ಕಲೆ ಬುರುಡೆ…


Team Udayavani, Mar 21, 2018, 5:13 PM IST

kale-burude.jpg

ಬುರುಡೆಯ ಆಭರಣವನ್ನು ಯಾವತ್ತಾದರೂ ಧರಿಸಿದ್ದೀರಾ? ಬುರುಡೆ ಬಿಡುತ್ತಿಲ್ಲಾರೀ, ಇದೀಗ ನಿಜಕ್ಕೂ ತಲೆಬುರುಡೆಯ ವಿನ್ಯಾಸದ ಆಭರಣಗಳ ಟ್ರೆಂಡ್‌ ಫ್ಯಾಷನ್‌ಲೋಕದಲ್ಲಿ ಶುರುವಾಗಿದೆ. ಬುರುಡೆಯ ಸರ, ಉಂಗುರ, ಪೆಂಡೆಂಟ್‌, ಹೇರ್‌ಕ್ಲಿಪ್‌ಗ್ಳಿಗೆ ಹೆಂಗೆಳೆಯರು ಫಿದಾ ಆಗುತ್ತಿದ್ದಾರೆ…

ಕಾಮಿಕ್ಸ್‌ ಓದುವವರಿಗೆ ಫ್ಯಾಂಟಮ್‌ನ ಪರಿಚಯ ಇದ್ದೇ ಇರುತ್ತೆ. ಫ್ಯಾಂಟಮ್‌ ಕಥೆಗಳಲ್ಲಿ ಬರುವ ಸ್ಕಲ್‌ ಕೇವ್‌ (ಬುರುಡೆ ಆಕಾರದ ಗುಹೆ) ಓದುಗರನ್ನು ವಿಸ್ಮಿತಗೊಳಿಸಿತ್ತು. ಅಲ್ಲದೆ ಕಥಾನಾಯಕ ಫ್ಯಾಂಟಮ್‌ ಸ್ವತಃ ಬುರುಡೆಯಾಕಾರದ ಉಂಗುರವನ್ನು ತೊಡುತ್ತಿದ್ದ. ತನ್ನ ಬಲಶಾಲಿ ಮುಷ್ಟಿಯಿಂದ ಕಿಡಿಗೇಡಿಗಳಿಗೆ ಆತ ಪಂಚ್‌ ಕೊಟ್ಟಾಗ ಅವರ ಮುಖದ ಮೇಲೆ ಬುರುಡೆಯ ಅಚ್ಚು ಬೀಳುತ್ತಿತ್ತು. ಆ ಅಚ್ಚು ಫ್ಯಾಂಟಮ್‌ನ ಸ್ಟೈಲ್‌ ಆಗಿತ್ತು!

ಮೇಲೆ ಹೇಳಿದ ಬುರುಡೆ ಆಭರಣಗಳಿಗೆ ಫ್ಯಾಂಟಮ್‌ ಸ್ಫೂರ್ತಿ! ಮೊದಮೊದಲು ಬುರುಡೆ ಉಂಗುರಗಳು ಮಾರುಕಟ್ಟೆಗೆ ಬಂದವು. ಅವನ್ನು ಹೆಚ್ಚಾಗಿ ಪುರುಷರೇ ಧರಿಸುತ್ತಿದ್ದರು. ನಂತರದ ದಿನಗಳಲ್ಲಿ ಆ ಉಂಗುರ ಹೆಂಗಸರಿಗೂ ಪ್ರಿಯವಾಯಿತು. ಈಗ ಆ ಬುರುಡೆಯಾಕಾರದ ಉಂಗುರಗಳ ಜೊತೆಗೆ ಇತರೆ ಆಭರಣಗಳೂ ಬಂದಿವೆ. ಬೇರೆ-ಬೇರೆ ಆಕಾರ, ವಿನ್ಯಾಸ, ಬಣ್ಣ ಮತ್ತು ಆಕೃತಿಯ ಫ್ಯಾಷನ್‌ ಆಕ್ಸೆಸರೀಸ್‌ಗಳು ಈಗ ಲಭ್ಯ. 

