ಯಜಮಾನೀನ ಕೇಳಿ ಹೇಳ್ತೀನಿ…


Team Udayavani, Jan 2, 2019, 12:30 AM IST

x-9.jpg

ಮನೆ- ಮನೆಗಳಲ್ಲಿ ಹಿಂದೆ, ಇಂದು ಮಡದಿಯರನ್ನು ಹೇಗೆ ಕರೆಯುತ್ತಾರೆ ಎಂಬುದು ಗಮನಿಸಬೇಕಾದ ವಿಚಾರವೇ ಸೈ. ನಮ್ಮ ಸುತ್ತಮುತ್ತಲೇ ಧಾರಾಳವಾಗಿ ವಿಷಯ ಸಂಗ್ರಹ ಮಾಡಬಹುದು. ನಾವೇ ಕಂಡ ಹಾಗೆ ಹಲವಾರು ಸುಸಂಸ್ಕೃತ ಹಿರಿಯರು ಹೊರಗಿನವರಲ್ಲಿ ಮಾತಾಡುವಾಗ ಪತ್ನಿಯ ಬಗ್ಗೆ “ನಮ್ಮನೆ ಯಜಮಾನಿ’ ಎಂದು ಗೌರವವಾಗಿ ಹೇಳಿಕೊಳ್ತಾರೆ.

ಸ್ನೇಹಿತೆಗೆ ಕಾರ್ಯಕ್ರಮದ ನಿಮಿತ್ತ ಪರಸ್ಥಳಕ್ಕೆ ಹೋಗಲಿತ್ತು. ಜೊತೆಗೆ ಬಾ ಅಂತ ಕರೆದಿದ್ದಳು. ಫ್ರೀ ಇದ್ದ ಕಾರಣ ಹೋದೆ. ಆಕೆಯ ಅಮ್ಮ ಆ ಊರಲ್ಲಿರುವ ಅವರ ಅಕ್ಕನಿಗೆ ಕೊಡು ಅಂತ ಹೊಸ ಸೀರೆ ಕೊಟ್ಟಿದ್ದರು. ಹಿಂದಿರುಗುವಾಗ ಅವರ ಮನೆಗೆ  ಭೇಟಿಕೊಟ್ಟೆವು. ಹಳ್ಳಿಯೂರು. ನಾವು ಮನೆಗೆ ಕಾಲಿಟ್ಟಾಗ ಹಿರಿಯರೊಬ್ಬರು ಹೊರಗಡೆ ಇದ್ದರು. ಮತ್ತೆಲ್ಲ ನಿಶ್ಶಬ್ದ. ಮನೆಯೊಳಗಿಂದ ಸದ್ದು ಕೇಳುತ್ತಿತ್ತು. ಅಲ್ಲಿ ಕೂತಾಗ ಯಜಮಾನರು ಕುಶಲ ವಿಚಾರಿಸಿದರು. ಅಮ್ಮ ಕೊಟ್ಟ ಸೀರೆ ಕೊಟ್ಟು ಹೋಗಲು ಬಂದೆವು ಅಂತ ತಿಳಿಸಿದಾಗ ಆತ ದನಿಯೆತ್ತಿ ಕರೆದರು. ಹೆಂಡತಿಗೆ ಕೇಳಿರಲಿಕ್ಕಿಲ್ಲ. ಮರಳಿ ಕರೆದರು. “ಏ ಬೆಪ್ಪೀ, ನೆಂಟರು ಬಂದಿ¨ªಾರೆ, ಎಂತ ಕಿವಿ ಕೆಪ್ಪಾ?’ ಅಡುಗೆ ಮನೆ ಸಾಕಷ್ಟು ದೂರವಿತ್ತು. ಆಕೆಯಿಂದ ಉತ್ತರವಿಲ್ಲ. ಈಗ ಯಜಮಾನರಿಗೆ ಅಸಹನೆ. “ಏ ಹೆಣಾ, ಎಲ್ಲಿ ಸತ್ತೆ?’- ಆ ಸಂಬೋಧನೆ ಕೇಳಿದ ನಮಗೇ ಮುಖ ಬಿಳಿಚಿತ್ತು. ಆಕೆ ಹೊರಬಂದಾಗ ಮೋರೆ ನೋಡಿದರೆ ಪ್ರಸನ್ನವಾಗಿತ್ತು. ಗಂಡನ ಕರೆಯ ಬಗ್ಗೆ ಯಕಶ್ಚಿತ್‌ ಬೇಸರವೂ ಕಾಣಲಿಲ್ಲ. ಮುಜುಗರವಾಗಿದ್ದು ನಮಗೆ. ವೃದ್ಧಾಪ್ಯದಲ್ಲಿದ್ದ ಯಜಮಾನಿ ಅದಕ್ಕೆ ಬೆಲೆಯೇ ಕೊಡದಿದ್ದುದು ಎದ್ದು ಕಾಣಿಸಿತು.

