ನಿತ್ಯ ಮಲ್ಲಿಗೆಯ ಹಾಡು


Team Udayavani, Nov 21, 2018, 6:00 AM IST

w-9.jpg

ಚಂದಿರನ ತುಂಡೊಂದು ಖುದ್ದಾಗಿ ಹೂ ಮಾರಲು ಭೂಮಿಗಿಳಿದು ಬಂದಂತೆ ಅವಳ ರೂಪ. ನಿತ್ಯವೂ ನಾನಾ ಹೂಗಳನ್ನು ಮಾರುತ್ತಾ, ಬೀದಿಯಲ್ಲಿ ಸುಳಿದಾಡುತ್ತಿದ್ದರೆ ಹೂವಿಗಿಂತ ಅವಳೇ ಸ್ಪುರದ್ರೂಪಿಯೇನೋ ಎಂಬ ಪುಟ್ಟ ಅನುಮಾನ ನೋಡುಗರದ್ದು. ಆದರೆ, ಆ ಬಡ ಹೆಣ್ಣುಮಗಳ ಬದುಕು ಹೂವಿನಂತೆ ಸುಕೋಮಲ ಆಗಿರಲಿಲ್ಲ. ಬದುಕು ಅವಳನ್ನು ಬಾಡಿಸಲು ಹೊರಟರೂ, ಅವಳು ಬಾಡದೇ, ಗಟ್ಟಿಗಿತ್ತಿಯಾದ ನೈಜಕತೆ ನಿಮ್ಮೆದುರು…

ಯಾವುದೋ ಪುಸ್ತಕ ಓದುವುದರಲ್ಲಿ ಮೈಮರೆತಿದ್ದವಳಿಗೆ, “ಮಲ್ಲಿಗೆ, ಸೇವಂತಿಗೆ… ಹೂವು…’ ಎಂದು ಕೂಗಿದ ಧ್ವನಿಯೊಂದು ಕಿವಿಗೆ ಅಪ್ಪಳಿಸಿದ್ದೇ ತಡ ಎಚ್ಚರವಾಗಿಬಿಟ್ಟಿತ್ತು. ಅತಿ ಸುಮಧುರ ಧ್ವನಿ ಅದು. ಆಕೆ ಒಂದೇ ಬಾರಿ ಕೂಗುತ್ತಿದ್ದದ್ದು, ಗೇಟಿನಾಚೆಗೆ ಬಂದು ನೋಡುವಷ್ಟರಲ್ಲಿ ಅದೆಲ್ಲಿ ಮಾಯವಾಗಿಬಿಡುತ್ತಿದ್ದಳ್ಳೋ ಅವಳಿಗೆ ಗೊತ್ತು. ಅದೆಷ್ಟೋ ದಿನ ಅವಳ ಧ್ವನಿಯ ಬೆನ್ನಟ್ಟಿ ಹೋಗಿ ಅವಳು ಸಿಗದೇ, ಮುಖ ಸಣ್ಣಗೆ ಮಾಡಿಕೊಂಡು ವಾಪಸು ಬಂದಿದ್ದೆ.

ಒಂದೆರೆಡು ತಿಂಗಳ ನಂತರ ಮತ್ತದೇ ಧ್ವನಿ ತೂರಿ ಬಂದು ಕಿವಿಯ ಮೇಲೆ ಬಿದ್ದಿತ್ತು. ಕ್ಷಣಾರ್ಧವನ್ನೂ ವ್ಯರ್ಥಮಾಡದೆ, ತಕ್ಷಣವೇ ಧ್ವನಿ ತೂರಿಬಂದ ಕಡೆಗೆ ಓಡಿದ್ದೆ. ಅಲ್ಲೇ ಹಿಂದಿನ ಬೀದಿಯಲ್ಲಿ ನನ್ನಷ್ಟೇ ವಯಸ್ಸಿನ ಹುಡುಗಿಯೊಬ್ಬಳು ಮಧ್ಯವಯಸ್ಸಿನ ಹೆಂಗಸೊಬ್ಬಳಿಗೆ ಹೂವು ಅಳತೆ ಮಾಡಿ ಕೊಡುತ್ತಿದ್ದಳು, ನಾನು ಸದ್ದಿಲ್ಲದೆ ಅವಳ ಹಿಂದೆಯೇ ಹೋಗಿ ನಿಂತೆ. ಅವಳು ತನ್ನ ವ್ಯಾಪಾರದಲ್ಲಿ ತಲ್ಲೀನಳಾಗಿದ್ದಳು.

