ಮುಟ್ಟಿದರೆ ಮುನಿಯುವಳು…


Team Udayavani, Feb 6, 2019, 12:30 AM IST

s-3.jpg

ಈ ಮದುವೆಯಲ್ಲಿ ಇರಲು ಸಾಧ್ಯವೇ ಇಲ್ಲವೆಂದು ಗಂಡ ಸಮೀರ್‌ (30) ಹಠಾತ್‌ ಆಗಿ ಮನೆ ಬಿಟ್ಟು ಬಿಟ್ಟು ಹೋಗಿರುವುದು ಲಲಿತಾಳಲ್ಲಿ ಆತಂಕ ಮೂಡಿಸಿದೆ. ಮದುವೆಯಾಗಿ ಇನ್ನೇನು ವರ್ಷವಾಗುತ್ತಾ ಬಂದರೂ, ಲಲಿತಾಗೆ (27) ಗಂಡನ ಸಾಮೀಪ್ಯವೇ ಹಿತವಾಗಿಲ್ಲ. ಮುಟ್ಟಕ್ಕೂ ಬಿಡದೇ ಕಾಡುತ್ತಾಳೆ. ಅವನಿಗೆ ಬೇರೆ ದಂಪತಿಯನ್ನು ನೋಡಿದಾಗ ಹೊಟ್ಟೆಕಿಚ್ಚು. ಸಾರ್ವಜನಿಕ ಸ್ಥಳದಲ್ಲಿ ಕೈ ಹಿಡಿದುಕೊಂಡರೆ ಮಿಸುಕಾಡುತ್ತಾಳೆ. ರಾತ್ರಿಯ ಹೊತ್ತು ಇವನೇನು ರೇಪ್‌ ಮಾಡಬಹುದು ಅನ್ನುವ ರೀತಿ, ಕೋಣೆಯ ಮೂಲೆಯಲ್ಲಿ ಕುಕ್ಕರಗಾಲಿನಲ್ಲಿ ಕುಳಿತು, ಗಡಗಡಾಂತ ನಡುಗಿದ್ದಾಳೆ. ಇವನಿಗೆ ಅವಳಿಂದ ತಿರಸ್ಕೃತನಾದಂತೆ ಅನಿಸುತ್ತದೆ. ಗಂಡನ ಸಂಕಷ್ಟ ಅರ್ಥವಾಗಿ, ಸಾಕಷ್ಟು ಪ್ರಯತ್ನ ಮಾಡಿದ್ದರೂ, ಇಬ್ಬರೂ ಸುಖೀಯಾಗಿಲ್ಲ.

ಮದುವೆ ನಿಶ್ಚಯವಾದ ಕೆಲವು ವಾರಗಳಲ್ಲಿ ಗಂಡು- ಹೆಣ್ಣು ಸರಸದಿಂದ ಮಾತನಾಡುತ್ತಾ ಹನಿಮೂನ್‌ ಬಗ್ಗೆ ಒಟ್ಟಿಗೆ ಕನಸು ಕಾಣುವುದು ಸಹಜ. ಆದರೆ, ಲಲಿತಾ ಅವನನ್ನು ಬಯ್ದಿದ್ದಾಳೆ. ಅವಳಿಗೆ ಆ ಚರ್ಚೆಯೆಲ್ಲಾ ಅಸಹ್ಯವಂತೆ!! ಇವಳು ಮಾಡಿದ ರಂಪಾಟಕ್ಕೆ ಹೆದರಿ, ಮಾವನವರಿಗೆ ಫೋನ್‌ ಮಾಡಿ, ಲಲಿತಾಗೆ ಮದುವೆ ಇಷ್ಟವಿಲ್ಲದಿದ್ದರೆ ತಿಳಿಸಿ ಎಂದು ಅವಲತ್ತುಕೊಂಡಿದ್ದ. ಸ್ವಲ್ಪ ನಾಚಿಕೆ ಇರಬಹುದು ಎಂದು ಮಾವ, ಸಮಾಧಾನ ಮಾಡಿದ್ದರು. ಲಲಿತಾ ಕಾನೂನು ಪದವೀಧರೆ, ಕೆಲಸದಲ್ಲಿದ್ದಾಳೆ. ನೋಡಲು ಮುದ್ದಾಗಿದ್ದಾಳೆ. ಮಾವನ ಮಾತಿಗೆ ಒಪ್ಪಿಕೊಂಡು ಸಮೀರ್‌ ಮುಂದುವರಿದ.

