ಕೊಬ್ಬರಿ ಎಣ್ಣೆಯಲ್ಲಿ  ಅಡಗಿದೆ ಸೌಂದರ್ಯ


Team Udayavani, Mar 17, 2017, 3:50 AM IST

17-MAHILA-2.jpg

ಆಹಾರವೇ ಔಷಧಿ. ಆಹಾರದಿಂದಲೇ ಆರೋಗ್ಯ. ಅಂತೆಯೇ ಕೊಬ್ಬರಿ ಎಣ್ಣೆಯನ್ನು ಬಳಸಿ ಮನೆಯಲ್ಲಿಯೇ ಆರೋಗ್ಯ ರಕ್ಷಕ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಬಹುದು.

ಕೊಬ್ಬರಿ ಎಣ್ಣೆ ಮಾಯಿಶ್ಚರೈಸರ್‌ (ತೇವಾಂಶಕಾರಕವಾಗಿ) ಉಪಯೋಗ ಒಣ ಚರ್ಮವುಳ್ಳವರು ಅಥವಾ ಮೊಗದಲ್ಲಿ ತೇವಾಂಶ ಕಡಿಮೆ ಇರುವವರು, ಚರ್ಮ ಒರಟು, ರೂಕ್ಷವಾಗಿರುವವರು ಈ ಸುಲಭ ರೆಸಿಪಿ ಪ್ರಯೋಗಿಸಿದರೆ ಪರಿಣಾಮಕಾರಿ.

*ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಗೆ ಎರಡು ಚಮಚ ಹಾಲು ಬೆರೆಸಿ ಬೆರೆಸಿ ಮುಖಕ್ಕೆ ಲೇಪಿಸಿ ಮಾಲೀಶು ಮಾಡಬೇಕು. ಮರುದಿನ ಬೆಳಿಗ್ಗೆ ಬೆಚ್ಚಗೆ ನೀರಲ್ಲಿ ತೊಳೆದರೆ  ತೇವಾಂಶ ವೃದ್ಧಿಯಾಗಿ ಒಣಚರ್ಮದ ಕಾಂತಿಯು ಹೆಚ್ಚುತ್ತದೆ. ನಿತ್ಯ ಬಳಕೆ ಹಿತಕರ.

*ಕೊಬ್ಬರಿ ಎಣ್ಣೆ ಎರಡು ಚಮಚಕ್ಕೆ ಅಷ್ಟೇ ಕಾಯಿಹಾಲು ಹಾಗೂ ಎರಡು ಚಿಟಿಕೆ ಅರಸಿನ ಹುಡಿ ಬೆರೆಸಿ ಮುಖಕ್ಕೆ ರಾತ್ರಿ ಲೇಪಿಸಿ ಮಾಲೀಶು ಮಾಡಿ ಮರುದಿನ ತೊಳೆದರೆ ಒಣಚರ್ಮವಿದ್ದು ತುರಿಕೆ ಇರುವುದೂ ನಿವಾರಣೆಯಾಗುತ್ತದೆ.

ನೆರಿಗೆ ನಿವಾರಕ ಕೊಬ್ಬರಿ ಎಣ್ಣೆಯ ಬಳಕೆ
ಮೂರು ಚಮಚ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಬೇಕು. ತದನಂತರ ಅದರಲ್ಲಿ 4 ಹನಿ ಮೂಲಂಗಿ ರಸ, ಒಂದು ಚಮಚ ಸೌತೆಕಾಯಿ ರಸ ಬೆರೆಸಿ ಬೆಚ್ಚಗಿರುವಾಗಲೇ ಮುಖಕ್ಕೆ ಲೇಪಿಸಿ, ತುದಿ ಬೆರಳುಗಳಿಂದ ಮುಖದ ಚರ್ಮವನ್ನು  ಮೃದುವಾಗಿ ವರ್ತುಲಾಕಾರದಲ್ಲಿ ಮಾಲೀಶು ಮಾಡಬೇಕು. ರಾತ್ರಿ ಲೇಪಿಸಿ ಮರುದಿನ ಬೆಳಿಗ್ಗೆ ಬೆಚ್ಚಗೆ ನೀರಲ್ಲಿ ತೊಳೆದರೆ ಮುಖದ ನೆರಿಗೆ ಸುಕ್ಕುಗಳು ನಿವಾರಣೆಯಾಗುತ್ತದೆ. ನಿತ್ಯ ಲೇಪನ ಪರಿಣಾಮಕಾರಿ.

ಕೊಬ್ಬರಿ ಎಣ್ಣೆಯ ಫೇಸ್‌ಪ್ಯಾಕ್‌
ಕೊಬ್ಬರಿ ಎಣ್ಣೆಯಷ್ಟೇ ಪ್ರಮಾಣದಲ್ಲಿ ಲ್ಯಾವೆಂಡರ್‌ ತೈಲ ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಬೆರೆಸಿ ಚೆನ್ನಾಗಿ ಕಲಕಿ ಬಾಟಲ್‌ನಲ್ಲಿ ಹಾಕಿಡಬೇಕು. ಇದನ್ನು 1-2 ಚಮಚದಷ್ಟು ತೆಗೆದುಕೊಂಡು ಸ್ವಲ್ಪ ನೀರು ಬೆರೆಸಿ ಮುಖಕ್ಕೆ ಲೇಪಿಸಿ 3-4 ನಿಮಿಷದ ಬಳಿಕ ಮುಖ ತೊಳೆದರೆ ಈ ನೈಸರ್ಗಿಕ ಕೊಬ್ಬರಿ ಎಣ್ಣೆಯ ಫೇಸ್‌ವಾಶ್‌ನಿಂದ ಮುಖದ ಕಲೆ, ಕೊಳೆ, ಜಿಡ್ಡು ನಿವಾರಣೆಯಾಗಿ ಮುಖ ಶೀಘ್ರವಾಗಿ ಹೊಳೆಯುತ್ತದೆ.