“ಯಾಕೆ ಹೀಗೆಲ್ಲ ಕರೀತಾರೆ ಆ ಜನ?’ ಅಂತ ನಾನು, ಸ್ನೇಹಿತೆ ಮಾತನಾಡಿಕೊಂಡೆವು. ಪರಿಚಯದವರನ್ನೂ ವಿಚಾರಿಸಿದೆವು. ಆಗ ತಿಳಿದು ಬಂದಿದ್ದು: ಆತನಿಗೆ ದರ್ಪ. ಹೆಂಡತಿ ಅಂದರೆ ಕಾಲ ಕಸ. ಇದು ಲಾಗಾಯ್ತಿನಿಂದ ಬಂದ ಸಂಬೋಧನೆ. ಮೊದಮೊದಲು ಪತ್ನಿ ತಿದ್ದಲು ನೋಡಿದರು. ಆಗಲಿಲ್ಲ. ಅವರಪ್ಪನೂ ಹಾಗೇ ಕರೀತಿದ್ರಂತೆ. ಈ ವಿಚಾರ ಗೊತ್ತಾದ ಮೇಲೆ ಗಂಡನ ದನಿಗೆ ಬೆಲೆ ಕೊಡುವುದನ್ನೇ ಬಿಟ್ಟರು. ಬೆಪ್ಪಿ, ಪೆದ್ದಿ, ದಡ್ಡಿ, ಹೆಣಾ ಅಂತೆಲ್ಲ ಕರೆಯುವುದು! ಮನೆ ಯಜಮಾನ ಅನ್ನುವ ಅಹಂಕಾರ ಬೇರೆ! 

ಮನೆ-ಮನೆಗಳಲ್ಲಿ ಹಿಂದೆ, ಇಂದು ಮಡದಿಯರನ್ನು ಹೇಗೆ ಕರೆಯುತ್ತಾರೆ ಎಂಬುದು ಗಮನಿಸಬೇಕಾದ ವಿಚಾರವೇ ಸೈ. ನಮ್ಮ ಸುತ್ತಮುತ್ತಲೇ ಧಾರಾಳವಾಗಿ ವಿಷಯ ಸಂಗ್ರಹ ಮಾಡಬಹುದು. ನಾವೇ ಕಂಡ ಹಾಗೆ ಹಲವಾರು ಸುಸಂಸ್ಕೃತ ಹಿರಿಯರು ಹೊರಗಿನವರಲ್ಲಿ ಮಾತಾಡುವಾಗ ಪತ್ನಿಯ ಬಗ್ಗೆ “ನಮ್ಮನೆ ಯಜಮಾನಿ’ ಎಂದು ಗೌರವವಾಗಿ ಹೇಳಿಕೊಳ್ತಾರೆ. ಮತ್ತೂ ಬೇಕಿದ್ದರೆ, “ಯಜಮಾನಿಯಲ್ಲಿ ಒಂದು ಮಾತು ಕೇಳಿ ತಿಳಿಸುತ್ತೇನೆ’ ಅನ್ನುತ್ತಾರೆ. ಸಮಾರಂಭಗಳಿಗೆ ಪತಿ, ಪತ್ನಿ ಇಬ್ಬರನ್ನೂ ಒತ್ತಾಯಪೂರ್ವಕವಾಗಿ ಆಹ್ವಾನಿಸಿದಾಗ, “ಯಜಮಾನಿಯ ಅನುಕೂಲ ತಿಳಿದು ಹೇಳುವೆ’ ಅನ್ನುತ್ತಾರೆ. ಇಂಥ ಮಾತು ಕೇಳಿದಾಗ- ವಾಹ್‌, ಎಷ್ಟು ಘನಸ್ತಿಕೆಯ ಸಂಬೋಧನೆ ಜೀವನ ಸಂಗಾತಿಗೆ ಎಂದು ಹೆಮ್ಮೆಯಾಗಬೇಕು ಅವರ ಮಡದಿಗೆ. ಮನೆಯ ವಿಷಯವಾಗಲಿ; ಹೊರಗಿನ ಸಂಗತಿಯೇ ಇರಲಿ, ಪತ್ನಿಯ ಅಭಿಪ್ರಾಯಕ್ಕೆ ಮೊದಲ ಮನ್ನಣೆ ಅಂಥ ಮನೆಗಳಲ್ಲಿ. ಇಂಥ ಮನೆಗಳಲ್ಲಿನ ಕಿರಿಯರೂ ಇದೇ ಮನ್ನಣೆಯನ್ನು  ತಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳುತ್ತಾರೆ ಎನ್ನಬಹುದು. 

