ಕಿವಿಗೂ ಕ್ಲಿಪ್ಪು!


Team Udayavani, Jun 13, 2018, 6:00 AM IST

z-5.jpg

ಮದುವೆಗಳಲ್ಲಿ, ಶಾಲೆ- ಕಾಲೇಜುಗಳ ಎತ್ನಿಕ್‌ ಡೇ, ಕಾಲೇಜ್‌ ಡೇಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಮಿಂಚುವ ಹುಡುಗಿಯರಿಗೆ ಈ ಕಿವಿಯೋಲೆ ಅಚ್ಚುಮೆಚ್ಚಿನದ್ದು. ಆನ್‌ಲೈನ್‌ನಲ್ಲಿಯೂ ಲಭ್ಯ ಇರುವ ಕಾರಣ, ಪ್ರೀತಿಪಾತ್ರರಿಗೆ ಇಯರ್‌ ಕ್ಲಿಪ್‌ಗ್ಳನ್ನು ಉಡುಗೊರೆಯಾಗಿಯೂ ನೀಡಬಹುದು…

ಮಾರುಕಟ್ಟೆಯಲ್ಲಿ ಲಭ್ಯವಿರುವ ಬಗೆಬಗೆಯ ವಿನ್ಯಾಸದ ಕಿವಿಯೋಲೆಗಳನ್ನು ಕಂಡಾಗಲೆಲ್ಲ, ಇದನ್ನು ಕೊಂಡುಕೊಳ್ಳಬೇಕು, ಅದನ್ನೂ ಕೊಂಡುಕೊಳ್ಳಬೇಕು ಎಂಬ ಆಸೆ ಹುಟ್ಟುತ್ತೆ. ಆದರೆ ಥರಥರದ ಕಿವಿಯೋಲೆಗಳನ್ನು ತೊಡಬೇಕೆಂಬ ಆಸೆಯಿಂದ, ಅದೆಷ್ಟು ಬಾರಿ ಕಿವಿ ಚುಚ್ಚಿಸಿಕೊಳ್ಳೋಕೆ ಸಾಧ್ಯ ಹೇಳಿ? ಕಿವಿ ಚುಚ್ಚಿಸಿಕೊಳ್ಳಲು ಅಂಜುವವರು ಅಥವಾ ಇಷ್ಟ ಇಲ್ಲದವರು ಏನು ಮಾಡಬೇಕು ಎಂಬ ಯೋಚನೆಯೇ ಬೇಡ. ಅವರಿಗಾಗಿಯೇ ಈಗ ಮಾರುಕಟ್ಟೆಗೆ ಲಗ್ಗೆ ಹಾಕಿವೆ ಇಯರ್‌ ಕ್ಲಿಪ್‌ಗ್ಳು. 

ಇಯರ್‌ಗೂ ಬಂತೇ ಕ್ಲಿಪ್‌?
ಹೇರ್‌ ಕ್ಲಿಪ್‌ ಬಗ್ಗೆ ಗೊತ್ತು. ಏನಿದು ಇಯರ್‌ ಕ್ಲಿಪ್‌ ಅಂತೀರಾ? ಹುಕ್‌ನಂತೆ ಕಾಣುವ ಈ ಕ್ಲಿಪ್‌ಗ್ಳನ್ನು ಕಿವಿಯ ಮೇಲ್ಭಾಗಕ್ಕೆ ಒತ್ತಿ ಹಾಕಿಕೊಂಡರಾಯಿತು. ಪ್ರಸ್‌ ಟೈಪ್‌ ಮೂಗುತಿ ಇದ್ದ ಹಾಗೆ, ಇದು ಪ್ರಸ್‌ ಟೈಪ್‌ ಕಿವಿಯೋಲೆ! ಹಾಗಾಗಿ ಕಿವಿ ಚುಚ್ಚಿಸಿಕೊಳ್ಳುವ ಬದಲಿಗೆ ಇಯರ್‌ ಕ್ಲಿಪ್‌ ಧರಿಸಿದರೆ ಆಗೋಯ್ತು, ಸಿಂಪಲ…! 

