ಅಡುಗೆಮನೆಯಲಿ ಅವರೆ ಮೇಳ


Team Udayavani, Jan 16, 2019, 12:30 AM IST

w-6.jpg

ಇದು ಅವರೆಯ ಸೀಸನ್‌. ಬಾಯಿಯಲ್ಲಿ ನೀರೂರಿಸುವ ಅವರೆ ಖಾದ್ಯಗಳ ರೆಸಿಪಿಗಳು ಇಲ್ಲಿವೆ. 

1. ಅವರೆಕಾಯಿ ಪಲ್ಯ
ಬೇಕಾಗುವ ಸಾಮಗ್ರಿ:
ಎಳೆ ಕಾಯಿ-3 ಲೋಟ, ಈರುಳ್ಳಿ-2, ಟೊಮೇಟೊ-2, ಅಚ್ಚ ಖಾರದ ಪುಡಿ-2 ಚಮಚ, ಹಸಿಮೆಣಸು, ಎಣ್ಣೆ ಸ್ವಲ್ಪ, ಸಾಸಿವೆ- 1 ಚಮಚ, ಜೀರಿಗೆ-1/2 ಚಮಚ, ಎಳ್ಳು-1 ಚಮಚ, ಅರಿಶಿನ ಪುಡಿ-1 ಚಮಚ, ಬೆಳ್ಳುಳ್ಳಿ-2 ಎಸಳು, ಗರಂ ಮಸಾಲೆ-1 ಚಮಚ, ಸಾಂಬಾರ್‌ ಪುಡಿ-1 ಚಮಚ, ಕೊತ್ತಂಬರಿ ಸೊಪ್ಪು-1/2 ಕಟ್ಟು, ಚೂರು ಸಕ್ಕರೆ (ಬೇಕಿದ್ದರೆ)

ಮಾಡುವ ವಿಧಾನ: ಅವರೆಕಾಳನ್ನು ಚೆನ್ನಾಗಿ ತೊಳೆದು ಬೇಯಿಸಿ. ಒಗ್ಗರಣೆಗೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹಸಿಮೆಣಸು, ಎಳ್ಳು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಈರುಳ್ಳಿಯನ್ನು ಸಹ ಕೆಂಪಗೆ ಹುರಿಯಬೇಕು. ನಂತರ ಟೊಮೇಟೊ ಹಾಕಿ, ಬೇಯಿಸಿಟ್ಟ ಅವರೆ ಕಾಳು ಹಾಕಿ ಬೆರೆಸಿರಿ. ಅಚ್ಚಖಾರದ ಪುಡಿ, ಗರಂ ಮಸಾಲೆ, ಅರಿಶಿನಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕೊನೆಗೆ ಒಂದು ಚಮಚ ಸಕ್ಕರೆ ಬೆರೆಸಿ. ನಂತರ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. 

2.ಅವರೆಕಾಳಿನ ಕೂರ್ಮ
ಬೇಕಾಗುವ ಸಾಮಗ್ರಿ: ಅವರೆ ಕಾಳು -3 ಕಪ್‌, ಆಲೂಗಡ್ಡೆ-2, ಟೊಮೇಟೊ-2, ಈರುಳ್ಳಿ-2, ಹುಣಸೆ ಹಣ್ಣಿನ ರಸ- 2 ಚಮಚ, ಕೊತ್ತಂಬರಿ ಸೊಪ್ಪು- ಅರ್ಧ ಕಟ್ಟು, ಸಾಸಿವೆ-1/2 ಚಮಚ, ಅರಿಶಿನ ಪುಡಿ-1 ಚಮಚ, ಅಚ್ಚಖಾರದ ಪುಡಿ-2 ಚಮಚ, ಎಣ್ಣೆ-ಒಗ್ಗರಣೆಗೆ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ ಚಟಪಟಿಸಿದ ನಂತರ, ಹೆಚ್ಚಿದ ಈರುಳ್ಳಿ ಹಾಗೂ ಟೊಮೇಟೊ ಹಾಕಿ ಹುರಿಯಿರಿ. ಬೇಯಿಸಿದ ಆಲೂಗಡ್ಡೆಯನ್ನು ತುಂಡು ಮಾಡಿ ಸರಿಯಾಗಿ ಕಲಸಿ. ಅವರೆಕಾಳನ್ನು ಬೇಯಿಸಿ, ಇವೆಲ್ಲವನ್ನು ಸೇರಿಸಿ ಉಪ್ಪು ಹಾಕಿ, ಕೈ ಆಡಿಸುತ್ತಲೇ ಕೊತ್ತಂಬರಿ ಸೊಪ್ಪು ಹಾಕಿ. ಒಂದು ಕುದಿ ಬಂದ ನಂತರ, ಬೇರೆ ಪಾತ್ರೆಗೆ ವರ್ಗಾಯಿಸಿ. ಇದು ರೊಟ್ಟಿ ಜೊತೆಗೆ ತಿನ್ನಲು ರುಚಿಕರವಾಗಿರುತ್ತದೆ. 

