ಎಲ್ಲಾ ಸರಿಯಿತ್ತು, ಆಮೇಲೇನಾಯ್ತು?


Team Udayavani, Dec 12, 2018, 6:00 AM IST

d-141.jpg

ಜ್ಯೋತಿಗೆ, ಬಾವ ಎಂದರೆ ಬಹಳ ಪ್ರಿಯ. ಅಕ್ಕನ ಶಿಸ್ತಿನ ಕಣ್ಗಾವಲಿನಲ್ಲಿ ಬಾವ- ನಾದಿನಿಯರ ನಡುವೆ ಮಧುರ ಸಂಬಂಧವಿತ್ತು. ಆಕೆ ಕೇಳಿದ್ದೆಲ್ಲವನ್ನೂ ಬಾವ ಕೊಡಿಸುತ್ತಿದ್ದರು. ಎಲ್ಲಾ ಕಡೆಗೆ ಆಕೆಯನ್ನೂ ಕರೆದುಕೊಂಡು ಹೋಗುತ್ತಿದ್ದರು. “ಮದುವೆಯಾದರೆ, ನಿಮ್ಮ ಥರದವರನ್ನೇ ಮದುವೆಯಾಗಬೇಕು ಬಾವಾ’ ಎಂದು ಜ್ಯೋತಿ ಸದಾ ಹೇಳುತ್ತಿದ್ದಳು.  

ಹದಿನೈದು ವರ್ಷಗಳ ಹಿಂದೆ, ಚೊಚ್ಚಲ ಹೆರಿಗೆಯಲ್ಲಿ ಅಕ್ಕ ತೀರಿಕೊಂಡ ನೋವಿನ ಸಂದರ್ಭದಲ್ಲಿ ಜ್ಯೋತಿ ತನ್ನ ಬಾವನನ್ನೇ ಮದುವೆಯಾಗುವ, ಅಕ್ಕನ ಮಗುವಿಗೆ ತಾಯಿಯಾಗುವ ನಿರ್ಧಾರ ತೆಗೆದುಕೊಂಡಳು. ಬಾವನಿಗೆ ಪತ್ನಿಯಾಗಿ, ಮಗುವಿಗೆ ತಾಯಿಯಾಗಿ, ಅತ್ತೆಯ ಮನೆಗೆ ಸೊಸೆಯಾಗಿ ಕಾಲಿಟ್ಟಳು ಜ್ಯೋತಿ. ಎಷ್ಟು ಚಿಕ್ಕ ವಯಸ್ಸಿಗೆ ಎಂಥಾ ಮನಸ್ಸು ಎಂದು ಆಗ ಎಲ್ಲರಿಗೂ ಆಶ್ಚರ್ಯ!

ಗಂಡನಾದ ಮೇಲೆ ಬಾವ ಬದಲಾದಂತೆ ಕಂಡರು. ತನ್ನನ್ನು ಬೇಕಾಬಿಟ್ಟಿ ಮಾತನಾಡಿಸುತ್ತಾರೆ ಎಂದು, ನನ್ನ ಮುಂದೆ ಕುಳಿತು ಜ್ಯೋತಿ ರೋದಿಸಿದಳು. ಆಕೆಯ ಕಣ್ಣುಗಳು ಬಾತುಕೊಂಡಿದ್ದವು. ಜೀವನದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಳು. ತೀರಿಕೊಂಡ ಅಕ್ಕನ ಎಲ್ಲ ಪಾತ್ರಗಳನ್ನೂ ಸಮರ್ಥವಾಗಿ ವಹಿಸಿಕೊಂಡರೂ, ಬಾವ ಗಂಡನಾಗಿ ಮೋಸ ಮಾಡಿದ ಅನ್ನೋ ಭಾವನೆ ಅವಳಲ್ಲಿತ್ತು. ಜ್ಯೋತಿಗೆ ಈಗ ಎರಡು ಮಕ್ಕಳಾಗಿದ್ದರೂ, ನೆಮ್ಮದಿ ಸಿಕ್ಕಿರಲಿಲ್ಲ. 

ಹದಿನೈದು ತುಂಬಿದ ಅಕ್ಕನ ಮಗಳು ಶೀಲಾ, ಥೇಟ್‌ ಅಕ್ಕನಂತೆಯೇ. ಅವಳ ಬಗ್ಗೆ ಸಹಜವಾಗಿ ಎಲ್ಲರ ಹೃದಯದಲ್ಲೂ ಒಂದು ಹೆಚ್ಚಿನ ಅನುಕಂಪವಿತ್ತು. ದಿನೇ ದಿನೆ ತನ್ನ ಗಂಡ ಶೀಲಾಗೆ ಹೆಚ್ಚಿನ ಸಮಯ ನೀಡುತ್ತಿರುವ ಚಿಕ್ಕ ಅನುಮಾನ ಜ್ಯೋತಿಯಲ್ಲಿ ಮನೆಮಾಡಿತ್ತು. ತನ್ನ ಮಕ್ಕಳಿಗೂ ಸಮಯ ಕೊಡಿ ಎಂದು ಗಂಡನಲ್ಲಿ ದುಂಬಾಲು ಬಿದ್ದಿದ್ದಳು. ಅಕ್ಕನ ಮಗಳಿಗೆ ಕೆಲವೊಮ್ಮೆ ನೋವುಂಟಾಗುವ ಹಾಗೆಯೂ ಮಾತನಾಡಿದ್ದಳು.  

