ಸಿಹಿಕುಂಬಳ ವೈವಿಧ್ಯ


Team Udayavani, Dec 8, 2017, 3:49 PM IST

08-34.jpg

ಸಿಹಿಕುಂಬಳ, ಚೀನಿಕಾಯಿ, ಕೆಂಬುಡೆ ಇತ್ಯಾದಿ ಹೆಸರುಗಳಿಂದ ಕರೆಯುವ ಈ ತರಕಾರಿಯು ಉತ್ತಮ ತೇವಾಂಶ, ನಾರಿನಂಶ, ಕಾಬೋìಹೈಡ್ರೆಟ್ಸ್‌ , ಖನಿಜಾಂಶ ಇತ್ಯಾದಿ ಹಲವಾರು ಉತ್ತಮ ಅಂಶಗಳನ್ನೊಳಗೊಂಡಿದ್ದು ತಂಪುಕಾರಕ ಮತ್ತು ರಕ್ತ ಶುದ್ಧೀಕರಿಸುವ ಗುಣವನ್ನು ಹೊಂದಿದೆ. ಆಹಾರವಾಗಿ ಅಡುಗೆಯಲ್ಲಿ ಹಲವಾರು ರೀತಿಯಲ್ಲಿ ಬಳಸಬಹುದಾಗಿದೆ.

ಚೀನೀಕಾಯಿ ರಾಯತ 
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಚೀನೀಕಾಯಿ- ಎರಡು ಕಪ್‌, ತೆಂಗಿನ ತುರಿ- ಒಂದು ಕಪ್‌, ಹುಣಸೆಹುಳಿ- ಕಾಲು ಚಮಚ, ಕೆಂಪು ಮೆಣಸಿನಹುಡಿ- ಅರ್ಧ ಚಮಚ, ಬೆಲ್ಲದ ಪುಡಿ- ಎರಡು ಚಮಚ, ಹಸಿಮೆಣಸು- ಒಂದು, ಜೀರಿಗೆ- ಒಂದು ಚಮಚ ಬೇಕಿದ್ದರೆ, ಹೆಚ್ಚಿದ ಕೊತ್ತಂಬರಿ ಸೊಪ್ಪು – ಆರು ಚಮಚ, ಮೊಸರ‌ು- ಒಂದು ಕಪ್‌, ಹಸಿಮೆಣಸು- ಒಂದು, ಅರಸಿನ- ಕಾಲು ಚಮಚ, ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ:  ಚೀನಿಕಾಯಿ ಹೋಳುಗಳಿಗೆ ಮೆಣಸಿನಪುಡಿ, ಉಪ್ಪು, ಹುಳಿ, ಬೆಲ್ಲ ಸೇರಿಸಿ, ಬೇಯಿಸಿ, ಆರಲು ಬಿಡಿ. ತೆಂಗಿನತುರಿಗೆ ಅರಸಿನ, ಹಸಿಮೆಣಸು ಮತ್ತು ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ ಮೊದಲೇ ಬೇಯಿಸಿಟ್ಟ ಚೀನಿಕಾಯಿಗೆ ಸೇರಿಸಿ. ನಂತರ, ಇದಕ್ಕೆ ಮೊಸರು ಮತ್ತು ಕೊತ್ತಂಬರಿಸೊಪ್ಪು ಸೇರಿಸಿ ಬೇಕಷ್ಟು ನೀರು ಸೇರಿಸಿಕೊಂಡು ಹದ ಮಾಡಿಕೊಳ್ಳಿ. ಈಗ ತಯಾರಾದ ರಾಯತಕ್ಕೆ ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಕರಿಬೇವಿನಜೊತೆ ನೀಡಿ. ಚೀನಿಕಾಯಿಯನ್ನು ತುರಿದು ಬೇಯಿಸದೆಯೂ ಮೇಲೆ ತಿಳಿಸಿದ ರೀತಿಯಲ್ಲಿ ರಾಯತ ತಯಾರಿಸಬಹುದು.

ಚೀನಿಕಾಯಿ ಹಲ್ವ 
ಬೇಕಾಗುವ ಸಾಮಗ್ರಿ: ತುರಿದ ಚೀನಿಕಾಯಿ- ನಾಲ್ಕು ಕಪ್‌, ಸಕ್ಕರೆ- ಎರಡು ಕಪ್‌, ಹಾಲು- ಎರಡು ಕಪ್‌, ತುಪ್ಪ- ಅರ್ಧ ಕಪ್‌, ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳು- ಎಂಟು ಚಮಚ, ಏಲಕ್ಕಿ ಸುವಾಸನೆಗಾಗಿ.

