ಕೆನ್ನೆ ಮೇಲೆ ಮಲ್ಲಿಗೆ


Team Udayavani, May 23, 2018, 6:00 AM IST

2.jpg

ಹೆಣ್ಣಿನ ವರ್ಣನೆಯ ವಿಷಯಕ್ಕೆ ಬಂದಾಗೆಲ್ಲ, ಆಕೆಯ ಕೆನ್ನೆಯನ್ನು ಹಾಲಿಗೆ ಹೋಲಿಸುವುದುಂಟು. ಹಾಲ್ಗೆನ್ನೆಯ ಹುಡುಗಿ ಅಂತ ಕೇಳುವುದಕ್ಕೇನೋ ಚೆನ್ನಾಗಿದೆ. ಆದರೆ, ಚರ್ಮವನ್ನು ನಿಜಕ್ಕೂ ಹಾಲಿನಷ್ಟು ಬಿಳಿಯಾಗಿ, ನುಣುಪಾಗಿ ಇಡಲು ಸಾಧ್ಯವಾ, ಒಣ ಚರ್ಮ, ಮೊಡವೆ ಕಲೆ ಇತ್ಯಾದಿ ಸಮಸ್ಯೆಗಳು ಚರ್ಮದ ಕಾಂತಿಯನ್ನು ಹಾಳು ಮಾಡೋದಿಲ್ಲವಾ? ಅಂತ ನೀವು ಕೇಳಬಹುದು. ಆ ಸಮಸ್ಯೆಗಳಿಗೆ ಕೆಲವು ಸರಳ ಪರಿಹಾರಗಳು ಇಲ್ಲಿವೆ.

1.    ನಿಯಮಿತ ಆಹಾರ ಸೇವನೆ
ನೀವು ಏನು ತಿನ್ನುತ್ತೀರಿ ಮತ್ತು ಎಷ್ಟು ತಿನ್ನುತ್ತೀರಿ ಅನ್ನೋದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಿನಕ್ಕೆ ನಾಲ್ಕು ಬಾರಿ ಹಿತಮಿತವಾಗಿ, ಆರೋಗ್ಯಯುತ ಆಹಾರ ಸೇವಿಸಿ. ಹಣ್ಣು-ತರಕಾರಿ ಹಾಗೂ ಪ್ರೋಟೀನ್‌ಯುಕ್ತ ಆಹಾರ ನಿಮ್ಮ ಡಯಟ್‌ನಲ್ಲಿರಲಿ

2.      ವಿಟಮಿನ್‌ ಸಿ, ಇ
ಒಣ ಚರ್ಮ, ತುಟಿ ಒಡೆಯುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡರೆ ದೇಹಕ್ಕೆ ಸಿ, ಇ ವಿಟಮಿನ್‌ ಅಗತ್ಯವಿದೆ ಎಂದರ್ಥ. ಹಸಿರು ಸೊಪ್ಪು, ಹಸಿ ತರಕಾರಿ, ಕಿತ್ತಳೆ, ಮೂಸಂಬಿಯಂಥ ಸಿಟ್ರಿಕ್‌ ಅಂಶವಿರುವ ಹಣ್ಣು ಸೇವಿಸಿ.

3.  ನಗ್‌ನಗ್ತಾ ಇರಿ
ಮುದ್ದು ಮುಖ, ನುಣುಪು ಕೆನ್ನೆ ನಿಮ್ಮದಾಗಬೇಕಾದ್ರೆ, ಕೋಪ ಮತ್ತು ಒತ್ತಡಕ್ಕೆ ಗುಡ್‌ಬೈ ಹೇಳಬೇಕು. ಯೋಗ, ಧ್ಯಾನ, ಪ್ರಾಣಾಯಾಮದ ಮೂಲಕ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಿ. ಕನಿಷ್ಠ 7-8 ಗಂಟೆ ನಿದ್ದೆ ಮಾಡುವುದೂ ಕೂಡ ಅಷ್ಟೇ ಮುಖ್ಯ.

