ನಿಮ್ಮ ಬಾಯಿಗೆ ಹಾಲುಬಾಯಿ


Team Udayavani, Jan 31, 2018, 3:03 PM IST

31-40.jpg

ಹಲ್ವಾದಂತೆ ಕಾಣುವ, ಆದರೆ ಹಲ್ವಕ್ಕಿಂತ ವಿಭಿನ್ನವಾಗಿರುವ ಸಿಹಿ ತಿನಿಸು ಹಾಲ್‌ಬಾಯಿ. ಉಡುಪಿ, ಮಂಗಳೂರು ಕಡೆಯಲ್ಲಿ ಇದು ಭಾರೀ ಫೇಮಸ್‌. ಮಕ್ಕಳಿಂದ, ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುವ ಈ ಖಾದ್ಯವನ್ನು ಸಾಮಾನ್ಯವಾಗಿ ಅಕ್ಕಿ, ಬೆಲ್ಲ, ತೆಂಗಿನಕಾಯಿ ಬಳಸಿ ಮಾಡುತ್ತಾರೆ. ಅಷ್ಟೇ ಅಲ್ಲ, ಗೋಧಿ, ರಾಗಿ ಹಾಗೂ ರವೆಯಿಂದಲೂ ಹಾಲ್‌ಬಾಯಿ ತಯಾರಿಸಬಹುದು. ಹೇಗೆ ಅಂತೀರಾ, ಇಲ್ಲಿದೆ ನೋಡಿ ಥರಹೇವಾರಿ ಹಾಲ್‌ಬಾಯಿ ರೆಸಿಪಿಗಳು. 

1. ಅಕ್ಕಿ ಹಾಲ್‌ಬಾಯಿ
ಬೇಕಾಗುವ ಸಾಮಗ್ರಿ: ಅಕ್ಕಿ- 1/2 ಕಪ್‌, ತೆಂಗಿನತುರಿ- 1/2 ಕಪ್‌, ಬೆಲ್ಲ- 1/2 ಕಪ್‌, ತುಪ್ಪ (6 ದೊಡ್ಡ ಚಮಚ), ಏಲಕ್ಕಿ-3, ಗೋಡಂಬಿ.  

ಮಾಡುವ ವಿಧಾನ: ಅಕ್ಕಿಯನ್ನು ನೀರಲ್ಲಿ ಚೆನ್ನಾಗಿ ತೊಳೆದು 2 ಗಂಟೆಗಳ ಕಾಲ ನೆನೆಸಿಡಿ. ನಂತರ ನೀರು ಬಸಿದು ಅಕ್ಕಿ, ತೆಂಗಿನತುರಿ ಮತ್ತು ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಲು ಬೇಕಾಗುವಷ್ಟು ಮಾತ್ರ ನೀರು ಸೇರಿಸಿ. ಒಂದು ಬಾಣಲೆಗೆ ರುಬ್ಬಿದ ಮಿಶ್ರಣ, ಬೆಲ್ಲ, 1.5 ಕಪ್‌ನಷ್ಟು ನೀರು ಸೇರಿಸಿ ಕಲಸಿ. ಮಂದ ಉರಿಯಲ್ಲಿ ಕೈಯಾಡಿಸುತ್ತಾ ಕಾಯಿಸಿ. ಮಿಶ್ರಣ ಗಟ್ಟಿಯಾಗುತ್ತ ಬರುತ್ತಿದ್ದಂತೆ ಸ್ವಲ್ಪಸ್ವಲ್ಪವಾಗಿ ತುಪ್ಪ ಸೇರಿಸಿ. ತಳ ಬಿಡುತ್ತಿದ್ದಂತೆ ತುಪ್ಪ ಸವರಿದ ತಟ್ಟೆಗೆ ಹಾಕಿ ತಣಿಸಿ. ನಂತರ ಕತ್ತರಿಸಿ ಗೋಡಂಬಿಯಿಂದ ಅಲಂಕರಿಸಿ ಸವಿಯಿರಿ. ತುಪ್ಪ ಜಾಸ್ತಿ ಹಾಕಿದಷ್ಟೂ ರುಚಿ ಜಾಸ್ತಿ.

2. ಗೋಧಿ ಹಾಲ್‌ಬಾಯಿ 
ಬೇಕಾಗುವ ಸಾಮಗ್ರಿ: ಗೋಧಿ-1 ಕಪ್‌, ತೆಂಗಿನ ತುರಿ- 1/2 ಕಪ್‌, ಬೆಲ್ಲ- 3/4 ಕಪ್‌, ತುಪ್ಪ-1/4 ಕಪ್‌, ಏಲಕ್ಕಿ ಪುಡಿ, ನೀರು- 3 ಕಪ್‌.

