ಬಡವರ ಫ್ರಿಡ್ಜ್ ಬೇಕೇನು?


Team Udayavani, Mar 20, 2019, 12:30 AM IST

e-5.jpg

ಗಂಡನ ದುಡಿಮೆಯಿಂದ ಸಂಸಾರ ನಡೆಯುವುದು ಕಷ್ಟ ಅನ್ನಿಸಿದಾಗ, ಮಡಕೆ ವ್ಯಾಪಾರಕ್ಕೆ ಮುಂದಾದರು ಲಕ್ಷ್ಮಮ್ಮ. ಆ ವ್ಯಾಪಾರವೇ ಈಗ ಇಡೀ ಕುಟುಂಬಕ್ಕೆ ಅನ್ನದ ದಾರಿ ತೋರಿಸಿದೆ…

ಆಧುನಿಕ ಹೆಣ್ಣು ವಿದ್ಯಾವಂತಳು. ವ್ಯವಹಾರ ಚಾತುರ್ಯ ಉಳ್ಳವಳು. ವ್ಯಾಪಾರ, ಉದ್ಯಮ ಕ್ಷೇತ್ರಗಳಲ್ಲಿ ಆಕೆಯ ಹೆಜ್ಜೆಗುರುತುಗಳು ಶ್ಲಾಘನೀಯ. ಸ್ವಾರಸ್ಯವೆಂದರೆ, ಓದು- ಬರಹವಿಲ್ಲದ, ಬಡ ಕುಟುಂಬದಿಂದ ಬಂದ ಕೆಲವು ಮಹಿಳೆಯರು ಕೂಡಾ, ವ್ಯಾಪಾರದಲ್ಲಿ ಹಿಂದೆ ಬಿದ್ದಿಲ್ಲ. ಬದುಕಿನಲ್ಲಿ ಎದುರಾದ ಅನಿವಾರ್ಯಗಳೇ ಅವರಲ್ಲಿ ಛಲ ಹುಟ್ಟಿಸಿ, ಸ್ವಾವಲಂಬಿ ಬದುಕಿಗೆ ದಾರಿ ಕಂಡುಕೊಳ್ಳುವಂತೆ ಮಾಡಿದೆ.

ಈಕೆಯ ಹೆಸರು ಲಕ್ಷ್ಮಮ್ಮ. ನಾಲ್ಕು ಜನರಿರುವ ಬಡ ಕುಟುಂಬ ಆಕೆಯದ್ದು. ಗಂಡನಿಗೆ ನಿಶ್ಚಿತ ಆದಾಯವಿಲ್ಲ. ಗಂಡನ ಆದಾಯದಿಂದ ಕುಟುಂಬ ನಿರ್ವಹಣೆ ಅಸಾಧ್ಯ ಎಂದಾದಾಗ, ಲಕ್ಷ್ಮಮ್ಮನ ಕೈ ಹಿಡಿದಿದ್ದು ಮಡಕೆ ವ್ಯಾಪಾರ. ಅದಕ್ಕೆ ಗಂಡ-ಮಕ್ಕಳೂ ನೆರವಾಗುತ್ತಿದ್ದಾರೆ.

ವಿಜಯಪುರದ ದರ್ಬಾರ ಹೈಸ್ಕೂಲ್‌ ರಸ್ತೆ ಪಕ್ಕದ ಜಾಗ ಲಕ್ಷ್ಮಮ್ಮನ ಅಂಗಡಿ ಇರುವ ಸ್ಥಳ. ಸಾಲ ಮಾಡಿ, ಆ ಹಣದಿಂದ ಮಡಕೆ ಖರೀದಿಸಿ ತಂದು, ಬಿರುಬಿಸಿಲಿನಲ್ಲೇ ವ್ಯಾಪಾರ ನಡೆಸುತ್ತಾರೆ. ಮಡಕೆಯ ಗಾತ್ರದ ಮೇಲೆ ದರ ನಿಗದಿಯಾಗುತ್ತದೆ. ಅಂದರೆ ಸಣ್ಣ ಮಡಕೆಗೆ 100- 150 ರೂ., ದೊಡ್ಡ ಮಡಕೆಗಳಿಗೆ 400- 500 ರೂಪಾಯಿ. ಬೇಸಿಗೆಯ ದಿನಗಳಲ್ಲಿ ಮಡಕೆಯ ವ್ಯಾಪಾರ ಜೋರಾಗಿರುತ್ತದೆ. ಉಳಿದ ದಿನಗಳಲ್ಲಿ ಸಾಧಾರಣ ವ್ಯಾಪಾರ ನಡೆಯುತ್ತದೆ. ಮಳೆಗಾಲದಲ್ಲಿ ಕುಂಡಾಳಿ (ಹೂವಿನ ಕುಂಡ)ಗಳನ್ನು ಮಾರುತ್ತಾರೆ. “ಬೇಸಿಗೆಯಲ್ಲಿ ಒಂದು ದಿನಕ್ಕೆ 1000-1500 ರೂ.ವರೆಗೂ ಗಳಿಸಬಹುದು. ಆದರೆ, ಕೆಲವು ದಿನ ಖಾಲಿ ಕೈಯಲ್ಲಿ ಮರಳಿದ್ದೂ ಇದೆ’ ಅನ್ನುತ್ತಾರೆ ಲಕ್ಷ್ಮಮ್ಮ.

ಬಡ್ಡಿ, ಬಾಡಿಗೆ ಖರ್ಚು
ಈ ವ್ಯಾಪಾರದಿಂದ ಬಂದ ಹಣದಿಂದ ಸಾಲ- ಬಡ್ಡಿ ಮರುಪಾವತಿ ಮಾಡಿ, ಉಳಿದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ಮನೆಯೂ ಇಲ್ಲದ ಕಾರಣ, ಮನೆಯ ಬಾಡಿಗೆಯ ಖರ್ಚೂ ಇವರಿಗಿದೆ. ಇದ್ದುದರಲ್ಲಿಯೇ ಸಂತೋಷದಿಂದ ಜೀವನ ನಡೆಸಬೇಕು ಎಂಬುದು ಲಕ್ಷ್ಮಮ್ಮನ ಮಾತು. 

ಮಡಕೆ, ಕುಂಡಾಳಿ ವ್ಯಾಪಾರವೇ ನಮ್ಮ ಕುಲ ಕಸುಬು. ನಮ್ಮ ಮನೆಯವರು ಬೇರೆ ಕೆಲಸಕ್ಕೆ ಹೋಗುವುದಿಲ್ಲ. ಬಡತನದಿಂದ ಸಂಸಾರ ನಡೆಸುವುದೇ ಕಷ್ಟವಾದಾಗ ನಾನೇ ವ್ಯಾಪಾರಕ್ಕೆ ಇಳಿದೆ. ಅದರಿಂದ ಬಂದ ಹಣದಿಂದ ಮನೆ ಬಾಡಿಗೆ ಮತ್ತು ಇತರೆ ಖರ್ಚನ್ನು ನಿಭಾಯಿಸುತ್ತೇನೆ. ಮಗಳು ಪಿಯುಸಿ ಓದುತ್ತಿದ್ದಾಳೆ. ಅವಳ ಓದಿನ ಖರ್ಚು ಕೂಡ ಇದರಲ್ಲೇ ಕಳೆಯುತ್ತದೆ.
ಲಕ್ಷ್ಮಮ್ಮ ನಾಗಪ್ಪ

ಸಂಗೀತಾ ಗ. ಗೊಂಧಳೆ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.