ಪರಸ್ತ್ರೀ ವ್ಯಾಮೋಹಿ ಬಾಳೆಲ್ಲ ಪರಮ ಕಹಿ…


Team Udayavani, Jun 27, 2018, 6:00 AM IST

w-3.jpg

ಯಜಮಾನರಿಗೆ ಬಿಟ್ಟು ಬಿಡದ ಜ್ವರ; ಶ್ವಾಸಕೋಶದಲ್ಲಿ ಗಮನಾರ್ಹ ತೊಂದರೆ ಇದ್ದುದರಿಂದ ವೈದ್ಯಕೀಯ ತಪಾಸಣೆ ನಡೆದಿತ್ತು. ಆಸ್ಪತ್ರೆಯಲ್ಲೇ ಪತಿ ಕುಸಿದು ಬೀಳಲು ತಕ್ಷಣವೇ ಅಡ್ಮಿಟ್‌ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಪರೀಕ್ಷೆಗಳಲ್ಲಿ ಪತಿಗೆ ಹೆಚ್‌ಐವಿ ಸೋಂಕು ತಗುಲಿದ್ದು ಖಚಿತವಾಗಿ, ಪತ್ನಿಗೂ ರಕ್ತ ಪರೀಕ್ಷೆ ನಡೆಸುವುದು ವಾಡಿಕೆ.

  ಪ್ರತಿಮಾಗೂ ಹೆಚ್‌ಐವಿ ಸೋಂಕು ತಗುಲಿದೆ! ಅವರ ತುಟಿ ಅದುರತಿತ್ತು. ಕೈಕಾಲು ನಡುಗುತಿತ್ತು. ಮಾತು ಬಿಕ್ಕಳಿಸುತ್ತಿತ್ತು. ಪತಿಯ ಪರಸ್ತ್ರೀ ವ್ಯಾಮೋಹ ಮದುವೆಯಾದ ನಂತರ ತಿಳಿಯಿತು. ಅತ್ತೆಗೆ ಚಾಡಿ ಹೇಳುವಂತಿಲ್ಲ. ಮನೆಗೆ ದುಡ್ಡು ಕೊಡದಿದ್ದರೂ ಕಚೇರಿಯಲ್ಲಿ ಯಾವ ಹೆಂಗಸಿಗೆ ತೊಂದರೆಯಾದರೂ ಕೊಡುಗೈ ದಾನಿ. ಅತ್ತೆ ಮಗಳ ಜೊತೆ ಅತಿರೇಕದ ತುಂಟಾಟ. ಪರ ಹೆಂಗಸರ ನೋವಿಗೆ ಮೇಲುಸ್ತುವಾರಿ ಸಚಿವ. ಪ್ರತಿಮಾ ವಿರೋಧಿಸುತ್ತಿದ್ದರು. ಹೆಂಡತಿಗೆ ಗಂಡನನ್ನು ಶಂಕಿಸುವ ಚಟವಿದೆಯೆಂದು, ಮನೋವೈದ್ಯರಲ್ಲಿ ಮಾತ್ರೆ ಕೊಡಿಸಿದ್ದು, ಅದನ್ನು ಪ್ರತಿಮಾ ತಿಪ್ಪೆಗೆಸೆದಿದ್ದು, ಹುಚ್ಚಿ ಪಟ್ಟ ಕಟ್ಟಿದ್ದು; ನೆನಪುಗಳು ಕಣ್ಣೀರಾದವು.

  ಸಹ್ಯವಾದದ್ದು ಏನೂ ಇಲ್ಲ ಅನಿಸಿದ ಮೇಲೆ, ರಾತ್ರಿ ಅಸಹ್ಯವೇ. ಬೇರೆ ಯಾರ ಬಗ್ಗೆಯೂ ವ್ಯಾಮೋಹ/ ಸಂಪರ್ಕ ಇಲ್ಲ ಎಂದು ಸಾಬೀತು ಮಾಡಲು ಒತ್ತಾಯದ ಮಿಲನ. ಮನೆಯ- ಮಕ್ಕಳ ಅವಶ್ಯಕತೆಗಳಿಗೆ ಹಣ ಇಲ್ಲ. ಶಾಲೆಗೆ ಫೀಸು ಕಟ್ಟುತ್ತಿರಲಿಲ್ಲ. ಸಮಾಜಕ್ಕೆ ತೋರಿಸಲು ಸಂಸಾರ ಬೇಕು. ಕೊಟ್ಟಿದ್ದೇ ಆದರೂ ಎಂಥಾ ಆಸ್ತಿ ಕೊಟ್ಟರು? ಸಕ್ಕರೆ ಕಾಯಿಲೆ ಪಿತ್ರಾರ್ಜಿತ, ಏಡ್ಸ್‌ ಇವರಿಗೆ ಸ್ವಯಾರ್ಜಿತ, ನಾನು ದುರ್ದಾನ ಪಡೆದೆ ಎಂದು ಹೇಳಿ ಪ್ರತಿಮಾ ಸಮತೋಲನ ಕಳಕೊಂಡು ನಗಲು ಶುರುಮಾಡಿದರು. 

