ವಧು ಪರೀಕ್ಷೆ, ಇದ್ದಿದ್ದೊಂದು ರಜೇನೂ ಹೋಯ್ತಲ್ಲೇ…


Team Udayavani, Feb 14, 2018, 11:55 AM IST

vadu-pareekshe.jpg

“ಸ್ವಾತಿ, ಇವತ್ತಿನ ಶಾಪಿಂಗ್‌ ಪ್ಲಾನ್‌ ಕ್ಯಾನ್ಸಲ್‌ ಕಣೆ, ಹುಡುಗನ ಮನೆಯವರು ಬರ್ತಿದ್ದಾರೆ ನನ್ನ ನೋಡೋಕೆ’ ಎಂದು ಒಂದೇ ಉಸಿರಿನಲ್ಲಿ ಹೇಳಿ, ವಾರ್ಡ್‌ರೋಬಿನ ಬಾಗಿಲು ತೆಗೆದು ಬಟ್ಟೆ ಹುಡುಕಲು ತೊಡಗಿದಳು ಗೆಳತಿ ನಮ್ರತಾ. “ಅಲ್ವೇ , ರಜೆ ಇಲ್ಲಾ ಅಂತಿದ್ದೆ. ಈಗ ಹುಡುಗನ್ನ ನೋಡೋಕೋಸ್ಕರ ಊರಿಗೆ ಹೋಗ್ತಿದೀಯ?’ ಎಂದೆ ಕುತೂಹಲದಿಂದ. ಅದಕ್ಕೆ ಅವಳು, “ಹುಡುಗ ಬೆಂಗಳೂರಿನÇÉೇ ಕೆಲಸದಲ್ಲಿದ್ದಾನಂತೆ. ಅವನಿಗೂ ರಜೆ ಸಿಗೋದು ಕಷ್ಟ, ನನಗೂ ರಜೆ ಇಲ್ಲ. ಹಾಗಾಗಿ ಇÇÉೇ ನಮ್ಮ ಚಿಕ್ಕಪ್ಪನ ಮನೆಗೇ ಇವತ್ತು ಬರೋಕೆ ಹೇಳಿದಾರೆ’ ಎಂದಳು.

ವಧು ಪರೀಕ್ಷೆ ಅಂದರೆ ಸೀರೆ ಉಟ್ಕೊàಬೇಕು, ತಾನೇ ಕೈಯಾರೆ ಕಾಫಿ- ಉಪ್ಪಿಟ್ಟು ಮಾಡಿಕೊಡಬೇಕು ಅಂತೆಲ್ಲಾ ಅಂದುಕೊಂಡಿದ್ದ ನಾನು, “ನಮ್ರತಾ ಸೀರೆ ಇದ್ಯಾ ನಿನ್ನ ಹತ್ರ?’ ಎಂದೆ. “ನಿಂದೊಳ್ಳೆ ಕತೆ. ಈಗೆಲ್ಲಾ ಯಾವ ಹುಡುಗಿ ಸೀರೆ ಉಟ್ಟು, ಮಲ್ಲಿಗೆ ಮುಡಿದು, ಉಗುರಿಂದ ನೆಲ ಗೀರುತ್ತಾ ಹುಡುಗನ ಮುಂದೆ ನಾಚಿ ನಿಲ್ತಾಳೆ ಹೇಳು. ನಾನಂತೂ ಚೂಡಿ ಹಾಕ್ಕೋತೀನಿ’ ಅಂದು ತನ್ನಿಷ್ಟದ ಕಡುನೀಲಿ ಚೂಡಿದಾರ್‌ ತೊಟ್ಟು, ಬಿಂದಾಸ್‌ ಆಗಿ ಚಿಕ್ಕಮ್ಮನ ಮನೆಗೆ ಹೊರಟಳು.

