ನಿಮ್ಮ ಹುಡುಗ ಅಪ್ಪಟ ಚಿನ್ನವೇ?


Team Udayavani, Sep 12, 2018, 6:00 AM IST

1.jpg

ಮದುವೆ, ಮೂರು ದಿನದ ಕಮಿಟ್‌ಮೆಂಟ್‌ ಅಲ್ಲ. ಅದು ಕೊನೆಯವರೆಗೂ ಉಳಿಯುವ ಅನುಬಂಧ. ಬದುಕಿನ ಮುಕ್ಕಾಲು ಪಾಲು ದಿನಗಳನ್ನು ಗಂಡನೊಂದಿಗೆ ಕಳೆಯಬೇಕಾಗುತ್ತದೆ. ಜೊತೆಗಾರ ಎಂಥವನು ಎಂಬುದರ ಮೇಲೆ ನಿಮ್ಮ ಬಾಳಿನ ಖುಷಿ ಮತ್ತು ನೆಮ್ಮದಿಗಳು ನಿರ್ಧರಿತವಾಗುತ್ತವೆ. ಮದುವೆಯೆಂದರೆ ಮನೆ, ಮಕ್ಕಳು ಅಷ್ಟೇ ಅಲ್ಲ. ಸದಾ ಜೊತೆಗೇ ಇರುವ ಗಂಡನ ಬಾಯಿ ವಾಸನೆಯೂ ಮುಖ್ಯವಾಗುತ್ತದೆ. ಜೀವನ ಪೂರ್ತಿ ಸಹಿಸಲಾಗದ ಕೆಟ್ಟ ವಾಸನೆಯನ್ನು ಅನುಭವಿಸುತ್ತಲೇ ಇರಲಾಗುವುದಿಲ್ಲ. ನಂಬಿಕೆ, ಸಹಕಾರ, ಅಪ್ಪುಗೆ, ಸಣ್ಣ ಸಣ್ಣ ಜಗಳ, ಬಿಟ್ಟಿರಲಾರದ ಸೆಳೆತ, ಮಕ್ಕಳ ಓದು, ಒಂದು ಚೆಂದದ ಮನೆಯ ಕನಸು… ಇವೆಲ್ಲವೂ, ನಿಮಗೆ ಜೊತೆಯಾಗುವ ಗಂಡನನ್ನು ಅವಲಂಬಿಸಿರುತ್ತವೆ! ಕಾಳಜಿಯ ಆಯ್ಕೆ ನಿಮ್ಮ ಪಾಲಿನ ಮೊದಲ ಆದ್ಯತೆಯಾಗಬೇಕು. ಬಾಳಸಂಗಾತಿಯನ್ನು ಆರಿಸಿಕೊಳ್ಳುವಾಗ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ.

1) ಆತ ಕಡು ಕೋಪ ಮತ್ತು ಹಿಂಸೆಯ ಸಂಬಂಧಿಕನೇ? 
ಕೆಲವರಿಗೆ ಅದೆಂಥ ಕೋಪ ಬರುತ್ತದೆಯೆಂದರೆ, ಎದುರಿಗೆ ಇರುವವರನ್ನು ಸುಟ್ಟು ಬಿಡುವಷ್ಟು. ಚಿಕ್ಕ ಚಿಕ್ಕದಕ್ಕೆಲ್ಲಾ ಕೋಪ ಮಾಡಿಕೊಳ್ಳುತ್ತಾರೆ. ಆ ಸಿಟ್ಟು ಹಿಂಸೆಯ ರೂಪಕ್ಕೆ ತಿರುಗುತ್ತದೆ. ಕೋಪವೇ ಬರದ ವ್ಯಕ್ತಿ ಇಲ್ಲ ನಿಜ.ಆದರೆ ಅತೀ ಕೋಪ ಕೂಡ ಒಂದು ಕಾಯಿಲೆಯೇ! ಅಂಥವರಿಂದ ದೂರವಿರುವುದೇ ಒಳಿತು. 

