ನಿಮ್ಮ ಹುಡುಗ ಅಪ್ಪಟ ಚಿನ್ನವೇ?


Team Udayavani, Sep 12, 2018, 6:00 AM IST

1.jpg

ಮದುವೆ, ಮೂರು ದಿನದ ಕಮಿಟ್‌ಮೆಂಟ್‌ ಅಲ್ಲ. ಅದು ಕೊನೆಯವರೆಗೂ ಉಳಿಯುವ ಅನುಬಂಧ. ಬದುಕಿನ ಮುಕ್ಕಾಲು ಪಾಲು ದಿನಗಳನ್ನು ಗಂಡನೊಂದಿಗೆ ಕಳೆಯಬೇಕಾಗುತ್ತದೆ. ಜೊತೆಗಾರ ಎಂಥವನು ಎಂಬುದರ ಮೇಲೆ ನಿಮ್ಮ ಬಾಳಿನ ಖುಷಿ ಮತ್ತು ನೆಮ್ಮದಿಗಳು ನಿರ್ಧರಿತವಾಗುತ್ತವೆ. ಮದುವೆಯೆಂದರೆ ಮನೆ, ಮಕ್ಕಳು ಅಷ್ಟೇ ಅಲ್ಲ. ಸದಾ ಜೊತೆಗೇ ಇರುವ ಗಂಡನ ಬಾಯಿ ವಾಸನೆಯೂ ಮುಖ್ಯವಾಗುತ್ತದೆ. ಜೀವನ ಪೂರ್ತಿ ಸಹಿಸಲಾಗದ ಕೆಟ್ಟ ವಾಸನೆಯನ್ನು ಅನುಭವಿಸುತ್ತಲೇ ಇರಲಾಗುವುದಿಲ್ಲ. ನಂಬಿಕೆ, ಸಹಕಾರ, ಅಪ್ಪುಗೆ, ಸಣ್ಣ ಸಣ್ಣ ಜಗಳ, ಬಿಟ್ಟಿರಲಾರದ ಸೆಳೆತ, ಮಕ್ಕಳ ಓದು, ಒಂದು ಚೆಂದದ ಮನೆಯ ಕನಸು… ಇವೆಲ್ಲವೂ, ನಿಮಗೆ ಜೊತೆಯಾಗುವ ಗಂಡನನ್ನು ಅವಲಂಬಿಸಿರುತ್ತವೆ! ಕಾಳಜಿಯ ಆಯ್ಕೆ ನಿಮ್ಮ ಪಾಲಿನ ಮೊದಲ ಆದ್ಯತೆಯಾಗಬೇಕು. ಬಾಳಸಂಗಾತಿಯನ್ನು ಆರಿಸಿಕೊಳ್ಳುವಾಗ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ.

1) ಆತ ಕಡು ಕೋಪ ಮತ್ತು ಹಿಂಸೆಯ ಸಂಬಂಧಿಕನೇ? 
ಕೆಲವರಿಗೆ ಅದೆಂಥ ಕೋಪ ಬರುತ್ತದೆಯೆಂದರೆ, ಎದುರಿಗೆ ಇರುವವರನ್ನು ಸುಟ್ಟು ಬಿಡುವಷ್ಟು. ಚಿಕ್ಕ ಚಿಕ್ಕದಕ್ಕೆಲ್ಲಾ ಕೋಪ ಮಾಡಿಕೊಳ್ಳುತ್ತಾರೆ. ಆ ಸಿಟ್ಟು ಹಿಂಸೆಯ ರೂಪಕ್ಕೆ ತಿರುಗುತ್ತದೆ. ಕೋಪವೇ ಬರದ ವ್ಯಕ್ತಿ ಇಲ್ಲ ನಿಜ.ಆದರೆ ಅತೀ ಕೋಪ ಕೂಡ ಒಂದು ಕಾಯಿಲೆಯೇ! ಅಂಥವರಿಂದ ದೂರವಿರುವುದೇ ಒಳಿತು. 

