ಅವಲಕ್ಕಿ ವೈವಿಧ್ಯ


Team Udayavani, Mar 9, 2018, 7:30 AM IST

s-10.jpg

ಅವಲಕ್ಕಿ ಇಡ್ಲಿ / ಪಡ್ಡು
ಬೇಕಾಗುವ ಸಾಮಗ್ರಿ: ಅವಲಕ್ಕಿ- 1 ಕಪ್‌, ಅಕ್ಕಿ ರವೆ- 1 ಕಪ್‌, ಮೊಸರು- 1 ಕಪ್‌, ಈರುಳ್ಳಿ – 1, ಕ್ಯಾರೆಟ್‌- 1, ಉಪ್ಪು ರುಚಿಗೆ, ಎಣ್ಣೆ 2-3 ಚಮಚ.

ತಯಾರಿಸುವ ವಿಧಾನ:  ಒಂದು ಪಾತ್ರೆಯಲ್ಲಿ ಮೊಸರು, ಅವಲಕ್ಕಿ, ಅಕ್ಕಿ ರವೆ, ಉಪ್ಪು ಹಾಕಿ ಬೆರೆಸಿ ಹತ್ತು ನಿಮಿಷ ಇಡಿ. ಈರುಳ್ಳಿ ಚೂರು, ಕ್ಯಾರೆಟ್‌ ತುರಿ ಬೆರೆಸಿ ಇಡ್ಲಿ ಬಟ್ಟಲಿಗೆ ಎಣ್ಣೆ ಸವರಿಡಿ. ಹಬೆಯ ಪಾತ್ರೆಯಲ್ಲಿ ನೀರು ಕುದಿದ ನಂತರ ಹಿಟ್ಟು ತುಂಬಿಸಿದ ಬಟ್ಟಲು ಇಟ್ಟು ಇಪ್ಪತ್ತು ನಿಮಿಷ ಬೇಯಿಸಿ ತೆಗೆಯಿರಿ. ಕಾಯಿಚಟ್ನಿಯೊಂದಿಗೆ ಸವಿಯಲು ಬಲು ರುಚಿಯಾಗಿರುತ್ತದೆ.
ಇದೇ ಹಿಟ್ಟನ್ನು ಪಡ್ಡು ಕಾವಲಿಗೆ ಹಾಕಿ ಪಡ್ಡು ಮಾಡಬಹುದು.

ಅವಲಕ್ಕಿ ಚಟ್ನಿ 
ಬೇಕಾಗುವ ಸಾಮಗ್ರಿ:
ಅವಲಕ್ಕಿ- 2 ಕಪ್‌, ಕಾಯಿತುರಿ- 1 ಕಪ್‌, ಹುರಿದ ಒಣಮೆಣಸಿನಕಾಯಿ- 2, ಬೆಲ್ಲ ಸ್ವಲ್ಪ , ಉಪ್ಪು ರುಚಿಗೆ, ಕೊತ್ತಂಬರಿ- 2 ಚಮಚ, ಜೀರಿಗೆ- 1 ಚಮಚ, ಅರಸಿನ ಪುಡಿ- 1/2 ಚಮಚ, ಒಗ್ಗರಣೆಗೆ ಎಣ್ಣೆ , ಸಾಸಿವೆ, ಕರಿಬೇವಿನ ಗರಿಕೆ, ಹುಣಸೆಹಣ್ಣು – ಗೋಲಿ ಗಾತ್ರ.

ತಯಾರಿಸುವ ವಿಧಾನ: ಒಣಮೆಣಸಿನಕಾಯಿ, ಬೆಲ್ಲ, ತೆಂಗಿನತುರಿ, ಉಪ್ಪು, ಹುಣಸೆಹಣ್ಣು, ಜೀರಿಗೆ, ಕೊತ್ತಂಬರಿ ಒಟ್ಟಿಗೆ ಹಾಕಿ ರುಬ್ಬಿ ಅವಲಕ್ಕಿಗೆ ಹಾಕಿ ಚೆನ್ನಾಗಿ ಕಲಸಿಡಿ. ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನ ಗರಿಕೆ ಹಾಕಿ ಒಗ್ಗರಣೆ ಮಾಡಿ ಕೊನೆಗೆ ಅರಸಿನ ಹುಡಿ ಹಾಕಿ ತೆಗೆದು ಅವಲಕ್ಕಿಗೆ ಹಾಕಿ ಕಲಸಿ. ಕಡಲೆಹಿಟ್ಟಿನ ಶ್ಯಾವಿಗೆ, ಅವಲಕ್ಕಿ ಮಿಕ್ಸಚರ್‌, ಕಡಲೆ ಪಲ್ಯದೊಂದಿಗೆ ಸವಿಯಬಹುದು. ನೀರುಳ್ಳಿ ಚೂರು ಹಾಕಿಯೂ ರುಚಿ ನೋಡಬಹುದು.