ಅಬ್ಟಾ!! ಅವಳದೆಷ್ಟು ಚೆಂದದ ಹೆಣ್ಣು, ಉದ್ದದ ಜಡೆ, ಹಾಲಿನಲ್ಲೇ ಸ್ನಾನ ಮಾಡುತ್ತಾಳ್ಳೋ ಏನೋ ಎನ್ನುವಷ್ಟು ಬೆಳ್ಳಗಿದ್ದಾಳೆ. ಮೀನಖಂಡ ಕಾಣುವಷ್ಟು ಮೇಲಕ್ಕೊಂದು ಕಡುನೀಲಿ ಬಣ್ಣದ ಲಂಗ, ಅದರ ಮೇಲೊಂದು ಬಿಳಿಯ ಟೀಶರ್ಟು, ಕಿವಿಯಲ್ಲೊಂದು ಜೊತೆ ಬಣ್ಣ ಕಳೆದುಕೊಂಡ ಹಿತ್ತಾಳೆ ಜುಮುಕಿ, ಅವಳ ಮುದ್ದಾದ ಬೆಳ್ಳಗಿನ ಪಾದಗಳನ್ನು ಅಪ್ಪಿ ಸವೆದು ಸೋತಿದ್ದ ಪ್ಯಾರಗಾನ್‌ ಹವಾಯಿ ಚಪ್ಪಲಿಗಳು ಅವಳ ಕಷ್ಟವನ್ನು ಇಂಚಿಂಚಾಗಿ ವಿವರಿಸಿಬಿಟ್ಟಿದ್ದವು. ಹೂವನ್ನು ಅಳೆಯುತ್ತಿದ್ದ ಅವಳ ಕಲೆಗೆ ಮಾತ್ರ ಅವಳೇ ಸಾಟಿ ಬಿಡಿ, ಆಕೆ ಅದೆಷ್ಟು ನಾಜೂಕು ಗೊತ್ತಾ, ಮಾತಿನಲ್ಲೂ, ನಡೆಯಲ್ಲೂ… ಬಡಹೆಣ್ಣುಮಕ್ಕಳ ಆಸ್ತಿಯೇ ಅದಲ್ಲವೆ!?

ಆಕೆ ತನ್ನ ವ್ಯಾಪಾರವನ್ನು ಮುಗಿಸಿ ಹೊರಡಲಣಿಯಾಗುತ್ತಿದ್ದಂತೆ ನಾನು ನಿಂತಲ್ಲಿಂದಲೇ ಅವಳ ಹೆಗಲನ್ನು ಮುಟ್ಟಿದೆ, ಆ ಕ್ಷಣಕ್ಕೆ ಆಕೆ ಬೆಚ್ಚಿಬಿದ್ದಿದ್ದಳು. ಗರಕ್ಕನೆ ತಿರುಗಿದವಳ ಕಣ್ಣಲ್ಲಿ ಅಚ್ಚರಿಯಿತ್ತ. ನಾನವಳ ಕಣ್ಣುಗಳಿಗೆ ಬಿದ್ದಿದ್ದೇ ತಡ, ಆ ಬಟ್ಟಲು ಕಣ್ಣುಗಳಲ್ಲಿ ಹೊಳಪೊಂದು ತುಳುಕಿತ್ತು. ಕೇವಲ ಆಕೆಯ ಬೆನ್ನ ಹಿಂದೆ ನಿಂತು ಅವಳ ಸೌಂದರ್ಯವನ್ನು ಊಹಿಸಿದ್ದ ನನಗೆ ನಿಜಕ್ಕೂ ಆ ದಿನ ನಿಜ ಅಪ್ಸರೆಯ ದರುಶನವಾಗಿತ್ತು, ನಿಜಕ್ಕೂ ಅವಳದ್ದು ಅಪ್ಸರೆಯನ್ನೂ ನಾಚಿಸುವಂಥ ರೂಪಸಿರಿಯೇ.