ಎಲ್ಲೆಲ್ಲಿ ಧರಿಸಬಹುದು?: ಸ್ಕಲ್‌ ರಿಂಗ್‌ನಿಂದ ಪ್ರೇರಣೆ ಪಡೆದ ಪೆಂಡೆಂಟ್‌, ಕಿವಿಯೋಲೆ, ಹೇರ್‌ ಕ್ಲಿಪ್‌, ಬೆಲ್ಟ್, ಬ್ರೇಸ್ಲೆಟ್‌, ಮೂಗುತಿ ಕೂಡ ಬುರುಡೆ ಆಕಾರದಲ್ಲಿ ಲಭ್ಯವಿರುವ ಕಾರಣ ಇವೆಲ್ಲವನ್ನೂ ಬುರುಡೆಯಾಕಾರದ ಉಂಗುರದ ಜೊತೆ ಒಂದು ಸೆಟ್‌ನಂತೆ ಧರಿಸಬಹುದು. ಇವನ್ನು ಧರಿಸುವಾಗ ಯಾವೆಲ್ಲಾ ಕಾರ್ಯಕ್ರಮಗಳಿಗೆ ಇವು ಹೊಂದುತ್ತವೆ ಎನ್ನುವುದನ್ನು ವಿಚಾರ ಮಾಡುವ ಅಗತ್ಯವಿದೆ. 

ಬುರುಡೆ ಆಕಾರದ ಒಡವೆಗಳು, ರೇಷ್ಮೆ ಸೀರೆ, ಉದ್ದ ಲಂಗ, ಚೂಡಿದಾರ, ಲಂಗ ದಾವಣಿ, ಸಲ್ವಾರ್‌ ಕಮೀಜ್‌ ಮುಂತಾದ ಸಾಂಪ್ರದಾಯಿಕ ಉಡುಗೆಗಳ ಜೊತೆ ಅಷ್ಟೊಂದು ಅಂದವಾಗಿ ಕಾಣುವುದಿಲ್ಲ. ಹೀಗಾಗಿ ಮದುವೆಯಂಥ ಶುಭ ಸಮಾರಂಭಗಳಿಗೆ ಈ ಆಭರಣಗಳನ್ನು ಧರಿಸುವುದು ಸೂಕ್ತವೆನಿಸದು. ಕುರ್ತಾ, ಸೆಮಿ ಫಾರ್ಮಲ್ಸ್‌, ಪಲಾಝೊ ಪ್ಯಾಂಟ್ಸ್‌, ಜಂಪ್‌ ಸೂಟ್ಸ್‌, ಸ್ಕರ್ಟ್‌ಗಳು, ಶಾರ್ಟ್ಸ್ ಮತ್ತು ಶರ್ಟ್‌ ಡ್ರೆಸ್‌ಗೆ ಒಪ್ಪುತ್ತವೆ. ಕ್ಯಾಶುವಲ್‌ ಕಾರ್ಯಕ್ರಮಗಳು, ಕಾಲೇಜು ಸಮಾರಂಭಗಳಿಗೂ ಇವು ಹೊಂದಬಹುದು.

ಬಣ್ಣ ಬಣ್ಣದ ಬುರುಡೆ: ಲೋಹ, ಪ್ಲಾಸ್ಟಿಕ್‌, ಗಾಜು ಅಥವಾ ಮರದ ತುಂಡಿನಿಂದ ಮಾಡಿದ ಬುರುಡೆಗೆ ಕೆಂಪು, ನೀಲಿ ಅಥವಾ ಹಸಿರು ಬಣ್ಣದ ಕಲ್ಲು ಅಥವಾ ಗಾಜಿನ ತುಂಡುಗಳಿಂದ ಕಣ್ಣುಗಳನ್ನು ಮಾಡಲಾಗುತ್ತದೆ. ಇದರಿಂದ ಬುರುಡೆ ಇನ್ನೂ ಆಕರ್ಷಕವಾಗಿ ಕಾಣಿಸುತ್ತದೆ! ಕನ್ನಡಕ ಅಥವಾ ಕೂಲಿಂಗ್‌ ಗ್ಲಾಸ್‌ ತೊಟ್ಟ ಬುರುಡೆ, ಕೊಂಬುಳ್ಳ ಬುರುಡೆ, ಅಳುತ್ತಿರುವ ಬುರುಡೆ, ಕಣ್ಣು ಹೊಡೆಯುತ್ತಿರುವ ಬುರುಡೆ, ಕಡಲ್ಗಳ್ಳನಂತೆ ಒಂದು ಕಣ್ಣಿನ ಮೇಲೆ ಪಟ್ಟಿ ತೊಟ್ಟ ಬುರುಡೆ, ಕಣ್ಣು/ ಬಾಯಿಂದ ಬೆಂಕಿ ಕಾರುವ ಬುರುಡೆ, ಕಣ್ಣಿಂದ ಬೆಳಕು ಚೆಲ್ಲುವ ಬುರುಡೆ, ಹೀಗೆ ಚಿತ್ರ- ವಿಚಿತ್ರ ಆಯ್ಕೆಗಳು ಲಭ್ಯವಿವೆ. 