ಅವಲಕ್ಕಿ, ಪುಟಾಣಿ ಇಂಡ್ರಿ
ಬೇಕಾಗುವ ಸಾಮಗ್ರಿ:
ಅವಲಕ್ಕಿ- 2 ಕಪ್‌, ಬೆಲ್ಲ- 50 ಗ್ರಾಂ, ತೆಂಗಿನತುರಿ- 1/2 ಕಪ್‌, ಏಲಕ್ಕಿ- ಸ್ವಲ್ಪ , ಪುಟಾಣಿ- 1/4 ಕಪ್‌, ತುಪ್ಪ- 2 ಚಮಚ.

ತಯಾರಿಸುವ ವಿಧಾನ: ಅವಲಕ್ಕಿ ಹುರಿದು ಸ್ವಲ್ಪ ತರಿತಯಾಗಿ ಹುಡಿ ಮಾಡಿಡಿ. ಪುಟಾಣಿ ಕಡಲೆ ಹುಡಿ ಮಾಡಿಡಿ. ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ಲ ಹಾಕಿ ಪಾಕವಾಗುವಾಗ ತೆಂಗಿನ ತುರಿ, ಅವಲಕ್ಕಿ ಪುಟಾಣಿ ಹುಡಿ, ಏಲಕ್ಕಿ ಹುಡಿ ಹಾಕಿ ಒಂದು ಚಮಚ ತುಪ್ಪ ಹಾಕಿ ಮಗುಚಿ. ಗಿಂದಲಿಗೆ (ಚಿಕ್ಕ ಬಟ್ಟಲಿಗೆ) ಇಲ್ಲವೆ ಡಬ್ಬಿಯ ಮುಚ್ಚಳಕ್ಕೆ ತುಪ್ಪ ಸವರಿ ಅದರಲ್ಲಿ ಇಂಡ್ರಿ ಹೂರಣ ಹಾಕಿ ಗಟ್ಟಿಯಾಗಿ ಒತ್ತಿ ಬಡಿಯಿರಿ. ಅವಲಕ್ಕಿ ಕಣಿ ಇಂಡ್ರಿ ತಯಾರ್‌. ಅವಲಕ್ಕಿ ಕಣಿಯ ಉಂಡೆಯನ್ನೂ ತಯಾರಿಸಬಹುದು.

ಗೊಜ್ಜವಲಕ್ಕಿ
ಬೇಕಾಗುವ ಸಾಮಗ್ರಿ:
ಗಟ್ಟಿ ಅವಲಕ್ಕಿ- 1 ಕಪ್‌, ಹುಣಸೆಹಣ್ಣು- ಗೋಲಿಗಾತ್ರ, ಸಕ್ಕರೆ- 1 ಚಮಚ, ಎಳ್ಳು- 2 ಚಮಚ, ಉಪ್ಪು ರುಚಿಗೆ, ಕಡಲೆಬೇಳೆ- 1 ಚಮಚ, ಉದ್ದಿನಬೇಳೆ, ಸಾಸಿವೆ, ಸಾರಿನ ಪುಡಿ- 1 ಚಮಚ, ಕೊಬ್ಬರಿ ತುರಿ- 4 ಚಮಚ, ಎಣ್ಣೆ, ಒಗ್ಗರಣೆ ಸೊಪ್ಪು.

ತಯಾರಿಸುವ ವಿಧಾನ: ಗಟ್ಟಿ ಅವಲಕ್ಕಿ ಹುರಿದು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ಹುಡಿ ಮಾಡಿಡಿ. ಸ್ವಲ್ಪ ನೀರಿನಲ್ಲಿ ಹುಣಸೆಹಣ್ಣು ಕಿವುಚಿಡಿ. ಎಳ್ಳು ತೊಳೆದು ಹುರಿದಿಡಿ. ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಉದ್ದಿನಬೇಳೆ, ಎಳ್ಳು , ಸಾರಿನಪುಡಿ, ಕಡಲೆ, ಬೇಳೆ ಹುರಿದು ಒಗ್ಗರಣೆ ಸೊಪ್ಪು ಹಾಕಿ ಅವಲಕ್ಕಿ ರವೆ, ಹುಣಸೆಹಣ್ಣು, ಉಪ್ಪು , ಸಕ್ಕರೆ, ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಸಿ. ರುಚಿಕರ ಗೊಜ್ಜವಲಕ್ಕಿ ಉಪಾಹಾರಕ್ಕೆ ತಯಾರು.

ಎಸ್‌. ಜಯಶ್ರೀ ಶೆೆಣೈ

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.