ಆ ಬೆರಗನ್ನು ಕಂಡು ಮೂಕಳಾಗಿ ನಿಂತ ನನ್ನನ್ನು ಅವಳೇ ಎಚ್ಚರಿಸಿ, “ಅಕ್ಕಾ, ಎಷ್ಟು ಮೊಳ ಕೊಡಲಿ?’ ಎನ್ನುತ್ತಾ ತನ್ನ ಹೂವಿನ ಬುಟ್ಟಿಗೆ ಕೈ ಹಾಕಿದಳು. ಅವಳ ಮಾತಿಗೆ ಎಚ್ಚರಗೊಂಡ ನಾನು ತಡವರಿಸುತ್ತಲೇ, “ಎರಡು ಮೊಳ ಕೊಡು ಸಾಕು, ಆದರೆ ದುಡ್ಡು ನಾಳೆ ತಗೋ’ ಎನ್ನುತ್ತಾ ನನ್ನ ಮನೆಯ ಕಡೆಗೆ ಕೈ ತೋರಿಸಿದೆ. “ಸರಿ ಅಕ್ಕ’ ಎನ್ನುತ್ತಾ ಆ ಮುದ್ದಾದ ಕೈಗಳಲ್ಲಿ ಹೂವನ್ನು ಅಳತೆ ಮಾಡಿ ನನ್ನ ಕೈಗಿಟ್ಟು ಒಂದೆರೆಡು ಕ್ಷಣಗಳಲ್ಲಿ ಮಾಯವಾಗಿಬಿಟ್ಟಿದ್ದಳು. 

ಅದೊಂದು ಶುಕ್ರವಾರ ಬೆಳಗ್ಗೇನೆ ಕಿವಿಗೆ ಬಿತ್ತು ನೋಡಿ ಅವಳ ಧ್ವನಿ. ಹಾಸಿಗೆಯಿಂದ ಎದ್ದವಳೇ, ಛಂಗನೆ ಹಾರಿ ಕಾಂಪೌಂಡಿನ ಗೇಟಿಗೆ ಬಂದು ನಿಂತೆ. ಎದುರುಗಡೆ ನಾಲ್ಕಂತಸ್ತಿನಲ್ಲಿದ್ದ ಮನೆಯ ಮೆಟ್ಟಿಲುಗಳಿಂದ ಇಳಿದುಬರುತ್ತಿದ್ದಳು. ಆಹಾ!! ಅದೆಂಥ ದೃಶ್ಯ ಅಂತೀರಿ, ಚಂದಿರನ ತುಂಡೊಂದು ಖುದ್ದಾಗಿ ಹೂ ಮಾರಲು ಭೂಮಿಗಿಳಿದು ಬರುತ್ತಿರುವಂತಿತ್ತು.

