ಮಸ್ಕರಾ ಹಚ್ಚುವಾಗ ಬಾಯಿ ತೆರೆಯುತ್ತೀರೇಕೆ?
Team Udayavani, Apr 25, 2018, 7:30 AM IST
ಹೆಣ್ಣು ಅಲಂಕಾರಕ್ಕೆಂದು ಕನ್ನಡಿ ಮುಂದೆ ನಿಂತಾಗ ನೂರಾರು ಸಲ ಕಣ್ಣು ಪಿಳಿಗುಟ್ಟಿಸುತ್ತಾಳೆ. ಪ್ರತಿಸಲ ಪಿಳಿ ಪಿಳಿ ಮುಗಿದ ಮೇಲೂ ತನ್ನ ಅಂದಚೆಂದ ಮತ್ತಷ್ಟು ಇಮ್ಮಡಿ ಆಯಿತೇ ಎಂಬ ಪುಟ್ಟ ಆಸೆಯೊಂದು ಆಕೆಯೊಳಗೆ ಪುಟಿಯುತ್ತಲೇ ಇರುತ್ತೆ. ಆದರೆ, ಮಸ್ಕರಾ ಅಥವಾ ಕಾಜಲ್ ಹಚ್ಚಿಕೊಳ್ಳುವಾಗ ಆಕೆ ಯಾವತ್ತೂ ಕಣ್ಣು ಪಿಳಿಗುಟ್ಟಿಸುವುದೇ ಇಲ್ಲ; ತೆರೆದ ಬಾಯಿಯನ್ನೂ ಆಕೆ ಮುಚ್ಚುವುದಿಲ್ಲ.
ಅಲ್ವಾ? ಈ ಅನುಭವ ನಿಮಗೂ ಆಗಿರುತ್ತೆ. ಕಾಡಿಗೆ ಹಚ್ಚುವಾಗ ಕಣ್ಮುಚ್ಚಿ ಬಿಟ್ಟರೆ, ಅಲಂಕಾರದ ಕತೆ ಮುಗಿದಂತೆ. ಕಣ್ಣೊಳಗೆ ಕಾಡಿಗೆ ಸೇರಿಬಿಡುತ್ತೆ ಅನ್ನೋ šಭಯ ಇರುವ ಕಾರಣದಿಂದಲೂ ರೆಪ್ಪೆಗಳನ್ನು ಮುಚ್ಚಲು ಹೋಗುವುದಿಲ್ಲ. ರೆಪ್ಪೆಗಳಿಗೆ ಕಾಡಿಗೆ ಚೆನ್ನಾಗಿ ಅಂಟಿಕೊಳ್ಳಲಿಯೆಂಬ ಕಾಳಜಿಯೂ ಅದರ ಹಿಂದೆ ಇದೆ ಎನ್ನುವುದು ಸಾಮಾನ್ಯ ತಿಳಿವಳಿಕೆ. ಆದರೆ, ಈ ಅಲಂಕಾರಕ್ಕೆ ವಿಜ್ಞಾನದ ಒಂದು ವ್ಯಾಖ್ಯಾನವೂ ಜತೆಯಾಗುತ್ತದೆ ಎಂಬುದು ನಿಮಗೆ ಗೊತ್ತೇ?
ಸಾಮಾನ್ಯವಾಗಿ ನಾವು ಬಾಯಿ ಮುಚ್ಚುವುದು, ತೆರೆಯುವ ಪ್ರಕ್ರಿಯೆಗೆ “ಲ್ಯಾಟೆರಲ್ ಟೆರಿಗಾಯ್ಡ’ ಎಂದು ಹೆಸರು. ಇದನ್ನು ನಿಯಂತ್ರಿಸುವ ನರವ್ಯೂಹವೇ “ಟ್ರಿಗೆಮಿನಲ್’. ಪಂಚೇಂದ್ರಿಯಗಳಿಗೆ ಸಂವೇದನೆಯನ್ನು ತುಂಬುವ ನರವ್ಯೂಹವಿದು. ಕೈತುತ್ತು ಬಾಯಿ ಬಳಿ ಬಂದಾಗ, ಬಾಯಿ ತೆರೆಯುವ ಕ್ರಿಯೆ, ಯಾವುದಾದರೂ ವಸ್ತು ಕಣ್ಣಿಗೆ ಅಪಾಯ ತಂದೊಡ್ಡುವಾಗ, ತಕ್ಷಣ ಕಣ್ಮುಚ್ಚುವ ಕ್ರಿಯೆ… ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ “ಟ್ರಿಗೆಮಿನಲ್ ನರವ್ಯೂಹ’ ಎಚ್ಚರ ವಹಿಸುವ ಕೆಲಸ ಮಾಡುತ್ತದೆ. ಈ ಟ್ರಿಗೆಮಿನಲ್ ನರವ್ಯೂಹಕ್ಕೆ ಹೊಂದಿಕೊಂಡಂತೆ ಇರುವುದು ಅಕ್ಯುಲೋಮೊಟರ್ ಎಂಬ ನರಕೋಶ. ಇದು ಕಣ್ಣಿನ ರೆಪ್ಪೆಗಳ ಬಳಿಯಿಂದ ಹಾದು ಹೋಗಿ, ಮೆದುಳಿನ ಕೋಶಗಳನ್ನು ತಲುಪುವಂಥ ನರ.
ನಾವು ಕಾಡಿಗೆ ಹಚ್ಚಿಕೊಳ್ಳುವಾಗ ರೆಪ್ಪೆ ಮೇಲೆ ಬೆರಳಿಡುತ್ತೇವೆ. ಆಗ ಅಕ್ಯುಲೋಮೊಟರ್ ನರದ ಮೇಲೆ ಒತ್ತಡ ಬೀಳುತ್ತೆ. ಅದರ ಸಂವೇದನೆಗಳು ಟ್ರಿಗೆಮಿನಲ್ ನರವ್ಯೂಹವನ್ನು ಎಚ್ಚರಿಸುತ್ತದೆ. ಆಗ ತನ್ನಿಂತಾನೇ ಬಾಯಿಯನ್ನೂ ನಾವು ತೆರೆಯುತ್ತೇವೆ. ಕಣ್ಣಿನ ನರವ್ಯವಸ್ಥೆಯನ್ನು ವಿಸ್ತರಿಸುವ ಕಾರಣದಿಂದ, ರೆಪ್ಪೆಗಳನ್ನೂ ನಮ್ಮಿಂದ ಮುಚ್ಚಲು ಸಾಧ್ಯವಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್