ಪರಸ್ತ್ರೀ ವ್ಯಾಮೋಹಿ ಬಾಳೆಲ್ಲ ಪರಮ ಕಹಿ…


Team Udayavani, Jun 27, 2018, 6:00 AM IST

w-3.jpg

ಯಜಮಾನರಿಗೆ ಬಿಟ್ಟು ಬಿಡದ ಜ್ವರ; ಶ್ವಾಸಕೋಶದಲ್ಲಿ ಗಮನಾರ್ಹ ತೊಂದರೆ ಇದ್ದುದರಿಂದ ವೈದ್ಯಕೀಯ ತಪಾಸಣೆ ನಡೆದಿತ್ತು. ಆಸ್ಪತ್ರೆಯಲ್ಲೇ ಪತಿ ಕುಸಿದು ಬೀಳಲು ತಕ್ಷಣವೇ ಅಡ್ಮಿಟ್‌ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಪರೀಕ್ಷೆಗಳಲ್ಲಿ ಪತಿಗೆ ಹೆಚ್‌ಐವಿ ಸೋಂಕು ತಗುಲಿದ್ದು ಖಚಿತವಾಗಿ, ಪತ್ನಿಗೂ ರಕ್ತ ಪರೀಕ್ಷೆ ನಡೆಸುವುದು ವಾಡಿಕೆ.

  ಪ್ರತಿಮಾಗೂ ಹೆಚ್‌ಐವಿ ಸೋಂಕು ತಗುಲಿದೆ! ಅವರ ತುಟಿ ಅದುರತಿತ್ತು. ಕೈಕಾಲು ನಡುಗುತಿತ್ತು. ಮಾತು ಬಿಕ್ಕಳಿಸುತ್ತಿತ್ತು. ಪತಿಯ ಪರಸ್ತ್ರೀ ವ್ಯಾಮೋಹ ಮದುವೆಯಾದ ನಂತರ ತಿಳಿಯಿತು. ಅತ್ತೆಗೆ ಚಾಡಿ ಹೇಳುವಂತಿಲ್ಲ. ಮನೆಗೆ ದುಡ್ಡು ಕೊಡದಿದ್ದರೂ ಕಚೇರಿಯಲ್ಲಿ ಯಾವ ಹೆಂಗಸಿಗೆ ತೊಂದರೆಯಾದರೂ ಕೊಡುಗೈ ದಾನಿ. ಅತ್ತೆ ಮಗಳ ಜೊತೆ ಅತಿರೇಕದ ತುಂಟಾಟ. ಪರ ಹೆಂಗಸರ ನೋವಿಗೆ ಮೇಲುಸ್ತುವಾರಿ ಸಚಿವ. ಪ್ರತಿಮಾ ವಿರೋಧಿಸುತ್ತಿದ್ದರು. ಹೆಂಡತಿಗೆ ಗಂಡನನ್ನು ಶಂಕಿಸುವ ಚಟವಿದೆಯೆಂದು, ಮನೋವೈದ್ಯರಲ್ಲಿ ಮಾತ್ರೆ ಕೊಡಿಸಿದ್ದು, ಅದನ್ನು ಪ್ರತಿಮಾ ತಿಪ್ಪೆಗೆಸೆದಿದ್ದು, ಹುಚ್ಚಿ ಪಟ್ಟ ಕಟ್ಟಿದ್ದು; ನೆನಪುಗಳು ಕಣ್ಣೀರಾದವು.

  ಸಹ್ಯವಾದದ್ದು ಏನೂ ಇಲ್ಲ ಅನಿಸಿದ ಮೇಲೆ, ರಾತ್ರಿ ಅಸಹ್ಯವೇ. ಬೇರೆ ಯಾರ ಬಗ್ಗೆಯೂ ವ್ಯಾಮೋಹ/ ಸಂಪರ್ಕ ಇಲ್ಲ ಎಂದು ಸಾಬೀತು ಮಾಡಲು ಒತ್ತಾಯದ ಮಿಲನ. ಮನೆಯ- ಮಕ್ಕಳ ಅವಶ್ಯಕತೆಗಳಿಗೆ ಹಣ ಇಲ್ಲ. ಶಾಲೆಗೆ ಫೀಸು ಕಟ್ಟುತ್ತಿರಲಿಲ್ಲ. ಸಮಾಜಕ್ಕೆ ತೋರಿಸಲು ಸಂಸಾರ ಬೇಕು. ಕೊಟ್ಟಿದ್ದೇ ಆದರೂ ಎಂಥಾ ಆಸ್ತಿ ಕೊಟ್ಟರು? ಸಕ್ಕರೆ ಕಾಯಿಲೆ ಪಿತ್ರಾರ್ಜಿತ, ಏಡ್ಸ್‌ ಇವರಿಗೆ ಸ್ವಯಾರ್ಜಿತ, ನಾನು ದುರ್ದಾನ ಪಡೆದೆ ಎಂದು ಹೇಳಿ ಪ್ರತಿಮಾ ಸಮತೋಲನ ಕಳಕೊಂಡು ನಗಲು ಶುರುಮಾಡಿದರು. 