ಆಕೆ ಅಲ್ಲಿಂದ ಇಳಿದು ಬರುತ್ತಿದ್ದಂತೆ “ಏನಮ್ಮ, ಬಾ ಇಲ್ಲಿ…’ ಎನ್ನುತ್ತಾ ಆಕೆಯ ಗಮನ ಸೆಳೆದಿದ್ದೆ. ಆಕೆ ಬಹುಶಃ ನಾನವಳಿಗೆ ಕೊಡಬೇಕಾದ ಹಣವನ್ನು ಮರೆತಿದ್ದಳೇನೊ! “ಏನಕ್ಕ?’ ಎನ್ನುತ್ತಾ ಅಚ್ಚರಿಯಿಂದಲೇ ನನ್ನ ಮುಂದೆ ಬಂದು ನಿಂತಳು. ನಾನು ಮಾತು ಮುಂದುವರಿಸಿ, “ನಾನು ನಿನ್ಹತ್ರ ಹೂ ತಗಂಡಿದ್ದೆ, ಆದ್ರೆ ಅವತ್ತು ದುಡ್ಡು ಕೊಟ್ಟಿರಲಿಲ್ಲ’ ಎಂದೆ. ಅವಳು ಸಣ್ಣಗೆ ನಗುತ್ತಾ, “ಅಯ್ಯೋ ಅಷ್ಟೇನಾ? ಇನ್ಯಾವಾಗಲಾದ್ರೂ ಕೊಡುವಿರಂತೆ ಬಿಡಿ’ ಎನ್ನುತ್ತಾ ಖಾಲಿಯಾಗಿದ್ದ ತನ್ನ ಹೂಬುಟ್ಟಿಯನ್ನು ಅಲ್ಲೇ ಪಕ್ಕದಲ್ಲಿ ಕೊಡವಿ ಹೊರಡಲಣಿಯಾದಳು. ನಾನವಳನ್ನು ಮಾತಿಗೆಳೆಯಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಾನೇ ಹಠ ಮಾಡಿ ಒಂದು ಲೋಟ ಚಹಾ ತಂದು ಅವಳ ಮುಂದಿಟ್ಟೆ. ಚಹಾ ಕುಡಿದು ಲೋಟ ಕೆಳಗಿಟ್ಟವಳೇ, “ಅಕ್ಕಾ, ಎಷ್ಟು ತಿಂಗ್ಳು?’ ಎಂದಿದ್ದಳು ನಸುನಗುತ್ತಾ. ನಾನವಳ ಮಾತಿಗೆ ನಾಚುತ್ತಾ, “ಐದು ತಿಂಗಳು’ ಎನ್ನುತ್ತಾ ಕೈಸನ್ನೆ ಮಾಡಿದೆ. “ನೋಡ್ತಿರಿ, ನಿಮ್ಗೆ ಹೆಣ್ಣುಮಗುನೇ ಆಗುತ್ತೆ’ ಅಂತ ಭವಿಷ್ಯ ಬೇರೆ ನುಡಿದಿದ್ದಳು. ನಾನು “ಆಗ್ಲಿ ಬಿಡು, ನಿಂಥರಾನೆ ಮು¨ªಾಗಿರೋ ಹೆಣ್ಮಗು ಹುಟ್ಟಿದ್ರೆ ಯಾರ್‌ ಬೇಡ ಅಂತಾರೆ?’ ಎಂದಿದ್ದೇ ತಡ ನಾಚಿ ನೀರಾಗಿದ್ದಳು. 

ನಾನೇ ಮಾತು ಮುಂದುವರಿಸಿ, “ನನಗೆ ಅಣ್ಣಾನೋ ತಮ್ಮಾನೋ ಇದ್ದಿದ್ರೆ ನಿನ್ನವನಿಗೆ ಗಂಟಾಕ್ತಿದ್ದೆ, ಏನ್ಮಾಡೋದು ದೇವ್ರು ಅದಕ್ಕೂ ಕಲ್ಲುಹಾಕಿ ಕೂತಿದ್ದಾನೆ’ ಎನ್ನುತ್ತಾ ನಿಟ್ಟುಸಿರುಬಿಟ್ಟೆ. ಅವಳ ಮನದಾಳದಲ್ಲಿದ್ದ ಮಾತುಗಳು ನಿಜವಾಗಿಯೂ ಶುರುವಾಗಿದ್ದು ಆಗಲೇ. “ಅಯ್ಯೋ ಬಿಡಕ್ಕಾ… ನನ್ನಂಥ ನತದೃಷ್ಟೆಯ ಹಣೆಬರಹದಲ್ಲಿ ಮದುವೆ-ಗಿದುವೆ ಬರ್ದಿಲ್ಲ ದೇವ್ರು’ ಎಂಬ ಅವಳ ಮಾತಿನಲ್ಲಿ ಬೇಸರವಿತ್ತು. ನಾನವಳ ಮಾತನ್ನು ಅಲ್ಲಿಯೇ ತಡೆದು, “ಅದ್ಯಾಕ್‌ ಹಂಗೆಲ್ಲಾ ಮಾತಾಡ್ತಿದ್ಯಾ?’ ಅಂತ ಮೆಲ್ಲಗೆ ಗದರಿದೆ. ನನ್ನ ಮಾತು ಅವಳ ಮನಸ್ಸಿಗೆ ತಲುಪಿರಲಿಲ್ಲ ಎಂಬುದು ಆಕೆಯ ಮೊಗದಲ್ಲೇ ಎದ್ದು ಕಾಣುತ್ತಿತ್ತು. ಸ್ವಲ್ಪ ಹೊತ್ತು ಸುಮ್ಮನಿದ್ದು, “ಅಕ್ಕಾ… ಹೆಣ್ಣಾಗಿ ಹುಟ್ಟಿದ್ಮೇಲೆ ಆಸೆ ಕನಸುಗಳನ್ನೆಲ್ಲ ಮೂಟೆ ಕಟ್ಟಿ ಮೂಲೆಗಾಕೆಕು, ಕನಸು ಕಾಣೋದಿರ್ಲಿ, ಕನಸು ಕಾಣಬೇಕು ಅಂದ್ಕೋಳ್ಳೋದೇ ಮಹಾಪರಾಧ ನೋಡು’ ಎಂದುಬಿಟ್ಟಿದ್ದಳು. ಅವಳ ಪ್ರತಿ ಮಾತು ಆಕೆಯ ನೋವಿನ ತೀವ್ರತೆಯನ್ನು ತೆರೆದಿಡುತ್ತಿದ್ದವು. ನಾನವಳ ಮಾತಿಗಷ್ಟೇ ಕಿವಿಯಾಗಿದ್ದೆ.

