ಮ್ಯಾಂಗೋ ಮೂಡ್‌


Team Udayavani, Jul 14, 2018, 3:17 PM IST

14-july-15.jpg

ಮ್ಯಾಂಗೋ ಜ್ಯೂಸ್‌

ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ ತುರಿ- 2 ಕಪ್‌, ಬೆಲ್ಲದ ತುರಿ- 2 ಕಪ್‌, ಏಲಕ್ಕಿ ಪುಡಿ- 1 ಚಮಚ, ಕಾಳುಮೆಣಸಿನ ಪುಡಿ- 1/2 ಚಮಚ, ಜಾಯಿಕಾಯಿ ಪುಡಿ- 1/4 ಚಮಚ, ಜೀರಿಗೆ ಪುಡಿ- 1 ಚಮಚ, ಉಪ್ಪು-1/2 ಚಮಚ.  
ಮಾಡುವ ವಿಧಾನ
ಮಾವಿನಕಾಯಿ ತುರಿಗೆ ಬೆಲ್ಲ, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಜಾಯಿಕಾಯಿ ಪುಡಿ ಸೇರಿಸಿ ಬೇಯಿಸಿ. ತಣಿದ ಮೇಲೆ, ಶೋಧಿಸಿ, ಏಲಕ್ಕಿ ಪುಡಿ, ಉಪ್ಪು ಹಾಕಿ, ಚೆನ್ನಾಗಿ ಕಲಕಿದರೆ ಮಾವಿನಕಾಯಿ ಜ್ಯೂಸ್‌ ತಯಾರು. 

ಸಲಾಡ್‌
ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ ಹೋಳುಗಳು- 1/2 ಕಪ್‌, ಟೊಮೆಟೋ ಹೋಳುಗಳು- 1/2 ಕಪ್‌, ಸಣ್ಣಗೆ ಕತ್ತರಿಸಿದ ಸೌತೆಕಾಯಿ-
1/2 ಕಪ್‌, ಕತ್ತರಿಸಿದ ಈರುಳ್ಳಿ- 1/2 ಕಪ್‌, ತೆಂಗಿನಕಾಯಿ ತುರಿ- 1/2 ಕಪ್‌, ಹಸಿಮೆಣಸಿನಕಾಯಿ- 4- 5, ಶುಂಠಿ ತುರಿ- 1/2 ಚಮಚ, ಜೀರಿಗೆ- 1 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕತ್ತರಿಸಿದ ಕೊತ್ತಂಬರಿ ಸೊಪ್ಪು- 4 ಚಮಚ.
ಮಾಡುವ ವಿಧಾನ
ಈರುಳ್ಳಿ ಹೋಳುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿ. ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಶುಂಠಿ ತುರಿ, ಜೀರಿಗೆಗಳನ್ನು ಸೇರಿಸಿ ಅರೆದಿರಿಸಿ. ಮಾವಿನಕಾಯಿ ಹೋಳುಗಳು, ಟೊಮೆಟೋ, ಸೌತೆಕಾಯಿ ಹೋಳುಗಳು, ಈರುಳ್ಳಿ, ಉಪ್ಪು, ಅರೆದ ಮಿಶ್ರಣ ಸೇರಿಸಿ, ಚೆನ್ನಾಗಿ ಕಲಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮಾವಿನಕಾಯಿ ಸಲಾಡ್‌ ರೆಡಿ.

ಗೊಜ್ಜು
ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ ತುರಿ- 2 ಕಪ್‌, ಖಾರದ ಪುಡಿ- 3 ಚಮಚ, ತೆಂಗಿನಕಾಯಿ ತುರಿ- 1/2 ಕಪ್‌, ಎಳ್ಳಿನ ಪುಡಿ- 3 ಚಮಚ, ಸಾಸಿವೆ- 1/2 ಚಮಚ, ಬೆಲ್ಲದ ತುರಿ- 4 ಚಮಚ, ಹುಣಸೆ ಹಣ್ಣು- 1 ಇಂಚಿನಷ್ಟು, ಉಪ್ಪು- ರುಚಿಗೆ ತಕ್ಕಷ್ಟು, ಒಗ್ಗರಣೆಗೆ- ಎಣ್ಣೆ- 4 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ, ಅರಿಸಿನ- 1/2 ಚಮಚ, ಒಣಮೆಣಸಿನಕಾಯಿ ತುಂಡುಗಳು- 3- 4, ಕರಿಬೇವಿನ ಎಲೆಗಳು- 7-8. 
ಮಾಡುವ ವಿಧಾನ
ಮಾವಿನಕಾಯಿ ತುರಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದಿರಿಸಿ. ತೆಂಗಿನಕಾಯಿ ತುರಿ, ಹುಣಸೆ ಹಣ್ಣು, ಖಾರದ ಪುಡಿ, ಎಳ್ಳು ಪುಡಿ, ಸಾಸಿವೆ ಕಾಳುಗಳನ್ನು ಸೇರಿಸಿ ನುಣ್ಣಗೆ ಅರೆದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ- ಇಂಗು- ಅರಿಸಿನ- ಒಣಮೆಣಸಿನಕಾಯಿ- ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ, ಅರೆದ ಮಸಾಲೆ, ಮಾವಿನಕಾಯಿ ತುರಿ, ಉಪ್ಪು, ಬೆಲ್ಲ ಸೇರಿಸಿ ಕುದಿಸಿದರೆ ಮಾವಿನಕಾಯಿ ಗೊಜ್ಜು ರೆಡಿ.

