ಕುಂಕುಮ ಕೋಮಲೆ


Team Udayavani, Jan 16, 2019, 12:30 AM IST

w-3.jpg

ಈಗಿನ ಕುಂಕುಮಗಳು ತಕ್ಷಣವೇ ಅಳಿಸಿ ಹೋಗುವುದಿಲ್ಲ. ಮುಖಕ್ಕೆಲ್ಲ ಕುಂಕುಮದ ಬಣ್ಣ ಹರಡುವ ಆತಂಕವಿಲ್ಲ. ಬೇಕಾದಾಗ ಅಂಟಿಸಿ, ಬೇಡದಾಗ ತೆಗೆಯಬಹುದು…

ಕುಂಕುಮಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ತರವಾದ ಸ್ಥಾನವಿದೆ. ಭಾರತೀಯ ನಾರಿಗೆ ಕುಂಕುಮ ಹಣೆಯಲ್ಲಿ ಧರಿಸಿ ಸಂಭ್ರಮಿಸುವುದೇ ಖುಷಿಯ ಸಂತಸದ ಸಂಗತಿ. “ಅಟ್ಟದ ಮೇಲೆ ಪುಟ್ಟ ಲಕ್ಷ್ಮೀ’ ಎಂಬ ಒಗಟಿಗೆ ಉತ್ತರವಾದ ಕುಂಕುಮದ ಹೆಗ್ಗಳಿಕೆ, ಇತಿಹಾಸ, ಉಪಯೋಗ ಬಹಳ ಹಿರಿದು. ಹೆಣ್ಣಿಗೆ ಅಲಂಕಾರ ಭೂಷಣವಾಗಿರುವ ಕುಂಕುಮವನ್ನು ಮನೆಗೆ ಬಂದ ಮುತ್ತೈದೆಯರಿಗೆ ನೀಡುವುದು ಗೌರವದ, ಸತ್ಸಂಪ್ರದಾಯದ ಸಂಕೇತ. 

ಭಾರತದ ಹಲವೆಡೆ ಮದುವೆಯಾದ ಹೆಂಗಸರು ಬೈತಲೆ ಹತ್ತಿರ ಕೆಂಪು ಸಿಂಧೂರ ಇಡುವ ಪದ್ಧತಿ ಇದೆ. ಪೂಜೆ- ಪುನಸ್ಕಾರ, ಹೋಮ ಹವನಗಳಲ್ಲಿ, ಹಿಂದೂ ದೇವತೆಗಳ ಆರಾಧನೆಯಲ್ಲಿ ಹೆಚ್ಚಾಗಿ ಶಕ್ತಿದೇವತೆ, ಲಕ್ಷ್ಮೀ ಪೂಜೆಗಳ ಸಂದರ್ಭದಲ್ಲಿ ಕುಂಕುಮವನ್ನು ಹೆಚ್ಚಿನ ಪ್ರಮಾಣದಲ್ಲಿ ಭಕ್ತಿಯಿಂದ ಬಳಸಲಾಗುತ್ತದೆ. ಕುಂಕುಮದಲ್ಲಿ ದೈವೀಶಕ್ತಿ ತುಂಬಿರುವುದರಿಂದ ಧರಿಸಿದವರ ಮನಸ್ಸನ್ನು ಪರಿಶುದ್ಧಗೊಳಿಸುತ್ತದೆ. ಅಷ್ಟೇ ಅಲ್ಲ, ಕುಂಕುಮ ಯಾವುದೇ ಋಣಾತ್ಮಕ ಶಕ್ತಿಗಳ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲವೆಂದು ನಂಬಿಕೆಯೂ ಇದೆ.