“ಅಮ್ಮ ಸತ್ತ ಮೇಲೆ ನನ್ನನ್ನು ನೆಪವಾಗಿಟ್ಕೊಂಡು, ಅಪ್ಪ ಇನ್ನೊಂದು ಮದುವೆಯಾದ್ರು. ಚಿಕ್ಕಮ್ಮ, ಪಾಪ ಅಮ್ಮನಿಗಿಂತ ಹೆಚ್ಚಾಗಿಯೇ ಅಕ್ಕರೆಯಿಂದ ನೋಡಿಕೊಳ್ತಾಳೆ. ಚಿಕ್ಕಮ್ಮನಿಗೆ ಇಬ್ಬರು ಅವಳಿ ಮಕ್ಳು. ತಮ್ಮ ಚೆನ್ನಾಗಿದ್ದಾನೆ, ತಂಗಿಗೆ ಮಾತು ಬರಲ್ಲ. ಅಪ್ಪ ಇರೋವರೆಗೂ ಚಿಕ್ಕಮ್ಮನ ಹೊಡೆದು ಬಡಿದು ಮಾಡ್ತಿದ್ರು. ಈಗ ಅಪ್ಪಾನೂ ಇಲ್ಲ, ಚಿಕ್ಕಮ್ಮ ಒಂದೆರೆಡು ಮನೆ ಕೆಲಸ ಮಾಡ್ತಾರೆ, ತಮ್ಮ ಐದನೇ ಕ್ಲಾಸ್‌ ಓದ್ತಾ ಇದಾನೆ, ತಂಗಿಗೆ ಮಾತು ಬರ್ತಿಲ್ಲ ಅಂತ ಶಾಲೆ ಬಿಡ್ತಿದೀವಿ. ಇನ್ನು ನಾನು ಹೇಗೋ ಎಸ್ಸೆಸ್ಸೆಲ್ಸಿ ವರೆಗೂ ಓದಿದೆ; ಅದೂ ಅಜ್ಜಿಮನೆಯಲ್ಲಿ ಅಂದ್ರೆ ಹಳ್ಳಿಯಲ್ಲಿ. ಅಪ್ಪ ಹೋದ್ಮೇಲೆ ಚಿಕ್ಕಮ್ಮನ್ನ ಒಂಟಿಯಾಗಿ ಈ ಸಿಟಿಯಲ್ಲಿ ಬಿಡೋಕೆ ಮನಸ್ಸಾಗಲಿಲ್ಲ ಕಣಕ್ಕಾ… ಅದ್ಕೆ ಅಮ್ಮ ಕಲಿಸಿದ ಹೂ ಕಟ್ಟೋ ಕಲೆಯನ್ನೇ ಬಂಡವಾಳ ಮಾಡ್ಕೊಂಡು ವ್ಯಾಪಾರ ಮಾಡ್ತಿದೀನಿ…’                 
– ಒಂದು ಸಣ್ಣ ನೋವು ತುಂಬಿದ ನಗುವಿನೊಂದಿಗೆ ಅವಳ ಮಾತು ಮುಕ್ತಾಯವಾಗಿತ್ತು.

ಅಂದಹಾಗೆ ಆಕೆಯ ಹೆಸರು ನಯನ. ನಾ ಕಂಡ ಅದೆಷ್ಟೋ ಹೆಣ್ಣುಮಕ್ಕಳಲ್ಲಿ ಇವಳೊಂದು ಅದ್ಭುತ.

 ಸತ್ಯ ಗಿರೀಶ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.