   ಪಕ್ಕದ ವಾರ್ಡಿನಲ್ಲಿ ಮಗನಿಗೆ ಸಮಾಧಾನ ಹೇಳುತ್ತಿದ್ದ ತಾಯಿ, ಗುಟ್ಟಿನಲ್ಲಿ ನನಗೆ ಹೇಳಿದರು: “ಮೇಡಂ, ಅವಳು ಸರಿ ಇರಲಿಲ್ಲ. ನಮಗೆ ಎಂಥಾ ದುರ್ಗತಿ ತಂದಳು ನೋಡಿ, ಯಾರ ಜೊತೆ ಸಂಪರ್ಕ ಇತ್ತೋ? ಪ್ರತೀ ರಾತ್ರಿ ಜಗಳವಾಡುತ್ತಿದ್ದಳಂತೆ. ಅವಮಾನದ ಮಡುವಿನಲ್ಲಿ ಪ್ರತಿಮಾ ಆರು ತಿಂಗಳಲ್ಲಿ ಚಿರಶಾಂತಿ ಹೊಂದಿದರು. ನನ್ನ ನೋವು, ಪುಸ್ತಕ ಮಾಡಿ ಮೇಡಂ, ಕೌಟುಂಬಿಕ ನೆಮ್ಮದಿಯ ಬಗ್ಗೆ ಜನರಿಗೆ ಗೌರವ ಬರಲಿ’ ಎನ್ನುತ್ತಿದ್ದರು. ಬೇರೆಯವರ ನೋವಿಗೆ ಮಾರುಕಟ್ಟೆ ಇರಬಹುದು, ಅರಿವು ಬರಬಹುದೇ?

  ಏಡ್ಸ್ ಕಾಯಿಲೆಯನ್ನು ಸುಲಭವಾಗಿ ತಡೆಗಟ್ಟಲು ನಿಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಿ. ಕಡ್ಡಾಯವಾಗಿ ಕಾಂಡೋಮ್‌ ಬಳಸಿ. ನಿಗದಿತವಾಗಿ ರಕ್ತಪರೀಕ್ಷೆ ಮಾಡಿಸಿಕೊಳ್ಳಿ. ಚಟಗಳಿಂದ ದೂರವಿರಿ. ಅಪರಿಚಿತರೊಂದಿಗೆ, ಮಿಲನ ಬೇಡ. ಕ್ಷೌರದ ಅಂಗಡಿಯಲ್ಲಿ ಹೊಸ ಬ್ಲೇಡ್‌ ಬಳಸಬೇಕು. ಆಸ್ಪತ್ರೆಗಳಲ್ಲಿ ಹೊಸ ಸೂಜಿ- ಸಿರಿಂಜನ್ನು ಪಡೆಯಿರಿ. ಸಿಗರೇಟಿನ ಚಟ ಇದ್ದು, ಹೆಚ್‌ಐವಿ ಸೋಂಕು ತಗುಲಿದರೆ, ಶ್ವಾಸಕೋಶ ಬೇಗ ದುರ್ಬಲವಾಗಿ, ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಸಂಗಾತಿಯಲ್ಲಿ ನಿಜಾಂಶವನ್ನು ಮುಚ್ಚಿಡಬೇಡಿ. ಸೋಂಕು ತಗುಲಿದ ಗರ್ಭಿಣಿಯರಿಂದ ಹುಟ್ಟುವ ಮಕ್ಕಳಿಗೆ, ಸೋಂಕು ವರ್ಗಾವಣೆ ಆಗಬಹುದು. ಮುಂಜಾಗ್ರತೆ ವಹಿಸಿ. ವೈದ್ಯರಲ್ಲಿ ಮಾರ್ಗದರ್ಶನ ಪಡೆಯಿರಿ. 

  (ವಿ.ಸೂ.: ಹೆಚ್‌ಐವಿ ಸೋಂಕು ತಗುಲಿದ ನಂತರ ಏಡ್ಸ್ ಬರಲು, window period ಇರುತ್ತದೆ. ವೈದ್ಯರನ್ನು ತಕ್ಷಣ ಸಂಪರ್ಕಿಸಿ.)

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.