ಕುಂಕುಮ ಕೆಂಪು ಬಣ್ಣದ್ದಾದರೂ ಅದನ್ನು ತಯಾರಿಸುವುದು ಅರಿಶಿನ, ಸುಣ್ಣ  ಮತ್ತು ಎಣ್ಣೆಯನ್ನು ಬಳಸಿ. ಅದಕ್ಕೂ ಕಲಬೆರಕೆಯ ಗಾಳಿ ಸೋಕಿರುವುದು ಆತಂಕದ ಸಂಗತಿ. 50 ವರ್ಷಗಳ ಹಿಂದೆ ನಮ್ಮಮ್ಮ ಮಕ್ಕಳಿಗೆ ಹಣೆಗೆ ಇಡಲೆಂದು ಕಪ್ಪು ಸಾದು ಸ್ವತಃ ತಾನೇ ತಯಾರಿಸುತ್ತಿದ್ದರು. ಅಕ್ಕಿಯನ್ನು ಕಬ್ಬಿಣದ ಬಾಣಲೆಯಲ್ಲಿ ಕಪ್ಪಾಗುವವರೆಗೂ ಹುರಿದು ಅದನ್ನು ಬೆಲ್ಲದೊಂದಿಗೆ ಒರಳುಕಲ್ಲಿನಲ್ಲಿ ರುಬ್ಬಿ ಕುದಿಸಿ ಡಬ್ಬಿಗೆ ಹಾಕಿಡುತ್ತಿದ್ದರು. ಅದು ಅನೇಕ ತಿಂಗಳುಗಳವರೆಗೂ ಹಾಳಾಗದೆ ಹಾಗೇ ಇರುತ್ತಿತ್ತು. ಅದರಿಂದ ಚುಕ್ಕಿಚಿತ್ತಾರ, ಗುಂಡಗೆ, ತಿಲಕದ ರೀತಿ, ಕಡ್ಡಿಯಿಂದ ಉದ್ದಕ್ಕೆ… ಹೀಗೆಲ್ಲಾ ವಿಧ ವಿಧ ಆಕಾರ ಮತ್ತು ವಿನ್ಯಾಸಗಳನ್ನು ನಾನು ನನ್ನ ತಂಗಿಯಂದಿರು ಬಿಡಿಸಿ ಸಂಭ್ರಮಿಸುತ್ತಿದ್ದೆವು. ದಿನವಿಡೀ ಇದ್ದರೂ ಅಳಿಸಿಹೋಗದ ಅಂಟಾದ ಕಪ್ಪು ಸಾದಿನ ನಂಟು ಈಗ ನೆನಪಿನ ಗಂಟು!

ಇತ್ತೀಚಿನ ವರ್ಷಗಳಲ್ಲಿ ಹಣೆಗೆ ಕುಂಕುಮ ಇಡುವ ಸಂಪ್ರದಾಯ ಬಹಳವೇ ಕಡಿಮೆಯಾಗಿ ಬಿಂದಿ ಅಂಟಿಸಿಕೊಳ್ಳುವ ಸಂಸ್ಕೃತಿ ಬಂದಿದೆ. ಈಗಿನ ಕುಂಕುಮಗಳು ತಕ್ಷಣವೇ ಅಳಿಸಿ ಹೋಗುವುದಿಲ್ಲ. ಮುಖಕ್ಕೆಲ್ಲ ಕುಂಕುಮದ ಬಣ್ಣ ಹರಡುವ ಆತಂಕವಿಲ್ಲ. ಬೇಕಾದಾಗ ಅಂಟಿಸಿ, ಬೇಡದಾಗ ತೆಗೆಯಬಹುದು. ಬಳಕೆ ತುಂಬಾ ಸುಲಭ. ಅದರಲ್ಲಿಯೂ ಅಲರ್ಜಿಯಾಗುವ ಸಾಧ್ಯತೆಗಳಿವೆ. ಮೊದಲು ಕಪ್ಪು, ಕೆಂಪು ಬಣ್ಣಗಳಲ್ಲಿ ಮಾತ್ರ ದೊರೆಯುತ್ತಿದ್ದ ಬಿಂದಿ, ಬೊಟ್ಟು ಕ್ರಮೇಣ ನಾನಾ ಬಣ್ಣಗಳಲ್ಲಿ ವಿವಿಧ ಆಕಾರ ವಿನ್ಯಾಸ, ಮುತ್ತುಗಳಿಂದ ಅಲಂಕೃತ, ಬಣ್ಣದ ಹರಳುಗಳಿಂದ ಕೂಡಿದ ಸ್ಟಿಕ್ಕರ್‌ ಮಾದರಿಯಲ್ಲಿ ಸಿಗಲು ಶುರುವಾದವು. 

ಬದಲಾದ ಕಾಲದಲ್ಲೂ ಕುಂಕುಮ ಮಾರ್ಪಾಡುಗಳಿಗೆ ಒಳಗಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಅದರ ಹೆಗ್ಗಳಿಕೆ. 

ಶಾರದಾ ಮೂರ್ತಿ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.