ಅಡುಗೆ ಮನೆಯ ಬೊಜ್ಜು ನಿವಾರಕಗಳು


Team Udayavani, Dec 19, 2018, 6:00 AM IST

31.jpg

ಅಡುಗೆ ಮನೆಯೆಂಬ ಪುಟ್ಟ ಪ್ರಪಂಚದೊಳಗೆ ಸಂಜೀವಿನಿ ಲೋಕವೇ ಇದೆ. ಸಾಲಾಗಿ ಕೂಡಿಸಿಟ್ಟ ಡಬ್ಬಿಯ ದಿನಸಿಗಳಲ್ಲಿ, ಹರಡಿಟ್ಟ ತರಕಾರಿಗಳಲ್ಲಿ ಬೊಜ್ಜಿಗೂ ಔಷಧವಿದೆ.  ಅವು ಯಾವುವು?

1. ಕೊತ್ತಂಬರಿ ಸೊಪ್ಪಿನ ಪೇಯ
ಸ್ವಲ್ಪ ನೀರು ಬೆರೆಸಿ ಕೊತ್ತಂಬರಿ ಸೊಪ್ಪನ್ನು ಮಿಕ್ಸರ್‌ನಲ್ಲಿ ತಿರುವಿ ಜ್ಯೂಸ್‌ ತಯಾರಿಸಬೇಕು. ತದನಂತರ ಇದಕ್ಕೆ 1/2 ಲಿಂಬೆಹಣ್ಣಿನ ರಸ, 2 ಚಮಚ ಜೇನು ಬೆರೆಸಿ ಸೇವಿಸಬೇಕು. ನಿತ್ಯ ಖಾಲಿ ಹೊಟ್ಟೆಯಲ್ಲಿ 3-4 ತಿಂಗಳು ಸೇವಿಸಿದರೆ ಬೊಜ್ಜು ಕರಗುವುದು ಮಾತ್ರವಲ್ಲ, ಆರೋಗ್ಯವೂ ವರ್ಧಿಸುತ್ತದೆ. ಇವುಗಳಲ್ಲಿನ ಅಧಿಕ ವಿಟಮಿನ್‌ “ಸಿ’ಯ ಅಂಶವು ಫ್ಯಾಟ್‌ ಆಕ್ಸಿಡೇಶನ್‌ ಉತ್ಪತ್ತಿ ಮಾಡಿ, ಬೊಜ್ಜು ಕರಗಿಸುತ್ತದೆ.

2. ಕರಿಬೇವು, ಮೆಂತ್ಯದ ಕಷಾಯ
8-10 ಕರಿಬೇವಿನ ಎಲೆಗಳನ್ನು ಎಣ್ಣೆ ಹಾಕದೆ ಕಾವಲಿಯಲ್ಲಿ ರೋಸ್ಟ್‌ ಮಾಡಬೇಕು. ಎಲೆಗಳು ಆರಿದ ಬಳಿಕ ಪುಡಿ ಮಾಡಬೇಕು. 4-5 ಚಮಚ ಮೆಂತ್ಯೆ ಕಾಳುಗಳನ್ನು ಕಾವಲಿಯಲ್ಲಿ ಹುರಿದು ಆರಿದ ಬಳಿಕ ಹುಡಿ ಮಾಡಿ ಇಡಬೇಕು. ತದನಂತರ ಇವೆರಡನ್ನೂ ಬೆರೆಸಿ ಗಾಜಿನ ಕರಡಿಗೆಯಲ್ಲಿ ಸಂಗ್ರಹಿಸಬೇಕು. ನಿತ್ಯ 1 ಅಥವಾ 2 ಬಾರಿ (ಬೆಳಗ್ಗೆ ಮತ್ತು ಸಂಜೆ) ಈ ಪುಡಿಯನ್ನು 2 ಚಮಚಗಳಷ್ಟು ತೆಗೆದುಕೊಂಡು 1 ಕಪ್‌ ನೀರಿಗೆ ಬೆರೆಸಿ, ಕುದಿಸಿ, ಸೇವಿಸಿದರೆ ಬೊಜ್ಜು ಕರಗುತ್ತದೆ. ಮಧುಮೇಹಿಗಳಿಗೂ ರಾಮಬಾಣ.

