ಮೋದದ ಗಣಪಗೆ ವಿಧ ವಿಧ ಮೋದಕ


Team Udayavani, Sep 12, 2018, 6:00 AM IST

7.jpg

ಮೋದಕವೆಂದರೆ ಗಣಪನಿಗೆ ಬಹಳ ಇಷ್ಟವಂತೆ. ಹೀಗೆ ಹೇಳಿದಾಗ ಹಲವರಿಗೆ- “ಮೂಷಿಕ ವಾಹನ ಮೋದಕ ಹಸ್ತಾ…’ ಎಂಬ ಭಕ್ತಿಗೀತೆ ನೆನಪಾಗಿರಲಿಕ್ಕೂ ಸಾಕು. ಅಕ್ಕಿ, ಶೇಂಗಾ ಹಾಗೂ ಖರ್ಜೂರದಿಂದ ಮಾಡಬಹುದಾದ ರುಚಿರುಚಿ ಮೋದಕದ ರೆಸಿಪಿ ಇಲ್ಲಿದೆ… 

1. ತೆಂಗಿನ ಮೋದಕ
ಬೇಕಾಗುವ ಸಾಮಗ್ರಿ: ಹೂರಣಕ್ಕೆ: ತೆಂಗಿನಕಾಯಿ ತುರಿ- 1 ಕಪ್‌, ತುರಿದ ಬೆಲ್ಲ- 1/2 ಕಪ್‌, ಏಲಕ್ಕಿ- 3 ರಿಂದ 4, ಗಸೆಗಸೆ- 1 ಚಮಚ, ಬಿಳಿ ಎಳ್ಳು- 1 ಚಮಚ, ತುಪ್ಪ- 2 ಚಮಚ ಕಣಕಕ್ಕೆ: ಅಕ್ಕಿ ಹಿಟ್ಟು- 1 ಕಪ್‌, ಉಪ್ಪು- ಸ್ವಲ್ಪ, ತುಪ್ಪ- 1 ಚಮಚ
ಮಾಡುವ ವಿಧಾನ: ಮೊದಲು ಕಣಕ ಮಾಡಲು ಬಾಣಲೆಗೆ ತೆಂಗಿನತುರಿ ಮತ್ತು ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ತೆಂಗಿನಕಾಯಿಯಲ್ಲಿರುವ ನೀರಿನಂಶ ಬೆಲ್ಲ ಕರಗಿಸಲು ಸಾಕಾಗುವುದರಿಂದ ಬೇರೆ ನೀರು ಹಾಕುವುದು ಬೇಡ. ಬೆಲ್ಲ ಕರಗಿ ತೆಂಗಿನಕಾಯಿ ಜೊತೆ ಸೇರಿ ಗಟ್ಟಿಯಾಗುವವರೆಗೆ ಕಾಯಿಸಿ. ಏಲಕ್ಕಿ ಪುಡಿ, ಗಸಗಸೆ ಸೇರಿಸಿ ಕೆಳಗಿಳಿಸಿ.

ಈಗ ಒಂದು ಪಾತ್ರೆಯಲ್ಲಿ ಒಂದು ಕಪ್‌ ನೀರು, ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲಿಡಿ. ಕುದಿಯುತ್ತಿರುವಂತೆ ಅಕ್ಕಿ ಹಿಟ್ಟು ಸೇರಿಸಿ, ಕದಡಿ. ಉರಿ ಆರಿಸಿ. ಈಗ ಅದನ್ನು ಚೆನ್ನಾಗಿ ನಾದಿಕೊಂಡು, ಬಿರುಕುಗಳಿಲ್ಲದಂತೆ ಕಣಕ ತಯಾರಿಸಿ. ಈ ಕಣಕದಿಂದ ಚಿಕ್ಕ, ಚಿಕ್ಕ ಉಂಡೆ ಮಾಡಿಕೊಂಡು ಲಟ್ಟಿಸಿ, ಅದರೊಳಗೆ ಒಂದು ಚಮಚದಷ್ಟು ತಯಾರಿಸಿದ ಹೂರಣ ಇಟ್ಟು, ಮೋದಕದ ಆಕಾರ ಕೊಟ್ಟು ಹಬೆಯಲ್ಲಿ ಬೇಯಿಸಿ. ಈಗ, ಗಣಪನಿಗೆ ಪ್ರಿಯವಾದ, ಸಾಂಪ್ರದಾಯಿಕ ಮೋದಕ ತಯಾರು.

