ಬಾಳೆಎಲೆ ಊಟ ಆರೋಗ್ಯದಾಯಕ


Team Udayavani, Dec 22, 2017, 12:42 PM IST

22-31.jpg

ಜೀವನ ವಿಧಾನ ಬದಲಾದಂತೆಲ್ಲ ಮನೆಯಲ್ಲಿ ನಾವು ಬಳಸುವ ವಸ್ತುಗಳಲ್ಲಿಯೂ ಕೂಡ ಅಷ್ಟೇ ಬದಲಾವಣೆಯನ್ನು ತಂದುಕೊಂಡಿದ್ದೇವೆ. ಊಟದ ವಿಷಯಕ್ಕೆ ಬಂದಾಗ ವಿವಿಧ ಚಿತ್ತಾರದ, ವೈವಿಧ್ಯಮಯವಾದ ಹಾಗೂ ವಿವಿಧ ಲೋಹದ ಪಾತ್ರೆಗಳನ್ನು ನಾವಿಂದು ಬಳಸುತ್ತಿದ್ದೇವೆ. ಆದರೆ, ನಿಸರ್ಗದತ್ತವಾಗಿ ದೊರೆಯುವ ಬಾಳೆಎಲೆಯ ಊಟ ಮಾತ್ರ ಎಲ್ಲ ವೈಭೋಗವನ್ನೂ ಮೀರಿಸುವಂಥದ್ದು. ಬಾಳೆಎಲೆಯ ಊಟ ಈ ಕೆಳಗಿನಂತೆ ಹಲವು ರೀತಿಗಳಲ್ಲಿ ಉಪಯುಕ್ತವಾಗಿದೆ. 

.ಬಾಳೆಎಲೆಯಲ್ಲಿ ಬ್ಯಾಕ್ಟೇರಿಯಾಗಳನ್ನು ಕೊಲ್ಲುವ ಅಂಶವಿರುತ್ತದೆ. ಇದು ವಿಶೇಷವಾಗಿ ಫ್ರೀ ರಾಡಿಕಲ್‌ ಎಂಬ ಜೈವಿಕ ರಾಸಾಯನಿಕಗಳನ್ನು ಕೊಲ್ಲುವ ಮೂಲಕ ಕ್ಯಾನ್ಸರ್‌ ರೋಗವನ್ನು ತಡೆಗಟ್ಟುತ್ತದೆ. 

.ಬಾಳೆಎಲೆಯ ಮೇಲ್ಪದರದಲ್ಲಿ ನೈಸರ್ಗಿಕವಾದ ಎಪಿಗಾಲ್ಲೋ ಕ್ಯಾಟೆಚಿನ್‌ ಗ್ಯಾಲೆಟ್‌ ಎಂಬ ಪಾಲಿಫಿನಾಲ್‌ ಅಂಶ ಆವರಿಸಿಕೊಂಡಿರುತ್ತದೆ. ಬಿಸಿಯಾದ ಆಹಾರವನ್ನು ಇದರ ಮೇಲೆ ಹಾಕಿದಾಗ ಇದು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. 

.ಬಾಳೆಎಲೆಯ ಊಟದಿಂದ ದೇಹ ತಂಪುಗೊಳ್ಳುತ್ತದೆ. ಊಟದ ಪದಾರ್ಥದ ಮೂಲಕ ನಮ್ಮ ದೇಹಕ್ಕೆ ಉಂಟಾಗ ಬಹುದಾದ ಕೃತಕ ಉಷ್ಣತೆಯನ್ನು ಬಾಳೆಎಲೆ ತಂಪು ಮಾಡುತ್ತದೆ. 

.ವಯಸ್ಸಾದಂತೆಲ್ಲ ಕೂದಲುಗಳು ಬೆಳ್ಳಗಾಗುವುದು ಸಹಜ. ಆದರೆ ಸಣ್ಣ ವಯಸ್ಸಿನಲ್ಲೇ ಬಿಳಿ ಕೂದಲು ಸಮಸ್ಯೆ ಕಾಣಿಸಿಕೊಳ್ಳುವುದು ಪೋಷಕಾಂಶಗಳ ಕೊರತೆಯ ಸಂಕೇತ. ಬಾಳೆಎಲೆಯಲ್ಲಿ ಇಂತಹ ಪೋಷಕಾಂಶಗಳು ದಟ್ಟವಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲ ಸಮಸ್ಯೆಯನ್ನು ನಿವಾರಿಸುತ್ತದೆ. 

.ಬಾಳೆಎಲೆಗೆ ತೆಂಗಿನ ಎಣ್ಣೆಯನ್ನು ಲೇಪಿಸಿ ಸುಕ್ಕುಗಟ್ಟಿದ ಚರ್ಮಕ್ಕೆ ಸುತ್ತಿದರೆ ಚರ್ಮ ಹೊಳಪುಗೊಳ್ಳುತ್ತದೆ. 

.ಮಣ್ಣಿನ ಅಥವಾ ಲೋಹದ ಪಾತ್ರೆಯಲ್ಲಿ ಊಟ ಮಾಡುವುದರಿಂದ ಕೆಲವು ಸೂಕ್ಷ್ಮ ಮಾರ್ಜಕದ ಕಣಗಳು ದೇಹ ಸೇರುವ ಅಪಾಯವಿರುತ್ತದೆ. ಆದರೆ ಬಾಳೆಎಲೆಯ ಊಟ ಈ ಸಮಸ್ಯೆಯನ್ನು ತಡೆಗಟ್ಟುತ್ತದೆ. 

.ಬಾಳೆಎಲೆಯಲ್ಲಿ ವಿಟಮಿನ್‌ “ಡಿ’ ಅಂಶ ವಿಫ‌ುಲವಾಗಿರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಆದ್ದರಿಂದಲೇ ಹಸುಗೂಸನ್ನು ಶುಠಿ ಎಲೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಒಡ್ಡುತ್ತಾರೆ. ಇದರಿಂದ ಹಸುಗೂಸಿನ ದೇಹದಲ್ಲಿ “ಡಿ’ ವಿಟಮಿನ್‌ ಅಂಶ ಹೆಚ್ಚಾಗುತ್ತದೆ.  

ಸೋಮಲಿಂಗಪ್ಪ ಬೆಣ್ಣಿ , ಗುಳದಳ್ಳಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.