ಕೆಲವು ಹೆಣ್ಣುಮಕ್ಕಳಿಗೆ ಸೆಕ್ಸ್‌ ಬಗ್ಗೆ ಒಂದು ಮಟ್ಟದ ಮಡಿವಂತಿಕೆ ಸಹಜ. ಸತಿ- ಪತಿಗಳ ನಡುವೆ ಸರಸ ಸಲ್ಲಾಪವೇ ಇರದ, ಅಸಹಜ ಭಯಕ್ಕೆ ಚಿಕಿತ್ಸೆಯ ಅಗತ್ಯವಿದೆ. ಮೊದಲು ಸಮೀರನ ಮನಸ್ಸನ್ನು ಸಮಾಧಾನಕ್ಕೆ ತರಲು ನನ್ನ ಬಳಿ ಪ್ರತಿಯೊಂದು ಘಟನೆಯನ್ನೂ ವಿವರಿಸಿ ಹೇಳಿಕೊಳ್ಳಲು ಅನುವು ಮಾಡಿಕೊಟ್ಟೆ. ಇದನ್ನು venting out ಎನ್ನುತ್ತಾರೆ. ಈ ಮಧ್ಯ, ಲಲಿತಾ ಪ್ರಸೂತಿ ತಜ್ಞರ ಬಳಿ ಸಲಹೆಗೆ ಹೋದಳು. ಹಲವಾರು ಪರೀಕ್ಷೆ ಮಾಡಲಾಯಿತು. ನಂತರ sexologist ಬಳಿ ಇಬ್ಬರನ್ನೂ, ಸಲಹೆಗಾಗಿ ಕಳಿಸಿದೆ. ಲೈಂಗಿಕ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಕಲ್ಪನೆಯೂ ಇರದೇ, ಗಂಡನಿಗೆ ಎಷ್ಟು ನೋವಾಗಬಹುದೆಂದು ಕೌನ್ಸೆಲಿಂಗ್‌ ಮೂಲಕ ತಿಳಿದುಕೊಂಡಳು. ಸಂಬಂಧ ಸುಧಾರಿಸಿತು.

ಹುಡುಗಿಗೆ ಎದೆ ಕಡಿಮೆ ಇದ್ದಲ್ಲಿ, ತನ್ನ ದೈಹಿಕ ಆಕರ್ಷಣೆಯ ಬಗ್ಗೆ ಹೀನಭಾವವಿರಬಹುದು; ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಕಿರುಕುಳವಾಗಿರಬಹುದು; ತಂದೆ, ಮಗಳ ಬಗ್ಗೆ ಉತ್ಕಟ ಪ್ರೇಮ ಮತ್ತು ಕಾಳಜಿ ಹೊಂದಿದ್ದು, ತಾಯಿ- ಮಗಳ ಸಂಬಂಧ ಜಾಳು ಜಾಳಗಿದ್ದಲ್ಲಿ, ತಂದೆ- ತಾಯಿ ಸದಾ ಜಗಳವಾಡುತ್ತಿದ್ದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಉದ್ವಿಗ್ನತೆ ಇದ್ದಲ್ಲಿ, ಹೆಣ್ಣು ಗಂಡಿನ ಪಾಲಿಗೆ ಗಗನಕುಸುಮ ಆಗುತ್ತಾಳೆ. ಸರಿಯಾಗಿ ಗುರುತಿಸಿ, ಚಿಕಿತ್ಸೆ ನೀಡಬಹುದು.

ಹೆಣ್ಣು ಮಕ್ಕಳು ಚಿಕ್ಕವರಿರುವಾಗ ಪರೀಕ್ಷಾಭಯ ಹೊಂದಿದ್ದರೆ; ಟೀವಿ ನೋಡುವಾಗ ಪ್ರೇಮಗೀತೆಗಳ ಬಗ್ಗೆ ಅತೀ ನಾಚಿಕೆ ಹೊಂದಿದ್ದರೆ; ಕಾರಣವಿಲ್ಲದೆ ಅಳುತ್ತಿದ್ದರೆ; ಹಟಮಾರಿಗಳಗಿದ್ದರೆ ಮತ್ತು ಕೀಳರಿಮೆ ಇದ್ದಲ್ಲಿ ಒಮ್ಮೆ ಕೌನ್ಸೆಲಿಂಗ್‌ ಕೊಡಿಸಿ. ದೈಹಿಕ ವ್ಯಾಯಾಮವೂ ಅತ್ಯಗತ್ಯ.

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.