ಮಾವಿನಹಣ್ಣು -ಕೇಶ ಸೌಂದರ್ಯ ವರ್ಧಕ


Team Udayavani, Apr 21, 2017, 3:45 AM IST

IMG-20170417-WA0018.jpg

ಸಮೃದ್ಧ ಪೋಷಕಾಂಶಗಳ ಹಾಗೂ ಜೀವಸಣ್ತೀಗಳ ಆಗರವಾಗಿರುವ ಮಾವಿನಹಣ್ಣು ಬೇಸಿಗೆಯಲ್ಲಿ ವಿಪುಲವಾಗಿ ದೊರೆಯುತ್ತದೆ. ಮಾವಿನಹಣ್ಣನ್ನು ಬಳಸಿ ವಿವಿಧ ರೀತಿಯಲ್ಲಿ ಕೂದಲಿನ ಆರೈಕೆ ಮಾಡಿದರೆ ನೈಸರ್ಗಿಕವಾಗಿಯೇ ಕೂದಲಿನ ಹೊಳಪು, ಸೌಂದರ್ಯ ವೃದ್ಧಿಯಾಗುತ್ತದೆ.

ಅಂತಹ ಕೇಶಸೌಂದರ್ಯ ವರ್ಧಕಗಳ ಕುರಿತಾಗಿ ಈ ಕೆಳಗೆ ತಿಳಿಸಲಾಗಿದೆ.

ಮಾವಿನಹಣ್ಣು -ಬಾದಾಮಿ ತೈಲದ ಹೇರ್‌ಪ್ಯಾಕ್‌
ಚೆನ್ನಾಗಿ ಕಳಿತ ಒಂದು ಮಾವಿನ ಹಣ್ಣಿನ ತಿರುಳನ್ನು ಅರೆದು ಪೇಸ್ಟ್‌ ತಯಾರಿಸಬೇಕು. ಅದಕ್ಕೆ 1/4 ಕಪ್‌ ದಪ್ಪ ಮೊಸರು ಬೆರೆಸಿ, 1 ಚಮಚ ಬಾದಾಮಿ ತೈಲ ಬೆರೆಸಬೇಕು. ಇವೆಲ್ಲವನ್ನು ಚೆನ್ನಾಗಿ ಕಲಕಿ ಪೇಸ್ಟ್‌ ತಯಾರಿಸಿ ಕೂದಲಿಗೆ ಲೇಪಿಸಬೇಕು.

ನಂತರ 20 ನಿಮಿಷಗಳ ಬಳಿಕ ಬೆಚ್ಚಗೆ ನೀರಲ್ಲಿ ಕೂದಲನ್ನು ತೊಳೆದರೆ ಕೂದಲಿನ ಹೊಳಪು, ಮೃದುತ್ವ ವರ್ಧಿಸುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

ಮಾವಿನ ಹಣ್ಣು -ಪಪ್ಪಾಯ- ಆಲಿವ್‌ ತೈಲದ ಹೇರ್‌ಪ್ಯಾಕ್‌
ತುಂಬಾ ಒಣಕೂದಲು ಒರಟು ಕೂದಲು ಹಾಗೂ ತೆಳ್ಳಗಿನ ಕೂದಲುಳ್ಳವರಿಗೆ ಈ ಹೇರ್‌ಪ್ಯಾಕ್‌ ಉತ್ತಮ.

1 ಕಪ್‌ ಮಾವಿನ ಹಣ್ಣಿನ ತಿರುಳು, ಅಷ್ಟೇ ಭಾಗ ಚೆನ್ನಾಗಿ ಕಳಿತ ಪಪ್ಪಾಯದ ತಿರುಳು ಎರಡನ್ನೂ ಬೆರೆಸಿ ಅರೆಯಬೇಕು. ತದನಂತರ ಮೂರು ಚಮಚ ಆಲಿವ್‌ತೈಲ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಕೂದಲಿಗೆ ಚೆನ್ನಾಗಿ ಲೇಪಿಸಿ ಶವರ್‌ಕ್ಯಾಪ್‌ ಹಾಕಬೇಕು. ನಂತರ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆದರೆ ಒಣ ಕೂದಲು ಮೃದು ಹಾಗೂ ಸ್ನಿಗ್ಧವಾಗಿ ಹೊಳೆಯುತ್ತದೆ.

