ಸೀರೆ ನೇಯುವ ನೀರೆಯ ನಗು


Team Udayavani, Mar 13, 2019, 12:30 AM IST

x-3.jpg

ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುವ ಉಡುಪು ಸೀರೆ. ಅದನ್ನು ತಯಾರಿಸುವ ಹೆಣ್ಣಿನ ಬದುಕೂ ಅಷ್ಟೇ ಸುಂದರ. ದಿನವಿಡೀ ಶ್ರಮಪಟ್ಟು, ಅಂದದ ಸೀರೆಯನ್ನು ಪುಟ್ಟ ಕೂಸಿನಂತೆ ಕೈಯಲ್ಲಿ ಹಿಡಿಯುವಾಗ, ಆಗುವ ಪುಳಕವೇ ಬೇರೆ…   

ಆಧುನಿಕತೆಯ ಅಬ್ಬರದಿಂದ ನಮ್ಮೆಲ್ಲರ ಜೀವನಶೈಲಿ ಬದಲಾಗಿದೆ. ಉಡುಗೆ- ತೊಡುಗೆಗಳಲ್ಲಿ ಹೊಸತನ ಕಂಡಿದೆ. ಆದರೂ, ಇನ್ನೂ ಕೆಲವೆಡೆ ನೇಕಾರಿಕೆಯಂಥ ಹಳೆಯ ಕಸುಬು ಉಸಿರಾಡುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ಬಹುತೇಕ ಮಹಿಳೆಯರು ನೇಕಾರಿಕೆಯನ್ನೇ ನಂಬಿ, ಬದುಕನ್ನು ನೇಯುತ್ತಿದ್ದಾರೆ. 

ಬೆಳಗ್ಗೆ ಗಂಡಂದಿರು ಹೊಲ, ಗದ್ದೆ ಕೆಲಸಕ್ಕೆ ಹೋದರೆ, ಹೆಂಡತಿಯರು ಮನೆಗೆಲಸ ಮುಗಿಸಿ, ಕಣಿಕೆ ಸುತ್ತಿ ಬಟ್ಟೆ ನೇಯಲು ಮುಂದಾಗುತ್ತಾರೆ. ಕೈಮಗ್ಗ ಇದ್ದರೆ ದಿನಕ್ಕೆ 2 ಸೀರೆ ನೇಯುವ ಮಹಿಳೆಯರು, ಪವರ್‌ಲೂಮ್‌ ಮಗ್ಗದಿಂದ 5 ಸೀರೆ ನೇಯಬಲ್ಲರು. ಸೀರೆಯನ್ನಷ್ಟೇ ಅಲ್ಲ, ಶಾಲಾ ಸಮವಸ್ತ್ರ, ಪಂಚೆ, ರೇಷ್ಮೆ, ಜರಿ, ಕಾಟನ್‌, ಇಳಕಲ್‌, ಸ್ಪನ್‌ ಬಟ್ಟೆ, ಕಚ್ಚಾ ಕಾಟನ್‌ ಹೀಗೆ ವಿವಿಧ ಬಟ್ಟೆಗಳಿಂದ ವಸ್ತ್ರ ತಯಾರಿಸುತ್ತಾರೆ. 
ಕೈಮಗ್ಗಗಳ ಕಾರ್ಯವೈಖರಿ ನಿಧಾನವಾದ್ದರಿಂದ ಮಹಿಳೆಯರು ವಿದ್ಯುತ್‌ ಚಾಲಿತ ಪವರ್‌ ಲೂಮ್‌ ಮಗ್ಗಗಳನ್ನು ಬಳಸುತ್ತಿದ್ದಾರೆ. ಆದರೆ, ಚಿಮ್ಮಡ ಗ್ರಾಮದಲ್ಲಿ ಲೋಡ್‌ ಶೆಡ್ಡಿಂಗ್‌ನಿಂದಾಗಿ ಹಗಲು 2-3 ಗಂಟೆ ವಿದ್ಯುತ್‌ ಇರುವುದಿಲ್ಲ. ಇದರಿಂದಾಗಿ ನೇಯ್ಗೆಗೆ ಅಡಚಣೆಯಾಗುತ್ತಿದೆ ಅನ್ನೋದು ಇವರ ಅಳಲು. ಒಂದು ಸೀರೆ ನೇಯ್ದರೆ ಸಿಗುವುದು 50-100 ರೂಪಾಯಿ ಮಾತ್ರ. ಆದರೆ, ಹೆಚ್ಚಿನ ಲಾಭ ಮಧ್ಯವರ್ತಿಗಳ ಕೈ ಸೇರುತ್ತಿದೆ. 
ಪರಿಶ್ರಮಕ್ಕೆ ತಕ್ಕ ಫ‌ಲ ಸಿಗದೇ ಇರುವ ನೋವು, ಇವರನ್ನು ಸೋಮಾರಿಗಳನ್ನಾಗಿಸಿಲ್ಲ. ಬದಲಿಗೆ, ಹೆಚ್ಚೆಚ್ಚು ನೇಯುವ ಛಲವನ್ನು ತುಂಬಿದೆ. ಸೊಸೆಯಂದಿರು ನೇಯಲು ಕುಳಿತರೆ, ವಯಸ್ಸಾದ ಅತ್ತೆಯರು ಮಡಿಕೆ (ಲಡಿ) ತೋಡುತ್ತ, ಜರಿ ಬಿಡಿಸುತ್ತಾ ಅವರಿಗೆ ನೆರವಾಗುತ್ತಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾ, ಮನೆಗೆಲಸ ಮಾಡುತ್ತಾ, ಯಾವ ಉದ್ಯೋಗಸ್ಥ ಮಹಿಳೆಯರಿಗಿಂತ ಕಮ್ಮಿಯಿಲ್ಲ ಎಂದು ನಿರೂಪಿಸಿದ್ದಾರೆ. 

