ಹಲ್ವ, ಚಕ್ಲಿ, ಚಿತ್ರಾನ್ನ….


Team Udayavani, Mar 28, 2018, 3:43 PM IST

cooking.jpg

ಬೆಳಗ್ಗೆ ತಿಂಡಿ ತಿನ್ನುವಾಗ, ಸಂಜೆ ಕಾಫಿಗೂ ಮೊದಲು- ಏನಾದ್ರೂ ಸ್ನ್ಯಾಕ್ಸ್‌ ತಿನ್ನಬೇಕು ಅನಿಸಿಬಿಡುತ್ತದೆ. ಬೇಕರಿ ಐಟಮ್ಸ್‌ಗಿಂತ ಮನೇಲಿ ಮಾಡುವ ತಿನಿಸುಗಳೇ ಜಾಸ್ತಿ ಇಷ್ಟ ಆಗ್ತವೆ. ಬರೀ ಅರ್ಧ ಗಂಟೆಯಲ್ಲಿ, ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಕೆಲವು ತಿಂಡಿಗಳ ರೆಸಿಪಿ ಇಲ್ಲಿದೆ…

ಅಮೃತಫ‌ಲ
ಬೇಕಾಗುವ ಪದಾರ್ಥಗಳು:
ಹಾಲು- ಒಂದು ಕಪ್‌, ತೆಂಗಿನ ಹಾಲು (ದಪ್ಪಹಾಲು)- ಒಂದು ಕಪ್‌, ಸಕ್ಕರೆ- ಮುಕ್ಕಾಲು ಕಪ್‌

ಮಾಡುವ ವಿಧಾನ: ಎಲ್ಲ ಪದಾರ್ಥಗಳನ್ನು ಒಂದು ದಪ್ಪ ಬಾಣಲೆಗೆ ಹಾಕಿ, ಒಲೆಯ ಮೇಲೆ ಮಂದ ಉರಿಯಲ್ಲಿಟ್ಟು, ಬಿಡದಂತೆ ಕೈಯಾಡಿಸುತ್ತಿರಬೇಕು. ಇದು ಗಟ್ಟಿಯಾಗಿ ಬಾಣಲೆ ಬಿಟ್ಟು ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ, ಐದು ನಿಮಿಷ ಬಿಟ್ಟು, ಬೇಕಾದ ಆಕಾರಕ್ಕೆ ಕತ್ತರಿಸಿದರೆ, ರುಚಿರುಚಿಯಾದ ಅಮೃತಫ‌ಲ ಸವಿಯಲು ಸಿದ್ಧ. ಬೇಕಿದ್ದಲ್ಲಿ, ತಟ್ಟೆಗೆ ಸುರಿದ ಮೇಲೆ, ಗೋಡಂಬಿಯಿಂದ ಅಲಂಕರಿಸಬಹುದು.

ಗೋಧಿ ಕಡಿಹಲ್ವ
ಬೇಕಾಗುವ ಪದಾರ್ಥಗಳು:
ಗೋಧಿಕಡಿ (ಹಿಟ್ಟು)- ಒಂದು ಕಪ್‌, ಹಾಲು- ಮೂರು ಕಪ್‌, ಸಕ್ಕರೆ- ಒಂದೂವರೆ ಕಪ್‌, ತುಪ್ಪ- ಮೂರು ಚಮಚ, ಏಲಕ್ಕಿ- ಎರಡು/ ಮೂರು ಗೋಡಂಬಿ, ದ್ರಾಕ್ಷಿ- ಸ್ವಲ್ಪ

ಮಾಡುವ ವಿಧಾನ: ಮೊದಲು ಕುಕಿಂಗ್‌ ಪ್ಯಾನ್‌ಗೆ ಎರಡು ಚಮಚ ತುಪ್ಪ ಹಾಕಿ, ಗೋಧಿ ಕಡಿ ಹಾಕಿ, ಘಮ…ಎನ್ನುವವರೆಗೂ ಹುರಿಯಬೇಕು. ಹುರಿದ ಗೋಧಿ ಕಡಿಗೆ ಮೂರು ಕಪ್‌ ಹಾಲು ಹಾಕಿ ಮೂರು ವಿಷಲ್‌ ಕೂಗುವಷ್ಟು ಬೇಯಿಸಿಕೊಳ್ಳಬೇಕು. ಬೆಂದ ಗೋಧಿಕಡಿಗೆ ಸಕ್ಕರೆ ಹಾಕಿ, ಮಗುಚುತ್ತಾ ಇರಬೇಕು. ಸ್ವಲ್ಪ ಗಟ್ಟಿಯಾದಾಗ, ಉಳಿದ ತುಪ್ಪ ಹಾಕಿ, ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಸೇರಿಸಿ, ಕೊನೆಯಲ್ಲಿ ಏಲಕ್ಕಿ ಪುಡಿ ಉದುರಿಸಿದರೆ, ರುಚಿಯಾದ, ಘಮಘಮ ಸುವಾಸನೆಯ ಗೋಧಿ ಕಡಿ ಹಲ್ವ ತಿನ್ನಲು ಸಿದ್ಧ.