ತಯಾರಿಸುವ ವಿಧಾನ: ತುರಿದ ಚೀನಿಕಾಯಿಗೆ ಹಾಲು ಮತ್ತು ಸ್ವಲ್ಪ ನೀರು ಸೇರಿಸಿ ದಪ್ಪ ತಳದ ಬಾಣಲೆಯಲ್ಲಿ ಬೇಯಲು ಇಡಿ. ಚೆನ್ನಾಗಿ ಬೆಂದ ಮೇಲೆ, ಇದಕ್ಕೆ ಸಕ್ಕರೆ ಸೇರಿಸಿ ತಳ ಹಿಡಿಯದಂತೆ ಸೌಟಿನಿಂದ ಮಗುಚುತ್ತಾ ಇದ್ದು ನಂತರ, ತುಪ್ಪ ಸೇರಿಸಿ ತಳ ಬಿಡುವವರೆಗೂ ಮಗುಚುತ್ತಾ ಇರಬೇಕು. ತಳ ಬಿಡುತ್ತಿದ್ದಂತೆ ಗೋಡಂಬಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಗುಚಿ ಇಳಿಸಿ.

ಚೀನೀಕಾಯಿ ತಿರುಳಿನ ಗೊಜ್ಜು
ಬೇಕಾಗುವ ಸಾಮಗ್ರಿ:
ಚೀನೀಕಾಯಿ ತಿರುಳು- ಒಂದು ಕಪ್‌, ತೆಂಗಿನ ತುರಿ- ಒಂದು ಕಪ್‌, ಕೆಂಪುಮೆಣಸು-  ಮೂರು, ಹುಣಸೆಹುಳಿ- ಕಾಲು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಚೀನೀಕಾಯಿ ತಿರುಳಿಗೆ ಉಪ್ಪು$, ಹುಳಿ ಮತ್ತು ಕೆಂಪುಮೆಣಸು ಸೇರಿಸಿ ಬೇಯಲು ಇಡಿ. ಚೆನ್ನಾಗಿ ಬೆಂದು ಇದು ಆರಿದ ಮೇಲೆ ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿ ಸರ್ವಿಂಗ್‌ ಬೌಲ್‌ನಲ್ಲಿ ಹಾಕಿ. ಈಗ ಇದಕ್ಕೆ ತುಪ್ಪದಲ್ಲಿ ಇಂಗು ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.

ಚೀನೀಕಾಯಿ ಪಾಯಸ 
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಚೀನಿಕಾಯಿ- ಮೂರು ಕಪ್‌, ಬೆಲ್ಲದ ಪುಡಿ- ಒಂದೂವರೆ ಕಪ್‌, ಅಕ್ಕಿಹಿಟ್ಟು – ಅರ್ಧ ಕಪ್‌, ತೆಂಗಿನಹಾಲು- ಎರಡು ಕಪ್‌, ಏಲಕ್ಕಿ ಪು- ಕಾಲು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಚೀನೀಕಾಯಿ ಹೋಳುಗಳನ್ನು ಸ್ವಲ್ಪ ತೆಂಗಿನಹಾಲು ಮತ್ತು ನೀರು ಸೇರಿಸಿ ಬೇಯಲು ಇಡಿ. ಬೆಂದ ತರಕಾರಿಗೆ ಬೆಲ್ಲ ಮತ್ತು ಉಪ್ಪು ಸೇರಿಸಿ ಕುದಿಸಿ. ಇದು ಕುದಿಯುತ್ತಿರುವಾಗ ಅರ್ಧ ಕಪ್‌ ತೆಂಗಿನ ಹಾಲು ಮತ್ತು ನುಣ್ಣಗೆ ರುಬ್ಬಿದ ಅಕ್ಕಿಹಿಟ್ಟನ್ನು ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿ ಸೇರಿಸಿ, ತಳ ಹಿಡಿಯದಂತೆ ಸೌಟಿನಿಂದ ಮಗುಚುತ್ತಾ ಕುದಿಸಿ. ನಂತರ, ಇದಕ್ಕೆ ಉಳಿದ ತೆಂಗಿನಹಾಲು ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಒಲೆಯಿಂದ ಕೆಳಗಿಳಿಸಿ.

ಗೀತಸದಾ

ಟಾಪ್ ನ್ಯೂಸ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.