3. ದಾಲ್ಚಿನ್ನಿ ಪುಡಿ, ನಿಂಬೆಯ ಪಾನೀಯ
1 ಕಪ್‌ ನೀರಿಗೆ 1/2 ಚಮಚ ದಾಲ್ಚಿನ್ನಿ ಪುಡಿ ಬೆರೆಸಿ 10 ನಿಮಿಷ ಹಾಗೇ ಇಡಬೇಕು. ತದನಂತರ 1/2 ನಿಂಬೆರಸ, 2 ಚಿಟಿಕೆ ಮೆಣಸಿನ ಕಾಳಿನ ಹುಡಿ ಬೆರೆಸಿ ಈ ಪಾನೀಯವನ್ನು ಖಾಲಿಹೊಟ್ಟೆಯಲ್ಲಿ ದಿನಕ್ಕೆ 1-2 ಬಾರಿ ಸೇವಿಸಬೇಕು. ದಾಲಿcನ್ನಿಯು ಚಯಾಪಚಯ ಕ್ರಿಯೆ (ಮೆಟಬಾಲಿಕ್‌ ರೇಟ್‌) ವೇಗ ವರ್ಧಿಸುವುದರಿಂದ ಶೀಘ್ರ ಬೊಜ್ಜು ನಿವಾರಣೆಗೆ ಹಿತಕರ.

4. ಶುಂಠಿ ಚಹಾ
1 ಕಪ್‌ ನೀರಿಗೆ 1 ಚಮಚ ಶುಂಠಿಯ ತುರಿ ಬೆರೆಸಿ ಸಣ್ಣ ಉರಿಯಲ್ಲಿ 2 ನಿಮಿಷ ಕುದಿಸಬೇಕು. ಆರಿದ ಬಳಿಕ ಇದನ್ನು ಸೋಸಿ, ತದನಂತರ ಜೇನು ಸೇರಿಸಬೇಕು. ಇದಕ್ಕೆ ನಿಂಬೆರಸವನ್ನು ಬೆರೆಸಬಹುದು. ಈ ಶುಂಠಿಯ ಚಹಾವನ್ನು ನಿತ್ಯ ಖಾಲಿಹೊಟ್ಟೆಯಲ್ಲಿ 1-2 ಬಾರಿ ಸೇವಿಸಿದರೆ 3-4 ತಿಂಗಳಲ್ಲಿ ಅಧಿಕ ಬೊಜ್ಜು ಕರಗುತ್ತದೆ.

5. ಹುರಿದ ಬೆಳ್ಳುಳ್ಳಿ ಸೇವನೆ
ಬೆಳ್ಳುಳ್ಳಿಯನ್ನು ಸಣ್ಣಗೆ ತುರಿದುಕೊಳ್ಳಬೇಕು. ತದನಂತರ 2 ಚಮಚ ಶುದ್ಧ ಕೊಬ್ಬರಿ ಎಣ್ಣೆ ಬೆರೆಸಿ, ಸಣ್ಣ ಉರಿಯಲ್ಲಿ ಬೆಚ್ಚಗೆ ಮಾಡಬೇಕು. ಇದನ್ನು ನಿತ್ಯ ಸೇವಿಸಿದರೆ ಬೊಜ್ಜು ಕರಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಬೊಜ್ಜು ನಿವಾರಕ ಗುಣಗಳೊಂದಿಗೆ ಕೊಬ್ಬರಿ ಎಣ್ಣೆಯಲ್ಲಿರುವ ಮಧ್ಯಮ ಫ್ಯಾಟಿ ಆಮ್ಲದ ಅಂಶವು ಬೊಜ್ಜು ಕರಗಲು ನೆರವಾಗುತ್ತದೆ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.