ಉಸ್ಲಿ
ಬೇಕಾಗುವ ಸಾಮಗ್ರಿಗಳು ಮಾವಿನಕಾಯಿ ತುರಿ- 1 ಕಪ್‌, ಮೊಳಕೆ ತರಿಸಿದ ಹೆಸರುಕಾಳು- 2 ಕಪ್‌, ತೆಂಗಿನಕಾಯಿ ತುರಿ- 1/2 ಕಪ್‌, ಕಾಳುಮೆಣಸಿನ ಪುಡಿ- 1/2 ಚಮಚ, ಜೀರಿಗೆ ಪುಡಿ- 1 ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು- 3 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು- 3 ಚಮಚ, ಕತ್ತರಿಸಿದ ಹಸಿಮೆಣಸಿನಕಾಯಿ-5- 6, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 4 ಚಮಚ, ಸಾಸಿವೆ- 1 ಚಮಚ, ಉದ್ದಿನ ಬೇಳೆ- 3 ಚಮಚ, ಅರಿಸಿನ- 1/2 ಚಮಚ, ಇಂಗು- 1/4 ಚಮಚ. 
ಮಾಡುವ ವಿಧಾನ
ಮೊಳಕೆ ತರಿಸಿದ ಹೆಸರುಕಾಳುಗಳನ್ನು ಬೇಯಿಸಿ ನೀರು ಬಸಿದಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ- ಉದ್ದಿನಬೇಳೆ- ಅರಿಸಿನ- ಇಂಗು ಸೇರಿಸಿ ಒಗ್ಗರಣೆ ತಯಾರಿಸಿ. ಒಗ್ಗರಣೆಗೆ, ಹಸಿಮೆಣಸಿನಕಾಯಿ, ಮಾವಿನಕಾಯಿ ತುರಿ, ಕರಿಬೇವಿನ ಸೊಪ್ಪು ಹಾಕಿ ಬಾಡಿಸಿ, ಬೇಯಿಸಿದ ಹೆಸರು ಕಾಳು, ಜೀರಿಗೆ ಪುಡಿ, ಕಾಳುಮೆಣಸಿನಪುಡಿ, ಉಪ್ಪು ಸೇರಿಸಿ ಕಲಕಿ, ಒಲೆಯಿಂದ ಕೆಳಗಿರಿಸಿ, ತೆಂಗಿನಕಾಯಿ ತುರಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಪುಷ್ಟಿದಾಯಕ ಮಾವಿನಕಾಯಿ- ಹೆಸರು ಕಾಳಿನ ಉಸ್ಲಿ ತಯಾರು. ತಿಂಡಿಯಾಗಿ ಇಲ್ಲವೆ ಚಪಾತಿಯೊಂದಿಗೆ ತಿನ್ನಲು ಬಲು ರುಚಿ.

ಮುರಬ್ಬ
ಬೇಕಾಗುವ ಸಾಮಗ್ರಿಗಳು

ಸಿಪ್ಪೆ ತೆಗೆದು ಕತ್ತರಿಸಿದ ಮಾವಿನಕಾಯಿ ಹೋಳುಗಳು- 2 ಕಪ್‌, ಸಕ್ಕರೆ- 2 ಕಪ್‌, ಏಲಕ್ಕಿ ಪುಡಿ- 1/2 ಚಮಚ, ಕೇಸರಿ ದಳ-5- 6, ಲವಂಗದ ಪುಡಿ- 1/2 ಚಮಚ.
ಮಾಡುವ ವಿಧಾನ
ಮಾವಿನಕಾಯಿ ಹೋಳುಗಳನ್ನು ಹಬೆಯಲ್ಲಿ ಬೇಯಿಸಿ. ತಣಿದ ಮೇಲೆ, ಬಟ್ಟೆಯ ಮೇಲೆ ಹರಡಿ, ನೀರಿನ ಪಸೆ ಆರುವವರೆಗೆ ಒಣಗಿಸಿ. ಬಾಣಲೆಯಲ್ಲಿ, ಅರ್ಧ ಕಪ್‌ ನೀರು ಕಾಯಿಸಿ, ಸಕ್ಕರೆ ಹಾಕಿ ಗಟ್ಟಿಯಾಗುವರೆಗೆ ಕಲಕಿ. ಪಾಕ ಗಟ್ಟಿಯಾದ ಮೇಲೆ, ಮಾವಿನಕಾಯಿ ಹೋಳುಗಳು, ಏಲಕ್ಕಿ ಪುಡಿ, ಕೇಸರಿ ದಳ, ಲವಂಗದ ಪುಡಿ ಹಾಕಿ ಕಲಕಿ. ತಣಿದ ಮೇಲೆ, ಪಸೆ ಇಲ್ಲದ ಬಾಟಲಿಯಲ್ಲಿ ಶೇಖರಿಸಿ. 

ಜಯಶ್ರೀ ಕಾಲ್ಕುಂದ್ರಿ 

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.