2) ಅವನು ದ್ರೋಹ ಮಾಡುತ್ತಾನಾ? 
ಮೋಸ, ವಂಚನೆಗಳಲ್ಲಿ ಚಿಕ್ಕದು ದೊಡ್ಡದು ಅಂತ ಯಾವುದೂ ಇಲ್ಲ. ಚಿಕ್ಕ ಮೋಸ ಮಾಡಿದವನು ದೊಡ್ಡದನ್ನು ಮಾಡಲು ಹೇಸುವುದಿಲ್ಲ. ದಾಂಪತ್ಯ ದ್ರೋಹ (infidelity) ಕೆಲವರಿಗೆ ಸಲೀಸು. ಕೆಲವರ ಸ್ವಭಾವವೇ ಸುಳ್ಳು, ಮೋಸವಾಗಿರುತ್ತದೆ. ನಿಮ್ಮ ಹುಡುಗನಲ್ಲಿ ಅಂಥ ಗುಣಗಳು ಕಂಡು ಬಂದರೆ, ಅಂಥವರ ಉಸಾಬರಿ ನಿಮಗ್ಯಾಕೆ? ಬೇಡ ಎಂದು ಅಲ್ಲಿಂದ ಎದ್ದು ಬಿಡಿ. 

3) ವ್ಯಸನಿಯೆ? 
ಮನುಷ್ಯನನ್ನು ಚಟಗಳು ದಾರಿ ತಪ್ಪಿಸುವಷ್ಟು ಇನ್ಯಾವುದೂ ಕೂಡ ತಪ್ಪಿಸಲಾರವು. ಡ್ರಗ್ಸ್, ಕುಡಿತ, ಜೂಜು ಇತ್ಯಾದಿಗಳು ಸಂಸಾರವನ್ನು ಹಾಳು ಮಾಡುವ ಚಟಗಳು. ಅಷ್ಟು ಸುಲಭವಾಗಿ ಅವರು ಅದರಿಂದ ಹೊರಬರಲಾರರು. ನಾನು ಚಟದಿಂದ ಹೊರಬರುವಂತೆ ಮಾಡಿ, ಅವನನ್ನು ಒಳ್ಳೆಯವನನ್ನಾಗಿ ಮಾಡ್ತೀನಿ ಅನ್ನುವುದು ನಿಜಕ್ಕೂ ಮಾತಾಡಿದಷ್ಟು ಸುಲಭವಲ್ಲ. ಯಾವುದೇ ಕ್ಷಣದಲ್ಲೂ ಅವರು ತಮ್ಮ ಹಳೆಯ ಚಟಕ್ಕೆ ಅಂಟಿಕೊಳ್ಳಬಹುದು, ನೆನಪಿರಲಿ.  

4) ಪೊಸೆಸಿವ್‌ ಒಳ್ಳೆದಲ್ಲ.
ಪೊಸೆಸಿವ್‌ನೆಸ್‌ ಪ್ರೀತಿಯ ಸಂಕೇತವಾದರೂ, ಅದು ಅತಿಯಾದರೆ ಉಸಿರುಗಟ್ಟಿಸುತ್ತದೆ. ಆರಂಭದಲ್ಲಿ ನಿಮ್ಮವನ ಪೊಸೆಸಿವ್‌ನೆಸ್‌ ನಿಮಗೆ ಖುಷಿಯೆನಿಸಿದರೂ, ಬರುಬರುತ್ತಾ ಅದು ಹಿಂಸೆ ಅನಿಸುತ್ತದೆ. ಅನುಮಾನಕ್ಕೆ ತಿರುಗಿಕೊಳ್ಳುತ್ತದೆ. ಒಮ್ಮೆ ಅನುಮಾನ ಹೊಕ್ಕಿಬಿಟ್ಟರೆ, ಆಮೇಲೆ ಎಲ್ಲವೂ ನರಕ. ಹಾಗಂತ ತೀರಾ ನಿರ್ಲಿಪ್ತ, ತಿರಸ್ಕಾರವನ್ನು ಕಟ್ಟಿಕೊಂಡಿರುವುದೂ ಸಾಧ್ಯವಲ್ಲ. ಪ್ರೀತಿಯೇ ಬೇರೆ, ಅದರೊಳಗೆ ಗುಮ್ಮನಂತಿರುವ ಪೊಸೆಸಿವ್‌ನೆಸ್‌ ಬೇರೆ.    

ಸದಾಶಿವ ಎಸ್‌.

ಟಾಪ್ ನ್ಯೂಸ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.