ಮಾಡುವ ವಿಧಾನ: ಗೋಧಿಯನ್ನು ಚೆನ್ನಾಗಿ ತೊಳೆದು 8 ಗಂಟೆಗಳ ಕಾಲ ನೆನಸಿಡಿ. ತೆಂಗಿನ ತುರಿಯನ್ನು 1/2 ಕಪ್‌ ನೀರು ಹಾಕಿ ರುಬ್ಬಿ.  ಗೋಧಿಯ ನೀರು ಬಸಿದು, ಪುನಃ ಸಾಕಷ್ಟು ನೀರು ಬೆರೆಸಿ ರುಬ್ಬಿಕೊಳ್ಳಿ. ಈಗ ರುಬ್ಬಿದ ಗೋಧಿಯನ್ನು ಸೋಸಿಕೊಂಡು ಗಟ್ಟಿ ಹಾಲು ತೆಗೆದಿಡಿ. ಹಿಂಡಿದ ಗೋಧಿಗೆ ಪುನಃ ನೀರು ಹಾಕಿ ರುಬ್ಬಿಕೊಂಡು ಸೋಸುವ ಹಂತವನ್ನು ಪುನರಾವರ್ತಿಸಿ. ಗೋಧಿ ಹಾಲು ಇರುವ ಪಾತ್ರೆಗೆ ಇನ್ನೊಂದು ಕಪ್‌ ನೀರು ಸೇರಿಸಿ ಕದಡದಂತೆ 2 ಗಂಟೆಗಳ ಕಾಲ ಇಟ್ಟು ಬಿಡಿ. ಮೇಲಿನ ನೀರನ್ನು ಮಾತ್ರ ಬಸಿದುಕೊಳ್ಳಿ. ನಂತರ ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ, 1/2 ಕಪ್‌ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ಕೂಡಲೆ ಅದಕ್ಕೆ ಗಟ್ಟಿ ಗೋಧಿ ಹಾಲು, ರುಬ್ಬಿದ ತೆಂಗಿನ ತುರಿ ಸೇರಿಸಿ ಗೊಟಾಯಿಸಿ. ಮಿಶ್ರಣ ದಪ್ಪವಾಗುತ್ತಿದ್ದಂತೆ ತುಪ್ಪ ಸೇರಿಸಿ ಗೊಟಾಯಿಸುವುದನ್ನು ಮುಂದುವರಿಸಿ. ಉಂಡೆ ಮಾಡಿದಾಗ ಕೈಗೆ ಅಂಟದಿದ್ದರೆ ಹಾಲ್‌ಬಾಯಿ ತಿನ್ನಲು ರೆಡಿ ಎಂದರ್ಥ. ತುಪ್ಪ ಸವರಿದ ತಟ್ಟೆಗೆ ಹಾಕಿ, ಕತ್ತರಿಸಿ ಸವಿಯಿರಿ.

3.ರಾಗಿ ಹಾಲ್‌ಬಾಯಿ 
ಬೇಕಾಗುವ ಸಾಮಗ್ರಿ: ರಾಗಿ-1/2 ಕಪ್‌, ತೆಂಗಿನತುರಿ- 1/2 ಕಪ್‌, ಬೆಲ್ಲ- 1/2 ಕಪ್‌, ತುಪ್ಪ-4 ಚಮಚ, ಏಲಕ್ಕಿ ಪುಡಿ, ನೀರು- 1.5 ಕಪ್‌.