ಇದೇನು ಹೊಸದಲ್ಲ…
ಇಯರ್‌ ಕ್ಲಿಪ್‌ಗ್ಳು ಲೇಟೆಸ್ಟ್‌ ಫ್ಯಾಶನ್‌ ಅನಿಸಿಕೊಂಡರೂ, ಅದಷ್ಟೇ ನಿಜವಲ್ಲ. ಅನಾದಿ ಕಾಲದಿಂದಲೂ ಹೆಣ್ಣು ಮಕ್ಕಳು ಇಯರ್‌ ಕ್ಲಿಪ್‌ಗ್ಳನ್ನು ತೊಡುತ್ತಿ¨ªಾರೆ. ಅಜ್ಜಿ, ಅತ್ತೆ, ಅಮ್ಮಂದಿರು ತೊಡುತ್ತಿದ್ದ ಕೊಪ್ಪು, ಈಗ ಮೇಕ್‌ಓವರ್‌ ಪಡೆದು ಇಯರ್‌ ಕ್ಲಿಪ್‌ ಆಗಿದೆ. ವಜ್ರ, ಚಿನ್ನ, ಬೆಳ್ಳಿ, ಮುತ್ತು, ಹವಳ, ರತ್ನಗಳಿಗೆ ಸೀಮಿತವಾಗದೆ, ಪ್ಲಾಸ್ಟಿಕ್‌, ಗಾಜು, ತಾಮ್ರ, ಕಂಚು ಹಾಗೂ ಮರದ ತುಂಡಿನಿಂದ ತಯಾರಾದ ಇಯರ್‌ ಕ್ಲಿಪ್‌ಗ್ಳೂ ಈಗ ಲಭ್ಯ. 

ವಿಧ ವಿಧದ ವಿನ್ಯಾಸ
ಹೂವು, ಸೂರ್ಯ, ಚಂದ್ರ, ನಕ್ಷತ್ರದ ಆಕೃತಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇಯರ್‌ ಕ್ಲಿಪ್‌ ಇದೀಗ ಅಕ್ಷರಗಳು ಮತ್ತು ಪದಗಳ ಆಕೃತಿಯಲ್ಲೂ ಸಿಗುತ್ತಿವೆ. ನವಿಲು ಗರಿ, ಬುರುಡೆ, ಘಂಟೆ, ಉರ್ದು ಲಿಪಿ, ಚೀನೀ ಅಕ್ಷರಗಳು, ನಿಮ್ಮ ಹೆಸರು, ಪ್ರೀತಿ ಪಾತ್ರರ ಹೆಸರು, ಜನ್ಮ ದಿನಾಂಕ, ಶ್ರೀ, ಓಂ, ಸ್ವಸ್ತಿಕ, ಶಿಲುಬೆಯ ಆಕೃತಿ ಮುಂತಾದವುಗಳಿಂದ ಕೂಡಿದ ಇಯರ್‌ ಕ್ಲಿಪ್‌ಗ್ಳನ್ನು ತೊಟ್ಟು ಮಹಿಳೆಯರು ಮಿನುಗುತ್ತಿದ್ದಾರೆ. ಇಂಥದ್ದೇ ಅಕ್ಷರ ಅಥವಾ ಪದಗಳ ವಿನ್ಯಾಸದ ಇಯರ್‌ ಕ್ಲಿಪ್‌ ಬೇಕು ಎಂದರೆ, ಅದನ್ನೂ ಮಾಡಿಸಿಕೊಳ್ಳಬಹುದು. 

