ನು 2 ಗಂಟೆಗಳ ಕಾಲ ಹಾಗೇ ಬಿಡಿ. ನಂತರ ಮತ್ತೆ ಚೆನ್ನಾಗಿ ನಾದಿಕೊಳ್ಳಿ. ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಒಂದೊಂದೇ ಹಿಟ್ಟಿನ ಉಂಡೆಯನ್ನು ಪೂರಿ ಹಾಳೆಯಂತೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕೆಂಪಗೆ ಗರಿಗರಿಯಾಗಿ ಕರಿಯಿರಿ.
– ಶ್ರುತಿ ಕೆ.ಎಸ್., ತುರುವೇಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