ರಾಗಿಯ ರಾಜ್ಯಭಾರ!


Team Udayavani, Sep 5, 2018, 6:00 AM IST

6.jpg

“ರಾಗಿ ತಿಂದವನಿಗೆ ರೋಗವಿಲ್ಲ’ ಎಂಬುದು ಈ ದಿನಗಳಲ್ಲಿ ಎಲ್ಲರೂ ಹೇಳುವ ಮಾತು. ರಾಗಿ ಗಂಜಿ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಮುದ್ದೆ ತಿಂದರೆ ಮಧುಮೇಹವನ್ನು ದೂರವಿಡಬಹುದು. ಅತ್ಯಧಿಕ ಕ್ಯಾಲ್ಸಿಯಂ, ಕಬ್ಬಿಣಾಂಶ, ಪ್ರೋಟಿನ್‌, ನಾರು ಹಾಗೂ ಖನಿಜಾಂಶಗಳನ್ನೊಳಗೊಂಡ ರಾಗಿ, ಆರೋಗ್ಯದ ದೃಷ್ಟಿಯಿಂದ ಉತ್ತಮ ಧಾನ್ಯ. ರಾಗಿಯಿಂದ ಸುಲಭವಾಗಿ ಮಾಡಬಹುದಾದ ಕೆಲವೊಂದು ಪಾಕ ವಿಧಾನಗಳು ಇಲ್ಲಿವೆ. 

1. ರಾಗಿ ಪಾಯಸ
ಬೇಕಾಗುವ ಸಾಮಗ್ರಿ: ರಾಗಿ-2 ಕಪ್‌, ತೆಂಗಿನತುರಿ-1 ಕಪ್‌, ಗಸಗಸೆ-3 ಚಮಚ, ತುರಿದ ಬೆಲ್ಲ-2 ಕಪ್‌, ಹಾಲು-3 ಕಪ್‌, ಏಲಕ್ಕಿ ಪುಡಿ-1/2 ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ-10

ಮಾಡುವ ವಿಧಾನ: ರಾಗಿಯನ್ನು 5-6 ಗಂಟೆ ನೀರಿನಲ್ಲಿ ನೆನೆಸಿ ಬಸಿದು, ಗಸಗಸೆ, ತೆಂಗಿನತುರಿ ಸೇರಿಸಿ 
ಅರೆದು, ಶೋಧಿಸಿ ಇರಿಸಿ. ಬಾಣಲೆಯಲ್ಲಿ 1/2 ಕಪ್‌ ನೀರು ಕಾಯಿಸಿ, ಬೆಲ್ಲದ ತುರಿ ಸೇರಿಸಿ ಕರಗಿಸಿ. ಬೆಲ್ಲ ಕರಗಿದ ಮೇಲೆ ಹಾಲು, ಅರೆದ ರಾಗಿ ಮಿಶ್ರಣ ಹಾಕಿ ಕುದಿಸಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ಬಾದಾಮಿ ತುಣುಕುಗಳನ್ನು ಸೇರಿಸಿದರೆ, ಪೌಷ್ಟಿಕವಾದ ರಾಗಿ ಪಾಯಸ ರೆಡಿ.     

2. ರಾಗಿ ಪಡ್ಡು
ಬೇಕಾಗುವ ಸಾಮಗ್ರಿ: ರಾಗಿ -1 ಕಪ್‌, ಅಕ್ಕಿ-2 ಕಪ್‌, ಉದ್ದಿನಬೇಳೆ-1ಕಪ್‌, ಕಡಲೆಬೇಳೆ-2 ಚಮಚ, ತೊಗರಿ ಬೇಳೆ-2 ಚಮಚ, ಹೆಸರುಬೇಳೆ-2 ಚಮಚ, ಮೆಂತ್ಯೆ-1 ಚಮಚ, ಅಕ್ಕಿ ಹಿಟ್ಟು-3 ಚಮಚ, ಜೀರಿಗೆ ಪುಡಿ-4 ಚಮಚ, ಕತ್ತರಿಸಿದ ಹಸಿಮೆಣಸು-6, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಕತ್ತರಿಸಿದ ಈರುಳ್ಳಿ-1/2 ಕಪ್‌,

