ಎಲ್ಲಾ ಸರಿಯಿತ್ತು, ಆಮೇಲೇನಾಯ್ತು?


Team Udayavani, Dec 12, 2018, 6:00 AM IST

d-141.jpg

ಜ್ಯೋತಿಗೆ, ಬಾವ ಎಂದರೆ ಬಹಳ ಪ್ರಿಯ. ಅಕ್ಕನ ಶಿಸ್ತಿನ ಕಣ್ಗಾವಲಿನಲ್ಲಿ ಬಾವ- ನಾದಿನಿಯರ ನಡುವೆ ಮಧುರ ಸಂಬಂಧವಿತ್ತು. ಆಕೆ ಕೇಳಿದ್ದೆಲ್ಲವನ್ನೂ ಬಾವ ಕೊಡಿಸುತ್ತಿದ್ದರು. ಎಲ್ಲಾ ಕಡೆಗೆ ಆಕೆಯನ್ನೂ ಕರೆದುಕೊಂಡು ಹೋಗುತ್ತಿದ್ದರು. “ಮದುವೆಯಾದರೆ, ನಿಮ್ಮ ಥರದವರನ್ನೇ ಮದುವೆಯಾಗಬೇಕು ಬಾವಾ’ ಎಂದು ಜ್ಯೋತಿ ಸದಾ ಹೇಳುತ್ತಿದ್ದಳು.  

ಹದಿನೈದು ವರ್ಷಗಳ ಹಿಂದೆ, ಚೊಚ್ಚಲ ಹೆರಿಗೆಯಲ್ಲಿ ಅಕ್ಕ ತೀರಿಕೊಂಡ ನೋವಿನ ಸಂದರ್ಭದಲ್ಲಿ ಜ್ಯೋತಿ ತನ್ನ ಬಾವನನ್ನೇ ಮದುವೆಯಾಗುವ, ಅಕ್ಕನ ಮಗುವಿಗೆ ತಾಯಿಯಾಗುವ ನಿರ್ಧಾರ ತೆಗೆದುಕೊಂಡಳು. ಬಾವನಿಗೆ ಪತ್ನಿಯಾಗಿ, ಮಗುವಿಗೆ ತಾಯಿಯಾಗಿ, ಅತ್ತೆಯ ಮನೆಗೆ ಸೊಸೆಯಾಗಿ ಕಾಲಿಟ್ಟಳು ಜ್ಯೋತಿ. ಎಷ್ಟು ಚಿಕ್ಕ ವಯಸ್ಸಿಗೆ ಎಂಥಾ ಮನಸ್ಸು ಎಂದು ಆಗ ಎಲ್ಲರಿಗೂ ಆಶ್ಚರ್ಯ!

ಗಂಡನಾದ ಮೇಲೆ ಬಾವ ಬದಲಾದಂತೆ ಕಂಡರು. ತನ್ನನ್ನು ಬೇಕಾಬಿಟ್ಟಿ ಮಾತನಾಡಿಸುತ್ತಾರೆ ಎಂದು, ನನ್ನ ಮುಂದೆ ಕುಳಿತು ಜ್ಯೋತಿ ರೋದಿಸಿದಳು. ಆಕೆಯ ಕಣ್ಣುಗಳು ಬಾತುಕೊಂಡಿದ್ದವು. ಜೀವನದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಳು. ತೀರಿಕೊಂಡ ಅಕ್ಕನ ಎಲ್ಲ ಪಾತ್ರಗಳನ್ನೂ ಸಮರ್ಥವಾಗಿ ವಹಿಸಿಕೊಂಡರೂ, ಬಾವ ಗಂಡನಾಗಿ ಮೋಸ ಮಾಡಿದ ಅನ್ನೋ ಭಾವನೆ ಅವಳಲ್ಲಿತ್ತು. ಜ್ಯೋತಿಗೆ ಈಗ ಎರಡು ಮಕ್ಕಳಾಗಿದ್ದರೂ, ನೆಮ್ಮದಿ ಸಿಕ್ಕಿರಲಿಲ್ಲ. 

ಹದಿನೈದು ತುಂಬಿದ ಅಕ್ಕನ ಮಗಳು ಶೀಲಾ, ಥೇಟ್‌ ಅಕ್ಕನಂತೆಯೇ. ಅವಳ ಬಗ್ಗೆ ಸಹಜವಾಗಿ ಎಲ್ಲರ ಹೃದಯದಲ್ಲೂ ಒಂದು ಹೆಚ್ಚಿನ ಅನುಕಂಪವಿತ್ತು. ದಿನೇ ದಿನೆ ತನ್ನ ಗಂಡ ಶೀಲಾಗೆ ಹೆಚ್ಚಿನ ಸಮಯ ನೀಡುತ್ತಿರುವ ಚಿಕ್ಕ ಅನುಮಾನ ಜ್ಯೋತಿಯಲ್ಲಿ ಮನೆಮಾಡಿತ್ತು. ತನ್ನ ಮಕ್ಕಳಿಗೂ ಸಮಯ ಕೊಡಿ ಎಂದು ಗಂಡನಲ್ಲಿ ದುಂಬಾಲು ಬಿದ್ದಿದ್ದಳು. ಅಕ್ಕನ ಮಗಳಿಗೆ ಕೆಲವೊಮ್ಮೆ ನೋವುಂಟಾಗುವ ಹಾಗೆಯೂ ಮಾತನಾಡಿದ್ದಳು.  