ಕರಾಚಿ ಹಲ್ವ
ಬೇಕಾಗುವ ಪದಾರ್ಥಗಳು:
ಕಾರ್ನ್ಫ್ಲೋರ್‌- ಒಂದು ಕಪ್‌, ಸಕ್ಕರೆ- ಎರಡು ಕಪ್‌, ತುಪ್ಪ- ಎರಡು ಚಮಚ, ಏಲಕ್ಕಿ- ಎರಡು/ ಮೂರು, ನೀರು-  ಒಂದೂವರೆ ಕಪ್‌, ಫ‌ುಡ್‌ ಕಲರ್‌- ಚಿಟಿಕೆಯಷ್ಟು, ಲಿಂಬೆ ರಸ – ಎರಡು ಹನಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರುಗಳು- ಸ್ವಲ್ಪ

ಮಾಡುವ ವಿಧಾನ: ಮೊದಲು, ಒಂದು ಕಪ್‌ ಕಾರ್ನ್ ಫ್ಲೋರ್‌ಗೆ ಒಂದೂವರೆ ಕಪ್‌ ನೀರು ಹಾಕಿ, ಗಂಟಿಲ್ಲದಂತೆ ಚೆನ್ನಾಗಿ ಕಲಸಿಟ್ಟುಕೊಳ್ಳಬೇಕು. ದಪ್ಪತಳದ ಪಾತ್ರೆಗೆ ಒಂದು ಕಪ್‌ ಸಕ್ಕರೆ, ಒಂದು ಕಪ್‌ ನೀರು ಹಾಕಿ. ಒಂದು ಕುದಿ ಬಂದು ಸಕ್ಕರೆ ಸಂಪೂರ್ಣ ಕರಗಿದಾಗ ಕಾರ್ನ್ಫ್ಲೋರ್‌ ಮಿಶ್ರಣ ಹಾಗೂ ಎರಡು ಹನಿ ಲಿಂಬೆರಸ ಸೇರಿಸಿ, ಮಂದ  ಉರಿಯಲ್ಲಿ ಕೈಯ್ನಾಡಿಸುತ್ತಾಇರಬೇಕು.  ಈ ಮಿಶ್ರಣ ಸ್ವಲ್ಪಗಟ್ಟಿಯಾಗಿ,

ಸ್ವಲ್ಪ ಪಾರದರ್ಶಕವಾದಾಗ ಎರಡು ಚಮಚ ತುಪ್ಪ ಸೇರಿಸಿ ಮಗುಚಬೇಕು.  ಕೊನೆಯಲ್ಲಿ ನಿಮಗಿಷ್ಟದ (ಕೇಸರಿ, ಹಳದಿ, ಹಸಿರು) ಫ‌ುಡ್‌ ಕಲರ್‌ ಸೇರಿಸಬೇಕು. ಮಿಶ್ರಣ ಬಾಣಲೆ ಬಿಟ್ಟಾಗ, ಇಟ್ಟುಕೊಂಡಿರುವುದರಲ್ಲಿ ಅರ್ಧದಷ್ಟು ಡ್ರೈಫ‌ೂ›ಟ್ಸ್‌ ಸೇರಿಸಿ, ಚೆನ್ನಾಗಿ ಕಲಸಿ, ತುಪ್ಪ ಸವರಿದ ಪಾತ್ರೆಗೆ ಸುರಿದು, ಅದರ ಮೇಲೆ ಉಳಿದ ಡ್ರೈಫ‌ೂಟ್ಸ್‌ ಉದುರಿಸಬೇಕು. ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು, ಬೇಕಾದ ಆಕಾರಕ್ಕೆ ಕತ್ತರಿಸಿದರೆ, ರುಚಿಯಾದ ಕರಾಚಿ ಹಲ್ವ ಸವಿಯಲು ತಯಾರು.

