ಮಗುವಿಗೆ ಬೇರೆಯವರು ಎದೆಹಾಲು ಉಣಿಸಬಹುದೇ?


Team Udayavani, Aug 29, 2018, 6:00 AM IST

s-3.jpg

ಮಗುವಿಗೆ ಎದೆಹಾಲಿಗಿಂತ ಬೇರೆ ಅಮೃತವಿಲ್ಲ. ಆರು ತಿಂಗಳಾಗುವವರೆಗೆ ಎದೆಹಾಲನ್ನು ಬಿಟ್ಟು ಬೇರೆ ಏನನ್ನೂ ಕೊಡಬೇಡಿ ಅನ್ನುತ್ತಾರೆ ವೈದ್ಯರು. ನವಜಾತ ಶಿಶುವಿನ ಲಾಲನೆ- ಪಾಲನೆಗೆ ಮಾರ್ಕೆಟ್‌ನಲ್ಲಿ ಏನೇ ವಸ್ತುಗಳು ಬಂದಿರಲಿ, ಹೊಟ್ಟೆಗೆ ಮಾತ್ರ ಎದೆಹಾಲೇ ಸೂಕ್ತ. ಆದರೆ, ಕೆಲವು ಸಂದರ್ಭಗಳಲ್ಲಿ ಮಗು, ತಾಯಿಯ ಎದೆಹಾಲಿನಿಂದ ವಂಚಿತವಾಗುತ್ತದೆ. ಹೆರಿಗೆಯಲ್ಲಿ ತಾಯಿ ತೀರಿಕೊಂಡರೆ, ತಾಯಿಗೆ ಸೋಂಕು ರೋಗವಿದ್ದರೆ ಅಥವಾ ಸೌಂದರ್ಯ ಹಾಳಾಗುತ್ತದೆ ಎಂದು ತಾಯಿಯೇ ಹಾಲುಣಿಸಲು ಹಿಂಜರಿದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಬದಲಿ ವ್ಯವಸ್ಥೆ ಎಂದರೆ ಏನು? ಹಸುವಿನ ಹಾಲು ಕೊಡುವುದಲ್ಲ, ತಾಯಿ ಹಾಲೇ ಆಗಬೇಕು. ಅಂದರೆ, ಮಿಲ್ಕ್ಬ್ಯಾಂಕ್‌ನ ನೆರವು ಪಡೆಯಬಹುದು ಅಥವಾ ಬೇರೊಬ್ಬ ತಾಯಿ, ಮಗುವಿಗೆ ಹಾಲುಣಿಸುವ ಮೂಲಕ ಹಸಿವು ಇಂಗಿಸಬಹುದು. ಆದರೆ, ತಾಯಿಯಲ್ಲದ ತಾಯಿಯ ಎದೆಹಾಲು ಮಗುವಿಗೆ ಎಷ್ಟು ಸುರಕ್ಷಕ ಎಂಬ ಪ್ರಶ್ನೆ ಮೂಡಿದಾಗ ಈ ಮೂರು ವಿಷಯಗಳ ಕುರಿತು ಗಮನ ಹರಿಸಬೇಕು. 

1.ಮಿಲ್ಕ್ಬ್ಯಾಂಕ್‌ನ ಹಾಲನ್ನು ಮಗುವಿಗೆ ನೀಡುವಾಗ, ಹಾಲಿನ ಗುಣಮಟ್ಟ ಮಹತ್ವದ್ದಾಗಿರುತ್ತದೆ. ಹಾಲನ್ನು ಶೇಖರಿಸುವಾಗ, ಸರಬರಾಜು ಮಾಡುವಾಗ ಚೂರು ಕಲಬೆರಕೆಯಾದರೂ ಅದು ಮಗುವಿನ ಪಾಲಿಗೆ ವಿಷವಾಗಿಬಿಡಬಹುದು. 

2.ತಾಯಿ ಸೇವಿಸುವ ಆಹಾರ ಎದೆಹಾಲಾಗಿ ಪರಿವರ್ತಿತವಾಗುತ್ತದೆ. ಹಾಲುಣ್ಣುವ ಮಕ್ಕಳಿರುವ ತಾಯಂದಿರು ತಮ್ಮ ಆಹಾರ, ಸೇವಿಸುವ ಔಷಧಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆದರೆ, ನಿಮ್ಮ ಮಗುವಿಗೆ ಬೇರೊಂದು ತಾಯಿ ಎದೆಹಾಲು ನೀಡುವುದಾದರೆ, ಆಕೆಯ ಆಹಾರ, ಆರೋಗ್ಯದ ಬಗ್ಗೆ ನೂರಕ್ಕೆ ನೂರರಷ್ಟು ನಿಮಗೆ ತಿಳಿದಿರಬೇಕಾಗುತ್ತದೆ. 

3.ಕೆಲವು ಸೋಂಕು ರೋಗಗಳನ್ನು ಹರಡುವ ಬ್ಯಾಕ್ಟೀರಿಯಾಗಳು ಎದೆಹಾಲಿನ ಮೂಲಕ ಮಗುವಿನ ದೇಹ ಸೇರುವ ಅಪಾಯವಿರುತ್ತದೆ. ಎಚ್‌ಐವಿಪೀಡಿತ ತಾಯಿಯಿಂದ ಮಗುವಿಗೆ ರೋಗ ಪ್ರಸರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆಯಾದರೂ, ಆ ಬಗ್ಗೆ ಇನ್ನೂ ಖಚಿತವಾಗಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ಹಾಲುಣಿಸುವ ತಾಯಿಗೆ ಯಾವುದಾದರೂ ರೋಗವಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.