ಉಪ್ಪು-ರುಚಿಗೆ, ಎಣ್ಣೆ-1 ಕಪ್‌.
ಮಾಡುವ ವಿಧಾನ: ಎರಡು ಚಮಚ ಎಣ್ಣೆಗೆ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಹುರಿದಿಡಿ. ರಾಗಿ, ಅಕ್ಕಿ, ಮೆಂತ್ಯೆ ಹಾಗೂ ಬೇಳೆಯನ್ನು ಆರು ಗಂಟೆ ನೆನೆಸಿ, ಬಸಿದು, ಅರೆದಿಡಿ. ಅದು ಹುದುಗಿದ ಮೇಲೆ, ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಹುರಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜೀರಿಗೆ ಪುಡಿ, ಉಪ್ಪು ಸೇರಿಸಿ ಕಲಕಿ, ದೋಸೆ ಹಿಟ್ಟಿನ ಹದಕ್ಕೆ ತನ್ನಿ. ನಂತರ ಕಾಯಿಸಿದ ಪಡ್ಡಿನ ತವಾದ ಮೇಲೆ ಎಣ್ಣೆ ಸವರಿ, ಬಟ್ಟಲುಗಳಿಗೆ ಹಿಟ್ಟು ಹಾಕಿ ಎರಡೂ ಬದಿ ಬೇಯಿಸಿದರೆ, ಗರಿಗರಿಯಾದ ರಾಗಿ ಪಡ್ಡು, ಕಾಯಿ ಚಟ್ನಿಯೊಂದಿಗೆ ತಿನ್ನಲು ರೆಡಿ.  

3. ರಾಗಿ ಮುತಿಯಾ
ಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು-2 ಕಪ್‌, ಗೋದಿ ಹಿಟ್ಟು-2 ಕಪ್‌, ಕಡಲೆ ಹಿಟ್ಟು-1 ಕಪ್‌, ಕತ್ತರಿಸಿದ ಮೆಂತ್ಯೆ ಸೊಪ್ಪು-1 ಕಪ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಹಸಿಮೆಣಸಿನಕಾಯಿ 3-4, ಶುಂಠಿ ತುರಿ-1 ಚಮಚ, ಅಚ್ಚ ಖಾರದ ಪುಡಿ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಜೀರಿಗೆ ಪುಡಿ-3 ಚಮಚ, ಎಣ್ಣೆ-1/4 ಕಪ್‌. ಒಗ್ಗರಣೆಗೆ-ಎಣ್ಣೆ-4 ಚಮಚ, ಸಾಸಿವೆ, ಇಂಗು-1/4 ಚಮಚ, ಎಳ್ಳು-3 ಚಮಚ, ಕರಿಬೇವಿನ ಎಸಳು-8.

ಮಾಡುವ ವಿಧಾನ: ಒಗ್ಗರಣೆಯ ಸಾಮಗ್ರಿಗಳನ್ನು ಬಿಟ್ಟು, ಮಿಕ್ಕೆಲ್ಲ ಸಾಮಗ್ರಿಗಳನ್ನು ಸೇರಿಸಿ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿ. ಈ ಮಿಶ್ರಣದಿಂದ ಮೊಟ್ಟೆಯಾಕಾರದ ಉಂಡೆಗಳನ್ನು ಮಾಡಿ, ಹಬೆಯಲ್ಲಿ ಹತ್ತು ನಿಮಿಷ ಬೇಯಿಸಿ. ತಣಿದ ಮೇಲೆ, ಬಿಲ್ಲೆಯಾಕಾರದಲ್ಲಿ ಒಂದು ಇಂಚಿನ ಅಳತೆಯ ತುಂಡುಗಳನ್ನು ಮಾಡಿ ಇಡಿ.ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗು-ಎಳ್ಳು-ಕರಿಬೇವು ಹಾಕಿ ಒಗ್ಗರಣೆ ಮಾಡಿ, ಬೇಯಿಸಿದ ಬಿಲ್ಲೆಗಳ ಮೇಲೆ ಹಾಕಿ ಕೈಯಾಡಿದರೆ ರುಚಿಯಾದ ರಾಗಿ ಮುತಿಯಾ ತಯಾರು.