ನಾವು ಎಷ್ಟೇ ದುಡಿದರೂ, ಸಿಗೋದು ಸ್ವಲ್ಪ ಹಣ ಮಾತ್ರ. ಟೆಂಡರ್‌ ಕೊಟ್ಟವರಿಗೆ ಹೆಚ್ಚು ಲಾಭ ಸಿಗುತ್ತದೆ. ಕೆಲವು ಸಲ ತುಂಬಾ ಸಿಟ್ಟು ಬರುತ್ತೆ. ಆದ್ರೆ, ಏನು ಮಾಡೋಕಾಗುತ್ತೆ ಹೇಳಿ? ಇನ್ನು ಈ ಲೋಡ್‌ಶೆಡ್ಡಿಂಗ್‌ನಿಂದ ಕೆಲಸ ಅರ್ಧಕ್ಕೆ ನಿಂತು, ದುಡಿಮೆಗೆ ದೊಡ್ಡ ಪೆಟ್ಟು ಬೀಳುತ್ತದೆ. 
 ಗೀತಾ ಪಂಕಿ, ನೇಕಾರ ಮಹಿಳೆ

ವಿದ್ಯುತ್ತನ್ನೇ ನಂಬಿಕೊಂಡಿರುವ ನಮ್ಮ ಕೆಲಸಕ್ಕೆ ಲೋಡ್‌ಶೆಡ್ಡಿಂಗ್‌ನಿಂದ ತುಂಬಾ ತೊಂದರೆಯಾಗುತ್ತಿದೆ. ಎಷ್ಟೇ ಕಷ್ಟಪಟ್ಟರೂ ದಿನದಲ್ಲಿ 2-4 ಸೀರೆಗಿಂತ ಹೆಚ್ಚು ನೇಯಲು ಸಾಧ್ಯವೇ ಇಲ್ಲ.
ಬಸಮ್ಮ ಯಂಕಂಚಿ, ನೇಕಾರ ಮಹಿಳೆ

– ಐಶ್ವರ್ಯ ಬ. ಚಿಮ್ಮಲಗಿ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.