ಮಾವಿನಹಣ್ಣು ಹಾಗೂ ಬೆಣ್ಣೆಹಣ್ಣಿನ ಹೇರ್‌ಪ್ಯಾಕ್‌
ಪೋಷಕಾಂಶಗಳ ಕೊರತೆಯಿಂದ ಹಾಗೂ ತಲೆಹೊಟ್ಟಿನಿಂದ ಕೂದಲು ಉದುರುವವರಿಗೆ ಈ ಹೇರ್‌ಪ್ಯಾಕ್‌ ಉತ್ತಮ.
ವಿಧಾನ: 1 ಕಪ್‌ ಮಾವಿನ ಹಣ್ಣಿನ ತಿರುಳು, 1/2 ಕಪ್‌ ಬೆಣ್ಣೆಹಣ್ಣಿನ ತಿರುಳು ಎರಡನ್ನೂ ಚೆನ್ನಾಗಿ ಬೆರೆಸಿ, ಕಲಕಿ ಪೇಸ್ಟ್‌ ತಯಾರಿಸಬೇಕು. ಇದಕ್ಕೆ 2 ಚಮಚ ಮೆಂತ್ಯ ಪುಡಿ ಬೆರೆಸಿ ಚೆನ್ನಾಗಿ ಮಿಶ್ರಮಾಡಿ ಕೂದಲಿಗೆ ಲೇಪಿಸಿ ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆದರೆ ತಲೆಹೊಟ್ಟು ಉದುರುವುದು, ಪೋಷಕಾಂಶಗಳ ಕೊರತೆಯಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ.

ತೈಲಯುಕ್ತ  ಕೇಶ ಉಳ್ಳವರಿಗೆ ಮಾವಿನಹಣ್ಣು -ಮೊಟ್ಟೆಯ ಒಳಭಾಗದ ಹೇರ್‌ಪ್ಯಾಕ್‌
ಮಾವಿನ ಹಣ್ಣು ವಿಟಮಿನ್‌ “ಎ’, “ಸಿ’ ಹಾಗೂ ವಿಟಮಿನ್‌ “ಈ’ಗಳಿಂದ ಸಮೃದ್ಧವಾಗಿದೆ. ಮೊಟ್ಟೆಯ ಬಿಳಿಭಾಗ ಪ್ರೊಟೀನ್‌, ಕ್ಯಾಲಿÏಯಂ ಹೊಂದಿದೆ.ಎಣ್ಣೆಯ ಪಸೆ ಅಧಿಕವಿದ್ದು ಅಥವಾ ಜಿಡ್ಡಿನಂಶ ಅಧಿಕವಿರುವ ಕೂದಲುಳ್ಳವರಿಗೆ ಈ ಹೇರ್‌ಪ್ಯಾಕ್‌ ಉತ್ತಮ.

ವಿಧಾನ: ಮಾವಿನ ಹಣ್ಣಿನ ತಿರುಳು 1 ಕಪ್‌, ಮೊಟ್ಟೆಯ ಬಿಳಿಭಾಗ 1/2 ಕಪ್‌, ಕಡಲೆಹಿಟ್ಟು 1 ಚಮಚ, ಹೆಸರುಹಿಟ್ಟು 2 ಚಮಚ- ಇವೆಲ್ಲವುಗಳನ್ನು ಚೆನ್ನಾಗಿ ಬೆರೆಸಿ ಸ್ವಲ್ಪ ಗುಲಾಬಿ ಜಲ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ತಲೆಕೂದಲಿಗೆ ಚೆನ್ನಾಗಿ ಲೇಪಿಸಿ ಹೇರ್‌ಪ್ಯಾಕ್‌ ಮಾಡಬೇಕು. 1/2 ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಕೂದಲನ್ನು ತೊಳೆಯಬೇಕು. ಇದರಿಂದ ಕೂದಲಿನ ಜಿಡ್ಡಿನ ಅಂಶ ನಿವಾರಣೆಯಾಗಿ ಕೂದಲಿನ ಸೌಂದರ್ಯ, ಕಾಂತಿ ವರ್ಧಿಸುತ್ತದೆ.

ರೇಶಿಮೆಯಂತಹ ಕೂದಲಿಗಾಗಿ
ಕೂದಲು ರೇಶಿಮೆಯಂತಹ ನುಣುಪು, ಕಾಂತಿ ಪಡೆದು ಸೊಂಪಾಗಿ ಬೆಳೆಯಲು ಈ ಹೇರ್‌ಪ್ಯಾಕ್‌ ಉಪಯುಕ್ತ.
ವಿಧಾನ: 2 ಕಪ್‌ ಚೆನ್ನಾಗಿ ಕಳಿತ ಮಾವಿನ ಹಣ್ಣಿನ ತಿರುಳು ಹಾಗೂ ಎಳನೀರು 1/2 ಕಪ್‌ ಅರೆದು ತಾಜಾ ಗುಲಾಬಿ ಪಕಳೆಗಳ ಪೇಸ್ಟ್‌ 2 ಚಮಚ ಸೇರಿಸಿ ಎಲ್ಲವನ್ನು ಮಿಶ್ರಮಾಡಿ ಕೂದಲಿಗೆ ಲೇಪಿಸಿ 1/2 ಗಂಟೆಯ ಬಳಿಕ ಸ್ನಾನಮಾಡಿದರೆ ಕೇಶರಾಶಿ ರೇಶಿಮೆಯ ಹೊಳಪಿನಿಂದ ಕಂಗೊಳಿಸುತ್ತದೆ.

– ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.