ದಿಢೀರ್‌ ಚಕ್ಕುಲಿ 
ಬೇಕಾಗುವ ಪದಾರ್ಥಗಳು:
ಉದ್ದಿನಬೇಳೆ- ಒಂದು ಕಪ್‌, ಕಡಲೆ ಬೇಳೆ- ಒಂದು ಕಪ್‌, ತುಪ್ಪ ಅಥವಾ ಬೆಣ್ಣೆ- ಒಂದು ಚಮಚ, ಜೀರಿಗೆ- ಒಂದು ಚಮಚ, ಓಮಕಾಳು- ಅರ್ಧ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಅಚ್ಚಖಾರದ ಪುಡಿ- ಒಂದು ಚಮಚ, ಅಕ್ಕಿ ಹಿಟ್ಟು- ಮೂರು ಕಪ್‌

ಮಾಡುವ ವಿಧಾನ: ಉದ್ದಿನಬೇಳೆ, ಕಡಲೆಬೇಳೆಯನ್ನು ಬೇರೆಬೇರೆಯಾಗಿ ಅರ್ಧ ಗಂಟೆ ನೆನೆಸಿ, ಕುಕ್ಕರ್‌ನಲ್ಲಿ ಮೂರು ವಿಷಲ್‌ ಕೂಗುವವರೆಗೆ ಬೇಯಿಸಿಕೊಳ್ಳಬೇಕು. ಬೆಂದ ಬೇಳೆ ತಣ್ಣಗಾದ ಮೇಲೆ ನೀರು ಹಾಕದೆ ರುಬ್ಬಿಕೊಂಡು, ರುಬ್ಬಿದ ಮಿಶ್ರಣಕ್ಕೆ ಉಳಿದ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಕಲಸಿ, ಹಿಡಿದಷ್ಟು ಅಕ್ಕಿಹಿಟ್ಟು ಸೇರಿಸಿ, ಕಲಸಿ, ಚೆನ್ನಾಗಿ ನಾದಿ, ಚಕ್ಕುಲಿ ಒರಳಿನಲ್ಲಿ ಹಾಕಿ, ಚಕ್ಕುಲಿ ಆಕಾರಕ್ಕೆ ಒತ್ತಿ, ಕಾಯ್ದ ಎಣ್ಣೆಯಲ್ಲಿ ಕರಿದರೆ, ಕರುಂ- ಕುರುಂ ಚಕ್ಕುಲಿ ಸವಿಯಲು ಸಿದ್ಧ

ಶೇಂಗಾ ಚಿತ್ರಾನ್ನ
ಬೇಕಾದ ಪದಾರ್ಥಗಳು:
ಎಣ್ಣೆ- ಎರಡು ಚಮಚ, ಸಾಸಿವೆ- ಒಂದು ಚಮಚ, ಕರಿಬೇವು- ಮೂರ್ನಾಲ್ಕು ಎಸಳು, ಶೇಂಗಾ- ಎರಡು ಚಮಚ, ಬೇಯಿಸಿದ ಅನ್ನ- ಒಂದು ಸಣ್ಣ ಬಟ್ಟಲು, ಉಪ್ಪು- ರುಚಿಗೆ ತಕ್ಕಷ್ಟು

ಮಸಾಲೆ ಪದಾರ್ಥಗಳು: ಎಣ್ಣೆ- ಒಂದು ಚಮಚ, ಹುರಿದ ಶೇಂಗಾ- ಎರಡು ಚಮಚ, ಉದ್ದಿನಬೇಳೆ- ಒಂದು ಚಮಚ, ಕಡಲೆಬೇಳೆ- ಒಂದು ಚಮಚ, ಜೀರಿಗೆ- ಅರ್ಧ ಚಮಚ, ಎಳ್ಳು- ಒಂದು ಚಮಚ, ಒಣಮೆಣಸು- ನಾಲ್ಕು/ ಐದು, ಒಣಕೊಬ್ಬರಿ ತುರಿ- ಎರಡು ಚಮಚ, ಇವೆಲ್ಲವನ್ನೂ ಹುರಿದು, ಪುಡಿ ಮಾಡಿಟ್ಟುಕೊಳ್ಳಬೇಕು.

ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ, ಸಾಸಿವೆ, ಕರಿಬೇವು, ಶೇಂಗಾ ಹಾಕಿ ಹುರಿದು, ಅದಕ್ಕೆ ಅನ್ನ, ಮೊದಲೇ ತಯಾರಿಸಿದ ಮಸಾಲೆಪುಡಿ ಹಾಗೂ ಉಪ್ಪು ಸೇರಿಸಿ, ಕಲಸಿದರೆ, ಅದ್ಭುತ ರುಚಿಯ, ಶೇಂಗಾ ಚಿತ್ರಾನ್ನ ತಯಾರು.

* ಸುಮಾ ರವಿಕಿರಣ್‌

ಟಾಪ್ ನ್ಯೂಸ್

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.