ಆದರೆ, ಅಕ್ಕನ ನಿಧನದಿಂದಾಗಿ ಬಾವ ಬಸವಳಿದಿದ್ದನ್ನು ಜ್ಯೋತಿ ಗಮನಿಸಿಯೇ ಇರಲಿಲ್ಲ. ಅಕ್ಕ-ಬಾವನ ಮಧ್ಯೆ ಅಲ್ಪ ಸಮಯದಲ್ಲೇ ಗಾಢವಾದ ಸಂಬಂಧ ಬೆಳೆದಿದ್ದು ಜ್ಯೋತಿಗೆ ಅರ್ಥವಾಗಿರಲಿಲ್ಲ. ಅಕ್ಕ ಬಹಳ ಗಂಭೀರ, ಕೊಡುಗೈ ದಾನಿ ಮತ್ತು ದೊಡ್ಡ ಸಂಸಾರದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಮತ್ತು ತಾಳ್ಮೆ ಇದ್ದ ಹೆಣ್ಣು. ಅಂಥ ಪತ್ನಿಯ ಅಗಲಿಕೆ ಅವರನ್ನು ಭಾವನಾತ್ಮಕವಾಗಿ ಕೊಂದುಹಾಕಿತ್ತು. ಬಾವ ಜೀವನೋತ್ಸಾಹ ಕಳೆದುಕೊಂಡಿದ್ದರು.   

ಹಾಗೆಂದು ಜ್ಯೋತಿ ಕೆಟ್ಟವಳಲ್ಲ. ಆದರೆ, ವ್ಯವಹಾರಸ್ಥೆ. ಡಬ-ಡಬಾಂತ ಮಾತಾಡುವ ಸ್ವಭಾವದವಳು. ನೇರವಾಗಿ ಮಾತನಾಡಿ ಎಲ್ಲರ ನಿಷ್ಠುರಕ್ಕೆ ಒಳಗಾಗುತ್ತಿದ್ದಳು. ಬಾವನಿಗೆ ಈ ವಿಚಾರದಲ್ಲಿ ಸಿಟ್ಟು ಬರುತ್ತಿತ್ತು. ಆಗಾಗ ಹೆಂಡತಿಯ ಮೇಲೆ ಸಿಡುಕುತ್ತಿದ್ದರು. ಜ್ಯೋತಿಗೆ ಡೈವೋರ್ಸ್‌ ತೆಗೆದುಕೊಳ್ಳಬೇಕು ಎನಿಸಿಬಿಟ್ಟಿತ್ತು. ಹಾಗೆ ಹೇಳಿದಾಗ ಸಿಟ್ಟಿನಲ್ಲಿ ಬಾವ “ಓಕೆ’ ಎಂದೂ ಹೇಳಿಬಿಟ್ಟಿದ್ದಾರೆ!   

ಕೆಲವು ಸಲ, ಚಿಕ್ಕ ವಯಸ್ಸಿನಲ್ಲಿ ಆದರ್ಶಕ್ಕೆ ಬಿದ್ದು, ಆವೇಶದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಜೀವನ ಪೂರ್ತಿ ನಿಭಾಯಿಸಲು, ದೃಢ ಮನಸ್ಸು ಬೇಕಾಗುತ್ತದೆ. ಆಗ, ಆದರ್ಶಗಳೇ ನಮ್ಮ ವ್ಯಕ್ತಿತ್ವವಾಗಬೇಕು. ನಾವು ಯಾರ ಜಾಗವನ್ನು ತುಂಬಲು ನಿಲ್ಲುತ್ತೇವೋ, ಅವರ ಛಾಯೆಯಲ್ಲಿ ಬದುಕುವುದು ಬಹಳ ಕಷ್ಟ. ತಾಯಿಯ ಪಾತ್ರ ವಹಿಸಿಕೊಳ್ಳುವುದು ಸುಲಭದ ಮಾತಲ್ಲ. ತಾಯಿಯ ತ್ಯಾಗಕ್ಕೆ ತಕ್ಕ ಪ್ರತಿಫ‌ಲ ಸಿಗದಿರಬಹುದು. ನಿಸ್ವಾರ್ಥದಲ್ಲೂ ಜನ ಸ್ವಾರ್ಥ ಹುಡುಕಬಹುದು. ಅಂಥ ಸಂದರ್ಭದಲ್ಲಿ ತಾಳ್ಮೆಯಿಂದ, ದೃಢ ಚಿತ್ತದಿಂದ ಜೀವನ ಸಾಗಿಸಬೇಕು. 

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.