ಆದರೆ, ಅಕ್ಕನ ನಿಧನದಿಂದಾಗಿ ಬಾವ ಬಸವಳಿದಿದ್ದನ್ನು ಜ್ಯೋತಿ ಗಮನಿಸಿಯೇ ಇರಲಿಲ್ಲ. ಅಕ್ಕ-ಬಾವನ ಮಧ್ಯೆ ಅಲ್ಪ ಸಮಯದಲ್ಲೇ ಗಾಢವಾದ ಸಂಬಂಧ ಬೆಳೆದಿದ್ದು ಜ್ಯೋತಿಗೆ ಅರ್ಥವಾಗಿರಲಿಲ್ಲ. ಅಕ್ಕ ಬಹಳ ಗಂಭೀರ, ಕೊಡುಗೈ ದಾನಿ ಮತ್ತು ದೊಡ್ಡ ಸಂಸಾರದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಮತ್ತು ತಾಳ್ಮೆ ಇದ್ದ ಹೆಣ್ಣು. ಅಂಥ ಪತ್ನಿಯ ಅಗಲಿಕೆ ಅವರನ್ನು ಭಾವನಾತ್ಮಕವಾಗಿ ಕೊಂದುಹಾಕಿತ್ತು. ಬಾವ ಜೀವನೋತ್ಸಾಹ ಕಳೆದುಕೊಂಡಿದ್ದರು.   

ಹಾಗೆಂದು ಜ್ಯೋತಿ ಕೆಟ್ಟವಳಲ್ಲ. ಆದರೆ, ವ್ಯವಹಾರಸ್ಥೆ. ಡಬ-ಡಬಾಂತ ಮಾತಾಡುವ ಸ್ವಭಾವದವಳು. ನೇರವಾಗಿ ಮಾತನಾಡಿ ಎಲ್ಲರ ನಿಷ್ಠುರಕ್ಕೆ ಒಳಗಾಗುತ್ತಿದ್ದಳು. ಬಾವನಿಗೆ ಈ ವಿಚಾರದಲ್ಲಿ ಸಿಟ್ಟು ಬರುತ್ತಿತ್ತು. ಆಗಾಗ ಹೆಂಡತಿಯ ಮೇಲೆ ಸಿಡುಕುತ್ತಿದ್ದರು. ಜ್ಯೋತಿಗೆ ಡೈವೋರ್ಸ್‌ ತೆಗೆದುಕೊಳ್ಳಬೇಕು ಎನಿಸಿಬಿಟ್ಟಿತ್ತು. ಹಾಗೆ ಹೇಳಿದಾಗ ಸಿಟ್ಟಿನಲ್ಲಿ ಬಾವ “ಓಕೆ’ ಎಂದೂ ಹೇಳಿಬಿಟ್ಟಿದ್ದಾರೆ!   

ಕೆಲವು ಸಲ, ಚಿಕ್ಕ ವಯಸ್ಸಿನಲ್ಲಿ ಆದರ್ಶಕ್ಕೆ ಬಿದ್ದು, ಆವೇಶದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಜೀವನ ಪೂರ್ತಿ ನಿಭಾಯಿಸಲು, ದೃಢ ಮನಸ್ಸು ಬೇಕಾಗುತ್ತದೆ. ಆಗ, ಆದರ್ಶಗಳೇ ನಮ್ಮ ವ್ಯಕ್ತಿತ್ವವಾಗಬೇಕು. ನಾವು ಯಾರ ಜಾಗವನ್ನು ತುಂಬಲು ನಿಲ್ಲುತ್ತೇವೋ, ಅವರ ಛಾಯೆಯಲ್ಲಿ ಬದುಕುವುದು ಬಹಳ ಕಷ್ಟ. ತಾಯಿಯ ಪಾತ್ರ ವಹಿಸಿಕೊಳ್ಳುವುದು ಸುಲಭದ ಮಾತಲ್ಲ. ತಾಯಿಯ ತ್ಯಾಗಕ್ಕೆ ತಕ್ಕ ಪ್ರತಿಫ‌ಲ ಸಿಗದಿರಬಹುದು. ನಿಸ್ವಾರ್ಥದಲ್ಲೂ ಜನ ಸ್ವಾರ್ಥ ಹುಡುಕಬಹುದು. ಅಂಥ ಸಂದರ್ಭದಲ್ಲಿ ತಾಳ್ಮೆಯಿಂದ, ದೃಢ ಚಿತ್ತದಿಂದ ಜೀವನ ಸಾಗಿಸಬೇಕು. 

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.