ಅಮ್ಮಾ… ಅಪ್ಪನನ್ನು ಕ್ಷಮಿಸುಬಿಡು…


Team Udayavani, Jul 11, 2018, 6:00 AM IST

c-3.jpg

ಹತ್ತೂಂಭತ್ತು ವರ್ಷದ ರಾಧಾಗೆ ತಂದೆ ತೀರಿಕೊಂಡ ಸಮಯದಿಂದ ಕಣ್ಣುನೋವು. ನೇತ್ರ ಪರೀಕ್ಷೆ ಮಾಡಿಸಿದಾಗ ದೃಷ್ಟಿ ದೋಷ ಕಂಡುಬರಲಿಲ್ಲ. ಮುಂದೆ ನರರೋಗ ವೈದ್ಯರು ತಪಾಸಣೆ ನಡೆಸಿದಾಗ, ಯಾವ ವೈದ್ಯಕೀಯ ಸಮಸ್ಯೆಯೂ ಇರಲಿಲ್ಲವಾದ್ದರಿಂದ “ಕೌನ್ಸೆಲಿಂಗ್‌ ಮಾಡಿಸಿ’ ಎಂದು ನನ್ನ ಬಳಿ ಕಳಿಸಿದ್ದರು.

  ಕುಡಿತದ ಚಟವೇ ತಂದೆಯನ್ನು ಬಲಿತೆಗೆದುಕೊಂಡಿತ್ತು. ಸ್ನೇಹಿತರು ಇರಲಿಲ್ಲ. ಮನೆಯಲ್ಲೂ ಮಾತಿಲ್ಲ. ಹೆಂಡವೇ ಪರಮಾಪ್ತ. ಸಂಬಳ ತಂದುಕೊಡುತ್ತಿದ್ದರೇ ವಿನಹ ಹೆಂಡತಿ ಮಕ್ಕಳ ಜೊತೆ ಭಾವನಾತ್ಮಕ ಸಂಬಂಧವಿರಲಿಲ್ಲ. ಖುರ್ಚಿಯಲ್ಲಿ ಕುಳಿತು ಸೂರನ್ನು ದಿಟ್ಟಿಸಿನೋಡುತ್ತಿದ್ದರು. ಒಂದು ದಿನ ಏಕಾಏಕಿ ಆರೋಗ್ಯ ಕೈಕೊಟ್ಟಿದೆ. ಆಸ್ಪತ್ರೆಗೆ ಸೇರಿಸಿದರೂ ಉಳಿಸಿಕೊಳ್ಳಲಾಗಲಿಲ್ಲ.

   ಮಣ್ಣು ಮಾಡಿದ ಕೆಲವೇ ದಿನಗಳಲ್ಲಿ, ತಾಯಿಯ ಅಣ್ಣನ ಮನೆಯ ಕೆಳಗೇ ಮನೆ ಬದಲಿಸಿದ್ದಾರೆ. ಬಂಧು-ಬಳಗವೆಲ್ಲಾ ಅಮ್ಮನಿಗೆ ಸಾಂತ್ವನ ಹೇಳಿದರು. ಹೇಳಬೇಕಾದ್ದೇ. ಅಮ್ಮನೇ ಸಂಸಾರ ನಡೆಸಿದ್ದು. ಆದರೆ, ಸಾವಿನ ನಂತರ ಬಂಧುವರ್ಗ ಮತ್ತು ಅಮ್ಮನೂ ಸೇರಿ ಸತ್ತಂತೆ ಬದುಕಿದ್ದ ಅಪ್ಪನ ಬಗ್ಗೆ ಕೆಟ್ಟದಾಗಿ ಮಾತಾಡಿಕೊಳ್ಳುತ್ತಿದ್ದುದು ರಾಧಾಗೆ ಇಷ್ಟವಾಗಲಿಲ್ಲ. ಅಪ್ಪನ ಜೊತೆ ಪಟ್ಟಿದ್ದ ಕಷ್ಟದ ಬಗ್ಗೆ ಅಮ್ಮ, ರಾಧಾಳ ಬಳಿಯೂ ಮಾತಾಡುತ್ತಿದ್ದರು. ಇದೆಲ್ಲ ಆಕೆಗೆ ಸಹ್ಯವೆನಿಸಲಿಲ್ಲ. ರಾಧಾಗೆ ತೀವ್ರ ನೋವಾಗಿದೆ. ಆದರೆ, “ಅಪ್ಪನನ್ನು ಕ್ಷಮಿಸು’ ಎಂದು ಅಮ್ಮನಿಗೆ ಹೇಗೆ ತಿಳಿಸುವುದು? ತಿಳಿಸದ ಮಾತುಗಳು, ಮಾನಸಿಕ ಕ್ಷೊಭೆಯಾಗಿ, ಶಾರೀರಕ ಬೇನೆಯಾಗಿ ಕಂಡುಬರುತ್ತವೆ.

