ಸರಳ ಸೌಂದರ್ಯ ವರ್ಧಕಗಳು
Team Udayavani, May 19, 2017, 3:07 PM IST
ಮನೆಯಲ್ಲಿಯೇ ಉಪಯೋಗಿಸಬಹುದಾದ, ತಯಾರಿಸಬಹುದಾದ ಸುಲಭ ಸರಳ ಸೌಂದರ್ಯವರ್ಧಕಗಳು ಇಲ್ಲಿವೆ.
ಮೊಡವೆಗೆ
ಅರಸಿನ ಹುಡಿ ಮತ್ತು ನಿಂಬೆರಸವನ್ನು ಬೆರೆಸಿ ಮೊಡವೆ ಇರುವ ಭಾಗದಲ್ಲಿ ಲೇಪಿಸಬೇಕು. 15 ನಿಮಿಷಗಳ ಬಳಿಕ ತೊಳೆಯಬೇಕು. ಹೀಗೆ ದಿನಕ್ಕೆ 2-3 ಬಾರಿ ಲೇಪಿಸಿದರೆ ಮೊಡವೆ, ಗುಳ್ಳೆಗಳು ನಿವಾರಣೆಯಾಗುತ್ತವೆ.
ಮೊಡವೆಯ ಕಲೆಗೆ
ಚಂದನದ ಪೌಡರ್ 1 ಚಮಚ, 2 ಚಮಚ ಶುದ್ಧ ಗುಲಾಬಿ ಜಲ ಬೆರೆಸಿ ಮುಖದಲ್ಲಿನ ಮೊಡವೆಯ ಕಲೆಗಳಿಗೆ ನಿತ್ಯ 2-3 ಬಾರಿ ಲೇಪಿಸಿದರೆ ಕಲೆಗಳು ನಿವಾರಣೆಯಾಗುತ್ತವೆ.
ಕೂದಲಿನ ಆರೈಕೆ
ಒಣ ಕೂದಲಿಗೆ ಬೆಣ್ಣೆ ಹಣ್ಣಿನ ಹೇರ್ಪ್ಯಾಕ್ ಉತ್ತಮ. ಕೂದಲು ಉದುರುವುದು, ಹೊಟ್ಟು ಹಾಗೂ ತುರಿಕೆ ಇರುವಾಗ ಕೊಬ್ಬರಿ ಎಣ್ಣೆ ಹಾಗೂ ನಿಂಬೆರಸ ಅಥವಾ ಆಲಿವ್ ತೈಲ ಮತ್ತು ನಿಂಬೆರಸ ಬೆರೆಸಿ ಲೇಪಿಸಿ 20 ನಿಮಿಷಗಳ ಬಳಿಕ ಸ್ನಾನ ಮಾಡಿದರೆ ಪರಿಣಾಮಕಾರಿ.
ಕೂದಲು ಸೀಳುವಿಕೆ ಉಂಟಾದಾಗ ಆಲಿವ್ ತೈಲ ಹಾಗೂ ಜೇನು ಬೆರೆಸಿ ಲೇಪಿಸಿದರೆ ನಿವಾರಣೆಯಾಗುತ್ತದೆ.
ಕೂದಲಿಗೆ ಉತ್ತಮ ಕಂಡೀಷನರ್ ಮೊಟ್ಟೆಯ ಬಿಳಿಭಾಗ. ಕೂದಲಿಗೆ ಉತ್ತಮ ಶ್ಯಾಂಪೂ ಸೋಪ್ನಟ್ ಪುಡಿ ದಾಸವಾಳ ಎಲೆ ಹಾಗೂ ಹೂವಿನ ರಸ ಹಾಗೂ ಹೆನ್ನಾ (ಮದರಂಗಿ ಪುಡಿಯ ಮಿಶ್ರಣ)ದಿಂದ ಸ್ನಾನ.ಕೂದಲು ಉದುರುವಿಕೆ ತಡೆಗಟ್ಟಲು ಘೃತಕುಮಾರೀ ಗಿಡದ ಎಲೆ (ಎಲೋವೆರಾದ ಎಲೆಯ ತಿರುಳು 3 ಚಮಚ, 5 ಚಮಚ ಕೊಬ್ಬರಿಎಣ್ಣೆ ಹಾಗೂ 1/2 ಚಮಚ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಕೂದಲಿಗೆ ಲೇಪಿಸಿ 1/2 ಗಂಟೆಯ ಬಳಿಕ ಸ್ನಾನ ಮಾಡಿದರೆ ಕೂದಲು ಉದುರುವುದು ನಿವಾರಣೆಯಾಗಿ ಸೊಂಪಾಗಿ ಕೂದಲು ಬೆಳೆಯುತ್ತದೆ.