3. ಅವರೆಕಾಳು ಉಸಲಿ
ಬೇಕಾಗುವ ಸಾಮಗ್ರಿ:
ಅವರೆಕಾಳು-3 ಕಪ್‌, ಹಸಿಮೆಣಸು-4, ತೆಂಗಿನ ತುರಿ-1/2 ಕಪ್‌, ಲಿಂಬೆ ಹಣ್ಣು-1, ಅರಿಶಿನ-1/2 ಚಮಚ, ಕೊತ್ತಂಬರಿ ಸೊಪ್ಪು-1/2 ಕಟ್ಟು, ಜೀರಿಗೆ- 1 ಚಮಚ, ಮೆಂತ್ಯೆ- 1ಚಮಚ, ಚಕ್ಕೆ ಪುಡಿ-1 ಚಮಚ, ಈರುಳ್ಳಿ-2, ಎಣ್ಣೆ-ಒಗ್ಗರಣೆಗೆ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ. ನಂತರ ಈರುಳ್ಳಿ ಹಾಕಿ, ಕೆಂಪಗೆ ಹುರಿಯಿರಿ. ತೆಂಗಿನ ತುರಿ, ಹಸಿಮೆಣಸು ಹಾಕಿ ರುಬ್ಬಿ, ಆ ಮಿಶ್ರಣಕ್ಕೆ ಅವರೆಕಾಳನ್ನು ಸೇರಿಸಿ, ಬಾಣಲೆಯಲ್ಲಿ ಸ್ವಲ್ಪ ಹೊತ್ತು ಬಾಡಿಸಿ. ಜೀರಿಗೆ, ಮೆಂತ್ಯೆ, ಚಕ್ಕೆ ಪುಡಿ ಹಾಕಿ ಬೆರೆಸಿ. ನಂತರ ಅರಿಶಿನ ಪುಡಿ, ಲಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿದರೆ, ಸ್ವಾದಿಷ್ಟಕರ ಉಸಲಿ ರೆಡಿ.

4. ಅವರೆಕಾಳಿನ ಇಡ್ಲಿ
ಬೇಕಾಗುವ ಸಾಮಗ್ರಿ: ಅವರೆಕಾಳು-1 ಕಪ್‌, ಉದ್ದಿನ ಬೇಳೆ-1 ಕಪ್‌, ಅಕ್ಕಿ- 2 ಕಪ್‌, ಮೊಸರು-1/2 ಕಪ್‌, ಉಪ್ಪು ರುಚಿಗೆ  ತಕ್ಕಷ್ಟು.

ಮಾಡುವ ವಿಧಾನ: ನೆನಸಿದ ಉದ್ದಿನ ಬೇಳೆ ಹಾಗೂ ಅಕ್ಕಿಯನ್ನು ರುಬ್ಬಿ, 8 ಗಂಟೆ ಕಾಲ ಇಡಿ. ಅವರೆಕಾಳನ್ನು ಬೇಯಿಸಿಕೊಳ್ಳಿ. ಹಿಟ್ಟನ್ನು, ಇಡ್ಲಿ ಪಾತ್ರೆಗೆ ಸುರಿಯುವಾಗ ಬೇಯಿಸಿದ ಅವರೆಕಾಳು ಸೇರಿಸಿ, ಹಬೆಯಲ್ಲಿ ಬೇಯಿಸಿ. ಇಪ್ಪತ್ತು ನಿಮಿಷದ ನಂತರ  ಗಮಗಮ ಅವರೆಕಾಳು ಇಡ್ಲಿ ತಯಾರು.

5. ಮಸಾಲೆ ಇಡ್ಲಿ
ಬೇಕಾಗುವ ಸಾಮಗ್ರಿ: ಅವರೆಕಾಳು- 2 ಕಪ್‌, ನೆನೆಸಿದ ಕಡಲೆಬೇಳೆ-2 ಕಪ್‌, ಮೊಸರು- ಸ್ವಲ್ಪ, ತೆಂಗಿತುರಿ-1/2 ಕಪ್‌, ಕೊತ್ತಂಬರಿ ಸೊಪ್ಪು, ಶುಂಠಿ- 1 ತುಣುಕು, ಒಗ್ಗರಣೆಗೆ ಎಣ್ಣೆ,  ಸಾಸಿವೆ, ಜೀರಿಗೆ ಹಾಗೂ ಅಚ್ಚಖಾರದ ಪುಡಿ-ತಲಾ 1/2 ಚಮಚ, ಒಣಮೆಣಸು-6, ಹಸಿಮೆಣಸಿನಕಾಯಿ-2, ಕರಿಬೇವು-10. 

ಮಾಡುವ ವಿಧಾನ: ಹಿಂದಿನ ರಾತ್ರಿ ಕಡಲೆಬೇಳೆ ನೆನೆಸಿ ರುಬ್ಬಿಕೊಂಡು, ಅದಕ್ಕೆ ಮೊಸರು ಸೇರಿಸಿ ಇಡಿ. ಮಾರನೆಯ ದಿನ, ಶುಂಠಿ ಹಾಗೂ ಹಸಿಮೆಣಸನ್ನು ತರಿತರಿಯಾಗಿ ರುಬ್ಬಿ. ನಂತರ ಅವರೆಕಾಳು ಸೇರಿಸಿ, ಇಡ್ಲಿ ಹಿಟ್ಟನ್ನು ಕುಕ್ಕರ್‌ ಪಾತ್ರೆಯಲ್ಲಿ ಹಾಕಿ, ಸಾಸಿವೆ ಒಗ್ಗರಣೆ ಹಾಕಿ. ಇಪ್ಪತ್ತು ನಿಮಿಷ ಹಬೆಯಲ್ಲಿ ಬೇಯಿಸಿದರೆ ಅವರೆ ಕಾಳು ಇಡ್ಲಿ ರೆಡಿ.

ಹೀರಾ ರಮಾನಂದ್‌, ಬೆಂಗಳೂರು

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.