ನಾನು ತುಂಬಾ ಕುತೂಹಲದಿಂದ ಸಂಜೆ ಅವಳು ಬರುವುದನ್ನೇ ಕಾಯುತ್ತಿದ್ದೆ. ಸಂಜೆ ಸುಸ್ತಾಗಿ ವಾಪಸಾದ ನಮ್ರತಾಳನ್ನು, “ಏನಾಯೆ¤à ಹುಡುಗ ಒಪ್ಪಿದನಾ?’ ಕೇಳಿದೆ. ಅದಕ್ಕೆ ಅವಳು, “ಹುಡುಗನೂ ಒಪ್ಪಿದ, ಅವರ ಮನೆಯವರೂ ಒಪ್ಪಿಕೊಂಡ್ರು. ನಾನೇ ಬೇಡ ಅಂದೆ. ಅವರ ಅಮ್ಮನಿಗೆ ದುಡ್ಡಿನಾಸೆ ಜಾಸ್ತಿ. ಮದುವೇನ ಜೋರಾಗೇ ಮಾಡಿಕೊಡಬೇಕಂತೆ. ಹುಡುಗಿಗೆ ಮೈತುಂಬಾ ಬಂಗಾರದ ಜೊತೆಗೆ ಒಂದು ಸೈಟ್‌ ಕೊಟ್ಟರೆ ಸಾಕಂತೆ! ಇದು ವರದಕ್ಷಿಣೆ ಅಲ್ಲ, ಮುಂದೆ ನಿಮ್ಮ ಮಗಳ ಜೀವನ ಸುಖವಾಗಿರಬೇಕಲ್ಲ, ಅದಕ್ಕೆ… ಅನ್ನೋ ಮಾತು ಬೇರೆ. ಅದಕ್ಕೆ ನಾನೇ ಈ ಸಂಬಂಧ ಬೇಡ ಅಂದೆ. ಈಗಲೇ ಇಷ್ಟೊಂದು ಒರಟಾಗಿ ಮಾತಾಡೋ ಹುಡುಗಿ ನಮಗೂ ಬೇಡ ಅಂತ ಅವರೂ ಹೊರಟರು’ ಅಂದಳು.

ಅವಳ ಬಾಡಿದ ಮುಖ ನೋಡಿ, ಪಾಪ, ಸಂಬಂಧ ಕುದುರಿಲ್ಲ ಅನ್ನೋ ಬೇಜಾರಿರಬೇಕು ಅಂದುಕೊಂಡು, “ಯಾಕೇ ಬೇಜಾರಾಗ್ತಿದೆಯಾ ಕೇಳಿದೆ?’ ಅದಕ್ಕವಳು ಅಳು ಮುಖ ಮಾಡಿ, “ಹೂಂ, ಕಣೇ. ಇದ್ದಿದ್ದೊಂದು ರಜೇನೂ ಹೋಯ್ತಲ್ಲೇ. ನೀನು ನೋಡು, ನನ್ನ ಬಿಟ್ಟು ಎಷ್ಟೊಂದೆಲ್ಲಾ ಶಾಪಿಂಗ್‌ ಮಾಡ್ಕೊಂಡು ಬಂದಿದ್ದೀಯ’ ಎಂದಳು. ಇಬ್ಬರೂ ಜೋರಾಗಿ ನಕ್ಕೆವು.

(ವಧುಪರೀಕ್ಷೆ ಅನ್ನೋದು ಪ್ರತಿ ಹೆಣ್ಣಿನ ಬದುಕಿನಲ್ಲಿ ಸದಾ ಕಾಡುವ ದೃಶ್ಯಾವಳಿ. ಅಂಥ ಅನುಭವಗಳು ನಿಮ್ಮ ಬದುಕಿನಲ್ಲೂ ಆಗಿದ್ದರೆ, ಅದರ ಕತೆಯನ್ನು 80- 100 ಪದಗಳ ಮಿತಿಯಲ್ಲಿ ಸ್ವಾರಸ್ಯವಾಗಿ ಬರೆದು, ನಮಗೆ ಕಳುಹಿಸಿ. ಇಮೇಲ್‌: [email protected])

– ಸ್ವಾತಿ ಕೆ.ಎಚ್‌.

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.