ಇನ್ನೊಬ್ಬಳು ಇಶಾ


Team Udayavani, Dec 22, 2017, 1:11 PM IST

22-34.jpg

ಮುಂಬಯಿಯಲ್ಲೇ ಹುಟ್ಟಿದ್ದರೂ ಸುಮಾರು 20 ತಮಿಳು ಮತ್ತು ಮಲಯಾಳ ಚಿತ್ರಗಳಲ್ಲಿ ನಟಿಸಿದ ಬಳಿಕ ನಾಯಕಿಯಾಗಿ ಬಾಲಿವುಡ್‌ಗೆ ಬರುತ್ತಿದ್ದಾಳೆ ಇಶಾ ತಲ್ವಾರ್‌. ಹೆಸರು ನೋಡಿ ಈಕೆ ವಿವಾದಗ್ರಸ್ತ ತಲ್ವಾರ್‌ ದಂಪತಿಯ ಸಂಬಂಧಿಕಳೇ ಎಂದು ಕೇಳಬೇಡಿ. ಆ ತಲ್ವಾರ್‌ಗಳಿಗೂ ಈ ಇಶಾ ತಲ್ವಾರ್‌ಗೂ ಯಾವ ಸಂಬಂಧವೂ ಇಲ್ಲ. ಸರ್‌ನೆಮ್‌ ಮಾತ್ರ ಒಂದೇ ಆಗಿದೆಯಷ್ಟೆ. 

ಇಶಾ ತಲ್ವಾರ್‌ ಹುಟ್ಟಿ ಬೆಳೆದಿದ್ದೆಲ್ಲ ಮುಂಬಯಿಯಲ್ಲೇ. 17 ವರ್ಷಗಳ ಹಿಂದೆ ಹಮಾರ ದಿಲ್‌ ಆಪ್‌ ಕೆ ಪಾಸ್‌ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಇಶಾ ತಲ್ವಾರ್‌ ಪೂರ್ಣ ಪ್ರಮಾಣದ ನಾಯಕಿಯಾಗಿ ಆರಂಗೇಟ್ರಂ ಮಾಡಿದ್ದು ಮಲಯಾಳ ಚಿತ್ರದಲ್ಲಿ. ತಟ್ಟತ್ತಿನ್‌ ಮರಯೂತ್ತೆ ಅವಳು ನಾಯಕಿಯಾದ ಮೊದಲ ಚಿತ್ರ. ಮೊದಲ ಚಿತ್ರವೇ ಸೂಪರ್‌ಹಿಟ್‌ ಆದ ಕಾರಣ ಇಶಾ ದಕ್ಷಿಣದ ಚಿತ್ರರಂಗದಲ್ಲಿ ಭದ್ರವಾಗಿ ತಳವೂರಿದಳು.

ಪೃಥ್ವಿರಾಜ್‌, ಮಮ್ಮುಟ್ಟಿ , ದಿಲೀಪ್‌ ಸೇರಿದಂತೆ ಮಲಯಾಳ ಚಿತ್ರರಂಗದ ದಿಗ್ಗಜರಿಗೆ ನಾಯಕಿಯಾದ ಇಶಾ ತಮಿಳು, ತೆಲುಗು ಚಿತ್ರರಂಗಗಳಲ್ಲೂ ಸಾಕಷ್ಟು ಅವಕಾಶಗಳನ್ನು ಬಾಚಿದಳು. ಈ ನಡುವೆ ಹಲವು ಟಿವಿ ಸೀರಿಯಲ್‌ಗ‌ಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಳು. 50ಕ್ಕೂ ಅಧಿಕ ಜಾಹೀರಾತು ಚಿತ್ರಗಳಲ್ಲಿ ನಟಿಸಿದ ಹಿರಿಮೆ ಅವಳದ್ದು. ಇಷ್ಟೆಲ್ಲ ಆದರೂ ಅವಳಿಗೆ ಬಾಲಿವುಡ್‌ಗೆ ಬರುವ ಭಾಗ್ಯ ಸಿಕ್ಕಿದ್ದು ಕಳೆದ ವರ್ಷ. ಸಲ್ಮಾನ್‌ ಖಾನ್‌ನ ಟ್ಯೂಬ್‌ಲೈಟ್‌ ಚಿತ್ರದಲ್ಲಿ ಚಿಕ್ಕದೊಂದು ಪಾತ್ರ ಸಿಕ್ಕಿದರೂ ಚಿತ್ರವೂ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ ಹಾಗೂ ಇಶಾ ಕೂಡ ಮಿಂಚಲಿಲ್ಲ. ಇದೀಗ ಕಾಲಾಕಾಂಡಿ ಎಂಬ ಚಿತ್ರದಲ್ಲಿ ಸೈಫ್ ಅಲಿಖಾನ್‌ಗೆ ಎದುರು ನಟಿಸುವ ಮೂಲಕ ಬಾಲಿವುಡ್‌ನ‌ಲ್ಲಿ ನಾಯಕಿಯಾಗುವ ಬಹುಕಾಲದ ಹಂಬಲವನ್ನು ಈಡೇರಿಸಿಕೊಂಡಿದ್ದಾಳೆ. ಈ ಆ್ಯಕ್ಷನ್‌ ಚಿತ್ರದಲ್ಲಿ ಅವಳು ಕೂಡ ಹಲವು ಮೈ ರೋಮಾಂಚನಗೊಳಿಸುವ ಸಾಹಸ ದೃಶ್ಯಗಳನ್ನು ಸ್ವತಹ ನಿಭಾಯಿಸಿದ್ದಾಳಂತೆ. ಸಿಮ್ಮಿಂಗ್‌ಪೂಲ್‌ನಲ್ಲಿ ಕಿಸ್‌ ಕೊಡುವಂತಹ ಮೈ ಬಿಸಿಯೇರಿಸುವ ದೃಶ್ಯಗಳಲ್ಲೂ ಲೀಲಾಜಾಲವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾಳೆ. ಈ ದೃಶ್ಯಕ್ಕಾಗಿಯೇ ಆಕೆ ಡೈವಿಂಗ್‌ ಕಲಿತುಕೊಂಡಿದ್ದಾಳಂತೆ. ಕಾಲಾಕಾಂಡಿ ಟೀಸರ್‌ ನೋಡಿದವರು ಇಶಾ ತಲ್ವಾರ್‌ಗೆ ಬಾಲಿವುಡ್‌ ಹೀರೊಯಿನ್‌ ಆಗುವ ಎಲ್ಲ ಅರ್ಹತೆಗಳು ಇವೆ ಎಂದು ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಪ್ರೇಕ್ಷಕರು ಮೆಚ್ಚಿದರೆ ಬಾಲಿವುಡ್‌ಗೆ ಇನ್ನೊಬ್ಬಳು ಇಶಾ ಸಿಕ್ಕಿದಂತೆಯೇ. 

ಟಾಪ್ ನ್ಯೂಸ್

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.