ಕಲೆ ಬಲೆ ಸಿಂಗಾರ: ಜ್ಯೋತಿ ಕೈಹಿಡಿದ ಅಲಂಕಾರ  


Team Udayavani, Sep 5, 2018, 6:00 AM IST

4.jpg

ಬೆಂಗಳೂರಿನ ಮಹಾಲಕ್ಷ್ಮಿಪುರಂನ ಜ್ಯೋತಿ ಜಗನ್ನಾಥ ಶೆಟ್ಟಿ, ವೃತ್ತಿಯಲ್ಲಿ ಅಧ್ಯಾಪಕರು. ಪ್ರವೃತ್ತಿಯಲ್ಲಿ ಕರಕುಶಲ ಕಲಾವಿದೆ. ಬಿಡುವಿನ ವೇಳೆಯಲ್ಲಿ ಬಟ್ಟೆಯಲ್ಲಿ ಹೂಗಳನ್ನು ಅರಳಿಸಬಲ್ಲ ಚತುರೆ…

“ಉದ್ಯೋಗ, ಮನೆ, ಮಕ್ಕಳು ಅಂತ ಚೂರೂ ಪುರುಸೊತ್ತೇ ಸಿಗ್ತಾ ಇಲ್ಲ. ಮದುವೆಗೂ ಮುಂಚೆ ಇದ್ದ ಹವ್ಯಾಸಗಳೆಲ್ಲ ಈಗ ಮರೆತೇಹೋಗಿವೆ’ ಎಂದು ಬೇಸರಿಸಿ, ಸಪ್ಪೆ ಮೋರೆ ಮಾಡಿಕೊಳ್ಳುವವರು ಇದ್ದಾರೆ. ಕಸೂತಿ ಕಲೆ, ಹೂ ಕಟ್ಟೋದು, ರಂಗೋಲಿ, ಹಾಡು, ಹಸೆ… ಇವೆಲ್ಲಾ ಮಹಿಳೆಯರಿಗೆ ಒಲಿದ ಕಲೆಗಳು. ಆದರೆ, ಜಂಜಾಟದ ಬದುಕಿನಲ್ಲಿ ಇವೆಲ್ಲದಕ್ಕೆ ಸಮಯ ಎತ್ತಿಡಲು ಆಗುತ್ತಿಲ್ಲ ಎಂಬ ಕೊರಗು ಅನೇಕರದ್ದು. ಇಲ್ಲೊಬ್ಬರಿದ್ದಾರೆ, ಕೈ ತುಂಬಾ ಕೆಲಸದ ಮಧ್ಯೆಯೂ ತಮ್ಮ ಎದೆಯೊಳಗಿನ ಕಲೆಗೆ ನೀರೆರೆದು ಪೋಷಿಸಿಕೊಂಡು ಬಂದಿದ್ದಾರೆ.

  ಬೆಂಗಳೂರಿನ ಮಹಾಲಕ್ಷ್ಮಿಪುರಂನ ಜ್ಯೋತಿ ಜಗನ್ನಾಥ ಶೆಟ್ಟಿ, ವೃತ್ತಿಯಲ್ಲಿ ಅಧ್ಯಾಪಕರು. ಪ್ರವೃತ್ತಿಯಲ್ಲಿ ಕರಕುಶಲ ಕಲಾವಿದೆ. ಬಿಡುವಿನ ವೇಳೆಯಲ್ಲಿ ಬಟ್ಟೆಯಲ್ಲಿ ಹೂಗಳನ್ನು ಅರಳಿಸಬಲ್ಲ ಚತುರೆ. ಸೋಲೋ ವುಡ್‌ ಫ್ಲವರ್‌, ದಾರದ ಆಭರಣಗಳು, ಹ್ಯಾಂಡ್‌ ಬ್ಯಾಂಕ್‌, ಹ್ಯಾಂಡ್‌ ಪರ್ಸ್‌, ಮದುವಣಗಿತ್ತಿಯ ಸಿಂಗಾರ ಸಾಧನಗಳು, ಅಲಂಕಾರಿಕ ಹೂಗಳು, ಟ್ರೇಯಲ್ಲಿ ಅಲಂಕಾರ, ಮ್ಯಾಟ್‌ ಮೇಕಿಂಗ್‌, ಬಾಗಿಲ ತೋರಣ, ಸೀರೆಯಲ್ಲಿ ಭಿನ್ನ ಬಗೆಯ ಅಲಂಕಾರಗಳು ಹೀಗೆ ದಿನೋಪಯೋಗಿ ವಸ್ತುಗಳಲ್ಲಿಯೇ ಕಲೆಯನ್ನು ಅರಳಿಸುತ್ತಾರೆ.

  ಮೂಲತಃ ಶಿವಮೊಗ್ಗದ ಚಿಲುಮೆ ಜೆಡ್ಡು ಗ್ರಾಮದ ಜ್ಯೋತಿ, ಯಾವುದೇ ಕಲಾ ತರಗತಿಗೆ ಹೋದವರಲ್ಲ. ಬಾಲ್ಯದಿಂದಲೂ ಕಲಾಸಕ್ತಿ ಹೊಂದಿದ್ದ ಇವರಿಗೆ ತಾಯಿ ಹಾಗೂ ಶಿಕ್ಷಕಿಯರೇ ಪ್ರೇರಣೆ. ಅವರನ್ನು ನೋಡುತ್ತಲೇ ಚಿಕ್ಕಪುಟ್ಟ ಕಲಾಕೃತಿಗಳನ್ನು ಮಾಡುವುದನ್ನು ಕಲಿತರು. ನಂತರ ಸತತ ಅಭ್ಯಾಸದಿಂದ ಕಲೆಯನ್ನು ಕರಗತ ಮಾಡಿಕೊಂಡರು. ಮದುವೆಯ ನಂತರ ಪತಿ ಜಗನ್ನಾಥ್‌ ಮತ್ತು ಅತ್ತೆಯ ಪ್ರೋತ್ಸಾಹವೂ ಸಿಕ್ಕಿತು. ಇವರು ಅಂಧ ಮಕ್ಕಳಿಗೆ, ವಿಭಿನ್ನ ರೀತಿಯ ಕಲಾ ಪ್ರಕಾರಗಳ ತರಬೇತಿ ನೀಡಿ ಅವರ ಕೈಯಲ್ಲಿ ವಿಶಿಷ್ಟ ವಸ್ತುಗಳನ್ನು ಮಾಡಿಸಿದ್ದಾರೆ. ಅವರಿಂದ ಕರಕುಶಲ ಕಲೆಯ ಬಗ್ಗೆ ಮಾಹಿತಿ ಪಡೆಯಲು 805069333/8660264334 ಸಂಪರ್ಕಿಸಿ.

ಈ ಹವ್ಯಾಸವನ್ನು ನಾನು ತಾಯಿಯನ್ನು ನೋಡಿ ಕಲಿತದ್ದು. ನಂತರ ಶಾಲಾ ಶಿಕ್ಷಕಿಯರ, ಮದುವೆಯ ನಂತರ ಗಂಡ ಹಾಗೂ ಅತ್ತೆಯ ಬೆಂಬಲ ಸಿಕ್ಕಿದ್ದರಿಂದ, ಇಷ್ಟಪಟ್ಟ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿದೆ. 
– ಜ್ಯೋತಿ ಜಗನ್ನಾಥ ಶೆಟ್ಟಿ 

ಬಳಕೂರು ವಿ.ಎಸ್‌.ನಾಯಕ, ಬೆಂಗಳೂರು

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.