2. ನೆಲಗಡಲೆ(ಶೇಂಗಾ) ಮೋದಕ
ಬೇಕಾಗುವ ಸಾಮಗ್ರಿ: ಹೂರಣಕ್ಕೆ: ಶೇಂಗಾ – 1/2 ಕಪ್‌, ಬೆಲ್ಲ-1/3 ಕಪ್‌, ತೆಂಗಿನತುರಿ-1/4 ಕಪ್‌, ಏಲಕ್ಕಿ ಪುಡಿ- ಸ್ವಲ್ಪ
ಕಣಕಕ್ಕೆ: ಅಕ್ಕಿ ಟ್ಟು-1 ಕಪ್‌, ನೀರು- 3/4 ಕಪ್‌, ಉಪ್ಪು-ಚಿಟಿಕೆಯಷ್ಟು
ಮಾಡುವ ವಿಧಾನ: ಶೇಂಗಾವನ್ನು ಚೆನ್ನಾಗಿ ಹುರಿದು, ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ಬಾಣಲೆಗೆ ಬೆಲ್ಲ, 3 ಚಮಚದಷ್ಟು ನೀರು ಹಾಕಿ ಕುದಿಯಲಿಡಿ. ಬೆಲ್ಲ ಕರಗುತ್ತಿದ್ದಂತೆ ಪುಡಿ ಮಾಡಿದ ಶೇಂಗಾ, ತೆಂಗಿನತುರಿ, ಏಲಕ್ಕಿ ಪುಡಿ ಸೇರಿಸಿ ಗಟ್ಟಿಯಾಗುವವರಗೆ ಕಾಯಿಸಿ, ತಣಿಯಲು ಬಿಡಿ.
ಈಗ ಪಾತ್ರೆಗೆ ನೀರು, ಉಪ್ಪು ಹಾಕಿ ಕುದಿಸಿ, ಅದನ್ನು ಅಕ್ಕಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ನಾದಿ ಕಣಕ ತಯಾರಿಸಿ. ಕಣಕ ಮತ್ತು ಹೂರಣಗಳೆರಡನ್ನೂ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಕಣಕದ ಉಂಡೆಯನ್ನು ಸ್ವಲ್ಪ ಲಟ್ಟಿಸಿಕೊಂಡು, ಹೂರಣದ ಉಂಡೆ ಇಟ್ಟು ಮೋದಕದ ಆಕಾರ ಕೊಟ್ಟು ಹಬೆಯಲ್ಲಿ ಬೇಯಿಸಿ. ಇದು ನೆಲಗಡಲೆಯ ಪರಿಮಳದೊಂದಿಗೆ ತಿನ್ನಲು ರುಚಿಕರ.

3. ಖರ್ಜೂರದ ಮೋದಕ
ಬೇಕಾಗುವ ಸಾಮಗ್ರಿ: ಖರ್ಜೂರ- 20, ಒಣಹಣ್ಣುಗಳು(ಬಾದಾಮಿ, ಗೋಡಂಬಿ, ಪಿಸ್ತಾ)- 1/2 ಕಪ್‌, ತುಪ್ಪ-ಸ್ವಲ್ಪ, ಏಲಕ್ಕಿ ಪುಡಿ- 1/4 ಚಮಚ
ಮಾಡುವ ವಿಧಾನ: ಖರ್ಜೂರಗಳನ್ನು ಬಿಡಿಸಿ, ಬೀಜಗಳನ್ನು ಬೇರ್ಪಡಿಸಿಕೊಳ್ಳಿ. ನಂತರ ಎಲ್ಲ ಒಣಹಣ್ಣುಗಳನ್ನು ಬಾಣಲೆಯಲ್ಲಿ ಬಿಸಿಮಾಡಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಖರ್ಜೂರಗಳನ್ನು ಕೂಡ ಮಿಕ್ಸಿಯಲ್ಲಿ ರುಬ್ಬಿ. ಈಗ ಖರ್ಜೂರದ ಪೇಸ್ಟ್‌ ಮತ್ತು ಒಣಹಣ್ಣುಗಳ ಪುಡಿಯನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ಮೋದಕದ ಅಚ್ಚಿನಲ್ಲಿ ಹಾಕಿ. ಮೋದಕದ ಆಕಾರ ನೀಡಿ. ಇದು ಅತ್ಯಂತ ಸರಳ ಹಾಗೂ ಅರೋಗ್ಯದಾಯಕ ಮೋದಕ.

ವಿ.ಸೂ: ಎಲ್ಲ ಮೋದಕಗಳನ್ನು ಮೋದಕದ ಅಚ್ಚು ಬಳಸಿ ಮಾಡಿದರೆ ಆಕರ್ಷಕ ಆಕಾರ ಸಿಗುವುದು.

– ಸುಮನ್‌ ದುಬೈ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.