ಬ್ಯೂಟಿ ಸ್ಲೀಪ್‌


Team Udayavani, Sep 19, 2018, 6:00 AM IST

x-1.jpg

ಸೂರನ್ನೇ ದಿಟ್ಟಿಸುತ್ತಾ ಶವಾಸನದಂತೆ ಮಲಗುವವರು, ಮುಖಕ್ಕೆ ಮಂಡಿ ತಾಗಿಸುವಷ್ಟು ದೇಹ ಬಾಗಿಸುವವರು, ದಿಂಬನ್ನೇ ಆಸ್ತಿಯಂತೆ ಅಪ್ಪುವವರು, ಟೆಡ್ಡಿ ಬೇರ್‌ ಇಲ್ಲದೆ ನಿದ್ದೆಯೇ ಬಾರದವರು, ಹೊಟ್ಟೆ ಕೆಳಗೆ ಮಾಡಿ, ಮುಸುಕನ್ನು ಮುಖದ ತುಂಬಾ ಹೊದ್ದು ಮಲಗುವವರು…ಹೀಗೆ, ರಾತ್ರಿ ನಿದ್ದೆ ಮಾಡುವಾಗ ಒಬ್ಬೊಬ್ಬರದ್ದು ಒಂದೊಂದು ಆಸನ. ದೇಹ-ಮನಸ್ಸಿಗೆ ಎಂಟು ಗಂಟೆಯ ನಿದ್ದೆ ಎಷ್ಟು ಮುಖ್ಯವೋ, ಮಲಗುವ ಭಂಗಿಯೂ ಅಷ್ಟೇ ಮುಖ್ಯ ಅನ್ನುತ್ತಾರೆ ವೈದ್ಯರು. ಮಲಗುವ ರೀತಿಯಲ್ಲಿ ವ್ಯತ್ಯಾಸವಾದರೂ ಚರ್ಮದ ಸೌಂದರ್ಯಕ್ಕೆ ಧಕ್ಕೆಯಾಗುತ್ತದಂತೆ! 

1. ದಿಂಬಿಗೆ ಮುಖ ತಾಗಿಸಿ ಮಲಗುವುದು
ಕೆಲವರು ದಿಂಬನ್ನು ಅಪ್ಪಿಕೊಂಡು ಅಥವಾ ದಿಂಬಿಗೆ ಮುಖ ತಾಗಿಸಿ ಮಲಗುತ್ತಾರೆ. ಇದರಿಂದ ದಿಂಬಿನಲ್ಲಿರುವ ಧೂಳು, ಬ್ಯಾಕ್ಟೀರಿಯಾ ಮುಖದ ಚರ್ಮವನ್ನು ಹಾಳು ಮಾಡಬಹುದು. ರಾತ್ರಿ ಮುಖಕ್ಕೆ ಹಚ್ಚಿದ ಕ್ರೀಂ, ಪ್ರತಿರಾತ್ರಿಯೂ ದಿಂಬಿಗೆ ತಾಗಿರುತ್ತದೆ. ಅದು ಮುಖಕ್ಕೆ ತಾಗಿ ಅಲರ್ಜಿಯನ್ನುಂಟು ಮಾಡುತ್ತದೆ. ಹಾಗಾಗಿ, ಈ ರೀತಿ ಮಲಗುವವವರು ವಾರಕ್ಕೊಮ್ಮೆಯಾದರೂ ದಿಂಬಿನ ಕವರ್‌ಅನ್ನು ಸ್ವಚ್ಛಗೊಳಿಸಬೇಕು.

2. ಹೊಟ್ಟೆ ಅಡಿ ಮಲಗುವುದು
ರಾತ್ರಿ ಮಲಗಿದಾಗ ನಮ್ಮ ಮುಖದ ಚರ್ಮ ಕೂಡ ರೆಸ್ಟ್‌ ಮಾಡುತ್ತದೆ. ಆದರೆ, ಹೊಟ್ಟೆ ಅಡಿ ಮಾಡಿ, ಮುಖವನ್ನು ಹಾಸಿಗೆ/ ದಿಂಬಿಗೆ ಒತ್ತಿ ಮಲಗುವುದರಿಂದ ಚರ್ಮದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಮುಖದ ಮೇಲೆ ಒತ್ತಡ ಬೀಳುವುದರಿಂದ ಕಣ್ಣು ಊದಿಕೊಳ್ಳುತ್ತದೆ. ಏಳೆಂಟು ಗಂಟೆ ಹಾಗೆ ಮಲಗುವುದರಿಂದ ಚರ್ಮದ ಮೇಲೆ ಗೆರೆಗಳು ಮೂಡುತ್ತವೆ. 

3. ಒಂದು ಬದಿಗೆ ಮುಖ ಹಾಕಿ ಮಲಗುವುದು
 ಒಂದೇ ಬದಿಗೆ ತಿರುಗಿ ಮಲಗುವುದರಿಂದ, ಶರೀರದ ಒಂದು ಭಾಗದ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಪರಿಣಾಮ, ಒಂದು ಬದಿಯ ಕೆನ್ನೆಯ ಮೂಳೆ ಹಾಗೂ ಚರ್ಮದ ಮೇಲೆ ಒತ್ತಡ ಹೇರಿ, ನೆರಿಗೆ ಮೂಡಿಸುತ್ತದೆ. 

ಅಂಗಾತ ಮಲಗಿ
ಬೆನ್ನನ್ನು ಹಾಸಿಗೆಗೆ ತಾಗಿಸಿ, ಅಂಗಾತ ಮಲಗುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಯಾಕೆಂದರೆ, ಈ ಭಂಗಿಯಲ್ಲಿ ಮುಖ, ಹಾಸಿಗೆ ಅಥವಾ ದಿಂಬಿಗೆ ತಾಗುವುದಿಲ್ಲ. ದಿಂಬಿಗೆ ಒತ್ತಿ ಮುಖದ ಮೇಲೆ ಗೆರೆ ಮೂಡುವ, ಹಾಸಿಗೆಯ ಧೂಳು ಮುಖಕ್ಕೆ ತಾಗಿ ಮೊಡವೆಯಾಗುವ ಅಪಾಯ ಕಡಿಮೆ. ದೇಹವನ್ನು ಒಂದು ಕಡೆಗೆ ವಾಲಿಸಿ ಅಥವಾ ಹೊಟ್ಟೆಯನ್ನು ಹಾಸಿಗೆಗೊತ್ತಿ ಮಲಗುವ ಭಂಗಿಯಲ್ಲಾಗುವಂತೆ ಇಲ್ಲಿ ಕಣ್ಣಿನ ಮೇಲೆ ಒತ್ತಡ ಕೂಡ ಬೀಳುವುದಿಲ್ಲ. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.