ಬಡವರ ಫ್ರಿಡ್ಜ್ ಬೇಕೇನು?


Team Udayavani, Mar 20, 2019, 12:30 AM IST

e-5.jpg

ಗಂಡನ ದುಡಿಮೆಯಿಂದ ಸಂಸಾರ ನಡೆಯುವುದು ಕಷ್ಟ ಅನ್ನಿಸಿದಾಗ, ಮಡಕೆ ವ್ಯಾಪಾರಕ್ಕೆ ಮುಂದಾದರು ಲಕ್ಷ್ಮಮ್ಮ. ಆ ವ್ಯಾಪಾರವೇ ಈಗ ಇಡೀ ಕುಟುಂಬಕ್ಕೆ ಅನ್ನದ ದಾರಿ ತೋರಿಸಿದೆ…

ಆಧುನಿಕ ಹೆಣ್ಣು ವಿದ್ಯಾವಂತಳು. ವ್ಯವಹಾರ ಚಾತುರ್ಯ ಉಳ್ಳವಳು. ವ್ಯಾಪಾರ, ಉದ್ಯಮ ಕ್ಷೇತ್ರಗಳಲ್ಲಿ ಆಕೆಯ ಹೆಜ್ಜೆಗುರುತುಗಳು ಶ್ಲಾಘನೀಯ. ಸ್ವಾರಸ್ಯವೆಂದರೆ, ಓದು- ಬರಹವಿಲ್ಲದ, ಬಡ ಕುಟುಂಬದಿಂದ ಬಂದ ಕೆಲವು ಮಹಿಳೆಯರು ಕೂಡಾ, ವ್ಯಾಪಾರದಲ್ಲಿ ಹಿಂದೆ ಬಿದ್ದಿಲ್ಲ. ಬದುಕಿನಲ್ಲಿ ಎದುರಾದ ಅನಿವಾರ್ಯಗಳೇ ಅವರಲ್ಲಿ ಛಲ ಹುಟ್ಟಿಸಿ, ಸ್ವಾವಲಂಬಿ ಬದುಕಿಗೆ ದಾರಿ ಕಂಡುಕೊಳ್ಳುವಂತೆ ಮಾಡಿದೆ.

ಈಕೆಯ ಹೆಸರು ಲಕ್ಷ್ಮಮ್ಮ. ನಾಲ್ಕು ಜನರಿರುವ ಬಡ ಕುಟುಂಬ ಆಕೆಯದ್ದು. ಗಂಡನಿಗೆ ನಿಶ್ಚಿತ ಆದಾಯವಿಲ್ಲ. ಗಂಡನ ಆದಾಯದಿಂದ ಕುಟುಂಬ ನಿರ್ವಹಣೆ ಅಸಾಧ್ಯ ಎಂದಾದಾಗ, ಲಕ್ಷ್ಮಮ್ಮನ ಕೈ ಹಿಡಿದಿದ್ದು ಮಡಕೆ ವ್ಯಾಪಾರ. ಅದಕ್ಕೆ ಗಂಡ-ಮಕ್ಕಳೂ ನೆರವಾಗುತ್ತಿದ್ದಾರೆ.

ವಿಜಯಪುರದ ದರ್ಬಾರ ಹೈಸ್ಕೂಲ್‌ ರಸ್ತೆ ಪಕ್ಕದ ಜಾಗ ಲಕ್ಷ್ಮಮ್ಮನ ಅಂಗಡಿ ಇರುವ ಸ್ಥಳ. ಸಾಲ ಮಾಡಿ, ಆ ಹಣದಿಂದ ಮಡಕೆ ಖರೀದಿಸಿ ತಂದು, ಬಿರುಬಿಸಿಲಿನಲ್ಲೇ ವ್ಯಾಪಾರ ನಡೆಸುತ್ತಾರೆ. ಮಡಕೆಯ ಗಾತ್ರದ ಮೇಲೆ ದರ ನಿಗದಿಯಾಗುತ್ತದೆ. ಅಂದರೆ ಸಣ್ಣ ಮಡಕೆಗೆ 100- 150 ರೂ., ದೊಡ್ಡ ಮಡಕೆಗಳಿಗೆ 400- 500 ರೂಪಾಯಿ. ಬೇಸಿಗೆಯ ದಿನಗಳಲ್ಲಿ ಮಡಕೆಯ ವ್ಯಾಪಾರ ಜೋರಾಗಿರುತ್ತದೆ. ಉಳಿದ ದಿನಗಳಲ್ಲಿ ಸಾಧಾರಣ ವ್ಯಾಪಾರ ನಡೆಯುತ್ತದೆ. ಮಳೆಗಾಲದಲ್ಲಿ ಕುಂಡಾಳಿ (ಹೂವಿನ ಕುಂಡ)ಗಳನ್ನು ಮಾರುತ್ತಾರೆ. “ಬೇಸಿಗೆಯಲ್ಲಿ ಒಂದು ದಿನಕ್ಕೆ 1000-1500 ರೂ.ವರೆಗೂ ಗಳಿಸಬಹುದು. ಆದರೆ, ಕೆಲವು ದಿನ ಖಾಲಿ ಕೈಯಲ್ಲಿ ಮರಳಿದ್ದೂ ಇದೆ’ ಅನ್ನುತ್ತಾರೆ ಲಕ್ಷ್ಮಮ್ಮ.

ಬಡ್ಡಿ, ಬಾಡಿಗೆ ಖರ್ಚು
ಈ ವ್ಯಾಪಾರದಿಂದ ಬಂದ ಹಣದಿಂದ ಸಾಲ- ಬಡ್ಡಿ ಮರುಪಾವತಿ ಮಾಡಿ, ಉಳಿದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ಮನೆಯೂ ಇಲ್ಲದ ಕಾರಣ, ಮನೆಯ ಬಾಡಿಗೆಯ ಖರ್ಚೂ ಇವರಿಗಿದೆ. ಇದ್ದುದರಲ್ಲಿಯೇ ಸಂತೋಷದಿಂದ ಜೀವನ ನಡೆಸಬೇಕು ಎಂಬುದು ಲಕ್ಷ್ಮಮ್ಮನ ಮಾತು. 

ಮಡಕೆ, ಕುಂಡಾಳಿ ವ್ಯಾಪಾರವೇ ನಮ್ಮ ಕುಲ ಕಸುಬು. ನಮ್ಮ ಮನೆಯವರು ಬೇರೆ ಕೆಲಸಕ್ಕೆ ಹೋಗುವುದಿಲ್ಲ. ಬಡತನದಿಂದ ಸಂಸಾರ ನಡೆಸುವುದೇ ಕಷ್ಟವಾದಾಗ ನಾನೇ ವ್ಯಾಪಾರಕ್ಕೆ ಇಳಿದೆ. ಅದರಿಂದ ಬಂದ ಹಣದಿಂದ ಮನೆ ಬಾಡಿಗೆ ಮತ್ತು ಇತರೆ ಖರ್ಚನ್ನು ನಿಭಾಯಿಸುತ್ತೇನೆ. ಮಗಳು ಪಿಯುಸಿ ಓದುತ್ತಿದ್ದಾಳೆ. ಅವಳ ಓದಿನ ಖರ್ಚು ಕೂಡ ಇದರಲ್ಲೇ ಕಳೆಯುತ್ತದೆ.
ಲಕ್ಷ್ಮಮ್ಮ ನಾಗಪ್ಪ

ಸಂಗೀತಾ ಗ. ಗೊಂಧಳೆ

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.