ಸ್ವತಂತ್ರ ಮನೋಭಾವದವರಿಗೆ: ಅಂದಹಾಗೆ, ಈ ಆಭರಣಗಳು ಫ್ಯಾಷನ್‌ ಸ್ಟೇಟ್‌ಮೆಂಟ್‌ ಕೂಡಾ ಹೌದು. ಇವನ್ನು ಧರಿಸುವ ಮೂಲಕ ತಾವು ಸ್ವತಂತ್ರ ಮನೋಭಾವದವರು ಎಂದು ಪ್ರಚುರ ಪಡಿಸಿದಂತಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಬೈಕರ್‌ಗಳು, ಗೋಥಿಕ್‌ ಅಥವಾ ಹೆವಿ ಮೆಟಲ್‌ ಸಂಗೀತ ಪ್ರಿಯರು ಯಾವುದೇ ಶಿಷ್ಟಾಚಾರಗಳನ್ನು ಅನುಸರಿಸದೆ ತಮ್ಮದೇ ಆದ ವಿಶಿಷ್ಟ ಶೈಲಿಯ ಉಡುಗೆ ತೊಡುತ್ತಾರೆ. ತಮ್ಮ ಆಲೋಚನೆಗಳನ್ನು ಪ್ರತಿಬಿಂಬಿಸುವ ಬಣ್ಣಗಳನ್ನು ತೊಡುತ್ತಾರೆ. ಇವರೆಲ್ಲ ಬುರುಡೆ ಆಭರಣಗಳನ್ನು ಹೆಚ್ಚಾಗಿ ತೊಡುತ್ತಾರೆ. 

ಟ್ರೆಂಡ್‌ ಸೆಟ್‌ ಮಾಡಿ..: ಸ್ಕಲ್‌ ಆಭರಣಗಳು ಆನ್‌ಲೈನ್‌ನಲ್ಲಿ ಮಾತ್ರವಲ್ಲ, ರಸ್ತೆ ಬದಿಯ ಅಂಗಡಿಗಳಲ್ಲೂ ಲಭ್ಯ. ಅಂಗೈಯಷ್ಟೇ ದೊಡ್ಡ ಮುದ್ರೆಯ ಸ್ಕಲ್‌ ರಿಂಗ್ಸ್ ಇದೀಗ ಬಹುತೇಕ ಎಲ್ಲ ಕಾಲೇಜು ವಿದ್ಯಾರ್ಥಿನಿಯರ ಕೈಬೆರಳುಗಳಲ್ಲಿ ರಾರಾಜಿಸುತ್ತಿವೆ. ಉಂಗುರದ ಆಕೃತಿ ತುಂಬಾ ದೊಡ್ಡದಿದ್ದ ಮೇಲೆ ಎಲ್ಲರ ಕಣ್ಣು ಅತ್ತ ಬೀಳದಿರುತ್ತದೆಯೇ? ಮತ್ತೂಂದು ಗುಟ್ಟೂ ನಿಮ್ಮ ಗಮನದಲ್ಲಿರಲಿ: ಕ್ಯಾಂಪಸ್‌ನಲ್ಲಿ ಟ್ರೆಂಡ್‌ ಸೆಟ್ಟರ್‌ ಆಗಲು, ಪಾರ್ಟಿಗಳಲ್ಲಿ ಶೋ ಸ್ಟಾಪರ್‌ ಆಗಲು ಸ್ಕಲ್‌ ರಿಂಗ್ಸ್ ಸಹಕಾರಿ.

* ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.