ನಿಮ್ಮ ಬಾಯ್‌ಫ್ರೆಂಡ್‌ಗೆ ಒಂದು ಟೆಸ್ಟ್‌


Team Udayavani, Feb 14, 2018, 11:45 AM IST

by-fr.jpg

ಪ್ರೀತಿ ಆಯ್ತು. ಅವನೊಂದಿಗೆ ಕೈಕೈ ಹಿಡಿದು ಸುತ್ತಾಡಿದ್ದೂ ಆಯ್ತು. ಮಾಲ್‌ನಲ್ಲಿ ಸಿನಿಮಾ ನೋಡುತ್ತಾ, ಭುಜಕ್ಕೆ ಭುಜ ಆನಿಸಿ ಪಾಪ್‌ಕಾರ್ನ್ ತಿಂದಿದ್ದೂ ಆಯ್ತು. ಈಗ ಈಕೆಯ ಹೃದಯದಲ್ಲಿ ಪ್ರೀತಿ ಮಾಗಿದೆ. ಅದನ್ನು ಸಾವಿರ ಸಲ ಅವನಲ್ಲಿ ಹೇಳಿಕೊಂಡಿದ್ದಾಳೆ ಕೂಡ. ಆದರೆ ಆತನದ್ದು ಒಂದೇ ರಾಗ, “ಇಷ್ಟು ಬೇಗ ಮದ್ವೆ ಬೇಡ’ ಅಂತ. ಆಕೆಯ ಎದೆಯಲ್ಲಿ ಢವಢವ. ಇವನ ಪ್ರೀತಿ ನಿಜನಾ? ಇಲ್ಲಾ ಕೈ ಕೊಡ್ತಾನಾ? ಇಂಥ ವೇಳೆ ಬಾಯ್‌ಫ್ರೆಂಡ್‌ ಅನ್ನು ಟೆಸ್ಟ್‌ ಮಾಡೋದು ಹೇಗೆ? ಇಲ್ಲಿವೆ ಕೆಲವು ಟೆಕ್ನಿಕ್ಸ್‌…

1. ಅವನ ಫ್ಯಾಮಿಲಿ ಪ್ರೋಗ್ರಾಮ್‌ಗೆ ನೀವು ಆಹ್ವಾನಿತರಲ್ಲವೇ?
ಒಂದು ವೇಳೆ ನಿಮ್ಮ ಪ್ರೀತಿಯನ್ನು ಆತ ಗೌರವಿಸಿದ್ದೇ ಆದಲ್ಲಿ, “ಇವಳೂ ನನ್ನ ಕುಟುಂಬದ ಭಾಗ’ ಎಂದು ನಿಮ್ಮನ್ನು ಗೌರವಿಸುತ್ತಿರುತ್ತಾನೆ. ಆತನ ಕುಟುಂಬದ ಯಾವುದೇ ಶುಭಸಮಾರಂಭದಲ್ಲೂ ನಿಮ್ಮ ಉಪಸ್ಥಿತಿಯನ್ನು ಬಯಸುತ್ತಿರುತ್ತಾನೆ. ಇಲ್ಲ ಹುಡುಗನ ಮನೇಲಿ ಏನ್‌ ಕಾರ್ಯಕ್ರಮ ನಡೀತೋ ನಂಗೆ ಗೊತ್ತೇ ಇಲ್ಲ ಅಂತ ನೀವಿದ್ದರೆ, ಆತನ ಪ್ರೀತಿಯನ್ನು ಒರೆಗೆ ಹಚ್ಚುವುದು ಒಳ್ಳೇದು.

2. ಭವಿಷ್ಯದ ಬಗ್ಗೆ ಹೇಳಿಕೊಳ್ಳುತ್ತಿಲ್ಲವೇ?
ನೀನು ಚಿನ್ನ, ನೀನು ರನ್ನ, ನಿನ್ನ ಕಣ್ಣು ಐಶ್ವರ್ಯಾ ರೈ ಥರಾ ಇದೆ… ಹೀಗೆಲ್ಲ ಹೊಗಳಿ ಆತ ಅಟ್ಟಕೇರಿಸುತ್ತಿದ್ದಾನಾ? ಸಂತೋಷ. ಆದರೆ, ಒಂದು ಅನುಮಾನವೂ ಇರಲಿ. ಯಾಕೆ ಗೊತ್ತಾ? ಮದುವೆಯಾಗ ಬಯಸುವ ಹುಡುಗರು ಯಾವತ್ತೂ ಭವಿಷ್ಯದ ಕನಸುಗಳನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಿರುತ್ತಾರೆ.