ಬಬ್ಬಲ್ ಬಾತ್
ಮೈಯ ಹಾಗೂ ಮೊಗದ ಚರ್ಮ ಸ್ನಿಗ್ಧ ಹಾಗೂ ಕಾಂತಿಯುತವಾಗಲು ಈ ಬಬ್ಬಲ್ ಬಾತ್ ಹಿತಕರ. ಅದೂ ಬೇಸಿಗೆಯಲ್ಲಿ ಬಹಳ ಪರಿಣಾಮಕಾರಿ.
ಒಂದು ಟಬ್ನಲ್ಲಿ ಬೆಚ್ಚಗಿನ ನೀರು ತೆಗೆದುಕೊಂಡು 1 ಲೀಟರ್ ಕೆನೆಸಹಿತ ಹಾಲನ್ನು ಬೆರೆಸಬೇಕು. ಅದಕ್ಕೆ 100 ಗ್ರಾಂ ಗುಲಾಬಿ ಪಕಳೆಗಳನ್ನು ಅಥವಾ ಮಲ್ಲಿಗೆ ಹೂವನ್ನು ಬೆರೆಸಬೇಕು. 2 ಚಮಚ ಶ್ರೀಗಂಧ ತೈಲ ಕೊನೆಯಲ್ಲಿ ಸೇರಿಸಿ, ಸ್ವಲ್ಪ ಸೀಸಾಲ್ಟ್ ಸðಬ್ ಬೆರೆಸಿ ಕದಡಬೇಕು. ತದನಂತರ ಈ ಟಬ್ನಲ್ಲಿ, ಟಬ್ಬಾತ್ ಅಥವಾ ಅವಗಾಹ ಸ್ನಾನ ಮಾಡಿದರೆ ಮೈಮನಸ್ಸು ಉಲ್ಲಸಿತವಾಗುತ್ತದೆ. ಜೊತೆಗೆ ಚರ್ಮ ಸ್ನಿಗ್ಧ ಹಾಗೂ ಕಾಂತಿಯುತವಾಗುತ್ತದೆ.
ಮನೆಯಲ್ಲಿಯೇ ಫೇಸ್ಲಿಫ್ಟ್
ತಕ್ಷಣಕ್ಕೆ ಮನೆಯಲ್ಲೇ ತಯಾರಿಸಿ ಪ್ರಯೋಗಿಸಬಹುದಾದ ಫೇಸ್ಲಿಫ್ಟ್ ಇಂತಿದೆ.ಮೊದಲು ಐಸ್ನಿàರಿನಿಂದ ಮುಖ ತೊಳೆಯಬೇಕು. ತದನಂತರ ಜೇನಿನಲ್ಲಿ ಅದ್ದಿದ ಐಸ್ಕ್ಯೂಬ್ನಿಂದ ಮುಖವನ್ನು ಚೆನ್ನಾಗಿ ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. 10 ನಿಮಿಷಗಳ ಬಳಿಕ ಬೀಟ್ ಮಾಡಿದ ಮೊಟ್ಟೆಯ ಬಿಳಿಭಾಗವನ್ನು ಮುಖಕ್ಕೆ ಲೇಪಿಸಿ ಒಣಗಲು ಬಿಡಬೇಕು. 15 ನಿಮಿಷದ ನಂತರ ಫ್ರಿಜ್ ನೀರಿನಲ್ಲಿ ಮುಖ ತೊಳೆದರೆ ಪರಿಣಾಮಕಾರಿ. ಹೀಗೆ ಮನೆಯಲ್ಲಿಯೇ ದೊರೆಯುವ ಹಣ್ಣು , ತರಕಾರಿ, ಹೂವು ಹಾಗೂ ಮೂಲಿಕೆಗಳಿಂದ ವಿವಿಧ ರೀತಿಯಲ್ಲಿ ನೈಸರ್ಗಿಕವಾಗಿ, ಸರಳವಾಗಿ, ಸೌಂದರ್ಯವರ್ಧಕಗಳನ್ನು , ಸೌಂದರ್ಯ ರಕ್ಷಕಗಳನ್ನು ಹಾಗೂ ಸೌಂದರ್ಯಪ್ರಸಾಧಕಗಳನ್ನು ತಯಾರಿಸಬಸುದು. ಹಾಂ! ಸುಂದರ ನಿಸರ್ಗದಲ್ಲಿ ಅಡಗಿದೆ ಎಂದೂ ಬರಿದಾಗದ ಸಹಜ ಸೌಂದರ್ಯ ಪ್ರಸಾಧಕಗಳ ಸಾಗರ!
ಡಾ| ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