  ಪ್ರಾಣ- ಪಕ್ಷಿ ಹಾರುವ ಮುನ್ನ ರಾಧಾಳೇ ತಂದೆಯ ಬಳಿ ಇದ್ದಿದ್ದು. ಅವರು ಕ್ಷಮಾಪಣೆ ಕೇಳಿದವರಂತೆ ಕಂಡಿದ್ದಾರೆ. ಮುಖದಲ್ಲಿ ಪಶ್ಚಾತ್ತಾಪ ಭಾವ. ಕಣ್ಣು ತಿರುಗಿಸಿ ಏನೋ ಹೇಳಲು ಪ್ರಯತ್ನಪಟ್ಟರಂತೆ. ಕೈ ಎತ್ತಿ ವಿದಾಯ ಹೇಳಿದ್ದಾರೆ. ಅವಳ ಹೃದಯ ಅವರನ್ನು ಆ ಕ್ಷಣದಲ್ಲೇ ಕ್ಷಮಿಸಿಬಿಟ್ಟಿದೆ. ತನ್ನನ್ನು ಈ ಪ್ರಪಂಚಕ್ಕೆ ತಂದುದ್ದಕ್ಕೆ ಗೌರವ ಮತ್ತು ಕೃತಜ್ಞತೆ ಸಲ್ಲಿಸಲು, ತಂದೆಯ ಹಣೆಯ ಮೇಲೆ ಕೈ ಇಟ್ಟಿದ್ದಾಳೆ. ಕೊಟ್ಟ ಪ್ರೀತಿಯನ್ನು ಅವರು ಸ್ವೀಕರಿಸಿ, ಮಂದಹಾಸ ಬೀರಿದ್ದಾರೆ. ಹತ್ತೂಂಭತ್ತು ವರ್ಷಗಳಲ್ಲಿ ಆಡಬೇಕಿದ್ದ ಮಾತುಗಳನ್ನು ಒಂದು ಕ್ಷಣದಲ್ಲಿ ತುಂಬಿಕೊಟ್ಟು, ಮಗಳಿಗೆ ತೃಪ್ತಿ ಕೊಟ್ಟು ಹೊರಟುಬಿಟ್ಟಿದ್ದಾರೆ. ಮಗಳು ಸಮಚಿತ್ತ- ಸ್ಥಿತಪ್ರಜ್ಞಳಾದದ್ದು ಯಾರಿಗೂ ಗೊತ್ತಾಗಲೇ ಇಲ್ಲ.

   ತಾಯಿ ಮತ್ತು ಸೋದರಮಾವ ತಂದೆಯ ಆತ್ಮ ರಾಧಾಗೆ ಮೆಟ್ಟಿಕೊಂಡಿರುವುದೇ ಅನಾರೋಗ್ಯಕ್ಕೆ ಕಾರಣ ಎಂದು ನಂಬಿದ್ದರು. ನಂಬಿಕೆಗಳ ಸರಿ- ತಪ್ಪು ಅವಲೋಕನಕ್ಕಿಂತ, ಅವುಗಳನ್ನು ಆಸಕ್ತಿಯಿಂದ ಆಲಿಸುತ್ತೇನೆ.  ಗೌರವ ಕೊಡುತ್ತೇನೆ. ಸಾವಿನ ಘಳಿಗೆಯಲ್ಲಿ ಮಗಳಿಗಾದ ಬೌದ್ಧಿಕ ವಿಕಾಸವನ್ನು ತಾಯಿಗೆ ನಾನು ವಿವರಿಸಿ ಹೇಳಿದೆ. ಪತಿ- ಪತ್ನಿಯಾಗಿ ಬಾಳದೇ ಎದ್ದು ನಡೆದ ಜೀವವನ್ನು ಕ್ಷಮಿಸಿಬಿಡಲು ತಾಯಿಯಲ್ಲಿ ಕೋರಿದೆ.    

ಮಕ್ಕಳಿಗೆ ತಂದೆ- ತಾಯಿ ಎರಡು ಕಣ್ಣು- ಒಂದು ದೃಷ್ಟಿ ಎಂಬುದು ಕಷ್ಟ ಸಹಿಷ್ಣುತಾಯಿಗೆ ಅರ್ಥವಾಯಿತು. ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡರು. ಇಬ್ಬರ ಅಳುವಿನ ನಡುವೆ, ಸುಖದ ಆಲಿಂಗನ. ನೋಡಲು ನಾನು ಪುಣ್ಯ ಮಾಡಿದ್ದೆ.

ಶುಭಾ ಮಧುಸೂದನ್‌

ಟಾಪ್ ನ್ಯೂಸ್

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.