ಅನೇಕ ಮನೆಗಳಲ್ಲಿ ಪತ್ನಿಯನ್ನು ಹೆಸರು ಹಿಡಿದು ಕೂಗುವುದೇ ಇಲ್ಲ. ಬಹುಶಃ ಆಕೆಗೆ ಕ್ರಮೇಣ ತನ್ನ ಹೆಸರೇ ಮರೆತು ಹೋಗಲೂಬಹುದು. ಏ ಪೆದ್ದೀ, ಬೆಪ್ಪೀ, ಕೆಪ್ಪಿ… ಇತ್ಯಾದಿ ಪದಪುಂಜಗಳಲ್ಲಿ ಮಡದಿಯನ್ನು ಸಂಬೋಧಿಸುವ ಮಂದಿಯೂ ಇ¨ªಾರೆ. ಹಳ್ಳಿ, ದಿಲ್ಲಿ ಎನ್ನುವ ಭೇದ ಇಲ್ಲಿಲ್ಲ. ಹಳೆಯ ಕಾಲದಲ್ಲಿ ಇವೆಲ್ಲ ಸಹಜವಾಗಿತ್ತು ಎಂದರೆ ತಪ್ಪು. ಹಿರಿಯರಲ್ಲಿಯೂ ಪತ್ನಿಗೆ ಮನ್ನಣೆ ಕೊಡುವ, ಗೃಹಕೃತ್ಯಗಳಲ್ಲಿ ನೆರವಾಗುವ, ಜೀವನ ಸಂಗಾತಿಗಳಿದ್ದರು. ಬಂಗಾಲದಲ್ಲಿ ಮಕ್ಕಳ ಹೆಸರು ಹೇಳಿ ಅವರ ತಾಯಿ ಎಂದು ಕರೆಯುವ ಪದ್ಧತಿಯಿದೆ. ಅನೇಕ ಸಮುದಾಯಗಳಲ್ಲಿ ಪತಿಯನ್ನು ಪತ್ನಿ ಮತ್ತು ಪತ್ನಿಯನ್ನು ಪತಿ ಹೆಸರು ಹಿಡಿದು ಕರೆದರೆ ಅವರಿಗೆ ಅಲ್ಪಾಯಸ್ಸು ಎನ್ನುವ ಅಲಿಖೀತ ನಂಬಿಕೆಯೂ ಇದೆ. ಇಂದಿನ ಜಮಾನಾದಲ್ಲಿ ಸಂಸಾರದಲ್ಲಿ ಇಬ್ಬರೂ ಸಮಾನರು. ಕುಟುಂಬ ಚಿಕ್ಕದು. ಹೆಚ್ಚಿನ ಕಡೆ ಮಡದಿಗೆ ಆದರ, ಮನ್ನಣೆ, ಗೌರವ ಸಲ್ಲುತ್ತದೆ.

ಮನೆಯ ಆಗುಹೋಗುಗಳಲ್ಲಿ ಆಕೆಯ ಮಾತಿಗೆ ಮನ್ನಣೆ ಇದೆ. ಬಾಗಿಲ ಹಿಂದೆ ನಿಂತು ಹೆದರಿ, ಅಳುಕಿ ಮಾತಾಡುವ ಕಾಲ ಹಿಂದೆ ಇದ್ದುದು ನಿಜ. ಆದರೆ, ಈಗ ಅದೆಲ್ಲಾ ಹಳೆಯ ನೆನಪು. ಈಗ, ಮಡದಿಯನ್ನು ಆಕೆಯ ಹೆಸರು ಹಿಡಿದು ಅಥವಾ ಅದನ್ನೇ ಶಾರ್ಟಾಗಿ, ಸ್ವೀಟಾಗಿ ಕರೆಯುವ ಮನೆಗಳೇ ಹೆಚ್ಚು. ಮಡದಿಯೂ ಪತಿಯನ್ನು ಸ್ನೇಹಿತನ ಹಾಗೆ ಕಾಣುತ್ತ ಹೆಸರು ಹಿಡಿದೇ ಕರೆಯುವ ಉತ್ತಮ ಮೇಲ್ಪಂಕ್ತಿ ಹಾಕಿ ಇತರರಿಗೆ ಮಾದರಿಯಾಗಿ¨ªಾಳೆ. ತಪ್ಪೇನು? ಪತಿ, ಪತ್ನಿ ಎಂದರೆ ಒಂದೇ ಜೀವ; ಎರಡು ದೇಹ. ಇಲ್ಲಿ  ಸಂಬೋಧನೆಯನ್ನು ಕೇಳಿ ಅವರ ಮಧ್ಯದ ಆಪ್ತತೆ, ಪ್ರೇಮ, ಪ್ರೀತಿ, ಅನುಕೂಲ ದಾಂಪತ್ಯ, ಪರಸ್ಪರ ಮನ್ನಣೆ, ಗೌರವ, ವಿಶ್ವಾಸವನ್ನು ಅರಿಯಬಹುದು. ಜೀವನಪೂರ್ತಿ ತನ್ನ ಜೊತೆ ಹೆಜ್ಜೆ ಹಾಕಲು ಬಂದ ಪತ್ನಿಯನ್ನು ಪ್ರೀತ್ಯಾದರಗಳಿಂದ ಕರೆದಲ್ಲಿ  ಅದು ಸುಖ-ಸಂಸಾರದ ಸೂತ್ರಗಳಲ್ಲಿ ಮುಖ್ಯವಾದುದು ತಾನೆ? 

 ಕೃಷ್ಣವೇಣಿ ಕಿದೂರು

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.