ಹುಡುಗಿಯರಿಗೆ ಅಚ್ಚುಮೆಚ್ಚು
ಮದುವೆಗಳಲ್ಲಿ, ಶಾಲೆ- ಕಾಲೇಜುಗಳ ಎತ್ನಿಕ್‌ ಡೇ, ಕಾಲೇಜ್‌ ಡೇಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಮಿಂಚುವ ಹುಡುಗಿಯರಿಗೆ ಈ ಆಭರಣ ಅಚ್ಚುಮೆಚ್ಚಿನದ್ದು. ಪರ್ಸನಲೈ… ಹಾಗೂ ಕಸ್ಟಮೈ… ಇಯರ್‌ ಕ್ಲಿಪ್‌ ಮಾಡಿಕೊಡುವ ಅಂಗಡಿ ಮತ್ತು ಆನ್‌ಲೈನ್‌ನಲ್ಲಿಯೂ ಲಭ್ಯ ಇರುವ ಕಾರಣ, ಪ್ರೀತಿಪಾತ್ರರಿಗೆ ಇದನ್ನು ಉಡುಗೊರೆಯಾಗಿಯೂ ನೀಡಬಹುದು.

ಇಯರ್‌ ಕ್ಲಿಪ್‌ಗ್ೂ, ಇಯರ್‌ ಕಫ್ಗೂ ಏನು ವ್ಯತ್ಯಾಸ?
 ಇಯರ್‌ ಕಫ್, ಕಿವಿಯಷ್ಟೇ ದೊಡ್ಡದಾಗಿದ್ದು, ಪೂರ್ತಿ ಕಿವಿಯನ್ನು ಮುಚ್ಚುತ್ತದೆ. ಆದರೆ, ಇಯರ್‌ ಕ್ಲಿಪ್‌, ಪೇಪರ್‌ ಕ್ಲಿಪ್‌ ನಂತೆ ಚಿಕ್ಕದಾಗಿದ್ದು, ಕಿವಿಯ ಮೇಲ್ಭಾಗದಲ್ಲಷ್ಟೇ ಕುಳಿತುಕೊಳ್ಳುತ್ತದೆ. ಗೆಜ್ಜೆಯಂಥ ಹ್ಯಾಂಗಿಂಗÕ… ಮತ್ತು ಟ್ಯಾಸೆಲ್ಸ… ಇರುವ ಇಯರ್‌ ಕ್ಲಿಪ್‌ ಸದ್ದು ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತದೆ. 

ಕ್ಯೂಟ್‌ ಡಿಸೈನ್‌ಗಳಲ್ಲಿ ಕ್ಲಿಪ್‌
ಮಗುವಿನ ಪಾದದ ಆಕೃತಿಯ, ಪೆಟ್‌ ನೇಮ್‌ ಇರುವ ಇಯರ್‌ ಕ್ಲಿಪ್‌, ಶ್ವಾನ ಪ್ರಿಯರಿಗೆ ನಾಯಿ ಆಕೃತಿಯ, ಬೆಕ್ಕನ್ನು ಇಷ್ಟ ಪಡುವವರಿಗೆ ಬೆಕ್ಕಿನ ಆಕೃತಿಯ ಇಯರ್‌ ಕ್ಲಿಪ್‌… ಹೀಗೆ ಎಣಿಸಲು ಸಾಧ್ಯವಿಲ್ಲದಷ್ಟು ಆಯ್ಕೆಗಳು ಲಭ್ಯ ಇರುವ ಕಾರಣ, ಉಟ್ಟ ಉಡುಪಿಗೆ ಹೋಲುವ ಇಯರ್‌ ಕ್ಲಿಪ್‌ ತೊಡಬಹುದು. ಇನ್ನೇಕೆ ತಡ? ನಿಮ್ಮ ಬಳಿ ಇರುವ ಸಾಂಪ್ರದಾಯಿಕ ಕೊಪ್ಪು, ಪಡೆಯಲಿ ಹೊಸ ಟ್ವಿÓr…! ನಿಮಗಿಷ್ಟದ ಚಿತ್ರ ವಿಚಿತ್ರ ಇಯರ್‌ ಕ್ಲಿಪ್‌ ತೊಟ್ಟು, ಸ್ಟೈಲ್‌ ಸ್ಟೇಟ್‌ಮೆಂಟ್‌ ಮಾಡಿ…

– ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.