3. ನಿಮ್ಮ ಕನಸಿನ ಭಾಗವಾಗಿದ್ದಾನಾ?
ಆತನ ಕೈಕೈ ಹಿಡಿದು ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹೇಳಿಕೊಳ್ತೀರಿ, ಕೆಲಸದ ಬಗ್ಗೆ ಹೇಳಿಕೊಳ್ತೀರಿ, ನಾಳೆ ನಾನು ಹೀಗಿರಬೇಕು- ಹಾಗಿರಬೇಕು ಅಂತೆಲ್ಲ ಕನಸುಗಳನ್ನು ಅವನೆದುರು ಹರವಿಡುತ್ತೀರಿ. ಹೀಗೆಲ್ಲ ಹೇಳುವಾಗ ಆತ ಇದಕ್ಕೆ ಸ್ಪಂದಿಸುತ್ತಿದ್ದಾನಾ? ಗಮನಿಸಿ. ಇದಕ್ಕೆ ಪೂರಕವಾಗಿ ಮಾತಾಡುತ್ತಿದ್ದಾನಾ? ನೋಡಿ. ಇಲ್ಲಾಂದ್ರೆ, ಆತ ಕೈಕೊಡಲು ಅರ್ಹ.

4. ಅವನೇನಾದ್ರು ಬಚ್ಚಿಡ್ತಿದ್ದಾನಾ?
ಆತ ತನ್ನ ಅಕ್ಕ- ತಂಗಿಯರು, ಗೆಳೆಯ- ಗೆಳತಿಯರ ಎದುರು “ಇವಳು ನನ್ನ ವುಡ್‌ಬಿ. ಇವಳನ್ನು ನಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಿದ್ದೀನಿ, ಮುಂದೆ ಮದ್ವೆ ಆಗ್ತಿàನಿ’ ಅಂತ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾನಾ? ಒಂದು ವೇಳೆ ತನ್ನ ಪ್ರೇಮವನ್ನು ನಿಗೂಢವಾಗಿ ಇಟ್ಟಿದ್ದಾನೆ ಅಂತಾದರೆ, ಕಿವಿಹಿಂಡಿ ಬುದ್ಧಿ ಹೇಳಿ. ಪ್ರೀತಿಯನ್ನು ಗಟ್ಟಿ ಮಾಡಿಕೊಳ್ಳಿ.

5. ಗಂಡನ ಗುಣಗಳು ಅವನಲ್ಲಿ ಕಾಣುತ್ತಿವೆಯಾ?
ನೀವು ಪ್ರೀತಿಸುತ್ತಿರುವ ಹುಡುಗನೊಳಗೆ ಒಬ್ಬ ಆದರ್ಶ ಗಂಡನ ವ್ಯಕ್ತಿತ್ವವನ್ನು ಹುಡುಕುವ ಪ್ರಯತ್ನ ಮಾಡಿ. ಆತನ ಪ್ರತಿ ನಡತೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿರಿ. ಇಲ್ಲಾ, ಇವನು ಪ್ರೀತಿ ಅಂತ ಹೇಳಿ ನಾಟಕ ಆಡ್ತಿದ್ದಾನೆ ಅಂತನ್ನಿಸಿದರೆ, ಆದಷ್ಟು ಬೇಗ ಆ ಸುಳಿಯಿಂದ ಹೊರಬನ್ನಿ.

6. ಲಿವ್‌ ಇನ್‌ ಅಂತ ಕತೆ ಹೊಡೀತಾನಾ?
ನೀವು ಇಷ್ಟಪಟ್ಟ ಹುಡುಗನಿಗೆ ಲಿವ್‌ ಇನ್‌ ಸಂಬಂಧದಲ್ಲಿ ಹೆಚ್ಚು ಆಸಕ್ತಿ ಇದೆಯಾ? ಮದುವೆ ಸಂಪ್ರದಾಯವನ್ನು ಆತ ಗೌರವಿಸುತ್ತಿದ್ದಾನಾ? ಈ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಿ. ಅದ್ಧೂರಿ ಮದುವೆ ಅಲ್ಲದಿದ್ದರೂ, ಸರಳ ಮದುವೆಗಾದರೂ ಅವನ ಒಲವು ಇದೆಯಾ ಎಂಬುದನ್ನಾದರೂ ಪರಿಶೀಲಿಸಿ.

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.