ಕೊಬ್ಬರಿ ಎಣ್ಣೆಯ ಮೇಕಪ್‌ ರಿಮೂವರ್‌
ಕೊಬ್ಬರಿ ಎಣ್ಣೆಯನ್ನು ಒಂದು ಹತ್ತಿಯ ಉಂಡೆಗೆ ಲೇಪಿಸಿ ಮೇಕಪ್‌ ಮಾಡಿದ ಮುಖದ ಚರ್ಮ, ಕಣ್ಣಿನ ರೆಪ್ಪೆಗಳಿಗೆ ಮೃದುವಾಗಿ ಲೇಪಿಸಿ ತೆಗೆದರೆ ಕೊಬ್ಬರಿ ಎಣ್ಣೆಯೊಂದಿಗೆ ಮೇಕಪ್‌ನ ಅಂಶವೂ ಬರುವುದು. ಇದರಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ. ತದನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಮುಖದ ತಾಜಾತನ ವರ್ಧಿಸಲು ತದನಂತರ ಕೊಬ್ಬರಿ ಎಣ್ಣೆ ಹಾಲು ಹಾಗೂ ಜೇನು ಮುಖಕ್ಕೆ ಲೇಪಿಸಿ, 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದರೆ, ಮೇಕಪ್‌ ತೆಗೆದ ಬಳಿಕ ಮುಖ ತಾಜಾ ಹಾಗೂ ಚರ್ಮ ಫ್ರೆಶ್‌ ಆಗಿ ಉಳಿಯುತ್ತದೆ.

ಕೊಬ್ಬರಿ ಎಣ್ಣೆ-ಎಪ್ಸಮ್‌ ಲವಣದ ಟಬ್‌ಬಾತ್‌
ದೇಹದ ಚರ್ಮ ಮೃದು ಹಾಗೂ ಕಾಂತಿಯುತವಾಗಲು ಜೊತೆಗೆ ಮನಸ್ಸಿನ ಒತ್ತಡ ನಿವಾರಣೆಯಾಗಿ ಉಲ್ಲಾಸದಾಯಕವಾಗಲು ಈ ಬಗೆಯ ಟಬ್‌ಬಾತ್‌ ಹಿತಕರ.ಮನೆಯ ಸ್ನಾನದ ತೊಟ್ಟಿಯಲ್ಲಿ ಅಥವಾ ಒಂದು ದೊಡ್ಡ ಟಬ್‌ ಬೆಚ್ಚಗೆ ನೀರಿನಲ್ಲಿ 1/4 ಕಪ್‌ ಕೊಬ್ಬರಿ ಎಣ್ಣೆ , 1/4 ಕಪ್‌ ಎಪ್ಸಮ್‌ ಸಾಲ್ಟ್ ಹಾಗೂ 5 ಚಮಚ ಶ್ರೀಗಂಧದ ಪೇಸ್ಟ್‌ ಬೆರೆಸಬೇಕು. ಇದರಲ್ಲಿ ಕುಳಿತು ಟಬ್‌ಬಾತ್‌ ಅಥವಾ ಸ್ನಾನದ ನೀರಿನ ತೊಟ್ಟಿಯ ಸ್ನಾನ ಮಾಡಿದರೆ ಮನಸ್ಸು ಮುದಗೊಳ್ಳುತ್ತದೆ. ದೇಹದ ಚರ್ಮ ಮೃದು ಹಾಗೂ ಸ್ನಿಗ್ಧ ಶೀತಲವಾಗಿ ಕಾಂತಿ ಹೆಚ್ಚುತ್ತದೆ.

ಕೊಬ್ಬರಿ ಎಣ್ಣೆಯ ಮೌತ್‌ವಾಶ್‌
ಮುಖದ ದುರ್ವಾಸನೆ ನಿವಾರಣೆ ಮಾಡುವುದರೊಂದಿಗೆ ಹಲ್ಲು-ವಸುಡುಗಳು ಆರೋಗ್ಯ ಹಾಗೂ ಸೌಂದರ್ಯ ವರ್ಧಿಸುವ ಕೊಬ್ಬರಿ ಎಣ್ಣೆಯ ಮೌತ್‌ವಾಶ್‌ ಇಂತಿದೆ: ಸಮಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ , ಬೇಕಿಂಗ್‌ ಸೋಡಾ ಬೆರೆಸಿ ದ್ರಾವಣ ತಯಾರಿಸಬೇಕು. ಅದಕ್ಕೆ 8-10 ಹನಿ ಪೆಪ್ಪರ್‌ಮಿಂಟ್‌ ತೈಲ ಬೆರೆಸಬೇಕು. ಈ ಮೌತ್‌ವಾಶ್‌ ನಿತ್ಯ ಬಳಸಿದರೆ ದಂತಪಕ್ತಿ ಶುಭ್ರವಾಗಿ ಹೊಳೆಯುತ್ತದೆ. ವಸಡು ಕೂಡ ಆರೋಗ್ಯಯುತವಾಗಿ ರಕ್ತವರ್ಣದಿಂದ ಕಂಗೊಳಿಸುತ್ತದೆ. ಮುಖ ಸುವಾಸನೆಯಿಂದ ಕೂಡಿ ಆಹ್ಲಾದಕರವಾಗಿರುತ್ತದೆ.

ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.