4. ರಾಗಿ ಹಿಟ್ಟಿನ ತಾಲಿಪಟ್ಟು
ಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು-3 ಕಪ್‌, ಅಕ್ಕಿ ಹಿಟ್ಟು-2 ಕಪ್‌, ಕತ್ತರಿಸಿದ ಈರುಳ್ಳಿ-1/2 ಕಪ್‌, ಕತ್ತರಿಸಿದ ಹಸಿಮೆಣಸು-5, ತೆಂಗಿನತುರಿ-1/2 ಕಪ್‌, ಕತ್ತರಿಸಿದ ಕರಿಬೇವಿನ ಸೊಪ್ಪು-2 ಚಮಚ, ಕತ್ತರಿಸಿದ ಪುದಿನಾ ಸೊಪ್ಪು-1 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ, ಜೀರಿಗೆ ಪುಡಿ-4 ಚಮಚ, ತುಪ್ಪ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ.

ಮಾಡುವ ವಿಧಾನ: ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಈರುಳ್ಳಿ, ಹಸಿಮೆಣಸು. ತೆಂಗಿನತುರಿ, ಕರಿಬೇವು, ಪುದೀನಾ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ತುಪ್ಪ, ಉಪ್ಪು ಬೆರೆಸಿ, ನೀರು ಹಾಕಿ ರೊಟ್ಟಿಯ ಹದಕ್ಕೆ ಕಲಸಿ. ಆ ಮಿಶ್ರಣದಿಂದ ಲಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂದು ಎಣ್ಣೆ ಸವರಿದ ತವಾದ ಮೇಲೆ, ರೊಟ್ಟಿಯ ಆಕಾರದಲ್ಲಿ ತಟ್ಟಿ. ತವಾ ಕಾಯಲಿರಿಸಿ, ಸ್ವಲ್ಪ ಎಣ್ಣೆ ಹಾಕಿ, ಎರಡೂ ಬದಿಯನ್ನು ಹದವಾಗಿ ಬೇಯಿಸಿ. ಗರಿಗರಿಯಾದ ರಾಗಿ ತಾಲಿಪಟ್ಟನ್ನು ಕಾಯಿ ಚಟ್ನಿಯೊಂದಿಗೆ ಸವಿಯಬಹುದು. 

5. ರಾಗಿ ನಿಪ್ಪಟ್ಟು
ಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು-2 ಕಪ್‌, ಅಕ್ಕಿ ಹಿಟ್ಟು-2 ಕಪ್‌, ಮೈದಾ ಹಿಟ್ಟು.-1 ಕಪ್‌, ಚಿರೋಟಿ ರವೆ-1/2 ಕಪ್‌, ತರಿಯಾಗಿ ಪುಡಿ ಮಾಡಿದ ಹುರಿಗಡಲೆ-2 ಚಮಚ, ತರಿಯಾಗಿ ಪುಡಿ ಮಾಡಿದ ಕಡಲೆಕಾಯಿ ಬೀಜ-3 ಚಮಚ, ಕತ್ತರಿಸಿದ ಈರುಳ್ಳಿ-2 ಚಮಚ, ಅಚ್ಚ ಖಾರದ ಪುಡಿ-2 ಚಮಚ, ಇಂಗು-1/2 ಚಮಚ, ತರಿಯಾಗಿ ಪುಡಿ ಮಾಡಿದ ಎಳ್ಳು-1/2 ಚಮಚ, ಉಪ್ಪು, ವನಸ್ಪತಿ ಅಥವಾ ತುಪ್ಪ-3 ಚಮಚ, ಕರಿಬೇವಿನ ಎಲೆ-10.

ಮಾಡುವ ವಿಧಾನ: ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಹುರಿಗಡಲೆ, ಕಡಲೆಕಾಯಿ ಬೀಜದ ಪುಡಿಗಳನ್ನು ಸೇರಿಸಿ. ಈ ಮಿಶ್ರಣಕ್ಕೆ ಇಂಗು, ಖಾರದ ಪುಡಿ, ಎಳ್ಳು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು ಬೆರೆಸಿ, ನೀರಿನೊಂದಿಗೆ ವಡೆಯ ಹಿಟ್ಟಿನ ಹದಕ್ಕೆ ಗಟ್ಟಿಯಗಿ ಕಲಸಿ, ವಡೆಯಾಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿದರೆ ರಾಗಿ ನಿಪ್ಪಟ್ಟು ರೆಡಿ. 

-ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.