ಗಂಡ ಪಕ್ಕದಲ್ಲಿದ್ದಾಗ ಸ್ನೇಹಿತ ನೆನಪಾಗಿದ್ದ…


Team Udayavani, Aug 22, 2018, 6:00 AM IST

3.jpg

ಇಪ್ಪತ್ತೆಂಟು ವರ್ಷದ ರೇಖಾಗೆ ಮದುವೆಯಾಗಿ ಏಳು ತಿಂಗಳಾಗಿದೆ. ಮಿಲನವಾಗಿಲ್ಲ. ಗಂಡ ರಜಿತ್‌ ಬೋರ್‌ ಎನಿಸತೊಡಗಿದ್ದಾನೆ. ರಜಿತ್‌ ಅವಳನ್ನು ಒಲಿಸಿಕೊಳ್ಳಲು ಏನು ಮಾಡಿದರೂ ತಪ್ಪು ಎನಿಸುತ್ತದೆ. ಅವನನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ಸೆಕ್ಸ್‌ ಮಾಡಲು ಎಕ್ಸ್‌ಫ್ಯಾಕ್ಟರ್‌ ಇರಬೇಕು ಅಂತ ಹೇಳಿದ ಮೇಲೆ ಅವನು ತನ್ನ ತಾಯಿಯ ಹತ್ತಿರ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ಅತ್ತೆ ಇಬ್ಬರನ್ನೂ ನನ್ನ ಬಳಿ ಸಮಾಲೋಚನೆಗೆ ಕಳಿಸಿದ್ದರು.

  ರೇಖಾಗೆ ಮದುವೆಯಲ್ಲಿ ನಿರಾಸಕ್ತಿಯ ಕಾರಣ ಕಾಲೇಜಿನಲ್ಲಿ ಓದುವಾಗ ರೇಖಾಗಿದ್ದ ಫ‌ಟಿಂಗ ಸ್ನೇಹಿತನ ನೆನಪು. ಮಸ್ತಿ- ಮೋಜಿನ ಹುಡುಗ. ಇವಳೇ ಪಂಚಪ್ರಾಣ ಎಂಬಂತಿದ್ದರೂ ಬೇರೆ ಹುಡುಗಿಯರ ಗೀಳೂ ಇತ್ತು. ರೇಖಾಗೆ ಸ್ನೇಹಿತನ ಜೊತೆ ಪ್ರೇಮವೆಷ್ಟು- ಕಾಮವೆಷ್ಟು ಗೊತ್ತಿರಲಿಲ್ಲ (ಕೆಲವು ಹುಡುಗರಿಗೆ ಸಂಬಂಧಗಳಿಗಿಂತ ಸ್ನೇಹದಲ್ಲಿ ನಂಬಿಕೆ ಜಾಸ್ತಿ. ಸ್ನೇಹ ಎಂದರೆ ದೈಹಿಕ ಸಂಪರ್ಕ ಕೂಡ ಇರುತ್ತದೆ. ಹುಡುಗಿಯರನ್ನು ಮಿಲನಕ್ಕೆ ಒಪ್ಪಿಸಲು ಚೆಂದವಾಗಿ ರಮಿಸುತ್ತಾರೆ. ಅದೇ ಪ್ರೇಮವಲ್ಲ). ಮನಸ್ಸಿಲ್ಲದೇ ಕಾಮಕ್ಕೊಡಿªದ ಸಂಬಂಧದಲ್ಲಿ ಹುಡುಗಿಯರಿಗೆ ಕೋಪ ಜಾಸ್ತಿ. ಆದರೂ ಹುಡುಗನ ಗೀಳು. ಜಗಳವಾಗಿ ಇವಳೇ ಅವನ ಸಹವಾಸ ತೊರೆದು ಅಪ್ಪ ಹುಡುಕಿದ ರಜಿತ್‌ ಜೊತೆ ಮದುವೆಯಾಗಿದ್ದಳು.