 ಮಾಡುವ ವಿಧಾನ: ರಾಗಿಯನ್ನು ಚೆನ್ನಾಗಿ ತೊಳೆದು 3-4 ಗಂಟೆಗಳ ಕಾಲ ನೆನೆಸಿಡಿ. ನೆನೆದ ರಾಗಿಯ ನೀರು ಬಸಿದು, 1/2 ಕಪ್‌ ನೀರು ಬೆರೆಸಿ ತೆಂಗಿನ ತುರಿ ಜೊತೆಗೆ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ರಾಗಿಯನ್ನು ಸೋಸಿ ದಪ್ಪ ಹಾಲು ತೆಗೆದಿಡಿ. ಹಿಂಡಿದ ರಾಗಿಗೆ ಪುನಃ 1/2 ಕಪ್‌ ನೀರು ಹಾಕಿ ರುಬ್ಬಿಕೊಂಡು ಸೋಸುವುದನ್ನು ಪುನರಾವರ್ತಿಸಿ. ನಂತರ ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ, 1/2 ಕಪ್‌ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ಕೂಡಲೆ ಅದಕ್ಕೆ ರಾಗಿಹಾಲು ಸೇರಿಸಿ ಗೊಟಾಯಿಸಿ. ಮಿಶ್ರಣ ದಪ್ಪವಾಗುತ್ತಿದ್ದಂತೆ ತುಪ್ಪ ಸೇರಿಸಿ ಗೊಟಾಯಿಸುವುದನ್ನು ಮುಂದುವರಿಸಿ. ಮಿಶ್ರಣ ತಳ ಬಿಡುತ್ತಾ ಬಂದು, ಹೊಳಪಿನಿಂದ ಕೂಡಿದಾಗ, ತುಪ್ಪ ಸವರಿದ ತಟ್ಟೆಗೆ ಹಾಕಿ ತಣಿಸಿ. 

4. ರವೆ ಹಾಲ್‌ಬಾಯಿ: 
ಬೇಕಾಗುವ ಸಾಮಗ್ರಿ: ರವೆ-1/2 ಕಪ್‌, ತೆಂಗಿನ ತುರಿ- 1 ಕಪ್‌, ಬೆಲ್ಲ- 1 ಕಪ್‌, ತುಪ್ಪ-1/8 ಕಪ್‌, ಏಲಕ್ಕಿ, ನೀರು- 1.5 ಕಪ್‌

 ಮಾಡುವ ವಿಧಾನ: ತೆಂಗಿನತುರಿಯನ್ನು 1.5 ಕಪ್‌ ನೀರು ಹಾಕಿ ನುಣ್ಣಗೆ ರುಬ್ಬಿ ಸೋಸಿಕೊಳ್ಳಿ. 1.5 ಕಪ್‌ನಷ್ಟು ತೆಂಗಿನ ಹಾಲನ್ನು ತೆಗೆದಿಟ್ಟುಕೊಳ್ಳಿ. ಒಂದು ದಪ್ಪ ತಳದ ಬಾಣಲೆಗೆ ಅರ್ಧದಷ್ಟು ತುಪ್ಪ ಹಾಕಿ ರವೆಯನ್ನು ಚೆನ್ನಾಗಿ ಘಮ್ಮೆನ್ನುವಂತೆ ಹುರಿದು ತೆಗೆದಿಟ್ಟುಕೊಳ್ಳಿ. ಬಾಣಲೆಗೆ ಬೆಲ್ಲ, ಸ್ವಲ್ಪ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ಕೂಡಲೇ ತೆಗೆದಿರಿಸಿದ ತೆಂಗಿನ ಹಾಲು ಸೇರಿಸಿ. ಆದು ಕುದಿಯಲು ಆರಂಭವಾಗುತ್ತಿದ್ದಂತೆ ಹುರಿದ ರವೆಯನ್ನು ನಿಧಾನವಾಗಿ ಸೇರಿಸಿ. ರವೆ ಹಾಕುವಾಗ ಕೈಯಾಡಿಸುತ್ತಿರಿ. ಇಲ್ಲದಿದ್ದರೆ ಗಂಟಾಗುವ ಸಾಧ್ಯತೆ ಇದೆ. ಮಿಶ್ರಣ ದಪ್ಪವಾಗುತ್ತಿದ್ದಂತೆ ತುಪ್ಪ ಸೇರಿಸಿ ಗೊಟಾಯಿಸುವುದನ್ನು ಮುಂದುವರಿಸಿ. ಮಿಶ್ರಣ ತಳ ಬಿಡುತ್ತಾ ಬಂದಾಗ ರವೆ ಹಾಲ್‌ಬಾಯಿ ತಯಾರು. ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ತಣಿಸಿ. 

ವಿ.ಸೂ: ಎಲ್ಲ ಬಗೆಯ ಹಾಲ್‌ಬಾಯಿ ತಿನ್ನುವ ಮೊದಲು, ಅದಕ್ಕೆ ಒಂದು ದೊಡ್ಡ ಸ್ಪೂನ್‌ ತುಪ್ಪ ಬೆರೆಸಿಕೊಂಡು ತಿಂದರೆ, ಅದರ ರುಚಿ ದುಪ್ಪಟ್ಟಾಗುತ್ತದೆ. 

ಸುಮನಾ ರಾವ್‌, ದುಬೈ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.