   ಪಕ್ಕದ ವಾರ್ಡಿನಲ್ಲಿ ಮಗನಿಗೆ ಸಮಾಧಾನ ಹೇಳುತ್ತಿದ್ದ ತಾಯಿ, ಗುಟ್ಟಿನಲ್ಲಿ ನನಗೆ ಹೇಳಿದರು: “ಮೇಡಂ, ಅವಳು ಸರಿ ಇರಲಿಲ್ಲ. ನಮಗೆ ಎಂಥಾ ದುರ್ಗತಿ ತಂದಳು ನೋಡಿ, ಯಾರ ಜೊತೆ ಸಂಪರ್ಕ ಇತ್ತೋ? ಪ್ರತೀ ರಾತ್ರಿ ಜಗಳವಾಡುತ್ತಿದ್ದಳಂತೆ. ಅವಮಾನದ ಮಡುವಿನಲ್ಲಿ ಪ್ರತಿಮಾ ಆರು ತಿಂಗಳಲ್ಲಿ ಚಿರಶಾಂತಿ ಹೊಂದಿದರು. ನನ್ನ ನೋವು, ಪುಸ್ತಕ ಮಾಡಿ ಮೇಡಂ, ಕೌಟುಂಬಿಕ ನೆಮ್ಮದಿಯ ಬಗ್ಗೆ ಜನರಿಗೆ ಗೌರವ ಬರಲಿ’ ಎನ್ನುತ್ತಿದ್ದರು. ಬೇರೆಯವರ ನೋವಿಗೆ ಮಾರುಕಟ್ಟೆ ಇರಬಹುದು, ಅರಿವು ಬರಬಹುದೇ?

  ಏಡ್ಸ್ ಕಾಯಿಲೆಯನ್ನು ಸುಲಭವಾಗಿ ತಡೆಗಟ್ಟಲು ನಿಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಿ. ಕಡ್ಡಾಯವಾಗಿ ಕಾಂಡೋಮ್‌ ಬಳಸಿ. ನಿಗದಿತವಾಗಿ ರಕ್ತಪರೀಕ್ಷೆ ಮಾಡಿಸಿಕೊಳ್ಳಿ. ಚಟಗಳಿಂದ ದೂರವಿರಿ. ಅಪರಿಚಿತರೊಂದಿಗೆ, ಮಿಲನ ಬೇಡ. ಕ್ಷೌರದ ಅಂಗಡಿಯಲ್ಲಿ ಹೊಸ ಬ್ಲೇಡ್‌ ಬಳಸಬೇಕು. ಆಸ್ಪತ್ರೆಗಳಲ್ಲಿ ಹೊಸ ಸೂಜಿ- ಸಿರಿಂಜನ್ನು ಪಡೆಯಿರಿ. ಸಿಗರೇಟಿನ ಚಟ ಇದ್ದು, ಹೆಚ್‌ಐವಿ ಸೋಂಕು ತಗುಲಿದರೆ, ಶ್ವಾಸಕೋಶ ಬೇಗ ದುರ್ಬಲವಾಗಿ, ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಸಂಗಾತಿಯಲ್ಲಿ ನಿಜಾಂಶವನ್ನು ಮುಚ್ಚಿಡಬೇಡಿ. ಸೋಂಕು ತಗುಲಿದ ಗರ್ಭಿಣಿಯರಿಂದ ಹುಟ್ಟುವ ಮಕ್ಕಳಿಗೆ, ಸೋಂಕು ವರ್ಗಾವಣೆ ಆಗಬಹುದು. ಮುಂಜಾಗ್ರತೆ ವಹಿಸಿ. ವೈದ್ಯರಲ್ಲಿ ಮಾರ್ಗದರ್ಶನ ಪಡೆಯಿರಿ. 

  (ವಿ.ಸೂ.: ಹೆಚ್‌ಐವಿ ಸೋಂಕು ತಗುಲಿದ ನಂತರ ಏಡ್ಸ್ ಬರಲು, window period ಇರುತ್ತದೆ. ವೈದ್ಯರನ್ನು ತಕ್ಷಣ ಸಂಪರ್ಕಿಸಿ.)

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.