  ರಜಿತ್‌ ನನ್ನ ಬಳಿ ಸಮಾಲೋಚನೆಗೆ ಬಂದಾಗ ಬಹಳ ನೊಂದಿದ್ದರು. ಆತ್ಮವಿಶ್ವಾಸ ಕಡಿಮೆಯಾಗಿತ್ತು. ರೇಖಾ ಅವರ ಮೊದಲ ಗೆಳತಿ- ಪತ್ನಿ. ಮದುವೆಗೆ ಮುಂಚೆ ಒಡನಾಡಲು ಏಳು ತಿಂಗಳಿದ್ದರೂ ಕರೆದಾಗಲೆÇÉಾ ಕೆಲಸದ ನೆಪ ಒಡ್ಡಿ¨ªಾಳೆ. ಮದುವೆಯ ಮೊದಲ ರಾತ್ರಿ ರಜಿತ್‌ ಅವಳನ್ನು ಮುಟ್ಟಲು, ಚೀರಿ ಗಲಾಟೆ ಮಾಡಿ, ಪ್ರಾಣಿಯಂತೆ ಆಡಬೇಡಿ ಎಂದು ಬಯ್ದು, ಶಾರೀರಿಕ ಸಂಪರ್ಕ ಈಗಲೇ ಬೇಡವೆಂದುಬಿಟ್ಟಿದ್ದಳು. ಮೊದಲು ಮನಸ್ಸು ಹೊಂದಿಕೊಳ್ಳಬೇಕು ಎಂಬ ಚಿಂತನೆಗೆ ಅವರೂ ಒಪ್ಪಿಕೊಂಡು ಮಾತಾಡಲು ಶುರುಮಾಡಿದಾಗ ನಿದ್ರೆ ನೆಪ. ಅವಳಿಗೆ ಬಹಳ ಅಹಂಕಾರವಿದೆಯೆಂದು ಕೊನೆಗೆ ರಜಿತ್‌ ವಿಚ್ಛೇದನಕ್ಕೂ ರೆಡಿಯಾಗಿದ್ದರು.

  ರೇಖಾಳಲ್ಲಿ ತಪ್ಪಿತಸ್ಥ ಭಾವನೆಯಿತ್ತು. ರಜಿತ್‌ ಅವರಿಗೆ ಮೋಸಮಾಡಿದ್ದೇನೆಂದು ಬಹಳ ಅತ್ತುಬಿಟ್ಟಳು. ಬುದ್ಧಿವಂತೆಯಾದರೂ ಸ್ನೇಹಿತನಿಂದ ಮೋಸ ಹೋದೆನಲ್ಲಾ ಎಂಬ ಪೆದ್ದುತನದ ಛಾಯೆ ವ್ಯಕ್ತಿತ್ವದಲ್ಲಿ ಮನೆಮಾಡಿತ್ತು. ಇಬ್ಬರ ಕೋಪವನ್ನೂ ಇಳಿಸಿದೆ. ಆಡಿದ ಮಾತಿಗೆÇÉಾ ತಿರುಗೇಟು ಕೊಡುವ ರೇಖಾಳ ಚಟವನ್ನು ಕಡಿಮೆ ಮಾಡಿಸಿ, ಡ್ಯಾನ್ಸ್ ತರಗತಿಗೆ ಸೇರಲು ಇಬ್ಬರನ್ನೂ ಪ್ರೇರೇಪಿಸಿದೆ. ಚಾರಣ ಮಾಡಲು ಕೆಲವು ಐಡಿಯಾ ಕೊಟ್ಟೆ. ಉಚಿತ ನೇತ್ರ ಶಿಬಿರದಲ್ಲಿ ಒಟ್ಟಿಗೇ ಕಾರ್ಯಕರ್ತರಾಗಿ ಕೆಲಸ ಮಾಡಿದರು. ಸಾಮಾಜಿಕ ನೆಲೆಗಟ್ಟಿನಲ್ಲಿ ಒಬ್ಬರನ್ನೊಬ್ಬರು ಅರಿತು ತೃಪ್ತರಾಗಿ ಹನಿಮೂನ್‌ ನಡೆಯಿತು. ತಿಂಗಳಿಗೊಮ್ಮೆ ಇಬ್ಬರ ಅಮ್ಮಂದಿರೂ ಇವರೊಟ್ಟಿಗೆ ಬಂದಿರಲು ಸಲಹೆ ನೀಡಿದೆ. ಅಮ್ಮಂದಿರು ಹೊಂದಿಕೊಂಡರೆ ಮನೆಯಲ್ಲಿ ಮಾನಸಿಕ ನೆಮ್ಮದಿ ನೆಲೆಸುತ್ತದೆ. ನಾಲ್ವರಲ್ಲೂ ಗೆಳೆತನ ಮೂಡಿತು. ಮನೆ- ಮನ ಸ್ವತ್ಛವಾಯಿತು.

  ಹಳೆಯ ಸಹವಾಸ- ಸ್ನೇಹ- ಸಂಬಂಧದ ಭೂತವನ್ನು ಮದುವೆಗೆ ಮುಂಚೆ ಬಿಡಿಸಿಕೊಳ್ಳಿ. 

ಶುಭಾ ಮಧುಸೂದನ್‌

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.