4.    ಸðಬ್‌ ಮಾಡಿ
ಸತ್ತ ಚರ್ಮವು ಕೆನ್ನೆಯ ಮೇಲಿನ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿ ಮುಖ ಕಳಾಹೀನವಾಗಿ ಕಾಣುವಂತೆ ಮಾಡುತ್ತದೆ. ಅದನ್ನು ತಡೆಯಲು ಪ್ರತಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಮುಖವನ್ನು ಮೃದುವಾಗಿ ಸðಬ್‌ ಮಾಡಿ ತೊಳೆಯಿರಿ.

5.    ಮಾಯಿಶ್ಚರೈಸರ್‌ ಹಚ್ಚಿ
ಬೆಳಗ್ಗೆ-ಸಂಜೆ ಮುಖ ತೊಳೆದ ನಂತರ ತಪ್ಪದೇ ಮಾಯಿಶ್ಚರೈಸರ್‌ ಹಚ್ಚಿ, ಚರ್ಮದ ತೇವ ಕಾಪಾಡಿ. ಕೆನ್ನೆಯ ರಂಗು ಹೆಚ್ಚಲು ಅಲೊವೆರಾ, ಅವಕಾಡೊ ಮಾಯcರೈಸರ್‌ ಉತ್ತಮ.

6.    ಜಾಸ್ತಿ ನೀರು ಕುಡೀರಿ
ನೀವು ಜಾಸ್ತಿ ನೀರು ಕುಡಿದಷ್ಟೂ ನಿಮ್ಮ ಚರ್ಮದ ಹೊಳಪು ಹೆಚ್ಚುತ್ತದೆ.

7.ನೈಸರ್ಗಿಕ ಬ್ಲೀಚ್‌ ಮಾಡಿ
ಕೆನ್ನೆ ನುಣುಪಾಗಬೇಕಿದ್ದರೆ ನೈಸರ್ಗಿಕವಾಗಿ ಸಿಗುವ ಟೊಮ್ಯಾಟೊ. ವಿನೇಗರ್‌ ಬಳಸಿ ಬ್ಲೀಚ್‌ ಮಾಡಿ. ಬ್ಲೀಚ್‌ನಿಂದ ಮೊಡವೆ ಕಲೆಯೂ ಮಾಯವಾಗುತ್ತದೆ.

8.    ಕೆನ್ನೆಗೆ ಮಸಾಜ್‌ ಮಾಡಿ
ಮುಖದ ಚರ್ಮಕ್ಕೆ ರಕ್ತ ಪೂರೈಕೆ ಚೆನ್ನಾಗಾದರೆ ಚರ್ಮ ಕಾಂತಿ ಪಡೆದುಕೊಳ್ಳುತ್ತದೆ. ವಾರದಲ್ಲಿ ಎರಡು-ಮೂರು ಬಾರಿ ಮುಖಕ್ಕೆ ಬಾದಾಮಿ ಎಣ್ಣೆ , ಲೋಳೆಸರ (ಅಲೊವೆರ) ಅಥವಾ ಫೇಶಿಯಲ್‌ ಕ್ರೀಂ ಬಳಸಿ ಮಸಾಜ್‌ ಮಾಡಿ.

9.ಫೇಸ್‌ಪ್ಯಾಕ್‌ ಬಳಸಿ
ಜೇನು, ಮೊಸರು, ಬಾದಾಮಿ, ಹಣ್ಣಿನ ತಿರುಳು, ಸೌತೆಕಾಯಿ, ಲಿಂಬೆರಸ.. ಇತ್ಯಾದಿ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಫೇಸ್‌ಪ್ಯಾಕ್‌ ಮಾಡಿ ಹಚ್ಚಿಕೊಂಡರೆ ಚರ್ಮಕ್ಕೆ ಕಾಂತಿ ಸಿಗುತ್ತದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.