2) ಅವನು ದ್ರೋಹ ಮಾಡುತ್ತಾನಾ? 
ಮೋಸ, ವಂಚನೆಗಳಲ್ಲಿ ಚಿಕ್ಕದು ದೊಡ್ಡದು ಅಂತ ಯಾವುದೂ ಇಲ್ಲ. ಚಿಕ್ಕ ಮೋಸ ಮಾಡಿದವನು ದೊಡ್ಡದನ್ನು ಮಾಡಲು ಹೇಸುವುದಿಲ್ಲ. ದಾಂಪತ್ಯ ದ್ರೋಹ (infidelity) ಕೆಲವರಿಗೆ ಸಲೀಸು. ಕೆಲವರ ಸ್ವಭಾವವೇ ಸುಳ್ಳು, ಮೋಸವಾಗಿರುತ್ತದೆ. ನಿಮ್ಮ ಹುಡುಗನಲ್ಲಿ ಅಂಥ ಗುಣಗಳು ಕಂಡು ಬಂದರೆ, ಅಂಥವರ ಉಸಾಬರಿ ನಿಮಗ್ಯಾಕೆ? ಬೇಡ ಎಂದು ಅಲ್ಲಿಂದ ಎದ್ದು ಬಿಡಿ. 

3) ವ್ಯಸನಿಯೆ? 
ಮನುಷ್ಯನನ್ನು ಚಟಗಳು ದಾರಿ ತಪ್ಪಿಸುವಷ್ಟು ಇನ್ಯಾವುದೂ ಕೂಡ ತಪ್ಪಿಸಲಾರವು. ಡ್ರಗ್ಸ್, ಕುಡಿತ, ಜೂಜು ಇತ್ಯಾದಿಗಳು ಸಂಸಾರವನ್ನು ಹಾಳು ಮಾಡುವ ಚಟಗಳು. ಅಷ್ಟು ಸುಲಭವಾಗಿ ಅವರು ಅದರಿಂದ ಹೊರಬರಲಾರರು. ನಾನು ಚಟದಿಂದ ಹೊರಬರುವಂತೆ ಮಾಡಿ, ಅವನನ್ನು ಒಳ್ಳೆಯವನನ್ನಾಗಿ ಮಾಡ್ತೀನಿ ಅನ್ನುವುದು ನಿಜಕ್ಕೂ ಮಾತಾಡಿದಷ್ಟು ಸುಲಭವಲ್ಲ. ಯಾವುದೇ ಕ್ಷಣದಲ್ಲೂ ಅವರು ತಮ್ಮ ಹಳೆಯ ಚಟಕ್ಕೆ ಅಂಟಿಕೊಳ್ಳಬಹುದು, ನೆನಪಿರಲಿ.  

4) ಪೊಸೆಸಿವ್‌ ಒಳ್ಳೆದಲ್ಲ.
ಪೊಸೆಸಿವ್‌ನೆಸ್‌ ಪ್ರೀತಿಯ ಸಂಕೇತವಾದರೂ, ಅದು ಅತಿಯಾದರೆ ಉಸಿರುಗಟ್ಟಿಸುತ್ತದೆ. ಆರಂಭದಲ್ಲಿ ನಿಮ್ಮವನ ಪೊಸೆಸಿವ್‌ನೆಸ್‌ ನಿಮಗೆ ಖುಷಿಯೆನಿಸಿದರೂ, ಬರುಬರುತ್ತಾ ಅದು ಹಿಂಸೆ ಅನಿಸುತ್ತದೆ. ಅನುಮಾನಕ್ಕೆ ತಿರುಗಿಕೊಳ್ಳುತ್ತದೆ. ಒಮ್ಮೆ ಅನುಮಾನ ಹೊಕ್ಕಿಬಿಟ್ಟರೆ, ಆಮೇಲೆ ಎಲ್ಲವೂ ನರಕ. ಹಾಗಂತ ತೀರಾ ನಿರ್ಲಿಪ್ತ, ತಿರಸ್ಕಾರವನ್ನು ಕಟ್ಟಿಕೊಂಡಿರುವುದೂ ಸಾಧ್ಯವಲ್ಲ. ಪ್ರೀತಿಯೇ ಬೇರೆ, ಅದರೊಳಗೆ ಗುಮ್ಮನಂತಿರುವ ಪೊಸೆಸಿವ್‌ನೆಸ್‌ ಬೇರೆ.    

ಸದಾಶಿವ ಎಸ್‌.

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.